ಕತೆಯಲ್ಲಿ ನಾಯಕ, ನಾಯಕಿ ಇಬ್ಬರಲ್ಲಿ ಒಬ್ಬರಿಗೆ ಎರಡು ಶೇಡ್ ಇರುವ ಚಿತ್ರ ಬಂದಿರುವುದುಂಟು. ಆದರೆ ಮನೋರಥ ಎನ್ನುವ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಇಬ್ಬರೂ ಇಂತಹದ್ದೆ ರೀತಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಮನುಷ್ಯನ ಮನಸ್ಸು ಸಮತೋಲನ ತಪ್ಪಿದಾಗ ಏನಾಗುತ್ತದೆ? ಅರಿಯದ ಮಕ್ಕಳ ಮನಸ್ಸನ್ನು ನಿರ್ಲಕ್ಷ ಮಾಡಿದ್ದಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಫೋಬಿಯಾ ಎನ್ನುವ ಖಾಯಿಲೆ ಬಂದ ರೋಗಿಗಳಿಗೆ ಈ ರೀತಿ ಆಗುತ್ತದೆ. ಎರಡು ಕ್ಲೈಮಾಕ್ಸ್ ಇರಲಿದ್ದು, ದಂದ್ವ ಇದ್ದರೂ ನೋಡುಗನಿಗೆ ಕೊನೆ ಯಾವುದು ಅಂತ ಗೊತ್ತಾಗುವುದಿಲ್ಲವಂತೆ. ಅದಕ್ಕಾಗಿ ಒನ್ಸ್ ಎಗೈನ್ ಬುದ್ದಿವಂತರಿಗೆ ಮಾತ್ರವೆಂದು ಅಡಿಬರಹದಲ್ಲಿ ಹೇಳಲಾಗಿದೆ.
ಅನಿಮೇಶನ್ ಕೋರ್ಸ್ ಮಾಡಿರುವ ಎಂ. ಪ್ರಸನ್ನಕುಮಾರ್ ಚಿತ್ರಕತೆ, ಸಂಭಾಷಣೆ, ನಿರ್ದೇಶನ ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಹೇಳುವಂತೆ ಚಿತ್ರಕತೆ ಹೈಲೈಟ್ ಆಗಿದೆ. ಪ್ರತಿ ಸನ್ನಿವೇಶಗಳು ಕುತೂಹಲಕಾರಿಯಾಗಿ ಆಸಕ್ತಿ ಮೂಡಿಸುವಂತೆ ಇರಲಿದೆ. ಬೆಂಗಳೂರು ಮತ್ತು ಕನಕಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗನ ಮನಸ್ಥಿತಿ ಸರಿ ಇರುವುದಿಲ್ಲ.
ಪ್ರಪಂಚ ದೂರ ಮಾಡಿದರೂ ತಾಯಿ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾಳೆ. ಹೀಗೆ ಮಾನಸಿಕ ಖಿನ್ನತೆಗೆ ಒಳಪಟ್ಟಿರುವ ಪಾತ್ರದಲ್ಲಿ ರಾಜ್ಚರಣ್ ನಾಯಕನಾಗಿ ಮೊದಲ ಚಿತ್ರ. ಸಕರಾತ್ಮಕ ಮತ್ತು ನಕರಾತ್ಮಕದಲ್ಲಿ ನಟಿಸಿರುವ ಅಂಜಲಿಗೆ ನಾಯಕಿಯಾಗಿ ಪ್ರಥಮ ಅನುಭವ.
ಉಳಿದಂತೆ ದಮಯಂತಿ, ರಾಘು ರಾಮನಕೊಪ್ಪ, ನಾಗೇಂದ್ರ, ವಿಠಲ್ಭಟ್ ನಟನೆ ಇದೆ. ಮೂರು ಹಾಡುಗಳಿಗೆ ಚಂದ್ರು ಓಬಯ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಗ್ರಹಣ ಮುರಳಿಕ್ರಿಶ್, ಸಂಕಲನ ಚಲುವಮೂರ್ತಿ ಅವರದ್ದಾಗಿದೆ. ಎಂ. ರಘುಪತಿ, ಮಂಜುಳ ಮುನಿಯಪ್ಪ ಮತ್ತು ಲಾವಣ್ಯ ಪಾಲುದಾರರಾಗಿದ್ದಾರೆ. ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಎಸ್.ವಿ.ಎಂ. ಕ್ರಿಯೆಶನ್ಸ್ ಮೂಲಕ ನಿರ್ಮಾಣವಾಗಿರುವ ಚಿತ್ರವು ಮುಂದಿನ ತಿಂಗಳು 10ರಂದು ದರ್ಷ್ ಮೂವೀಸ್ ಮುಖಾಂತರ ಬಿಡುಗಡೆಯಾಗುವ ಸಾಧ್ಯತೆ ಇದೆ.
Discussion about this post