No Result
View All Result
Kotak Mahindra Bank Announces Results
English Articles

Kotak Mahindra Bank Announces Results

by ಕಲ್ಪ ನ್ಯೂಸ್
May 4, 2026
0

Kalpa Media House  |  Bengaluru  | The Board of Directors of Kotak Mahindra Bank (“the Bank”) approved the audited standalone...

Read moreDetails
Landmark Heart Surgery in Davanagere | SS Narayana hospital completes first modified Bentall procedure

Landmark Heart Surgery in Davanagere | SS Narayana hospital completes first modified Bentall procedure

May 2, 2026
KRCS Shikaripura Achieves 100% Result in CBSE Class X Board Exams

KRCS Shikaripura Achieves 100% Result in CBSE Class X Board Exams

April 16, 2026
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
  • Advertise With Us
  • Grievances
  • About Us
  • Contact Us
Wednesday, May 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈ ಎಲ್ಲ ಕಲಾವಿದರ ಕಷ್ಟವನ್ನು ಕಟೀಲು ತಾಯಿ ನೀಗಿಸಿ ಮತ್ತೆ ಯಕ್ಷರಂಗದಲ್ಲಿ ಗೆಜ್ಜೆಕಟ್ಟುವಂತಾಗಲಿ

ಯಕ್ಷಗಾನ ಕಲಾವಿದ-ನ ಬದುಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 12, 2020
in Special Articles
0
ಈ ಎಲ್ಲ ಕಲಾವಿದರ ಕಷ್ಟವನ್ನು ಕಟೀಲು ತಾಯಿ ನೀಗಿಸಿ ಮತ್ತೆ ಯಕ್ಷರಂಗದಲ್ಲಿ ಗೆಜ್ಜೆಕಟ್ಟುವಂತಾಗಲಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ರಂಗದಲ್ಲಿ ಗೆಜ್ಜೆ ಕಟ್ಟಿ ತಾಳಕ್ಕೆ ತಕ್ಕಂತೆ ಕುಣಿಯುವ, ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ, ಕವಿಯ ಕಲ್ಪನೆಯ ಪದ್ಯಗಳ ಸಾಲುಗಳಿಗೆ ಸುಮಧುರ ಕಂಠ ಸಿರಿಯ ನೀಡುವ, ಹಾಗೆಯೇ ನೆರೆದ ಕಲಾ-ಅಭಿಮಾನಿಗಳನ್ನು ನಕ್ಕು ನಗಿಸುವ ಎಷ್ಟೊ ಕಲಾವಿದರ ಬದುಕು, ಕೇವಲ ರಂಗದ ಎದುರಿನ ಬದುಕಿಗೆ ಮಾತ್ರ ಆಕರ್ಷಣೀಯವಾಗಿರುತ್ತದೆ.ಅಂತಹ ಯಕ್ಷಗಾನ ಕಲಾವಿದರ ರಂಗಸ್ಥಳದ ಹಿಂದಿನ ಬದುಕನ್ನು, ನಿಮ್ಮ ಕಣ್ಣಿನ ಎದುರು ಇರಿಸುವ ಒಂದು ಪ್ರಾಮಾಣಿಕ ಪ್ರಯತ್ನ ಬಂಧುಗಳೇ. ಬನ್ನಿ, ಯಕ್ಷಗಾನ ಕಲಾವಿದನ ಬದುಕು,ನೋವು- ನಲಿವು ಗಳ ಜೊತೆಗೆ ಒಂದಷ್ಟು ಸಮಯವನ್ನು ಕಳೆಯೋಣ…

ಸಾವಿರಾರು ವರುಷಗಳ ಇತಿಹಾಸವಿರುವ ವೈಶಿಷ್ಟ್ಯ ಪೂರ್ಣವಾದ ಕಲೆ ಯಕ್ಷಗಾನ. ಮೊದಮೊದಲು ಕೇವಲ ಕರಾವಳಿ ಕರ್ನಾಟಕದ ತುಳುನಾಡಿಗೆ ಸೀಮಿತವಾಗಿದ್ದ ಯಕ್ಷಗಾನ, ಈಗ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ತನ್ನ ಭವ್ಯ ಪರಂಪರೆಯ ಸೊಗಡನ್ನು ಬೀಸಿ ಬಂದಿದೆ. ಈ ಯಕ್ಷಗಾನ ಕಲೆಯ ಇಷ್ಟರ ಮಟ್ಟಿಗಿನ ಬೆಳವಣಿಗೆಗೆ ಪ್ರಮುಖ ಕಾರಣ ಈ ಭವ್ಯ ಪರಂಪರೆಗೆ ಬೆವರು ಸುರಿಸಿದ, ಯಕ್ಷಗಾನಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿರಿಸಿ ಕಾಲದಲ್ಲಿ ಲೀನವಾಗಿ ಹೋದ ಅದೆಷ್ಟೋ ಹಿರಿಯ ಚೇತನಗಳು. ಜೊತೆಗೆ ಇಂದಿಗೂ ಯಕ್ಷಗಾನ ರಂಗದಲ್ಲಿ ದುಡಿಯುತ್ತಿರುವ ಬಹಳಷ್ಟು ಕಲಾವಿದರು. ಇಂದು ಯಕ್ಷಗಾನ ತನ್ನ ಮಟ್ಟಿಗೆ ಸಮೃದ್ಧವಾಗಿ ಬೆಳೆದುನಿಂತಿದೆ, ಇದಕ್ಕೆ ಮುಖ್ಯ ಕಾರಣ ಯಕ್ಷಗಾನವೆಂಬ ಈ ಬೃಹತ್ ವೃಕ್ಷಕ್ಕೆ ನೀರು ಹಾಕಿ ಪೋಷಿಸಿದ ಪುಣ್ಯಾತ್ಮರು. ಈಗ ಲೋಕ ಮುಖಕ್ಕೆ ಪರಿಚಯವಿಲ್ಲದೇ ಹೋದರು ಅವರ ಪರಿಶ್ರಮ ಚಿರಸ್ಥಾಯಿಯಾಗಿ ಈ ಭೂಮಿಯಲ್ಲಿ ಉಳಿಯುತ್ತದೆ.

ಒಳ್ಳೆಯ ಓಡುವ, ಪ್ರಶಸ್ತಿಯನ್ನು ಗೆಲ್ಲುವ ಕುದುರೆಯ ಹಿಂದೆ ಸಾವಿರಾರು ಜನವಂತೆ. ಅದೇ ಹೆಚ್ಚು ಪ್ರಾಯವಾಗಿ ಕಾಲಿನಲ್ಲಿ ಬಲವಿಲ್ಲದೆ ಮೂಲೆಗುಂಪಾದ ಮುದಿ ಕುದುರೆಯ ಹಿಂದೆ ಯಾರಿಲ್ಲವಂತೆ. ಎಂಬ ಮಾತಿನ ಪ್ರಕಾರ ಕಲಾವಿದನೊಬ್ಬ ತನ್ನ ಕಾಲಿನಲ್ಲಿ ಬಲ ಇರುವವರೆಗೆ, ದೇಹದಲ್ಲಿ ಶಕ್ತಿ ಇರುವವರೆಗೆ, ತನ್ನ ಧ್ವನಿಯಲ್ಲಿ ಕಂಠ ತ್ರಾಣ ಇರುವವರೆಗೆ ಆತ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀಡಬಲ್ಲ. ಯಾವಾಗ ಕಲಾವಿದನ ದೇಹದ ಸಾಮರ್ಥ್ಯ ಕುಗ್ಗುತ್ತಾ ಬರುತ್ತದೆಯೊ ಆವತ್ತು ಆತನ ಪ್ರದರ್ಶನವೂ ಕಳೆಗುಂದುತ್ತಾ ಬರುತ್ತದೆ. ಪ್ರಚಾರ, ಬೇಡಿಕೆಗಳೂ ಕಡಿಮೆಯಾಗುತ್ತದೆ. ಹೀಗೆ ದಿನಗಳೆದಂತೆ ಮೂಲೆಗುಂಪಾದ ಅದೆಷ್ಟೋ ಕಲಾವಿದರುಗಳನ್ನು ನಾವು ಕಂಡಿದ್ದೇವೆ. ಇಂದಿಗೂ ಎಷ್ಟೊ ವರುಷಗಳ ಕಾಲ ತಿರುಗಾಟ ನಡೆಸಿದ ಒಬ್ಬ ಕಲಾವಿದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಆದರೂ ಒಂದು ಮಾತು ಮಾತ್ರ ಸತ್ಯ. ಕಲಾವಿದನ ದೇಹದ ಒಳಗಿನ ಸತ್ವ ಕುಂದಿರಬಹುದು ಆದರೆ ಆತನ ರಕ್ತದಲ್ಲಿ ಇರುವ ಕಲಾವಿದನೆಂಬ ಜೀವಕ್ಕೆ ಎಂದಿಗೂ ಸಾವು ಬರಲಾರದು.

ಮನುಷ್ಯನ ದೇಹಕ್ಕೆ ಬಹಳ ಪ್ರಾಮುಖ್ಯವಾಗಿ ಬೇಕಿರುವುದು ದುಡಿದು ಬಂದ ದೇಹಕ್ಕೆ ವಿಶ್ರಾಂತಿಯಂತೆ. ಅಂದರೆ ಅದರಲ್ಲಿ ನಿದ್ದೆಯೂ ಕೂಡ ಬರುತ್ತದೆ. ಪ್ರಸ್ತುತ ತಿರುಗಾಟ ನಡೆಸುತ್ತಿರುವ ಅದೆಷ್ಟೋ ಕಲಾವಿದರು ಹಗಲು ಹೊತ್ತಿನಲ್ಲಿ ದುಡಿದು ರಾತ್ರಿಯ ಹೊತ್ತಿಗೆ ದೂರದೂರಿನಲ್ಲಿ ಇರುವ ತನ್ನ ಮೇಳದ ಆಟಕ್ಕೆ ಸಮಯಕ್ಕೆ ಸರಿಯಾಗಿ ಹಾಜರಿರುತ್ತಾರೆ. ರಾತ್ರಿ ಎಲ್ಲಾ ನಿದ್ದೆಗೆಟ್ಟು, ವೇಷಭೂಷಣಗಳನ್ನು ಧರಿಸಿ, ಮುಖಕ್ಕೆ ಬಣ್ಣಹಚ್ಚಿ, ಕುಣಿಯುವ ಯಕ್ಷಗಾನ ಕಲಾವಿದ. ದೇಹಕ್ಕೆ ಅಷ್ಟೊಂದು ದಣಿವಿದ್ದರೂ ಯಕ್ಷಗಾನ ನೋಡಬಂದ ಕಲಾ-ಅಭಿಮಾನಿಗಳಿಗೆ ಒಂದಿನಿತೂ ಕೊರತೆಯಾಗದಂತೆ ತನಗೆ ನೀಡಿದ ಪಾತ್ರಗಳಿಗೆ ಜೀವತುಂಬುವ ಪುಣ್ಯಾತ್ಮರು ಅವರು. ಇವುಗಳೆಲ್ಲಾ ಕೇವಲ ಒಂದು ಎರಡು ದಿನಗಳಿಗೆ ಸೀಮಿತವಲ್ಲ ಪ್ರತಿದಿನವೂ ಕಲಾವಿದನೊಬ್ಬನ ದಿನಚರಿ ಇದು. ಈಗೀಗ ದೂರದಲ್ಲಿ ಕುಳಿತು ಮಾತನಾಡುವ ಕೆಲ ವಿಮರ್ಶಕನ ಬಾಯಿಗೆ ಸುಲಭದ ತುತ್ತಾಗುವುದೂ ಈ ಬಡಕಲಾವಿದನೇ. ಕಾರಣ ಆರೋಗ್ಯದ ಸಮಸ್ಯೆ ಇಂದಲೊ, ಮನೆಯ ಸಮಸ್ಯೆ ಇಂದಲೊ ಅಥವಾ ಇನ್ನಿತರ ತೊಂದರೆ ಇಂದಲೊ ಕಲಾವಿದನ ಪ್ರದರ್ಶನದಲ್ಲಿ ಅಥವಾ ಆತ ಬರದೇ ಹೋದಲ್ಲಿ ಈ ಬಡಕಲಾವಿದನೇ ಅವರ ಪಾಲಿಗೆ ಸುಲಭವಾಗಿ ಸಿಕ್ಕುವ ವಿಷಯವಾಗಿರುತ್ತದೆ. ಅದರೂ ನೈಜ ಕಲಾವಿದ ಎಂದಿಗೂ ಟೀಕೆಗಳಿಂದ ಕುಗ್ಗದೆ, ಪ್ರಶಂಸೆಗಳಿಗೆ ಹಿಗ್ಗದೆ ಸಾಗುವ ಹೋರಾಟದ ಹಾದಿಯೇ ಆತನ ಸಾಧನೆಗೆ ದಾರಿದೀಪವಾಗಿರುತ್ತದೆ.

ಹುಟ್ಟು ಮತ್ತು ಸಾವುಗಳ ಮಧ್ಯೆ ನಾಲ್ಕು ದಿನದ ಜೀವನ ನಮ್ಮದು.ಮನುಷ್ಯ ಸತ್ತ ಮೇಲು ಈ ಭೂಮಿಯಲ್ಲಿ ಬದುಕ ಬೇಕಿದ್ದರೆ ಅದು ಆತ ತನ್ನ ಜೀವತದ ಅವಧಿಯಲ್ಲಿ ಮಾಡಿದ ಒಂದಷ್ಟು ಪುಣ್ಯ ಕಾರ್ಯದಿಂದ ಮಾತ್ರ ಅಥವಾ ಆತನ ವೈಯುಕ್ತಿಕ ಸಾಧನೆಯಿಂದ. ಮತ್ತೊಂದು ದಾರಿಯಿದೆ ಇಂತಹ ಸಾಂಸ್ಕೃತಿಕ ಕಲೆಗಳಲ್ಲಿ ಆತ ಮಾಡಿದ ಸಾಧನೆಯಿಂದ ಆತನ ಹೆಸರು ಚಿರಸ್ಥಾಯಿಯಾಗಿ ಉಳಿಯುತ್ತದೆ. ಒಬ್ಬ ಕಲಾವಿದನಿಗೆ ತನ್ನ ಬಂಧು ಬಳಗದವರೊಡನೆ ಕಳೆಯಲು ಸಿಗುವ ಸಮಯ ಬಹಳಷ್ಟು ಕಡಿಮೆ ಎನ್ನಬಹುದು. ಸಿಕ್ಕ ಸಮಯದಲ್ಲಿ ಪ್ರೀತಿ ವಿಶ್ವಾಸ ತೋರಿ ಅವರ ಬೇಕು ಬೇಡಗಳನ್ನು ಪೂರೈಸಿ ನಡೆಸುವ ಜೀವನ ನಿಜವಾಗಿಯೂ ಅದೊಂದು ತಪಸ್ಸು ಎಂದರೆ ತಪ್ಪಾಗಲಾರದು. ಕಲಾವಿದನ ಪಾಲಿಗೆ ಮತ್ತು ಆತನ ಸಾಧನೆಗೆ ಆತನ ಮನೆಯವರ ಪ್ರೋತ್ಸಾಹ ಅತ್ಯಂತ ಪ್ರಾಮುಖ್ಯವಾಗಿರುತ್ತದೆ. ಹೆಚ್ಚಾಗಿ ಆತನಿಗೆ ಯಕ್ಷಗಾನದ ಚೌಕಿಯೇ ಆತನ ಎರಡನೆಯ ಮನೆ ಅಲ್ಲಿಯೇ ಆತನ ನಿದ್ದೆ, ತಿಂಡಿ, ಊಟ ಎಲ್ಲವೂ. ಮೇಳದಲ್ಲಿ ನೆಲೆಸಿರುವ ದೇವರೇ ಆತನ ಆರಾಧ್ಯ ಮೂರ್ತಿಯಾಗಿರುತ್ತದೆ.

ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದ ಕಲಾವಿದನಿಗೆ ವರುಷಕ್ಕೆ ಆರು ತಿಂಗಳು ತಿರುಗಾಟವಾದರೆ ಉಳಿದ ಮಳೆಗಾಲದಲ್ಲಿ ಆತನಿಗೆ ಅನಿವಾರ್ಯವಾಗಿ ಬೇರೆ ಕೆಲಸಗಳ ಕಡೆಗೆ ಮುಖ ಮಾಡಬೇಕಾಗುತ್ತದೆ. ಈಗೀಗ ಅತ್ಯಂತ ಹೆಚ್ಚಾಗಿ ಮಳೆಗಾಲದಲ್ಲೂ ಯಕ್ಷಗಾನ ಪ್ರದರ್ಶನವಾಗುತ್ತಿದೆ. ಹಾಗಾಗಿ ಸ್ಪಲ್ಪ ಮಟ್ಟಿಗೆ ಕಲಾವಿದನ ಬದುಕು ಸುಧಾರಿಸಿದೆ ಎನ್ನಬಹುದು. ಸಾಮಾಜಿಕ ಜಾಲತಾಣಗಳು ಇಲ್ಲದ ಹಿಂದಿನ ಕಾಲದಲ್ಲಿ ಮನೆ ಮನೆಗೂ ಯಕ್ಷಗಾನದ ಕಂಪನ್ನು ಚೆಲ್ಲಿದ ದಿವ್ಯ ಚೇತನಗಳನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಇತ್ತೀಚಿಗೆ ರಂಗಸ್ಥಳದಲ್ಲೇ ಅರುಣಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಕುಸಿದು ಬಿದ್ದು ಯಕ್ಷಲೋಕದಲ್ಲಿ ಲೀನವಾಗಿ ಹೋದ ಗೇರುಕಟ್ಟೆ ಗಂಗಯ್ಯ ಶೆಟ್ಟಿ, ತನ್ನ ಕೊನೆಯ ಉಸಿರು ಇರುವವರೆಗೆ ಯಕ್ಷ ರಂಗದಲ್ಲಿ ಭಾಗವತನಾಗಿ ಸೇವೆ ಸಲ್ಲಿಸಿದ ಕುಬಣೂರು ಶ್ರೀಧರರಾಯರು, ಮಾತಿನಲ್ಲೇ ಮಂತ್ರಾಲವನ್ನು ನಿರ್ಮಿಸಬಲ್ಲ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಮತ್ತು ಚೆನ್ನಪ್ಪ ಶೆಟ್ರು, ಬಡಗಿನ ಶ್ರೇಷ್ಠ ಭಾಗವತರಾಗಿದ್ದ ದಿವಂಗತ ಕಾಳಿಂಗ ನಾವುಡರಂತಹ ಇನ್ನೂ ಹತ್ತು ಹಲವಾರು ಕಲಾವಿದರನ್ನು ನೆನಪಿಸಿಕೊಳ್ಳಬೇಕಾಗುತ್ತದೆ.

ಕಟೀಲು ತಾಯಿಯ ಅನುಗ್ರಹ ಮತ್ತು ಕೃಪೆ ಎಲ್ಲಾ ಕಲಾವಿದರ ಮೇಲಿರಲಿ ಎಂಬ ಶುಭ ಆಶಯದೊಂದಿಗೆ. ಪ್ರಸ್ತುತ ಲೋಕಕ್ಕೆ ಒದಗಿರುವ ಆಪತ್ತು ಕೊರೊನ ವೈರಸ್ ಭೀತಿಯಿಂದ ಎಲ್ಲಾ ಯಕ್ಷಗಾನ ಪ್ರದರ್ಶನಗಳೂ ನಿಂತಿವೆ. ಅದೆಷ್ಟೋ ಕಲಾವಿದರ ಬದುಕು ಅತಂತ್ರವಾಗಿದೆ. ಬಂಧುಗಳೇ, ಕಟೀಲು ತಾಯಿ ಎಲ್ಲರ ಕಷ್ಟವನ್ನು ನೀಗಿಸಿ ಮತ್ತೊಮ್ಮೆ ಯಕ್ಷ ರಂಗದಲ್ಲಿ ಎಲ್ಲಾ ಕಲಾವಿದರು ಗೆಜ್ಜೆಕಟ್ಟಿ ಕುಣಿಯುವ ಸೌಭಾಗ್ಯವನ್ನು ಒದಗಿಸಲಿ ಎಂದು ಬೇಡುವ ಜೊತೆಗೆ ಪ್ರತಿಯೊಂದು ಕಲಾವಿದನ ಮನೆಯು ನಂದಾದೀಪದಂತೆ ಬೆಳಗಿ, ಸಾಧನೆಯ ಹಾದಿಯ ಮೂಲಕ ಯಶಸ್ಸು ಎಂಬ ಉತ್ತುಂಗದ ಶಿಖರವನ್ನು ತಲುಪಲಿ ಕಲಾವಿದನ ಬದುಕು ಎಂಬುದು ಬಂಗಾರವಾಗಲಿ ಎಂಬ ಆಶಯದೊಂದಿಗೆ ಈ ಲೇಖನ.


Get in Touch With Us info@kalpa.news Whatsapp: 9481252093

Tags: KannadaNewsWebsiteKateel Sri DurgaparameshwariLatestNewsKannadaSouth KendraSpecial ArticleTheaterYakshaganaಕಲಾವಿದಕುಬಣೂರು ಶ್ರೀಧರರಾಯರುಯಕ್ಷ ರಂಗಯಕ್ಷಗಾನರಂಗಸ್ಥಳ
Share250Tweet123Send
Previous Post

ಮಾಸ್ಕ್‌-ಸಾಮಾಜಿಕ ಅಂತರವನ್ನು ಗೇಲಿ ಮಾಡಿದ್ದ ಸಮೀರ್ ಖಾನ್ ಈಗ ಕೊರೋನಾ ಸೋಂಕು ಪೀಡಿತ

Next Post

ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ಸುನಿತಾ ಅವರು ಮುಖ್ಯಮಂತ್ರಿಗಳಲ್ಲಿ ಮಾಡಿದ ಮನವಿ ಪ್ರಶಂಸೆಗೆ ಅರ್ಹ!

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ಸುನಿತಾ ಅವರು ಮುಖ್ಯಮಂತ್ರಿಗಳಲ್ಲಿ ಮಾಡಿದ ಮನವಿ ಪ್ರಶಂಸೆಗೆ ಅರ್ಹ!

ಜೆಡಿಎಸ್ ಮಹಿಳಾ ಘಟಕದ ಕಾರ್ಯದರ್ಶಿ ಸುನಿತಾ ಅವರು ಮುಖ್ಯಮಂತ್ರಿಗಳಲ್ಲಿ ಮಾಡಿದ ಮನವಿ ಪ್ರಶಂಸೆಗೆ ಅರ್ಹ!

Leave a Reply Cancel reply

Your email address will not be published. Required fields are marked *

  • Trending
  • Latest
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

ಭದ್ರಾವತಿ | ಆರು ಪೌರ ಕಾರ್ಮಿಕರಿಗೆ ಮಧು ಲ್ಯಾಬ್ ವತಿಯಿಂದ ಸನ್ಮಾನ

May 5, 2026
Impressive concert by Smt. Surabhi Sheshadri

Impressive concert by Smt. Surabhi Sheshadri

May 5, 2026
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ | ಮಮತಾ ಬ್ಯಾನರ್ಜಿ ಹೊಸ ವರಸೆ

May 5, 2026
ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ನಿಲ್ಲಿಸುವಂತೆ ಡಿಸಿಗೆ ಮನವಿ

ಬೇಸೂರಿನಲ್ಲಿ ಪರಮಾಣು ವಿದ್ಯುತ್ ಸ್ಥಾವರ | ಸಾರ್ವಜನಿಕರಲ್ಲಿ ಆತಂಕ ಬೇಡ: ಜಿಲ್ಲಾಧಿಕಾರಿ ಸ್ಪಷ್ಟನೆ

May 5, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

ಗಮನಿಸಿ! ಈ ದಿನ ಬೆಂಗಳೂರಿನಿಂದ ಹೊರಡುವ ಈ ರೈಲುಗಳ ಸಂಚಾರದಲ್ಲಿ ಬದಲಾವಣೆ

May 5, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL