No Result
View All Result
SWR to run special trains for Good Friday, Easter rush
English Articles

Regulation, Diversion and Rescheduling of Trains in the Solapur–Wadi Section

by ಕಲ್ಪ ನ್ಯೂಸ್
June 1, 2026
0

Kalpa Media House  |  Hubballi  | Due to technical works being carried out in the Solapur–Wadi section, temporary regulation, diversion...

Read moreDetails
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
  • Advertise With Us
  • Grievances
  • About Us
  • Contact Us
Wednesday, June 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 22, 2026
in ಮೈಸೂರು
0
ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಲೇಖನ: ಶಿವಮೊಗ್ಗ ರಘುರಾಮ  |

ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೊರ ವಲಯದಲ್ಲಿ ಬಹುಬೇಗನೆ ಬೆಳೆದ ಶ್ರೀರಾಮಪುರದಲ್ಲಿ ದೈವ ಸನ್ನಿಧಿ ಸ್ಥಾಪನೆಯೊಂದಿಗೆ ಅಧ್ಯಾತ್ಮಿಕ ಚಟುವಟಿಕೆಗಳನ್ನೂ ಇಲ್ಲಿ ನಿರಂತರವಾಗಿ ನಡೆಸಬೇಕು ಎಂದು ದಶಕದ ಹಿಂದೆ ಹಿರಿಯರು ಚಿಂತನೆ ನಡೆಸಿದ ಫಲವೇ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ.

ಇದೀಗ 8ನೇ ವಾರ್ಷಿಕೋತ್ಸವವನ್ನು 10 ದಿನಗಳ ಸಂಭ್ರಮೋತ್ಸವವಾಗಿ ಆಚರಣೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಹುವಿಧ ಚಟುವಟಿಕೆಗಳಿಂದ ಜನಮಾನಸದ ಶ್ರದ್ಧಾ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಅರ್ಧ ಎಕರೆ ಪ್ರದೇಶದಲ್ಲಿ ಧ್ಯಾನ ಕೇಂದ್ರವು 2018ರಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರಿಂದ (ವೈಶಾಖ ಪೂರ್ಣಿಮೆ) ಉದ್ಘಾಟನೆಗೊಂಡಾಗ ತಿರುಮಲ ಮಾದರಿಯ ಶ್ರೀ ವೆಂಕಟೇಶನ ಪ್ರತಿಮೆಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಶಿಲ್ಪಿ ಯೋಗಿರಾಜ್ ಕೈಚಳಕದಲ್ಲಿ ಪಡಮೂಡಿದ ದೇವರು ಅಮೂರ್ತ ಸ್ವರೂಪನೂ ಆಗಿದ್ದು, ದರ್ಶನ ಮಾಡುವುದೇ ಒಂದು ಧನ್ಯತೆ.

ಪಂಡಿತ ಬಾದರಾಯಣಾಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಕೈಗೊಂಡ ಒಂದೊಂದು ಸಂಕಲ್ಪವೂ ಸಿದ್ಧಿಗೊಳ್ಳುತ್ತ ಬಂತು. ಪ್ರತಿ ತಿಂಗಳೂ ಭಾಗವತ ಸಪ್ತಾಹ, ನಾಡಿನ ಪ್ರಖ್ಯಾತ ಪ್ರವಚನಕಾರರ ವಾಕ್ಝರಿ, ಸಮಗ್ರ ಮಹಾಭಾರತ ಪ್ರವಚನಾದಿಗಳು ಜ್ಞಾನ, ಭಕ್ತಿಯನ್ನು ಭಕ್ತಗಣದಲ್ಲಿ ಬೇರೂರಿಸಿದವು.ರಾಜ್ಯದ ಮತ್ತು ಹೊರ ರಾಜ್ಯದ ಪ್ರಖ್ಯಾತ ಪ್ರವಚನ ಶಿಖಾಮಣಿಗಳು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಜ್ಞಾನಧಾರೆಯನ್ನು ಭಕ್ತಗಣ ಮನಕ್ಕೆ ಸಮರ್ಪಿಸಿದ್ದಾರೆ. ಆ ಮೂಲಕ ಧರ್ಮ ಜಾಗೃತಿ ಮತ್ತು ಮಾಧ್ವ ತತ್ವ ಚಿಂತನೆಗಳ ಪರಿಮಳವನ್ನು ಪಸರಿಸಿದ್ದಾರೆ. ಪ್ರತಿಯೊಂದು ಪ್ರವಚನ ಮತ್ತು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಭಕ್ತಗಣದ ತನು ಮನ ಧನ ಬೆಂಬಲಗಳು ಧಾರಾಳವಾಗಿ ಹರಿದು ಬರುತ್ತಿರುವುದು ಶ್ರೀ ವೆಂಕಟೇಶನ ಪರಮ ದಯೆ ಆಗಿದೆ.ಗೋಮಾತೆಯ ಸೇವೆ….
ಭಾರತೀಯ ಗೋತಳಿ ಅಭಿವೃದ್ಧಿ, ಗೋ ಸೇವೆ, ಗೋದಾನಕ್ಕೆ ಪ್ರೇರಣೆ ನೀಡಲು 4 ಆಕಳಿನಿಂದ ಆರಂಭವಾದ ವಿದ್ಯಾಧೀಶ ಗೋಶಾಲೆಯಲ್ಲಿ ಈಗ 50 ಹಸುಗಳಿವೆ. ಮಹದೇವಪುರ ಗ್ರಾಮದ ಕಾವೇರಿ ನದಿ ತೀರದಲ್ಲಿ ಈ ಗೋಶಾಲೆಯ ವಿಸ್ತರಣಾ ಘಟಕ ಆರಂಭಿಸಿ ಅಲ್ಲಿಯೂ ಗೋಮಾತೆಯ ಪಾಲನೆ ಸಾಂಗವಾಗಿ ನೆರವೇರುತ್ತಿದೆ.ಸತ್ಯಧ್ಯಾನ ಭವನವು ವಿವಾಹ ಇತ್ಯಾದಿ ಕಾರ್ಯಗಳಿಗೆ ಪ್ರಶಸ್ತವಾಗಿದೆ. ಇಲ್ಲಿರುವ ವೆಂಕಟೇಶನು ಕಲ್ಯಾಣಪ್ರದ. ದರ್ಶನ ಮಾತ್ರದಿಂದಲೇ ಹಲವರಿಗೆ ವಿವಾಹಾದಿಗಳು ನೆರವೇರಿದ ನೂರಾರು ಪ್ರಸಂಗಗಳಿವೆ. ವಿದ್ಯೆ, ಸಂತಾನ, ಸಂಪತ್ತುಗಳು ಒದಗಿಬಂದು ಹಲವರ ಬದುಕು ಮಂಗಳೋತ್ಸವ ವಾಗಿದೆ. ಸಂಕಲ್ಪ ಸಿದ್ಧಿಸಿದ ನಂತರ ಅನೇಕರು ಕಲ್ಯಾಣೋತ್ಸವ ಸೇವೆ ಮಾಡಿಸುವುದು ನಿರಂತರವಾಗಿರುತ್ತದೆ.

ಶ್ರೀರಾಮಪುರದಲ್ಲಿ ನೆಲೆಸಿರುವ ವೆಂಕಟೇಶನ ಸನ್ನಿಧಿಯಲ್ಲಿ ಶ್ರೀ ಅಕ್ಷೋಭ್ಯತೀರ್ಥರು, ಶ್ರೀ ಜಯತೀರ್ಥರು, ಶ್ರೀ ರಾಘವೇಂದ್ರ ತೀರ್ಥರು ಮತ್ತು ಶ್ರೀ ರಘುನಾಥ ತೀರ್ಥರ ಮೃತಿಕಾ ಬೃಂದಾವನಗಳು ಇವೆ. ಹಾಗಾಗಿ ಈ ಕ್ಷೇತ್ರವನ್ನು ಅಭಿನವ ಮಳಖೇಡ ಎಂದೂ ಕರೆಯಲಾಗುತ್ತದೆ. ಶ್ರೀ ಸತ್ಯಾತ್ಮತೀರ್ಥ ಗುರುಗಳ ಪರಮ ಅನುಗ್ರಹದಿಂದ ಈ ಎಲ್ಲಾ ಮೃತ್ತಿಗೆಗಳು ಶ್ರೀ ವೆಂಕಟೇಶನ ಅಡಿದಾವರೆಗಳಲ್ಲಿ ಇದ್ದು, ಸನ್ನಿಧಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಕ್ಷೇತ್ರಕ್ಕೆ ಬಂದ ಭಕ್ತರಿಗೆ ವೆಂಕಪ್ಪನ ಕೃಪೆಯೊಂದಿಗೆ ಗುರುಗಳ ಅನುಗ್ರಹವೂ ಧಾರೆ ಧಾರೆಯಾಗಿ ಹರಿದು ಬರುತ್ತದೆ.

ವಿವಿಧ ಉತ್ಸವ
ಪ್ರತಿನಿತ್ಯ ತಂತ್ರಸಾರೋಕ್ತ ಪೂಜೆ, ಪ್ರತಿ ಶುಕ್ರವಾರ ದೇವರಿಗೆ ಕ್ಷೀರಾಭಿಷೇಕ, ಭಕ್ತರ ಸಂಕಲ್ಪ ಮಾಡಿದಾಗ ಕಲ್ಯಾಣೋತ್ಸವ, ಯುಗಾದಿ ಉತ್ಸವ, ಭಾದ್ರಪದದಲ್ಲಿ 15 ದಿನ ಪ್ರೋಷ್ಠಪದಿ, ಕಾರ್ತಿಕದಲ್ಲಿ ಒಂದು ತಿಂಗಳು ದೀಪೋತ್ಸವ, ನವರಾತ್ರಿ ಉತ್ಸವದಲ್ಲಿ ನಿತ್ಯವೂ ಸ್ವಾಮಿಗೆ ಒಬ್ಬೊಬ್ಬ ಭಕ್ತರಿಂದ ವಸ್ತ್ರ ಸಮರ್ಪಣೆ ಸಹಿತ ಅಲಂಕಾರ, ಅನ್ನದಾನ, ವಿಜಯದಶಮಿ ದಿನ ದೇವರ ರಾಜಬೀದಿ ಉತ್ಸವ, ವೈಶಾಖದಲ್ಲಿ ವಾರ್ಷಿಕೋತ್ಸವ ಸಂಭ್ರಮವಿರುತ್ತದೆ.ಸಾಮಾಜಿಕ ಸೇವಾ ಕಾರ್ಯಗಳು…..
ನಿತ್ಯ ಬೆಳಗ್ಗೆ ಯೋಗ ತರಗತಿ, ಆಗಾಗ್ಗೆ ಆರೋಗ್ಯ ತಪಾಸಣೆ, ನೇತ್ರ ಪರೀಕ್ಷೆ, ನ್ಯೋರೋ ಮತ್ತು ಡಯಾಬಿಟಿಕ್ ತಜ್ಞರಿಂದ ತಪಾಸಣೆ, ರಕ್ತದಾನ ಶಿಬಿರ, ಮಕ್ಕಳಿಗೆ ಧಾರ್ಮಿಕ ವಸಂತ ಬೇಸಿಗೆ ಶಿಬಿರ, ನಿತ್ಯವೂ ಮಧ್ಯಾಹ್ನ ಹಿರಿಯರಿಗೆ ಉಪನಿಷತ್ತು, ತಾತ್ಪರ್ಯ ನಿರ್ಣಯ, ಸದಾಚಾರ ಸ್ಮತಿ ಪಾಠ, ಮನೆ ಮನೆ ಭಾಗವತ ಪ್ರವಚನ-ಉಚಿತ ಧರ್ಮೋಪನಯನ, ವರ್ಷಕ್ಕೆ 2 ಬಾರಿ ಶ್ರೀ ಸತ್ಯಸಂಕಕಲ್ಪ ತೀರ್ಥರು, ಶ್ರೀ ಸತ್ಯ ಸಂತುಷ್ಠ ತೀರ್ಥರ (8 ಕಿಮೀ) ವೃಂದಾವನ ದರ್ಶನಕ್ಕೆ ಪಾದಯಾತ್ರೆ, ಹೀಗೆ ನಿರಂತರವಾಗಿ ಇಲ್ಲಿ ಒಂದಿಲ್ಲೊಂದು ಚಟುವಟಿಕೆ ಸಂಭ್ರಮದಿಂದ ಕಾರ್ಯಗತಗೊಳ್ಳುತ್ತಲೇ ಬಂದ ಕಾರಣ ಕ್ಷೇತ್ರ ಪ್ರಖ್ಯಾತಿ ಗಳಿಸಿತು.10 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ
ಮೈಸೂರಿನ ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶಾಖೆ, ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವ ಏ. 23ರಿಂದ ಮೇ 2ರವರೆಗೆ ನೆರವೇರಲಿದೆ. ಇದರ ಅಂಗವಾಗಿ ವಿವಿಧ ವಿಷಯದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಹೋಮ ಮತ್ತು ವೈಭವಪೂರ್ಣ ಉತ್ಸವಗಳನ್ನು ಆಯೋಜಿಸಲಾಗಿದೆ. ಏ. 23ರಿಂದ 25 ರವರೆಗೆ ನಿತ್ಯ ಸಂಜೆ 4 ರಿಂದ 7.30 ರವರೆಗೆ ಪಂಡಿತ ಬಾದರಾಯಣಾಚಾರ್ಯರಿಂದ ಗಾಯತ್ರಿ ಚಿಂತನ ವಿಶೇಷ ಪ್ರವಚನವಿದೆ. 26ರ ಬೆಳಗ್ಗೆ 108 ಕುಂಡಗಳಲ್ಲಿ ಹೋಮ ಮತ್ತು ಸಂಜೆ ಶ್ರೀನಿವಾಸ ಕಲ್ಯಾಣ ಉತ್ಸವ ನೆರವೇರಲಿದೆ.ಹರಿನಾಮ ಸಂಕೀರ್ತನೆ- 27ರ ಬೆಳಗ್ಗೆ ಸರ್ವಮೂಲ ಮತ್ತು ವೇದಪಾರಾಯಣ, ಸಂಜೆ 6ಕ್ಕೆ ಎ.ಆರ್. ಕೌಸಲ್ಯಾ ಮತ್ತು ಮತ್ತು ಎ.ಆರ್. ಅಪ್ರಮೇಯರಿಂದ ಹರಿನಾಮ ಸಂಕೀರ್ತನೆ ಆಯೋಜನೆಗೊಂಡಿದೆ. 28ರ ಸಂಜೆ 6ಕ್ಕೆ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಅವರಿಂದ ಶ್ರೀ ಧನ್ವಂತ್ರಿ ಮಹಿಮೆ ಪ್ರವಚನ, 29ರ ಬೆಳಗ್ಗೆ ಧನ್ವಂತ್ರಿ ಹೋಮ, ಸಂಜೆ 6ಕ್ಕೆ ನರಸಿಂಹ ಮಹಿಮೆ ಕುರಿತು ವ್ಯಾಸತೀರ್ಥಾಚಾರ್ಯರಿಂದ ಪ್ರವಚನ, 30ರ ಬೆಳಗ್ಗೆ ನೃಸಿಂಹ ಹೋಮ, ಸಂಜೆ 6ಕ್ಕೆ ಕೂರ್ಮಾವತಾರ ಕುರಿತು ಆದ್ಯ ಗೋವಿಂದಾಚಾರ್ಯರಿಂದ ಪ್ರವಚನವಿದೆ.

ಮಹಾರಥೋತ್ಸವ- ಮೇ 1 ರಂದು ಪುರುಷಸೂಕ್ತ, ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಸಮರ್ಪಣೆ ಅಂಗವಾಗಿ ಬೆಳಗ್ಗೆ ಪುರುಷಸೂಕ್ತ, ಶ್ರೀಸೂಕ್ತ ಹೋಮ, ಸಂಜೆ ರಾಜಬೀದಿಯಲ್ಲಿ ವೆಂಕಟೇಶ ದೇವರ ಮಹಾರಥೋತ್ಸವ ಸಂಪನ್ನಗೊಳ್ಳಲಿದೆ.

ಮೇ 2ರ ಬೆಳಗ್ಗೆ 8ಕ್ಕೆ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗೆ ಪಾದಪೂಜೆ, ವೆಂಕಟೇಶ ದೇವರಿಗೆ ಕ್ಷೀರಾಭಿಷೇಕ, ನಂತರ ಅನುಗ್ರಹ ಸಂದೇಶವಿದೆ. ಭಕ್ತರು ಭಾಗವಹಿಸಬೇಕೆಂದು ವ್ಯವಸ್ಥಾಪಕ ಪಂಡಿತ ಹೇಮಂತಾಚಾರ್ಯ ಗುಡಿ ಕೋರಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  

http://kalpa.news/wp-content/uploads/2024/04/VID-20240426-WA0008.mp4

  

Tags: Kannada News WebsiteLatest News KannadamysoreUttaradi MathaUttaradi Muttಉತ್ತರಾದಿ ಮಠಗೋದಾನತಿರುಮಲಮಾಧ್ವ ತತ್ವ ಚಿಂತನೆಮೈಸೂರುಶಿಲ್ಪಿ ಯೋಗಿರಾಜ್ಶ್ರೀ ರಾಘವೇಂದ್ರ ತೀರ್ಥರುಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಸಾಂಸ್ಕೃತಿಕ ರಾಜಧಾನಿ
Share204Tweet128Send
Previous Post

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ

Next Post

ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ತೀರ್ಥಹಳ್ಳಿ | ವೃದ್ಧೆ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ 18 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
SWR to run special trains for Good Friday, Easter rush

ಚಿಕ್ಕಮಗಳೂರು-ಯಶವಂತಪುರ, ಬೆಂಗಳೂರು-ಹೊಸಪೇಟೆ ಸೇರಿ ಹಲವು ರೈಲುಗಳ ಬಿಗ್ ಅಪ್ಡೇಟ್

June 2, 2026
ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

ಯಶ್ ಫ್ಯಾನ್ಸ್ ಅಸೋಸಿಯೆಷನ್ ಅಧ್ಯಕ್ಷ ಸುನಿಲ್ ಆರೋಗ್ಯ ವಿಚಾರಿಸಿದ ರಾಕಿಂಗ್ ಸ್ಟಾರ್

June 2, 2026
ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

ಶಿವಮೊಗ್ಗ | ನೂತನ ಸಿಎಂ ಪದಗ್ರಹಣ ಸಮಾರಂಭ | ನೇರಪ್ರಸಾರಕ್ಕೆ ಬೃಹತ್ ಎಲ್ಇಡಿ ವ್ಯವಸ್ಥೆ

June 2, 2026
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಕಾರ್ಮಿಕರ ವಯೋನಿವೃತ್ತಿ ಸಮಾರಂಭ

June 2, 2026
ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

ಭಜನೆಯಿಂದ ಭಾವೈಕ್ಯತೆ | ಕೆಂಗೇರಿ ರಾಯರ ಮಠದಲ್ಲಿ ಭಜನಾ ಕಾರ್ಯಕ್ರಮ ಸಂಪನ್ನ

June 2, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL