ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿರುವ ಶ್ರೀ ವೆಂಕಟಾಚಲಧಾಮದ 15ನೇ ವಾರ್ಷಿಕೋತ್ಸವ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.
ಉಡುಪಿ #Udupi ಭಂಡಾರಕೇರಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ, ವಿಧಾನಗಳು ನಡೆದವು. ಶ್ರೀ ವೆಂಕಟೇಶ ದೇವರಿಗೆ ಚಿನ್ನದ ಕಿರೀಟ ಸಮರ್ಪಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮೀಜಿ, ಎಲ್ಲರ ಮನೆ ಮತ್ತು ಮನದಲ್ಲಿ ವೆಂಕಟೇಶನು ನೆಲೆಗೊಳ್ಳಲಿ ಎಂದರು.
Also Read>> ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಿದ ಕುಮದ್ವತಿ ರೆಸಿಡೆನ್ಷಿಯಲ್ ಸ್ಕೂಲ್ | ಹೇಗಿತ್ತು ಆಚರಣೆ?
ಭಾಗವತ #Bhagavata ಶ್ರವಣದಿಂದ ಬದುಕು ಪಾವನವಾಗಬೇಕು. ಪ್ರತಿಯೊಂದು ಮಗುವಿಗೂ ಭಾಗವತದ ಕಥೆ ಪರಿಚಿತವಾಗಬೇಕು. ಪ್ರಹ್ಲಾದ, ನಚಿಕೇತ ಮತ್ತು ಧ್ರುವನ ಆದರ್ಶಗಳನ್ನು ಮಕ್ಕಳು ರೂಢಿಸಿಕೊಳ್ಳುವಂತಾಗಲಿ ಎಂದರು.
ಮನೆಯಲ್ಲಿ ಅಸ್ತು ದೇವತೆಗಳು ನೆಲೆಸಿರುತ್ತಾರೆ. ಹಿರಿಯರು ಯಾವ ಮಾತನ್ನು ಆಡುತ್ತಾರೋ ಅವೆಲ್ಲವೂ ದೇವರ ಕೃಪೆಯಿಂದ ಸತ್ಯವಾಗುತ್ತವೆ. ಆದ ಕಾರಣ ಒಳ್ಳೆಯ ಮಾತುಗಳನ್ನೇ ಆಡಬೇಕು. ಮಾತು ಶುದ್ಧವಾಗಿ ಇರಬೇಕು ಎಂದರೆ ನಿರಂತರವಾಗಿ ಭಾಗವತ, ರಾಮಾಯಣ, ಮಹಾಭಾರತಗಳ ಪಾರಾಯಣ ನಡೆಯಬೇಕು ಎಂದರು.
ಇದಕ್ಕಾಗಿ ತಾವು ಮನೆ ಮನೆ ಸಂದರ್ಶನ ಎಂಬ ಅಭಿಯಾನ ರೂಪಿಸಿದ್ದು, ಭಕ್ತರ ಮನೆಯಲ್ಲಿ 30 ನಿಮಿಷವಾದರೂ ಭಾಗವತ ಪ್ರವಚನ ನಡೆಸುತ್ತಿದ್ದೇವೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕುತ್ತಿದೆ. ಪ್ರತಿಯೊಂದು ಮನೆಯೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಬೇಕು ಎಂದು ಅವರು ಆಶಿಸಿದರು.
Also Read>> ತಾಳಗುಪ್ಪ-ಶಿವಮೊಗ್ಗ-ಮೈಸೂರಿನ ನಾಲ್ಕು ರೈಲುಗಳ ಕುರಿತಾಗಿ ಅಪ್ಡೇಟ್
ವಾರ್ಷಿಕೋತ್ಸವ ಅಂಗವಾಗಿ ಬೆಳಗ್ಗೆ 7ಕ್ಕೆ ಪಂಚಾಶತ್ ಕಲಶಾರಾಧನೆ, ಬೆಳಗ್ಗೆ 10ಕ್ಕೆ ವೆಂಕಟೇಶ ದೇವರ ಮೂಲ ಮೂರ್ತಿಗೆ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಯವರಿಂದ ಬ್ರಹ್ಮ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ರಾಯರ ವೃಂದಾವನಕ್ಕೆ ವಿಶೇಷ ಅಲಂಕಾರ, ವೆಂಕಟೇಶದೇವರಿಗೆ ಚಿನ್ನದ ಕಿರೀಟ ಸಹಿತ ಅಲಂಕಾರ, ಸಂಸ್ಥಾನ ಪೂಜೆ, ಮಹಾ ಮಂಗಳಾರತಿ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿಸಂಪರ್ಕಿಸಿ: Whatsapp: 9008761663, 9481252093 – info@kalpa.news



















