ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ವೈರಸ್ ಎದುರಿಸುವಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪ್ರಯತ್ನದ ಫಲದಿಂದಾಗಿ, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಪ್ಲಾಸ್ಮಾ ಥೆರಪಿ ಈಗ ಶಿವಮೊಗ್ಗದಲ್ಲಿ ಲಭ್ಯವಾಗಲಿದೆ.
ರಾಜ್ಯದ ಕೆಲವೇ ಪ್ರಮುಖ ನಗರಗಳಲ್ಲಿ ಲಭ್ಯವಿರುವ, ಅತ್ಯಾಧುನಿಕ ತಂತ್ರಾಜ್ಞಾನವುಳ್ಳ ರಕ್ತ ಕಣಗಳನ್ನು ಬೇರ್ಪಡಿಸುವ ವಿಶೇಷ ಯಂತ್ರ (ಸೆಲ್ ಸಪರೇಟರ್)ವನ್ನು ಶಿವಮೊಗ್ಗ ನಗರದ ರೋಟರಿ ರಕ್ತನಿಧಿ ಕೇಂದ್ರದಲ್ಲಿ ಸ್ಥಾಪಿಸಲು, ಅಗತ್ಯವಿದ್ದ 20 ಲಕ್ಷ ರೂ.ಗಳ ಹಣಕಾಸಿನ ವ್ಯವಸ್ಥೆಯನ್ನು, ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಯಮಿತದ ಸಿ.ಎಸ್.ಆರ್ ಅನುದಾನದಿಂದ ಮಂಜೂರಾತಿ ದೊರಕಿದೆ.
ಈ ಸಂಬಂಧದ 20 ಲಕ್ಷ ರೂಗಳ ಚೆಕ್ನ್ನು, ಇತ್ತೀಚೆಗೆ ರೋಟರಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸಂಜಯ್, ಪ್ರಮುಖರಾದ ಡಾ. ಶಿವರಾಮ ಕೃಷ್ಣ ಮೊದಲಾದವರಿಗೆ ಈಶ್ವರಪ್ಪ ನೀಡಿದರು.
ಯಾರಿಗೆಲ್ಲಾ ಪ್ರಯೋಜನ?
ಈ ಅತ್ಯಾಧುನಿಕ ಯಂತ್ರ ಶಿವಮೊಗ್ಗದಲ್ಲೇ ದೊರೆಯುವುದರೊಂದಿಗೆ, ರಕ್ತ ಸಂಬಂಧಿ ರೋಗಗಳಿಂದ ನರಳುತ್ತಿರುವ ಅನೇಕ ರೋಗಿಗಳಿಗೆ ಸಹಾಯವಾಗಲಿದ್ದು, ಇದರಿಂದ ರೋಗಿಗಳಿಗೆ ಆರ್ಥಿಕ ಹೊರೆ ಇಳಿಯುವುದಲ್ಲದೇ, ಚಿಕಿತ್ಸೆಗಾಗಿ ಬೇರೆ ಊರುಗಳಿಗೆ ತೆರಳುವ ಪರದಾಟವು ತಪ್ಪಲಿದೆ.
ಏನಿದು ತಂತ್ರಜ್ಞಾನ? ಹೇಗೆ ಪ್ರಯೋಜನವಾಗಲಿದೆ?
ಟ್ರುಮಾ ಅ್ಯಕ್ಸಲ್ (ಆಟೋಮೆಟೆಡ್ ಬ್ಲಡ್ ಕಲಕ್ಷನ್ ಸಿಸ್ಟಂ)ಎನ್ನುವ ಈ ಅತ್ಯಾಧುನಿಕ ಯಂತ್ರದ ಸಹಾಯದಿಂದ ರಕ್ತದ ಬೇರೆ ಬೇರೆ ಭಾಗಗಳಾದ ಕೆಂಪು ರಕ್ತ ಜೀವಕೋಶ (ರೆಡ್ ಬ್ಲಡ್ ಸೆಲ್) ಬಿಳಿಯ ರಕ್ತ ಜೀವಕೋಶ (ವೈಟ್ ಬ್ಲಡ್ ಸೆಲ್) ಮತ್ತು ಹಲಗೆ ಕಣ(ಪೇಟ್ಲೆಟ್ಸ್) ಗಳನ್ನು ಬೇರ್ಪಡಿಸಬಹುದು. ಈ ಚಿಕಿತ್ಸಾ ಪದ್ದತಿಯಿಂದ ಡೆಂಗ್ಯೂಜ್ವರ, ಗ್ಯೂಲಿಯನ್ – ಬೆರ್ರೆ ಸಿಡ್ರೋಮ್ ಹಾಗೂ ಕೆಲವು ಬಗೆಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿರುವ ಪ್ಲಾಸ್ಮಾ ಥೆರಪಿಯನ್ನು ಸಹಾ ಈ ಯಂತ್ರದ ಸಹಾಯದ ಮೂಲಕ ಕೂಡಾ ನೀಡಬಹುದಾಗಿದೆ.
ಈಗಾಗಲೇ ಸಚಿವ ಕೆ.ಎಸ್. ಈಶ್ವರಪ್ಪನವರು ಶಿವಮೊಗ್ಗ ನಗರದ ನಾಗರಿಕರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವ ಆಯುರ್ವೇದಿಯ ಔಷಧಿಗಳನ್ನು ಒಳಗೊಂಡ ಕಿಟ್ಗಳನ್ನು ಶಿವಮೊಗ್ಗ ನಗರದ ಮನೆಮನೆಗೆ ವಿತರಿಸುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ಕೊರೋನಾ ಸೋಂಕನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಯುರ್ವೇದ ಹಾಗು ಆಧುನಿಕ ವೈದ್ಯಕೀಯ ಚಿಕಿತ್ಸಾ ಪದ್ದತಿಗೆ ಕಾಯಕಲ್ಪ ನೀಡುವಲ್ಲಿ ಮಹತ್ವದ ಹೆಜ್ಜೆಯನ್ನು ಇರಿಸಿದಂತಾಗಿದೆ.
Get In Touch With Us info@kalpa.news Whatsapp: 9481252093
Discussion about this post