ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಒಂದು ಸಮಾಜ ಹಾಗೂ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಎನ್ನುವುದು ಆ ರಾಷ್ಟ್ರದ ಶಿಕ್ಷಣವನ್ನು ಅವಲಂಭಿಸಿರುತ್ತದೆ. ಇಂತಹ ಅಭಿವೃದ್ಧಿಯ ಹಾದಿಯಲ್ಲಿ ದೇಶದ ಹಲವಾರು ಶಿಕ್ಷಣ ಸಂಸ್ಥೆಗಳು ಹೆಜ್ಜೆಯಾಗುತ್ತಾ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಅಂತಹ ಒಂದು ಸಾಲಿನಲ್ಲಿ ನಿಲ್ಲುವ ಮಲೆನಾಡಿನ ಅಗ್ರಗಣ್ಯ ಸಂಸ್ಥೆ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ.
ಉನ್ನತ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ತಲುಪಿಸುವ ಸದುದ್ದೇಶ ಹೊಂದಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಗ್ರಾಮೀಣ ಮಕ್ಕಳು ವಿದ್ಯಾವಂತರಾಗಬೇಕೆಂಬ ಕನಸನ್ನು ಹೊತ್ತಿರುವ ಸಂಸ್ಥೆಯಾಗಿದೆ.
ಈ ಉದ್ದೇಶದಿಂದಾಗಿ ಗ್ರಾಮೀಣ ಪ್ರದೇಶವಾದ ಶಿಕಾರಿಪುರದಲ್ಲಿ #Shikaripura 1996ರಲ್ಲಿ ಪ್ರಾರಂಭವಾದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು, ವಿವಿಧ ಅಂಗಸಂಸ್ಥೆಗಳಿಂದಾಗಿ ಇಂದು ವಿಶ್ವವಿದ್ಯಾಲಯದ #University ರೂಪದಲ್ಲಿ ಬೆಳೆದು ನಿಂತಿರುವುದು ಸಂತಸದ ಸಂಗತಿಯಾಗಿದೆ.ಶಿಕಾರಿಪುರವು ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇಂತಹ ಸುವರ್ಣ ಇತಿಹಾಸವನ್ನು ಹೊಂದಿದ ಈ ಮಣ್ಣಿನಲ್ಲಿ ಇಂದು ಈ ಸಂಸ್ಥೆಯು ಹೆಮ್ಮರವಾಗಿ ಬೆಳೆದಿದೆ ಎನ್ನುವುದು ಮಲೆನಾಡಿನ #Malnad ಹೆಮ್ಮೆಯಾಗಿದೆ.
ಸುಧಾರಿತ ಶಿಕ್ಷಣದ ಆಧಾರ
ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಿಸುವ ದೃಷ್ಟಿಯಿಂದ ಸುಸಜ್ಜಿತ ಕಟ್ಟಡಗಳು, ಗ್ರಂಥಾಲಯಗಳು, ಪ್ರಯೋಗಾಲಯ, ಸಭಾಂಗಣ, ಆಟದ ಮೈದಾನಗಳು, ವಿಶಾಲವಾದ ತರಗತಿಗಳು, ಭಾಷಾ ಪ್ರಯೋಗಾಲಯ, ಗಣಕಯಂತ್ರ ಪ್ರಯೋಗಾಲಯಗಳನ್ನು ಒದಗಿಸುವುದರೊಂದಿಗೆ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ಸರ್ವಪ್ರಯತ್ನಗಳನ್ನು ಮಾಡುತ್ತಾ 28 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಕೆಜಿಯಿಂದ ನರ್ಸಿಂಗ್’ವರೆಗಿನ ಶಿಕ್ಷಣ
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಡಿಯಲ್ಲಿ ಮೈತ್ರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆ, ಕುಮದ್ವತಿ ರೆಸಿಡೆನ್ಸಿಯಲ್ ಸೆಂಟ್ರಲ್ ಸ್ಕೂಲ್ (ಸಿಬಿಎಸ್ಈ, ಎಲ್ಕೆಜಿ ಯಿಂದ ಗ್ರೇಡ್ 10 ವರೆಗೆ) ಮತ್ತು ಕುಮದ್ವತಿ ಸಿದ್ದ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ, ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಶಿವಮೊಗ್ಗದಲ್ಲಿ ಸ್ಕೂಲ್ ಆಫ್ ನರ್ಸಿಂಗ್, ಮೈತ್ರಿ ಶಿಕ್ಷಣ ಮಹಾವಿದ್ಯಾಲಯಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಸಾಗಿದೆ. ಇಂದು ಈ ಸಂಸ್ಥೆಯಲ್ಲಿ 2500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದು ಜಿಲ್ಲೆಯ ಹೆಮ್ಮೆಯ ಸಂಗತಿಗಳಲ್ಲೊಂದು.
ಕಡಿಮೆ ಶುಲ್ಕ, ಹೆಚ್ಚಿನ ಶಿಕ್ಷಣ
ಇನ್ನು, ಸಮಾಜದ ಎಲ್ಲ ಸ್ತರದ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಈ ಒಂದು ಸದುದ್ದೇಶದಿಂದ ಕಡಿಮೆ ಶುಲ್ಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಅನೇಕ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತರಿಗೆ ಉಚಿತ ಶಿಕ್ಷಣ, ಶುಲ್ಕ ವಿನಾಯ್ತಿ ನೀಡಲಾಗಿದೆ.
ಸ್ಮರ್ಧಾತ್ಮಕ ಪರೀಕ್ಷಾ ತರಬೇತಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಿಯುಸಿ, ಸಿಇಟಿ, ನೀಟ್, ಜೆಇಇ, ಸಿಎಂ, ಸಿಎಸ್, ಪದವಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್, ಸಿಎ, ಬಿಇಡಿ ವಿದ್ಯಾರ್ಥಿಗಳಿಗೆ ಟಿಇಟಿ, ಸಿಇಟಿ, ಎಫ್’ಡಿಸಿ ಸೇರಿದಂತೆ ಹಲವು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಗತಿಗಳನ್ನು, ಓರಿಯಂಟೇಶನ್ ಪ್ರೋಗ್ರಾಮ್’ಗಳನ್ನು ನಡೆಸಲಾಗುತ್ತಿದೆ. ಮಾನಸಿಕ ಸ್ಥಿಮಿತಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ವಿಶೇಷ ಆಪ್ತ ಸಮಾಲೋಚನ ಕಾರ್ಯಕ್ರಮಗಳನ್ನು ನೀಡುವುದು ಸಂಸ್ಥೆಯ ವಿಶೇಷ.
ಗ್ರಾಮೀಣ ಮತ್ತು ನಗರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಶೈಕ್ಷಣಿಕ ಪ್ರಗತಿಗೆ ಬೇಕಾದ ಪೂರಕ ವಾತಾವರಣ ನಿರ್ಮಾಣ ಮಾಡುವ ಈ ಸಂಸ್ಥೆ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸದುದ್ದೇಶವಾಗಿದೆ.
ಶಿಕ್ಷಣವೆಂದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಾಗಿದ್ದು, ನೆಟ್, ಸ್ಲೆಟ್, ಪಿಎಚ್’ಡಿ ಹೊಂದಿರುವ ಅತ್ಯುತ್ತಮ ದರ್ಜೆಯ ಅಧ್ಯಾಪಕರ ವೃಂದವನ್ನು ಹೊಂದಿರುವ ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಪ್ರತಿ ವರ್ಷ ಕನಿಷ್ಠ ಮೂರು ರ್ಯಾಂಕುಗಳನ್ನು ಪಡೆಯುತ್ತಾ ಅದರಲ್ಲೂ ಕಳೆದ ಮೂರು ವರ್ಷದಲ್ಲಿ ಅದರಲ್ಲೂ ಕಳೆದ ಮೂರು ವರ್ಷದಲ್ಲಿ ಎರಡು ಬಾರಿ ಪ್ರಥಮ ರ್ಯಾಂಕನ್ನು ಗಳಿಸಿದ್ದು ಶ್ಲಾಘನೀಯ ಮತ್ತು ಹೆಮ್ಮೆಯ ವಿಷಯವಾಗಿದೆ.
ಪದವಿ ತರಗತಿಗಳ ಆರಂಭ
ಪ್ರಸ್ತುತ 2024-25ನೇ ಶೈಕ್ಷಣಿಕ ವರ್ಷದಿಂದ ಬಿಕಾಂ, ಬಿಎಸ್ಸಿ, ಎಂಕಾಂ ಪದವಿಯೊಂದಿಗೆ ಬಿಸಿಎ ವಿಭಾಗವನ್ನು ಆರಂಭಿಸುತ್ತಿದೆ.
add-on ಕೋರ್ಸ್’ಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಯನ್ನು, ಪ್ರಾಯೋಗಿಕ ಮಾನ್ಯತೆಯೊಂದಿಗೆ ಇಂಟರ್ನ್ಶಿಪ್ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ.
ಕಾಲೇಜಿನ ವಿದ್ಯಾರ್ಥಿಗಳು 9 ರ್ಯಾಂಕ್ಗಳನ್ನು ಪಡೆಯುವುದರೊಂದಿಗೆ ಉತ್ತವ ದರ್ಜೆಯ ಫಲಿತಾಂಶಗಳನ್ನು ಪಡೆದಿದ್ದಾರೆ. ಎನ್’ಎಸ್’ಎಸ್, ಕ್ರೀಡೆ, ಸಾಂಸ್ಕೃತಿಕ ವಿಭಾಗ ಮತ್ತು ಇತರೇ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶ ನೀಡಲಾಗುತ್ತದೆ.
ಉದ್ಯೋಗ ಮೇಳ ಆಯೋಜನೆ
ಈ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಬೆಂಗಳೂರಿನ ಪ್ರತಿಷ್ಠಿತ ವಿವಿಧ ಕಂಪನಿಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ಮೇಳಗಳನ್ನು ಆಯೋಜಿಸಿ, ಉದ್ಯೋಗಳನ್ನು ಒದಗಿಲಾಗಿದೆ.
ಸಕಲ ಸೌಲಭ್ಯಗಳ ಆಗರ
ಇಲ್ಲಿ ಪ್ರತಿ ವಿಭಾಗಗಳಿಗೂ ಪ್ರತ್ಯೇಕ ಕಟ್ಟಡಗಳು, ಆಟದ ಮೈದಾನ, 400 ಮೀಟರ್ ರನ್ನಿಂಗ್ ಟ್ರಾö್ಯಕ್, ಸ್ವಿಮ್ಮಿಂಗ್ ಒಳಾಂಗಣ ಆಟಗಳು, ಗ್ರಂಥಾಲಯಗಳು, ಪ್ರಯೋಗಾಲಯಗಳು, ಮಹಿಳಾ ಹಾಗೂ ಪುರುಷರ ಹಾಸ್ಟೆಲ್ ಇತ್ಯಾದಿಗಳನ್ನು ಶಿಕಾರಿಪುರದ ಹೊರ ವಲಯದಲ್ಲಿ ಸುಂದರ ಹಸಿರು ಪರಿಸರದಲ್ಲಿ ಈ ಎಲ್ಲಾ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದೆ.
ವಿದ್ಯಾರ್ಥಿಗಳ ದೈಹಿಕ-ಮಾನಸಿಕ ಸದೃಢತೆಗೆ ಆಧಾರ
ಇನ್ನು, ವಿದ್ಯಾರ್ಥಿಗಳು ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಲು ವಿವಿಧ ರೀತಿಯ ಕ್ರಮಗಳನ್ನು ಸಂಸ್ಥೆ ಕೈಗೊಂಡಿದೆ.
ಪ್ರಮುಖವಾಗಿ ಯೋಗ, ಧ್ಯಾನ, ಜಾಗಿಂಗ್, ಸ್ವಿಮ್ಮಿಂಗ್, ಇತ್ಯಾದಿಗಳ ಜೊತೆಗೆ ಅಥ್ಲೆಟಿಕ್, ಬಾಸ್ಕೇಟ್ ಬಾಲ್, ನೆಟ್ ಬಾಲ್, ಬ್ಯಾಡ್ಮಿಂಟನ್, ಲಾನ್ ಟೆನ್ನಿಸ್, ಟೇಬಲ್ ಟೆನಿಸ್, ಶೆಟ್ಟಲ್ ಬ್ಯಾಡ್ಮಿಂಟನ್, ಇತ್ಯಾದಿ ವಿಭಿನ್ನ ಆಟೋಟಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಉತ್ತಮ ಗುಣಮಟ್ಟದ ವಸತಿ ನಿಲಯವನ್ನು ವಿಶೇಷ ಕಾಳಜಿಯಿಂದ ನಡೆಸಲಾಗುತ್ತಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ. ಅತ್ಯಂತ ಗುಣಮಟ್ಟದ ಈ ಸುಂದರ ಹಸಿರು ಪರಿಸರದ ಭವ್ಯ ಕಟ್ಟಡದ ಜೊತೆಗೆ ಅತ್ಯುನ್ನತ ಪದವಿ ಪಡೆದ ಸೇವಾ ಮನೋಭಾವದ ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿಯನ್ನು ಹೊಂದಿದೆ.
ಪ್ರತಿಯೊಂದು ಹಂತದಲ್ಲೂ ಆಡಳಿತ ಮಂಡಳಿಯ ಸಲಹೆ ಸೂಚನೆಗಳನ್ನು ಸಿಬ್ಬಂದಿ ವರ್ಗಕ್ಕೆ ನೀಡುತ್ತಿದ್ದು, ಅದನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ.
ಸಂಸ್ಥೆಯು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಸಾಮಾಜಿಕ ಕಳಕಳಿಯನ್ನು ಹೊಂದಿ ವಿದ್ಯಾರ್ಥಿಗಳ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ತನ್ನದೇ ವೈಶಿಷ್ಟ್ಯತೆಯೊಂದಿಗೆ ಈ ಭಾಗದ ಎಲ್ಲಾ ಜನರ ಭಾವನೆಗಳೊಂದಿಗೆ ಸ್ಪಂದಿಸುತ್ತಾ ಎಲ್ಲರ ಆಕರ್ಷಣೆಯ ಜ್ಞಾನ ಕೇಂದ್ರವಾಗಿ ಕಂಗೊಳಿಸುತ್ತಿದೆ.
ಇನ್ನೂ ಹತ್ತು ಹಲವು ಯೋಜನೆಗಳೊಂದಿಗೆ ಮುಂದೆ ಮುಂದೆ ಸಾಗುತ್ತಾ ಧೀಮಂತ ಸ್ವಾಮಿ ವಿವೇಕಾನಂದರ ಹೆಸರಿನಿಂದ ಕರೆಯಲ್ಪಡುವ ವಿದ್ಯಾಸಂಸ್ಥೆಯು ಜ್ಞಾನದ ಬೆಳಕನ್ನು ಎಲ್ಲೆಡೆ ಬೆಳಗುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ.
ಮನುಷ್ಯರಲ್ಲಿ ಪರಿಪೂರ್ಣತೆಯನ್ನು ನೀಡುವುದೇ ಶಿಕ್ಷಣ ಎಂಬ ಸ್ವಾಮಿ ವಿವೇಕಾನಂದರ ಮಾತಿನಂತೆ ಮುನ್ನೆಡೆಯುತ್ತಿರುವ ಈ ಹೆಮ್ಮೆಯ ಸಂಸ್ಥೆಯ, 2024-25ನೇ ಶೈಕ್ಷಣಿಕ ಸಾಲಿನ ಬಿಕಾಂ, ಬಿಎಸ್ಸಿ, ಬಿಸಿಎ ಪದವಿಗಳಿಗೆ ಪ್ರವೇಶವನ್ನು ಆರಂಭಿಸಿದೆ.
ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಲೆನಾಡಿನ ಈ ಹೆಮ್ಮೆಯ ಶಿಕ್ಷಣ ಸಂಸ್ಥೆಯೊಂದಿಗೆ ನೀವೂ ಭಾಗವಾಗಿ.
ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ ಸಂಪರ್ಕಿಸಿ: ಪ್ರಾಚಾರ್ಯರಾದ ಶ್ರೀ ರವೀಂದ್ರ ಕೆ.ಸಿ,(ಮೊ.9886840694) ಅವರನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post