ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ನವರಾತ್ರಿಯ ದಸರಾ ಹಬ್ಬದ ಹತ್ತು ದಿನಗಳ ಕಾಲ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ಇದರಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ವಿಭಾಗಗಳಲ್ಲಿ ಬೊಂಬೆ ಪ್ರದರ್ಶನ ಮಾಡಲಾಗಿದೆ.
ರಾಮಾಯಣ, ಮಹಾಭಾರತ, ಭಾಗವತ, ಕೃಷ್ಣನ ವಿವಿಧ ಲಿಲೇಗಳು, ಸಮುದ್ರ ಮಂಥನ, ತಲಕಾವೇರಿಯಲ್ಲಿ ಕಾವೇರಿಯ ಉಗಮ, ಕನಕಧರಾ ಸ್ತೋತ್ರ, ಆಚಾರ್ಯತ್ರಯರು, ಗಜೇಂದ್ರ ಮೋಕ್ಷ, ಘಟೋದ್ಘಜ, ಸಪ್ತ ಋಷಿಗಳು, ಪಂಚತಂತ್ರ ಕಥೆಗಳೊಂದಿಗೆ ಕಣ್ಮರೆಯಾಗುತ್ತಿರುವ ಭಾರತೀಯ ಆಟಗಳು, ಆಪರೇಷನ್ ಸಿಂಧೂರ, ಮಹಾ ಕುಂಭ ಮೇಳ, ಸ್ವದೇಶಿ ಜಾಗೃತಿ, ಹಳ್ಳಿಯ ಬದುಕು, ಶೃಂಗೇರಿ, ಧರ್ಮಸ್ಥಳ, ಮಂತ್ರಾಲಯ, ವಿವಾಹದ ವೈಭವ, ಮೈಸೂರು ದಸರಾ, ಅರಣ್ಯ ರಕ್ಷಣೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷ ದ ಮಾದರಿ ಬೊಂಬೆಗಳು, ಸಾಹಸ ಸಿಂಹ ಕರ್ನಾಟಕ ರತ್ನ ಡಾ. ವಿಷ್ಣು ವರ್ಧನ್ ಹಾಗೂ ಭಾರತದ ಕೀರ್ತಿಯನ್ನು ಬಾಹ್ಯಾಕಾಶಕ್ಕೆ ತಲುಪಿಸಿದ ಶುಭಾಂಶು ಶುಕ್ಲರವರನ್ನೂ ಸಹ ಬೊಂಬೆ ಪ್ರದರ್ಶನದಲ್ಲಿ ಸ್ಮರಿಸಲಾಗಿದೆ.
ಬನಶಂಕರಿ ಬೊಂಬೆ ಮನೆಯ ಕೆ.ಆರ್. ಗಣೇಶ್, ಸರಸ್ವತಿ, ಡಾ. ಪೃಥು ಪಿ ಅದ್ವೈತ್, ಪುನೀತ್ ಜಿ, ಪೂಜಾ ಪುನೀತ್ ಅವರ ಶ್ರಮದಿಂದ ಈ ಬೊಂಬೆ ಮನೆಯು ಎಂಟು ವರ್ಷಗಳಿಂದ ಯಶಸ್ವಿಯಾಗಿ ನೆಡೆದಿದೆ ಹಾಗೂ ನವರಾತ್ರಿಯ ಪ್ರತಿ ದಿನ ಸಂಜೆ 05:30 ರಿಂದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ಸಾರ್ವಜನಿಕರು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೂ ಬೆಳಿಗ್ಗೆ 10:30 ರಿಂದ ರಾತ್ರಿ 08:30 ರ ತನಕ ಬೊಂಬೆ ಮನೆಗೆ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಣೆ ಮಾಡಬಹುದು ಎಂದು ಬನಶಂಕರಿ ಬೊಂಬೆ ಮನೆಯ ಪೂಜಾ ಪುನೀತ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post