ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಹಿಂದೂ ಧರ್ಮ ಹಾಗೂ ಹಿಂದೂ ದೇವರನ್ನು ಅವಮಾನ ಮಾಡಿದ್ದ ಶಿಕ್ಷಕಿಯ ಅಮಾನತು ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಡಿಡಿಪಿಐ ಅವರನ್ನೂ ಸಹ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಯಾನಂದ ಆರ್ ನಾಯ್ಕ್ ಅವರನ್ನು ಬುಧವಾರ ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಕಲಬುರ್ಗಿ ಡಿಡಿಪಿಐ ಆಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯೋಜಿಸಲಾಗಿದೆ.
ಹಿಂದೂ ಧರ್ಮ ಹಾಗೂ ಹಿಂದೂ ದೇವರುಗಳ ವಿರುದ್ಧ ಇಂಗ್ಲೀಷ್ ಶಿಕ್ಷಕಿಯೊಬ್ಬರ ಅವಹೇಳನ ಮಾಡಿರುವ ಪ್ರಕರಣ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಪ್ರಕರಣವನ್ನು ಸೂಕ್ಷ್ಮವಾಗಿ ಹಾಗೂ ಸಮಪರ್ಕವಾಗಿ ನಿರ್ವಹಿಸುವಲ್ಲಿ ಡಿಡಿಪಿಐ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಬಿ. ರಮಾನಾಥ ರೈ ಸಹ ಆರೋಪಿಸಿದ್ದರು.
Also read: ಮೊಳಕಾಲ್ಮೂರು ಪೊಲೀಸರ ಭರ್ಜರಿ ಬೇಟೆ | ಅಂತಾರಾಜ್ಯ ಶೇಂಗಾ ಕಳ್ಳರ ಬಂಧನ | ಲಕ್ಷಾಂತರ ಹಣ ವಶ
ಇದರ ಬೆನ್ನಲ್ಲೆ ಡಿಡಿಪಿಐ ಅವರನ್ನು ವರ್ಗಾವಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















