No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

‘ಲಾಲಿಪಾಪ್ ಮತ್ತು ಇತರ ಕಥೆಗಳು’ ಕಥಾ ಸಂಕಲನ ತಪ್ಪದೇ ಓದಿ: ನಿಮ್ಮ ಜೀವನವೇ ತೆರೆದುಕೊಳ್ಳುತ್ತದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 24, 2020
in ಸಚಿನ್ ಪಾರ್ಶ್ವನಾಥ್
0
‘ಲಾಲಿಪಾಪ್ ಮತ್ತು ಇತರ ಕಥೆಗಳು’ ಕಥಾ ಸಂಕಲನ ತಪ್ಪದೇ ಓದಿ: ನಿಮ್ಮ ಜೀವನವೇ ತೆರೆದುಕೊಳ್ಳುತ್ತದೆ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಥೆ
ಎಂದರೆ ಹೇಗಿರಬೇಕು
ಅಲ್ಲಿ
ನಾನಿರಬೇಕು
ನೀನಿರಬೇಕು
ನೆನಪಿರಬೇಕು
ಕನಸಿರಬೇಕು

ಕೆಲವು ಕಥೆಗಳೇ ಹಾಗೆ ಮನದಲ್ಲಿ ನೆನಪುಗಳ ಗೀಚುತ್ತಾ ಸಾಗುತ್ತವೆ. ಅದರ ಆಗುಹೋಗುಗಳೊಂದಿಗೆ ನಾವು ತೇಲುತ್ತಾ ಮುಳುಗುತ್ತಾ ಹೋಗುತ್ತೇವೆ. ಅಲ್ಲಿ ಎಲ್ಲವೂ ಇರುತ್ತದೆ. ಬದುಕು ಬವಣೆ, ನಿನ್ನೆ ನಾಳೆ, ನಾನು ನೀನು ಹೀಗೆ ಎಲ್ಲವೂ. ಅಂತಹ ಕತೆಗಳಿಗೆ ಕೊಟ್ಟ ಸಮಯ ನೆನಪಿನಲ್ಲಿ ಉಳಿಯುವುದು ಸಹಜ. ಆ ನೆನಪುಗಳೇ ಕಥೆಯಾದದ್ದು ಇದೆ. ಇತ್ತೀಚೆಗೆ ಓದಿದ ಕಥೆಗಳ ಗುಚ್ಛವೇ “ಲಾಲಿಪಾಪ್ ಮತ್ತು ಇತರ ಕಥೆಗಳು.” ಅದರ ಕುರಿತು ಒಂದಿಷ್ಟು ಮಾತು. ಲಾಲಿಪಪ್ ಮತ್ತು ಇತರ ಕಥೆಗಳು, ಭರ್ತಿ ಹತ್ತು ಕಥೆಗಳ ಪುಟ್ಟ ಸಂಕಲನ. ಹರಿಕಿರಣ್ ಹೆಚ್ ಇದರ ಕರ್ತೃ. ಅಲೆಗಳೇ ಏಳದ ಪುಟ್ಟ ನದಿಯೆದುರು ಕುಳಿತ ಅನುಭವ. ಸರಳತೆಯೇ ವಿಭಿನ್ನ ಎನ್ನಿಸುವ ಸಂದರ್ಭ ಇದು. ಅಂತಹುದರಲ್ಲಿ ಒಂದೊಂದೇ ಕತೆಯನ್ನು ದಾಟುತ್ತಾ, ಒಮ್ಮೊಮ್ಮೆ ಇದು ನನಗೆ ಆಗಿತ್ತು ಅಲ್ಲವೆ ಎನ್ನಿಸುವುದು, ಮತ್ತೊಮ್ಮೆ ಇದು ಅವರಿಗೆ ಆಗಿತ್ತು ಅಲ್ವಾ ಅನ್ನಿಸುವಂತದ್ದು. ಹುಟ್ಟಿದ ಕಥೆ ಕಾಡಲು ಇಷ್ಟು ಸಾಕು ಅಲ್ಲವೆ?

ಸಂಕಲನದ ಆರಂಭ ನಿರ್ಭಯ ಎಂಬ ಪುಟ್ಟ ಕಥೆಯೊಂದಿಗೆ. ನಿರ್ಭಯ ಎಂದಾಗೆಲ್ಲಾ ಮನಸ್ಸು ಮತ್ತೊಂದು ದಿಕ್ಕಿನಲ್ಲಿ ಓಡುವುದು ಸಹಜ. ಆದರೆ ಇದು ಆ ಕುರಿತಲ್ಲ. ಒಬ್ಬ ಸಾಮಾನ್ಯನ ಬದುಕು ಕ್ಷಣಗಳಲ್ಲಿ ಬದಲಾಗಿ ಮತ್ತೊಂದು ಹಂತ ತಲುಪುವ ಕಥೆ. ಯಾಕೆ ಇದನ್ನು ಮೊದಲು ಆರಿಸಿದರೋ ಗೊತ್ತಿಲ್ಲ. ಆದರೆ ಒಂದೇ ಗುಟುಕಿಗೆ ಮುಗಿಸುವ ವೇಗದಲ್ಲಿ ಕಥೆ ಸಾಗುತ್ತದೆ.

ಕೆಲವೊಮ್ಮೆ ಸಂಬಂಧಗಳು ಅತಿ ಸರಳವಾಗಿ ಮತ್ತು ಅನಿರೀಕ್ಷಿತವಾಗಿ ಹುಟ್ಟುತ್ತವೆ. ಬೆಸುಗೆ ಇನ್ನಿಲ್ಲದಂತೆ ಕಟ್ಟಿಕೊಂಡು ಬಿಡುತ್ತದೆ. ಅಂತಹುದೇ ಕಥೆ ‘ಕಷ್ಟಮರ್ ದೇವೋ ಭವ’. ಅಲ್ಲಿಯ ಕಂಪ್ಯೂಟರ್ ಅಂಗಡಿಯ ಮಾಲೀಕ, ಆತನ ಬದುಕು ನಿಮಗೆ ಎಲ್ಲಿಯೋ ನೋಡಿದಂತೆ ಇದೆಯಲ್ಲ ಎನ್ನುತ್ತಿರುವಂತೆ ಆತನಿಗೆ ದೊರಕುವ ಮೃದು ಮನಸ್ಸಿನ ಕಠಿಣ ಲೆಕ್ಕಾಚಾರದ ಗ್ರಾಹಕ, ಆತನ ಕುಟುಂಬ, ಆತನದೇ ಕಾರಣಗಳು ಹೀಗೆ ಕಥೆ ವಿಶಾಲವಾಗುತ್ತದೆ. ಏನೋ ಒಂದು ದೊಡ್ಡ ಘಟನೆ ಇಲ್ಲದೆ ಕಥೆ ಸರಳವಾಗಿ ಮುಗಿದು ಹೇಳಲು ಹೊರಟಿರುವುದನ್ನು ಹೇಳಿ ತೀರುತ್ತದೆ.

ಈ ಚೀನೀ ವೈರಸ್ಸಿನ ಹಾಗಡದಲ್ಲಿ ಒಂದೊಮ್ಮೆ ಅನ್ನಿಸಿತ್ತು ಕೂಡ, ಅಲ್ಲ ಈಗ ಆಕಸ್ಮಾತ್ ಈ ಮೊಬೈಲೇ ಹಾಳಾದರೆ ಓಡುವುದಾದರೂ ಎಲ್ಲಿಗೆ? ಇದರ ರಿಪೇರಿಗೆ ಜನ ಸಿಕ್ಕುವುದಿಲ್ಲ, ಹೊಸದು ಕೊಳ್ಳಲು ಅವಕಾಶವೂ ಇಲ್ಲ. ಹೀಗೆ ಕೆಲಸ ಇಲ್ಲದೆ ಕೂತಾಗ ತಲೆ ಕೆರೆಯಲು ಯೋಚನೆಗಳು. ಅಂತಹುದೇ ಒಂದು ಕಥೆ ಮೊಬೈಲ್ ಮತ್ತು ನಾನು. ಕಥೆಯ ವಿವರಣೆ ನೀಡಲಾರೆ. ಆದರೆ ಸುಲಿದ ಬಾಳೆ ಹಣ್ಣಿನಂದದಿ ನಿಮಗೊಂದು ತಟ್ಟನೆ ಸಲ್ಯೂಶನ್ ತಲೆಯೊಳಗೆ ಹಾದು ಹೋಗಲಿಕ್ಕೆ ಸಾಕು. ಮೊಬೈಲಿನಲ್ಲಿ ಬದುಕುವ ಜಗತ್ತು, ಅದರ ಪ್ರತಿನಿಧಿ.

ಇಷ್ಟೆಲ್ಲ ಆಗಿಯೂ ಬಾಲ್ಯವನ್ನು ಬರಸೆಳೆಯದಿದ್ದರೆ ಹೇಗೆ?! ಅದು ‘ಪರೀಕ್ಷೆ’ ಕಥೆಯಲ್ಲಿ ಸಿಗುತ್ತದೆ. ಎಲ್ಲರೂ ಎಂದಾದರೂ ಕಾಪಿ ಮಾಡಿಯೇ ಇರುತ್ತಾರೆ. ಅಂತಹುದೇ ಒಂದು ಘಟನೆ ಅದು. ನಂತರ ಸಿಗುವುದು ಆಸೆಗೆ ಮರುಳಾದ ‘ಉರುಳು’ ಕಥೆ. ಬದುಕಿನಲ್ಲಿ ಕೆಲವೊಮ್ಮೆ ತಿಳಿದೂ ತಿಳಿದೂ ಮೋಸ ಹೋಗಿಬಿಡುತ್ತೇವೆ. ಕೈಲಿರುವುದು ಖರ್ಚಾಗುವುದು ಸಾಮಾನ್ಯ. ಆದರೆ ಅದನ್ನು ಕಳೆದುಕೊಳ್ಳುವುದು ಬದುಕನ್ನೇ ಆವರಿಸುವ ಕತ್ತಲಿನಂತೆ. ಹಾಗೆ ಆಗದಿರಲಿ ಎನ್ನುವ ಮುಖ ಹೊತ್ತ ಕಥೆ.

ಈ ಲಿಂಕ್ ಮೂಲಕ ಲಾಲಿಪಾಪ್ ಮತ್ತು ಇತರ ಕಥೆಗಳು ಓದಿ

https://play.google.com/store/books/details?id=dnPcDwAAQBAJ

ಹೊಸ ಪ್ರಯತ್ನದ ‘ಕ್ಷಣಿಕ’, ಮದ್ಯ ವ್ಯಸನಿಯ ‘ಬಾಟ್ಲಿ’, ಮತ್ತೇನನ್ನೋ ಹೇಳಲು ಬಯಸುವ ‘ಭಯ’, ಸೇಡಿನ ‘ಕಾಫಿ ಬೈಟ್’ ಹೀಗೆ ಒಂದೊಂದೇ ನವಾನುಭವಗಳು. ಮೊದಲೇ ಹೇಳಿದಂತೆ ಇಲ್ಲಿ ಆಳದ ಕಣಿವೆಗಳಿಲ್ಲ, ತಿಳಿ ನೀರಿನ ಮೇಲಿನ ದೋಣಿಗಳು.

ಕೊನೆಯಲ್ಲಿ ಬರುವ ಕತೆ ‘ಲಾಲಿಪಾಪ್’. ಕಾಲದ ಹಿಂದೆ ಓಡುತ್ತಿರುವ ಈ ಬದುಕಿನಲ್ಲಿ ನಾವು ಕಂಡದ್ದೇ ಸತ್ಯ ಎಂದು ತಿಳಿದುಕೊಂಡಿರುತ್ತೇವೆ. ಅಲ್ಲಿ ಹಣ, ಸಮಯ, ಶಕ್ತಿ ಹೀಗೆ ಎಲ್ಲಾ ಇರುತ್ತದೆ, ಮಾನವೀಯತೆ ಒಂದನ್ನು ಬಿಟ್ಟು. ಅದನ್ನು ತಿಳಿಸುವ ಪ್ರಯತ್ನ ‘ಲಾಲಿಪಾಪ್’.

ಪ್ರತಿ ಕಥೆಗಾರ ಹುಟ್ಟುವುದು ಕಥೆಯೆಂಬ ಬಸಿರ ಪೆತ್ತಾಗ. ಆತನಲ್ಲಿ ಆ ಓಘವನ್ನು ಕಾಯುವ ಜತನತೆಯು ಇರಬೇಕು. ಕೇಳಿದ್ದು, ಕಂಡಿದ್ದು, ಓದಿದ್ದು, ಬಯಸಿದ್ದು, ಕಾಡಿದ್ದು ಹೀಗೆ ಹಲವು ಇದ್ದುಗಳು ಇದ್ದಾಗ ಅವು ಕರಗಿ ಅಲ್ಲೊಂದು ಅದ್ಭುತ ಹುಟ್ಟುತ್ತದೆ. ಅದೇ ಕಥೆ. ಪ್ರಸ್ತುತ ಕಥಾಜೀವಿ ಹರಿಕೃಷ್ಣ ಹೇಳುವಂತೆ ಪ್ರತಿ ಕಥೆಯೂ ಬೇರೆ ಬೇರೆ ವಿಷಯಗಳ ಅರುಹುತ್ತದೆ. ಅವರ ಚೊಚ್ಚಲ ಫಸಲು ‘ಲಾಲಿಪಾಪ್ ಮತ್ತು ಇತರ ಕಥೆಗಳು’. ಅವರು ಇನ್ನಷ್ಟು ಕಥೆಗಳನ್ನು ರಚಿಸಲಿ. ಯಶಸ್ಸು ಬೆನ್ನಟ್ಟಿ ಅವರ ಕೈ ಸೇರಲಿ. ಶುಭಾಶಯಗಳು ಮೊದಲ ಪ್ರಯತ್ನಕ್ಕೆ.


Get in Touch With Us info@kalpa.news Whatsapp: 9481252093

Tags: Lollipop mattu etara kategaluSachin Parshwanathಲಾಲಿಪಾಪ್ ಮತ್ತು ಇತರ ಕಥೆಗಳುಸಚಿನ್ ಪಾರ್ಶ್ವನಾಥ್ಹರಿಕಿರಣ್ ಹೆಚ್
Share198Tweet123Send
Previous Post

ಮೈನಿಂಗ್ ಇಂಜಿನೀಯರ್ ಅಸೋಸಿಯೇಷನ್ ವತಿಯಿಂದ ಕೋವಿಡ್19 ಪರಿಹಾರ ನಿಧಿಗೆ 2.50 ಲಕ್ಷ ದೇಣಿಗೆ

Next Post

ಅರ್ನಾಬ್ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ದರ್ಶನ್ ಉಳ್ಳಿ ದೂರು ದಾಖಲು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅರ್ನಾಬ್ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ದರ್ಶನ್ ಉಳ್ಳಿ ದೂರು ದಾಖಲು

ಅರ್ನಾಬ್ ವಿರುದ್ಧ ಶಿಕಾರಿಪುರ ಠಾಣೆಯಲ್ಲಿ ದರ್ಶನ್ ಉಳ್ಳಿ ದೂರು ದಾಖಲು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಅಂಕ ವ್ಯವಸ್ಥೆಯಲ್ಲೇ ಪ್ರಕಟವಾಯ್ತು SSLC ರಿಸಲ್ಟ್ | ಕೋರ್ಟ್ ಚಾಟಿಗೆ ನಲುಗಿದ ಸರ್ಕಾರ | ಆತಂಕ ಇನ್ನೂ ಜೀವಂತ!

ಅಂಕ ವ್ಯವಸ್ಥೆಯಲ್ಲೇ ಪ್ರಕಟವಾಯ್ತು SSLC ರಿಸಲ್ಟ್ | ಕೋರ್ಟ್ ಚಾಟಿಗೆ ನಲುಗಿದ ಸರ್ಕಾರ | ಆತಂಕ ಇನ್ನೂ ಜೀವಂತ!

April 23, 2026
 ಶಿಕಾರಿಪುರ | ಕುಮದ್ವತಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

 ಶಿಕಾರಿಪುರ | ಕುಮದ್ವತಿ ಪ್ರೌಢಶಾಲೆಗೆ ಶೇ.100ರಷ್ಟು ಫಲಿತಾಂಶ

April 23, 2026
SSLC Result | ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ: ಸಚಿವ ಮಧು ಬಂಗಾರಪ್ಪ

SSLC Result | ಶೇ. 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ: ಸಚಿವ ಮಧು ಬಂಗಾರಪ್ಪ

April 23, 2026
An enjoyable concert by an upcoming talent

An enjoyable concert by an upcoming talent

April 23, 2026
ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

April 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL