ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು BJP Activist Praveen Nettaru ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದ ಪಕ್ಷದ ನಾಯಕರಿಗೆ ನೋವಿನಲ್ಲಿರುವ ಕುಟುಂಬಸ್ಥರು ಛೀಮಾರಿ ಹಾಕಿರುವ ಘಟನೆ ನಡೆದಿದೆ.
ಪ್ರವೀಣ್ ನಿವಾಸಕ್ಕೆ ಇಂದು ಪಕ್ಷದ ಕೆಲವು ನಾಯಕರು ಭೇಟಿ ನೀಡಿದ್ದು, ನೋವಿನಲ್ಲಿ ಮುಳುಗಿರುವ ಕುಟುಂಬಸ್ಥರು ನಿಮ್ಮ ಸಾಂತ್ವನ ಯಾರಿಗೆ ಬೇಕು. ಈಗೇಕೆ ಮಾತನಾಡಿಸಲು ಬಂದಿದ್ದೀರಿ ಎಂದು ಕಿಡಿ ಕಾರಿದ್ದಾರೆ.
ನಮಗೆ ನಿಮ್ಮ ಸಾಂತ್ವನ ಬೇಡ. ಬದಲಾಗಿ ರಾಷ್ಟ್ರೀಯ ತನಿಖಾ ದಳ(ಎನ್’ಐಎ) ವತಿಯಿಂದ ತನಿಖೆ ನಡೆಸಿ, ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಆಕ್ರೋಶದ ಬೇಡಿಕೆಯನ್ನಿಟ್ಟರು.
Also read: ಪ್ರವೀಣ್ ಹತ್ಯೆ ಪ್ರಕರಣ: ಪಿಎಫ್’ಐ, ಎಸ್’ಡಿಪಿಐನ ಶಂಕಿತ ಹಂತಕರು ವಶಕ್ಕೆ
ಇದೇ ವೇಳೆ ಪ್ರವೀಣ್ ನಿವಾಸಕ್ಕೆ ಭೇಟಿ ನೀಡುತ್ತಿರುವ ಬಿಜೆಪಿ ನಾಯಕರಿಗೆ ಅಲ್ಲಿನ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post