No Result
View All Result
26 ವರ್ಷದ ಯುವಕನಿಗೆ ಮರುಜೀವ ಕೊಟ್ಟ ಮೆಡಿಕವರ್ ಆಸ್ಪತ್ರೆ | ಏನಾಗಿತ್ತು ಯುವಕನಿಗೆ?
English Articles

Critical Condition Turned Around with Timely Medical Intervention

by ಕಲ್ಪ ನ್ಯೂಸ್
March 27, 2026
0

Kalpa Media House  |  Bengaluru(WhiteFiled)  | A 26-year-old man from West Bengal, who had been suffering from a serious condition...

Read moreDetails
Yogada Satsang Society brings out Kannada version on Kriya Yoga today

Yogada Satsang Society brings out Kannada version on Kriya Yoga today

March 25, 2026
Sagara Engulfed In The Ocean of Music

Sagara Engulfed In The Ocean of Music

March 23, 2026
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
  • Advertise With Us
  • Grievances
  • About Us
  • Contact Us
Friday, March 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ನೆಮ್ಮದಿ ಜೀವನಕ್ಕೆ ಭಾಗವತ ಗ್ರಂಥ ಸಹಕಾರಿ: ಅನಿರುದ್ಧಾಚಾರ್ಯ ಪಾಂಡುರಂಗಿ ಅಭಿಮತ

ಭಾಗವತ- ಅಧಿಕ ಮಾಸದ ಸರಣಿ ಉಪನ್ಯಾಸ ಮಾಲಿಕೆಗೆ ಚಾಲನೆ | ಉತ್ತರಾದಿ ಮಠದಲ್ಲಿ ನೂರಾರು ಭಕ್ತರ ಸಮಾಗಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 18, 2023
in ಮೈಸೂರು
0
ನೆಮ್ಮದಿ ಜೀವನಕ್ಕೆ ಭಾಗವತ ಗ್ರಂಥ ಸಹಕಾರಿ: ಅನಿರುದ್ಧಾಚಾರ್ಯ ಪಾಂಡುರಂಗಿ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಬುದ್ಧಿಯ ಮಿತಿಗಳನ್ನು ವಿಸ್ತರಿಸಿಕೊಂಡು ಜೀವನದಲ್ಲಿ ನೆಮ್ಮದಿಯಿಂದ ಬಾಳಲು ಶ್ರೀಮದ್ ಭಾಗವತ #Bhagavata ಗ್ರಂಥ ಸಹಕಾರಿಯಾಗಿದೆ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಹೇಳಿದರು.

ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಉತ್ತರಾದಿ ಮಠದಲ್ಲಿ #UttaradiMutt ಅಧಿಕ ಶ್ರಾವಣ ಅಂಗವಾಗಿ ಆಯೋಜಿಸಿರುವ `ಭಾಗವತ- ಒಂದು ತಿಂಗಳ ಸರಣಿ ಉಪನ್ಯಾಸ ಮಾಲಿಕೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಕೆಲಸ ಮಾಡುವ ಮುನ್ನ ಇದರಿಂದ ನನಗೇನು ಲಾಭ ಎಂದು ಪ್ರಶ್ನೆ ಮೂಡುವುದು ಲೌಕಿಕ ಜಗತ್ತಿನಲ್ಲಿ ಸಹಜ. ಇದಕ್ಕೆ ಸಾವಿರಾರು ವರ್ಷದ ಹಿಂದೆಯೇ ಭಾಗವತ #Bhagavata ಉತ್ತರ ಕೊಟ್ಟಿದೆ. ಭಾಗವತ ಎಂಬುದು ಐಚ್ಛಿಕ ಅಲ್ಲ, ಯಾರನ್ನೋ ಮೆಚ್ಚಿಸಲಿಕ್ಕೂ ಅಲ್ಲ. ಅಜ್ಞಾನಾದಿ ದೋಶಗಳು ಇದರಲ್ಲಿ ಇಲ್ಲವೇ ಇಲ್ಲ. ಸೃಷ್ಠಿಯ ವಿಚಿತ್ರ ಸತ್ಯವನ್ನು ತಿಳಿಸುತ್ತಲೇ ಇಹದ ಸಾಧನೆ, ಪರ ದಲ್ಲಿ ಮುಕ್ತಿಗೆ ಸೋಪಾನವಾದ ಜಗತ್ತಿನ ಏಕೈಕ ಮಹಾನ್ ಗ್ರಂಥವೇ ಭಾಗವತ ಎಂದು ಅವರು ವ್ಯಾಖ್ಯಾನಿಸಿದರು.

ಅಧಿಕ ಮಾಸದಲ್ಲಿ #AdikaMasa ಧರ್ಮ ಕಾರ್ಯಗಳಿಗೆ ಸಾವಿರ ಪಟ್ಟು ಪುಣ್ಯ ಲಭ್ಯವಿದೆ. ಭಾಗವತ ಶ್ರವಣದ ಬಗ್ಗೆ ಶ್ರದ್ಧೆ, ಪರಮಾತ್ಮನ ಕಥೆಗಳ ಬಗ್ಗೆ ಅನನ್ಯ ಭಕ್ತಿ, ಅಚಲ ವಿಶ್ವಾಸ ರೂಢಿಸಿಕೊಂಡವರಿಗೆ ಸರ್ವತ್ರವೂ ವಿಜಯವೇ ಲಭಿಸುತ್ತದೆ ಎಂದರು.
ದೇವರು ಕರುಣಾಮಯಿ
ದೇವರು ಅತ್ಯಂತ ಕರುಣಾಮಯಿ. ನಾವು ಸ್ಮರಣೆ ಮಾಡದಿದ್ದರೂ, ಆರಾಧಿಸದಿದ್ದರೂ ನಮ್ಮನ್ನು ಜೋಪಾನವಾಗಿ ರಕ್ಷಣೆ ಮಾಡುತ್ತಾನೆ. ನಮಗೆ ಉತ್ತಮವಾದ ಅಂಗಾಂಗಗಳನನ್ನು ನೀಡಿದ್ದಾನೆ. ಸುಂದರವಾದ ವಿಶ್ವವನ್ನು ನೋಡುವ ಪುಣ್ಯ ಕೊಟ್ಟಿದ್ದಾನೆ. ಹಾಗಾಗಿ ಆತ ದೋಶಗಳೇ ಇಲ್ಲದ ಸರ್ವೋತ್ತಮ. ಇಂಥ ಪರಮಾತ್ಮನ ಲೀಲೆಗಳನ್ನು ಕೃತಿಯಾಗಿ ರಚಿಸಿದ ಭಗವಾನ್ ವೇದವ್ಯಾಸರೂ ನೈಜ, ಸತ್ಯ ಪ್ರಸಂಗಗಳನ್ನು ದರ್ಶನ ಮಾಡಿದವರೇ ಆಗಿದ್ದಾರೆ. ಹಾಗಿರುವಾಗ ಅಧಿಕ ಮಾಸದಲ್ಲಿ ಒಂದು ತಿಂಗಳು ನಿತ್ಯವೂ ಮುಂಜಾನೆ ಭಾಗವತ ಶ್ರವಣ ಮಾಡುವ ಯೋಗ, ಜ್ಞಾನಿಗಳ ಮಾತುಗಳನ್ನು ಕೇಳುವ ಭಾಗ್ಯ ನಮ್ಮದಾಗಿರುವುದು ಸುಕೃತ ಎಂದರು.

ಪ್ರಾತಸ್ಮರಣೀಯರಾದ ಶ್ರೀ ವಿಜಯಧ್ವಜ ತೀರ್ಥರು, ಯಾದವಾರ್ಯರು ಭಾಗವತದ ಮಹತ್ವ ಸಾರಿದ್ದಾರೆ. ಆಚಾರ್ಯ ಮಧ್ವರು ತಾತ್ಪರ್ಯ ನಿರ್ಣಯ ಗ್ರಂಥದಲ್ಲಿ ನಾವು ಭಾಗವತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಸಮಗ್ರವಾಗಿ ತಿಳಿಸಿದ್ದಾರೆ. ಇಷ್ಟು ಸರಳ ಮಾರ್ಗಗಳು ನಮ್ಮೆದುರು ಇರುವಾಗ ಅಧರ್ಮ, ಅನಾಚಾರ ಹೆಚ್ಚಾಗಿದೆ. ಪ್ರಪಂಚ ಕೆಟ್ಟುಹೋಗಿದೆ ಎಂದು ಚಿಂತೆ ಮಾಡುತ್ತಾ ಕೂರುವುದು ಸಲ್ಲ. ಭಾಗವತ ಇವೆಲ್ಲವಕ್ಕೂ ಅನೇಕ ಪರಿಹಾರ ಸೂತ್ರಗಳನ್ನು ನೀಡಿದೆ. ಅನಂತ ಜನ್ಮಗಳ ಪುಣ್ಯದಿಂದ ನಮಗೆ ಶ್ರೇಷ್ಠ ಮಾನವ ಜನ್ಮ ದೊರಕಿದೆ. ಗುರುಗಳ ಸಾಮೀಪ್ಯ ಲಭ್ಯವಾಗಿದೆ. ಹೀಗಿರುವಾಗ ಮಹಾನ್ ಗ್ರಂಥಗಳನ್ನು ಅವಲೋಕಿಸಿ ಆನಂದವನ್ನು ಕಂಡುಕೊಳ್ಳೋಣ ಎಂದು ಅನಿರುದ್ಧಾಚಾರ್ಯ ಹೇಳಿದರು.
ನಾವು ದೇವರನ್ನು ಕಾಣಲು ಹಂಬಲ ಪಡುವುದಕ್ಕಿಂತಾ `ದೇವರು ನಮ್ಮನ್ನು ನೋಡುವ ಹಾಗೆ’ ಭಕ್ತಿ ಮಾಡಬೇಕು. ಕಲ್ಲಿನೊಳಗೆ ಪರಮಾತ್ಮನ ಸಾನ್ನಿಧ್ಯ ಕಾಣುವ ಚಿಂತನೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು ಎಂದ ಅವರು ಪದ್ಮಪುರಾಣವನ್ನು #PadmaPurana ಉಲ್ಲೇಖಿಸಿದರು.

ಪಲ್ಲಕ್ಕಿ ಉತ್ಸವ
ಉಪನ್ಯಾಸಕ್ಕೂ ಮುನ್ನ ಶ್ರೀಮದ್ ಭಾಗವತ, ತಾತ್ಪರ್ಯ ನಿರ್ಣಯ, ಸರ್ವಮೂಲ ಮೊದಲಾದ ಶ್ರೀ ಆಚಾರ್ಯ ಮಧ್ವರ ಗ್ರಂಥಗಳ ಪಲ್ಲಕ್ಕಿ ಉತ್ಸವ ನೆರವೇರಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ಅಧಿಕ ಶ್ರಾವಣ ಮಾಸದ #ShranaMasa ಪ್ರತಿದಿನವೂ ಬೆಳಗ್ಗೆ 7.30ರಿಂದ 8.30ರ ವರೆಗೆ ಶ್ರೀಮಠದಲ್ಲಿ ವಿದ್ವಾಂಸರಿಂದ ಭಾಗವತ ಪ್ರವಚನ ಆಯೋಜನೆಗೊಂಡಿದ್ದು, ಭಕ್ತರು ಭಾಗವಹಿಸಲು ಕೋರಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2023/05/VID-20230516-WA0005.mp4
Tags: Bhagavata PuranaKannada News WebsiteLatest News KannadamysoreUttaradi Muttಉಪನ್ಯಾಸ ಮಾಲಿಕೆತಾತ್ಪರ್ಯ ನಿರ್ಣಯಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿಭಾಗವತ ಗ್ರಂಥಮೈಸೂರುಶ್ರೀ ಆಚಾರ್ಯ ಮಧ್ವರುಶ್ರೀ ಉತ್ತರಾದಿ ಮಠಶ್ರೀ ಮಧ್ವಾಚಾರ್ಯರುಶ್ರೀಮದ್ ಭಾಗವತ
Share196Tweet123Send
Previous Post

Under Shah’s leadership, 10 lakh kg of drugs have been destroyed since last year

Next Post

ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ: ಕುವೆಂಪು ವಿವಿಯಿಂದ ನೇತ್ರದಾನ ಪ್ರತಿಜ್ಞಾ ಶಿಬಿರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ: ಕುವೆಂಪು ವಿವಿಯಿಂದ ನೇತ್ರದಾನ ಪ್ರತಿಜ್ಞಾ ಶಿಬಿರ

ಜಯಚಾಮರಾಜೇಂದ್ರ ಒಡೆಯರ್ ಜನ್ಮದಿನ: ಕುವೆಂಪು ವಿವಿಯಿಂದ ನೇತ್ರದಾನ ಪ್ರತಿಜ್ಞಾ ಶಿಬಿರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಉದ್ಯೋಗಖಾತ್ರಿ ಯೋಜನೆ ರದ್ದು | ಗ್ರಾಪಂ ಮಟ್ಟದಿಂದ ಕಾಂಗ್ರೆಸ್ ಹೋರಾಟ | ಸಚಿವ ಮಧುಬಂಗಾರಪ್ಪ

SSLC ಪರೀಕ್ಷೆ ಅಂತಿಮ ಅಂಕ ಕುರಿತು ಶಿಕ್ಷಣ ಸಚಿವರ ಬಿಗ್ ಸ್ಟೇಟ್ಮೆಂಟ್

March 27, 2026
ಶೋಚನೀಯ ಸ್ಥಿತಿಯಲ್ಲಿ ಪಶ್ಚಿಮಘಟ್ಟದ ಪ್ರವಾಸಿತಾಣಗಳು: ಡಿ.ಎಸ್. ಅರುಣ್ ಆಕ್ರೋಶ

ಮರಳು ಮಾಫಿಯಾ ದಬ್ಬಾಳಿಕೆ, ಜನರಿಗೆ ಸಂಕಷ್ಟ: ತಕ್ಷಣ ಕ್ರಮಕ್ಕೆ ಡಿ.ಎಸ್. ಅರುಣ್ ಒತ್ತಾಯ

March 27, 2026
ಮುಸ್ಲಿಂರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ? ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನೆ

ಮುಸ್ಲಿಂರ ಪರವಾಗಿ ಮಾತನಾಡಿದರೆ ಕೋಮುವಾದವಲ್ಲವೇ? ಮಾಜಿ ಡಿಸಿಎಂ ಈಶ್ವರಪ್ಪ ಪ್ರಶ್ನೆ

March 27, 2026
2025-26 ನೇಯ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ | ಯಾರಿಗೆಲ್ಲಾ ಒಲಿಯಿತು ಗೌರವ?

2025-26 ನೇಯ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ | ಯಾರಿಗೆಲ್ಲಾ ಒಲಿಯಿತು ಗೌರವ?

March 27, 2026
ಮಾರ್ಚ್ 28 – ಎಪ್ರಿಲ್ 3 | ಬೆಂಗಳೂರಿನ ಕೆಂಗೇರಿ ಮಠದಲ್ಲಿ ಭಾಗವತ ಪ್ರವಚನ

ಮಾರ್ಚ್ 28 – ಎಪ್ರಿಲ್ 3 | ಬೆಂಗಳೂರಿನ ಕೆಂಗೇರಿ ಮಠದಲ್ಲಿ ಭಾಗವತ ಪ್ರವಚನ

March 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL