ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಕೊರೋನಾ ವೈರಸ್ ನಿಯಂತ್ರಣಕ್ಕೆ ತರಲು ಲಾಕ್’ಡೌನ್ ಘೋಷಣೆ ಮಾಡಿದ್ದರೂ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಪೊಲೀಸರು ಲಾಠಿ ಪ್ರಹಾರ ನಡೆಸುತ್ತಿರುವುದು, ಇದಕ್ಕೆ ಪರ ಹಾಗೂ ವಿರೋಧ ವ್ಯಕ್ತವಾಗುತ್ತಿರುವುದು ತಿಳಿದಿರುವ ವಿಚಾರವೇ.
ಆದರೆ, ಉಡುಪಿಯಲ್ಲಿ ಸರ್ಕಲ್ ಇನ್ಸ್’ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ಮೂಲದ ಮಂಜುನಾಥ್ ಅವರು ಲಾಠಿಯನ್ನು ಠಾಣೆಯಲ್ಲಿಟ್ಟು ಮಾನವೀಯತೆ ಮೆರೆಯುವ ಕೆಲಸ ಮಾಡುತ್ತಿದ್ದಾರೆ.
ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರು, ಮಾಸ್ಕ್ ಹಾಕದೇ ಓಡಾಡುತ್ತಿರುವ ಜನರಿಗೆ ತಮ್ಮ ಸ್ವಂತ ಕರ್ಚಿನಲ್ಲಿ ಮಾಸ್ಕ್’ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಮಾತ್ರವಲ್ಲ ಕೊರೋನಾ ಸೋಂಕಿನ ಭೀಕರತೆಯನ್ನು ಒಳ್ಳೆಯ ಮಾತುಗಳಲ್ಲಿ ತಿಳಿಸಿಹೇಳಿ, ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಹೇಳುವುದು ಮಾತ್ರವಲ್ಲ, ತಮ್ಮ ಸ್ವಂತ ಹಣದಿಂದ ಮಾಸ್ಕ್ ಖರೀದಿಸಿ ನೀಡುತ್ತಿದ್ದಾರೆ.
ಖಾಕಿಯವರಿಗೆ ಮಾನವೀಯತೆ ಇಲ್ಲ ಎಂಬ ಆರೋಪವೇ ಹೆಚ್ಚು. ಆದರೆ, ಅದಕ್ಕೆ ವಿರುದ್ಧವಾಗಿ ತಾಯ್ತನ ತೋರಿಸಿ, ಮಾನವೀಯತೆ ಮೆರೆಯುತ್ತಿರುವ ಮಂಜುನಾಥ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Get in Touch With Us info@kalpa.news Whatsapp: 9481252093
Discussion about this post