Thursday, October 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ರಾಷ್ಟ್ರೀಯ

ಸೆಪ್ಟೆಂಬರ್ ಒಂದೇ ತಿಂಗಳಿನಿಲ್ಲಿ ನೈಋತ್ಯ ರೈಲ್ವೆ ರಕ್ಷಣಾ ಪಡೆ ಮಾಡಿರುವ ಸಾಧನೆಗಳು ಎಷ್ಟಿವೆ ನೋಡಿ!

October 9, 2025
in ರಾಷ್ಟ್ರೀಯ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |

ನೈಋತ್ಯ ರೈಲ್ವೆಯ ರಕ್ಷಣಾ ಪಡೆ ಸೆಪ್ಟೆಂಬರ್ ಒಂದೇ ತಿಂಗಳಿನಲ್ಲಿ ಸಾಲು ಸಾಲಾಗಿ ಹಲವು ಸಾಧನೆಗಳನ್ನು ಮಾಡಿದೆ.

ನೈಋತ್ಯ ರೈಲ್ವೆ ತನ್ನ ಪ್ರಯಾಣಿಕರಿಗೆ ಸುರಕ್ಷತೆ, ಸುಖಕರ ಪ್ರಯಾಣವನ್ನು ಒದಗಿಸುವ ಭರವಸೆಯೊಂದಿಗೆ ಇಲಾಖೆಯ ಆಸ್ತಿಯನ್ನು ಸಂರಕ್ಷಿಸುವುದೂ ಸೇರಿದಂತೆ ಹಲವು ಮಹತ್ವದ ಕಾರ್ಯಗಳನ್ನು ಸಾಧಿಸಿದೆ.

ಇಲಾಖೆಯ ಕಾರ್ಯಾಚರಣೆಯಡಿ ರೈಲ್ವೆ ರಕ್ಷಣಾ ಪಡೆ 12 ಹೆಣ್ಣುಮಕ್ಕಳನ್ನು ಒಳಗೊಂಡಂತೆ ಒಟ್ಟು 51 ಮಕ್ಕಳನ್ನು ರಕ್ಷಿಸಿದೆ. ಅಲ್ಲದೇ, ಉಪಲಬ್ಧ ಕಾರ್ಯಾಚರಣೆಯಡಿ ರೈಲ್ವೆ ರಕ್ಷಣಾ ಪಡೆ ಒಟ್ಟು 3,22,001 ರೂ. ಮೌಲ್ಯದ ರೈಲು ಟಿಕೆಟ್’ಗಳನ್ನು ವಶಪಡಿಸಿಕೊಂಡಿದೆ.

ರೈಲ್ವೆ ರಕ್ಷಣಾ ಪಡೆ 14 ಮಂದಿಯನ್ನು ಬಂಧಿಸಿ, 86,833 ರೂ. ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ.

ರೈಲ್ವೆ ರಕ್ಷಣಾ ಪಡೆ ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶಗಳು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವಲ್ಲಿ ಸದಾ ಬದ್ಧವಾಗಿದೆ. ಪ್ರಯಾಣಿಕರಿಗೆ ಸುರಕ್ಷಿತ, ಭದ್ರ ಮತ್ತು ಸುಗಮ ಪ್ರಯಾಣದ ಅನುಭವ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.

ಸೆ. 2025ರಲ್ಲಿ ರೈಲ್ವೆ ರಕ್ಷಣಾ ಪಡೆ ಪ್ರಯಾಣಿಕರ ಸುರಕ್ಷತೆ, ಭದ್ರತೆ ಹಾಗೂ ಸೌಕರ್ಯ ಖಚಿತಪಡಿಸಲು ನಿರಂತರವಾಗಿ ಕೆಲಸ ಮಾಡಿ. ಭಾರತೀಯ ರೈಲ್ವೆಯ ವಿಶ್ವಾಸಾರ್ಹ ಸರಕು ಸಾಗಣಾ ಸೇವೆಗೂ ಮಹತ್ವದ ಸಹಕಾರ ನೀಡಿದೆ.
ಈ ಅಭಿಯಾನದಡಿ ರೈಲ್ವೆ ರಕ್ಷಣಾ ಪಡೆ ಒಟ್ಟು 51 ಮಕ್ಕಳು (39 ಹುಡುಗರು ಮತ್ತು 12 ಹುಡುಗಿಯರು) ರಕ್ಷಣೆಯ ಪತ್ತೆಹಚ್ಚಿ ಅವರ ಕುಟುಂಬಗಳಿಗೆ ಪುನಃ ಸೇರಿಸಲು ಪ್ರಮುಖ ಪಾತ್ರ ವಹಿಸಿದೆ. ಈ ಮಕ್ಕಳು ವಿವಿಧ ಕಾರಣಗಳಿಂದ ತಮ್ಮ ಕುಟುಂಬಗಳಿಂದ ಬೇರ್ಪಟ್ಟಿದ್ದರು. ಅವರನ್ನು ರಕ್ಷಿಸಿ ಎನ್ಜಿಓಗಳು ಹಾಗೂ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು.

ಡಿಗ್ನಿಟಿ ಕಾರ್ಯಾಚರಣೆ
ಈ ಕಾರ್ಯಾಚರಣೆಯಡಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ ಒಟ್ಟು 6 ವೃದ್ಧರನ್ನು (1 ಪುರುಷ ಮತ್ತು 5 ಮಹಿಳೆಯರು) ರಕ್ಷಿಸಿ ಅವರ ಕುಟುಂಬಗಳಿಗೆ ಅಥವಾ ಎನ್’ಜಿಒಗಳಿಗೆ ಹಸ್ತಾಂತರಿಸಲಾಗಿದೆ.

ಮಹಿಳಾ ಪ್ರಯಾಣಿಕರ ಶಕ್ತೀಕರಣ – ಮೇರಿ ಸಹೇಲಿ ಅಭಿಯಾನ
ಈ ಮಹಿಳಾ ಕೇಂದ್ರಿತ ಯೋಜನೆಯಡಿ, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳು ಒಂಟಿಯಾಗಿ ಅಥವಾ ಸಂಗಾತಿಯಿಲ್ಲದೆ ಪ್ರಯಾಣಿಸುವ ಮಹಿಳೆಯರ ಸುರಕ್ಷತೆಯ ಖಚಿತಪಡಿಸಿದೆ. ಅವರ ಸೀಟ್ ಹಾಗೂ ಬರ್ತ್ ವಿವರಗಳನ್ನು ಮಾರ್ಗದಲ್ಲಿನ ಸ್ಟೇಷನ್’ಗಳ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಹಂಚಲಾಗುತ್ತದೆ. ಪ್ರಯಾಣದ ಅಂತ್ಯದಲ್ಲಿ ಮಹಿಳಾ ಪ್ರಯಾಣಿಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗುತ್ತದೆ. ಪ್ರಸ್ತುತ 32 ರೈಲುಗಳನ್ನು ಈ ಅಭಿಯಾನದಡಿ ಒಳಗೊಂಡಿದೆ.

ಟಿಕೆಟ್ ದಂಧೆ ವಿರುದ್ಧದ ಕ್ರಮ
ಸಾಮಾನ್ಯ ಪ್ರಯಾಣಿಕರಿಗೆ ನ್ಯಾಯಯುತವಾಗಿ ಟಿಕೆಟ್’ಗಳು ಲಭ್ಯವಾಗಲು ಮತ್ತು ಕಪ್ಪುಬಜಾರಿನ ತಡೆಗಟ್ಟಲು ಕರ್ನಾಟಕ ಹಾಗೂ ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳಲ್ಲಿ ತಪಾಸಣೆ ನಡೆಸಲಾಯಿತು. ಇದರ ಫಲವಾಗಿ 35 ಪ್ರಕರಣಗಳಲ್ಲಿ 46 ದಂಧೆಗಾರರನ್ನು ಬಂಧಿಸಲಾಯಿತು. ಒಟ್ಟು 96 ಟಿಕೆಟ್’ಗಳು (1,19,956.85 ಮೌಲ್ಯ) ಮತ್ತು 140 ಬಳಕೆಮುಗಿದ ಟಿಕೆಟ್’ಗಳು (2,02,045.95 ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.
ಸತರ್ಕ ಮತ್ತು ನಾರ್ಕೋ ಕಾರ್ಯಾಚರಣೆ
ಸತರ್ಕ ಕಾರ್ಯಾಚರಣೆಯಡಿ, ಒಟ್ಟು 9 ಮದ್ಯ ಪ್ರಕರಣಗಳಲ್ಲಿ 168 ಮದ್ಯದ ಬಾಟಲಿಗಳು (170.010 ಲೀಟರ್) ರೂ. 86,833 ಮೌಲ್ಯದಲ್ಲಿ ವಶಪಡಿಸಕೊಳ್ಳಲಾಯಿತು. ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು.

ನಾರ್ಕೋ ಕಾರ್ಯಾಚರಣೆಯಡಿ, 7 ಪ್ರಕರಣಗಳಲ್ಲಿ 53.958 ಕೆ.ಜಿ ಗಾಂಜಾ(ರೂ. 41.26 ಲಕ್ಷ ಮೌಲ್ಯ) ವಶಪಡಿಸಿಕೊಂಡು 2 ಅಪರಾಧಿಗಳನ್ನು ಬಂಧಿಸಲಾಗಿದ್ದು, ಅವರನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಕಳೆದುಹೋದ ವಸ್ತುಗಳ ಪುನಃ ಹಸ್ತಾಂತರ
ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳು 66 ಸಂದರ್ಭಗಳಲ್ಲಿ ಪ್ರಯಾಣಿಕರು ಬಿಟ್ಟುಹೋದ ಲ್ಯಾಪ್’ಟಾಪ್’ಗಳು, ಮೊಬೈಲ್’ಗಳು, ಆಭರಣಗಳು ಹಾಗೂ ಇತರ ವೈಯಕ್ತಿಕ ವಸ್ತುಗಳು ಸೇರಿದಂತೆ ಒಟ್ಟು ರೂ. 17,33,153 ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಿಂತಿರುಗಿಸಲಾಗಿದೆ.

ಯಾತ್ರಿ ಸುರಕ್ಷಾ ಕಾರ್ಯಾಚರಣೆ
ಒಂದು ಸಂದರ್ಭದಲ್ಲಿ, ಅಪರಾಧ ತಡೆ ಪತ್ತೆ ದಳ ತಂಡವು ಪ್ರಯಾಣಿಕರ ವಸ್ತುಗಳ ಕಳ್ಳತನ ಪ್ರಕರಣದಲ್ಲಿ ಸಂಶಯಾಸ್ಪದ ಅಪರಾಧಿಯನ್ನು ಬಂಧಿಸಿ ಗವರ್ನಮೆಂಟ್ ರೈಲ್ವೆ ಪೊಲೀಸ್ /ದಾವಣಗೆರೆಗೆ ಹಸ್ತಾಂತರಿಸಲಾಗಿದೆ.
15,899 ರೂ. ಮೌಲ್ಯದ ಕಳವಾದ ಮೊಬೈಲ್’ಗಳನ್ನು ವಶಪಡಿಸಿಕೊಂಡು ಮತ್ತು ಸಂಬAಧಿತ ಕಾನೂನುಗಳಡಿ ಪ್ರಕರಣ ದಾಖಲಾಗಿದೆ.

ರೈಲು ಪೆಟ್ರೋಲಿಂಗ್, ಎಸ್ಕಾರ್ಟಿಂಗ್
ಪ್ರತಿ ದಿನ ಸರಾಸರಿ 32 ರಿಂದ 35 ಎಕ್ಸ್’ಪ್ರೆಸ್ ಮತ್ತು ವಿಶೇಷ ರೈಲುಗಳಲ್ಲಿ ಒಟ್ಟು 85 ರಿಂದ 90 ಸಿಬ್ಬಂದಿಗಳು ಎಸ್ಕಾರ್ಟ್ ಕರ್ತವ್ಯ ನಿರ್ವಹಿಸಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿದರು.

ರೈಲ್ವೆ ಆಸ್ತಿ ರಕ್ಷಣೆ
ಈ ಕಾಯ್ದೆಯಡಿ 9 ಪ್ರಕರಣಗಳು ದಾಖಲಾಗಿದ್ದು, 14 ಅಪರಾಧಿಗಳನ್ನು ಬಂಧಿಸಲಾಯಿತು. ರೂ. 1,66,247 ಮೌಲ್ಯದ ಕಳವಾದ ರೈಲ್ವೆ ಆಸ್ತಿಯನ್ನು ವಶಪಡಿಸಕೊಳ್ಳಲಾಗಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ಮಹಾ ಪ್ರಬಂಧಕರಾದ ಮುಖುಲ ಸರನ್ ಮಾಥರ್ ಅವರು ಮಾತನಾಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರ ಕಲ್ಯಾಣಕ್ಕಾಗಿ ರೈಲ್ವೆಯು ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2025/09/Vedic-Maths-New.mp4
http://kalpa.news/wp-content/uploads/2024/04/VID-20240426-WA0008.mp4

Tags: HubballiHubliIndian RailwayIRCTCKannada News WebsiteLatest News KannadaRailway Protection ForceRPFನೈಋತ್ಯ ರೈಲ್ವೆಭಾರತೀಯ ರೈಲ್ವೆರೈಲ್ವೆ ರಕ್ಷಣಾ ಪಡೆಹುಬ್ಬಳ್ಳಿ
Previous Post

ರಾಜ್ಯದ ಹೆಣ್ಮಕ್ಕಳಿಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ | ಏನದು?

Next Post

ರಣಜಿ ಟ್ರೋಫಿ | ಅಭ್ಯಾಸ ಪಂದ್ಯದಲ್ಲಿ ಹೈಡ್ರಾಮಾ | ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ರಣಜಿ ಟ್ರೋಫಿ | ಅಭ್ಯಾಸ ಪಂದ್ಯದಲ್ಲಿ ಹೈಡ್ರಾಮಾ | ಸಹ ಆಟಗಾರನ ಮೇಲೆ ಬ್ಯಾಟ್ ಬೀಸಿದ ಪೃಥ್ವಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರಾಜ್ಯೋತ್ಸವ | ರಾಷ್ಟ್ರೋತ್ಥಾನ ಸಾಹಿತ್ಯದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆ | ಭಾಗವಹಿಸುವುದು ಹೇಗೆ?

October 9, 2025

ಇನ್ಮುಂದೆ 10 ಕೆಜಿ ಅಕ್ಕಿ ಕೊಡಲ್ಲ | ಸಿಗಲಿದೆ ಇಂದಿರಾ ಆಹಾರ ಕಿಟ್ | ಏನಿರತ್ತೆ ಅದರಲ್ಲಿ?

October 9, 2025

ವಿಮಾನ ನಿಲ್ದಾಣ ಜಮೀನು ಸಂತ್ರಸ್ಥರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

October 9, 2025

ಶಿವಮೊಗ್ಗ | ಅ.11ರಂದು ಪ್ರಜ್ಞಾ ಬುಕ್ ಗ್ಯಾಲರಿಯ ನೂತನ ಮಳಿಗೆ ಉದ್ಘಾಟನೆ

October 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರಾಜ್ಯೋತ್ಸವ | ರಾಷ್ಟ್ರೋತ್ಥಾನ ಸಾಹಿತ್ಯದಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆ | ಭಾಗವಹಿಸುವುದು ಹೇಗೆ?

October 9, 2025

ಇನ್ಮುಂದೆ 10 ಕೆಜಿ ಅಕ್ಕಿ ಕೊಡಲ್ಲ | ಸಿಗಲಿದೆ ಇಂದಿರಾ ಆಹಾರ ಕಿಟ್ | ಏನಿರತ್ತೆ ಅದರಲ್ಲಿ?

October 9, 2025

ವಿಮಾನ ನಿಲ್ದಾಣ ಜಮೀನು ಸಂತ್ರಸ್ಥರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

October 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!