No Result
View All Result
ಬ್ರೇಕ್‌ಥ್ರೂ | ದೇಶ ಭದ್ರತೆಯ ಜೋಜಿಲಾ ಸುರಂಗ ಕಾಮಗಾರಿಯಲ್ಲಿ ಐತಿಹಾಸಿಕ ಸಾಧನೆ
English Articles

MEIL Scripts Himalayan History with Final Breakthrough of Zojila Tunnel

by ಕಲ್ಪ ನ್ಯೂಸ್
June 9, 2026
0

Kalpa Media House  |  Sringar/ Zojila  | Megha Engineering & Infrastructure Limited (MEIL) has achieved the final breakthrough of the...

Read moreDetails
ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು

18-Month-Old Girl Dies After Falling Into Water Tank in Bagalkot

June 9, 2026
2025–26ನೇ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆ ಗಳಿಸಿದ ಒಟ್ಟು ಆದಾಯವೆಷ್ಟು ಗೊತ್ತಾ?

ILCAD 2026 Observed in Mysuru Division; SWR Promotes Level Crossing Safety

June 9, 2026
ಬೆಂಗಳೂರು–ತುಮಕೂರು ರೈಲು ಮಾರ್ಗದ ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೆ | ₹162.57 ಕೋಟಿ ಅನುಮೋದನೆ

Indian Railways Sanctions ₹162.57 Crore Upgrade for Bengaluru–Tumakuru Rail Section

June 9, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026: ಜಾಗತಿಕ ವೇದಿಕೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಭಾರತ

India Creates History at World Yogasana Championship 2026

June 9, 2026
  • Advertise With Us
  • Grievances
  • About Us
  • Contact Us
Wednesday, June 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಸನಾತನ ಯೋಗ ವಿದ್ಯೆ, ಧ್ಯಾನ ಕ್ರಿಯೆಗೆ ವಿಶ್ವ ಮಾನ್ಯತೆಯಿದೆ: ಬಾದರಾಯಣಾಚಾರ್ಯ ಅಭಿಮತ

ಭಾಗವತ ವಿಶ್ವಮಾನ್ಯ ಗ್ರಂಥ | ನಮ್ಮ ಹಿರಿಯರು ತಂತ್ರಜ್ಞಾನವೇ ಇಲ್ಲದೇ ದೇಹದ ಅನಾಟಮಿ ಅರಿತಿದ್ದರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 28, 2022
in ಮೈಸೂರು
0
ಸನಾತನ ಯೋಗ ವಿದ್ಯೆ, ಧ್ಯಾನ ಕ್ರಿಯೆಗೆ ವಿಶ್ವ ಮಾನ್ಯತೆಯಿದೆ: ಬಾದರಾಯಣಾಚಾರ್ಯ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಸಾರ ಸಂಗ್ರಹ: ರಘುರಾಮ  |

ಶ್ರೀಮದ್ ಭಾಗವತ ಕೇವಲ ಪಂಡಿತರ ಅಧ್ಯಯನ ಗ್ರಂಥವಲ್ಲ, ಅದು ವಿಶ್ವದ ಪ್ರತಿಯೊಬ್ಬರ ಬದುಕನ್ನು ಸಮಗ್ರವಾಗಿ ಸಾರ್ಥಕ್ಯಗೊಳಿಸುವ ಮಹೋನ್ನತ ಕೃತಿಯಾಗಿದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.

ಅವರು ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದ `ಪೂರ್ಣಪ್ರಜ್ಞ’ದಲ್ಲಿ ಭಾಗವತ ಪ್ರವಚನ ಸಪ್ತಾಹದಲ್ಲಿ ಬುಧವಾರ ಮಾತನಾಡಿದರು.

ಭಾಗವತ ಗ್ರಂಥ ದೇಹ, ಮಹತ್ತು, ಮನಸ್ಸುಗಳ ಆರೋಗ್ಯದ ಬಗ್ಗೆ ಸಮಗ್ರವಾಗಿ ಹೇಳಿದೆ. ಜೀವಿತವಾಗಿ ಇರುವಷ್ಟು ದಿನ ಸ್ವಧರ್ಮ ಆಚರಿಸಿ. ಪರ ಧರ್ಮದ ಕಡೆಗೆ ಯಾವತ್ತೂ ನೋಡದಿರಿ. ಮಿತವಾದ, ಮೇಧ್ಯವಾದ ಆಹಾರಗಳನ್ನೇ ಸೇವಿಸಿ. ಸದಾ ಸುಖಾಸನದಲ್ಲೇ ಕೂಡಿ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಅನುಷ್ಠಾನ ಮಾಡಿಕೊಳ್ಳಿ ಎಂಬುದನ್ನು ತಿಳಿಸಿದೆ ಎಂದರು.
ನಮ್ಮ ಇಂದ್ರಿಯಗಳೆಲ್ಲವೂ ಹೊರಮುಖಿಯಾಗಿವೆ. ಅವೆಲ್ಲವೂ ಸದಾ ಹೊರಗಿನ ಪ್ರಪಂಚವನ್ನೇ ನೋಡುತ್ತಾ ಬಹಿರ್ಮುಖಿ ಆಗಿರುತ್ತವೆ. ಹೇಗೆ ಒಂದು ಆಮೆ ತನ್ನ ಎಲ್ಲ ಇಂದ್ರಿಯಗಳನ್ನು ಒಳಗೆ ಎಳೆದುಕೊಂಡು ಸುರಕ್ಷಿತವಾಗಿರುವುದೋ ಹಾಗೆ ನಾವು ನಮ್ಮ ಇಂದ್ರಿಯಗಳನ್ನು ನಿಗ್ರಹ ಮಾಡಿಕೊಂಡು ಅಂತರ್ಮುಖಿಗಳಾಗಬೇಕು. ಜ್ಞಾನಿಯಾದವನು ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಾವು ಸದಾ ಅಪರೋಕ್ಷ ಜ್ಞಾನದ ಕಡೆ ಮುಖ ಮಾಡಬೇಕು ಎಂಬುದನ್ನು ಭಾಗವತ ಹೇಳಿದೆ ಎಂದರು.

ಭಾರತೀಯರು ಸಾವಿರಾರು ವರ್ಷಗಳಿಂದ ಯೋಗ ಸಾಧಕರಾಗಿಯೇ ಇದ್ದಾರೆ. ಯಾವುದೇ ಸ್ಕಾನಿಂಗ್ ಇಲ್ಲದೇ, ಎಂಆರ್‌ಐ ನಂತರ ಆಧುನಿಕ ತಂತ್ರಜ್ಞಾನದ ಪರೀಕ್ಷಾ ಯಂತ್ರಗಳಿಲ್ಲದೇ ನಮ್ಮವರು ಇಡೀ ದೇಹದ ಅನಾಟಮಿಯನ್ನು ಅರಿತಿದ್ದರು. ಹಾಗಾಗಿಯೇ ಸನಾತನ ಭಾರತೀಯ ಮೂಲದ ಯೋಗ ವಿದ್ಯೆ ಮತ್ತು ಧ್ಯಾನ ಕ್ರಿಯೆಗಳಿಗೆ ವಿಶ್ವ ಮಾನ್ಯತೆ ಇದೆ ಇದೆ ಎಂದು ಪಂಡಿತ ಬಾದರಾಯಣಾಚಾರ್ಯರು ಹೇಳಿದರು.

ಯೋಗ ಮತ್ತು ಧ್ಯಾನ ಎಂದು ನೆನಪಿಸಿಕೊಂಡರೆ ನಮ್ಮ ಯತಿವರೇಣ್ಯರು ಕಣ್ಣೆದುರು ಬರುತ್ತಾರೆ. ಪ್ರತಿ ನಿತ್ಯದ ಧ್ಯಾನದಿಂದ ಜೀವನವು ಹೇಗೆ ವಿಶೇಷ ಸಾಧನೆಗಳಿಗೆ ಸ್ಪಂದಿಸುತ್ತದೆ ಎಂಬುದನ್ನು ಶ್ರೀ ಸತ್ಯನಾಥ ತೀರ್ಥರು, ಶ್ರೀ ವಿಷ್ಣುತೀರ್ಥರು ಸಾಧಿಸಿ ತೋರಿಸಿದ್ದಾರೆ. ಗೀತೆ ಹೇಳಿದ ಯೋಗ ಮಾರ್ಗದಲ್ಲಿ ಇವರು ಮಹತ್ವದ ಹೆಜ್ಜೆಗಳನ್ನು ಇರಿಸಿ ನಮಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಬಾದರಾಯಣಾಚಾರ್ಯರು ಸಾಂದರ್ಭಿಕವಾಗಿ ಉಲ್ಲೇಖಿಸಿದರು.

ದೇವಹೂತಿಯ ಕತೆಯನ್ನು ವಿವರಿಸಿದ ಆಚಾರ್ಯರು, `ಮೌನ’ ದ ಅಭ್ಯಾಸ ಮಾಡಿಕೊಳ್ಳುವುದು ಆತ್ಮಸೈರ್ಯ ಹೆಚ್ಚಿಸುತ್ತದೆ ಎಂದರು. ಉಪವಾಸ, ವನವಾಸ, ಕಷ್ಟ ಸಹಿಷ್ಣುತೆಗಳನ್ನು ನಾವು ಭಾಗವತದಿಂದ ಕಲಿಯಬೇಕು ಎಂದರು.
ಖಿನ್ನತೆಗೆ ಒಳಗಾಗದಿರಿ
ಇಂದಿನ ವಿದ್ಯಾರ್ಥಿಗಳು, ಯುವಕರು ಸಣ್ಣಪುಟ್ಟ ಸಂಗತಿಗಳನ್ನು ಎದುರಿಸಲಾಗದೇ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದನ್ನೂ ಮೀರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಖೇದನೀಯ ಸಂಗತಿ. ಬದುಕನ್ನು ಎದುರಿಸುವ ಸಾಮರ್ಥ್ಯ ಮಾತೆಯಿಂದ, ಮನೆಯಿಂದ ಮತ್ತು ಪುರಾಣ ಗ್ರಂಥಗಳಿಂದ ಕಲಿಯಬೇಕು. ಯಾರಿಗೆ ಈ ಸಂಸ್ಕಾರ, ಸಂಸ್ಕೃತಿ ಇಲ್ಲವೋ ಅವರು ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹಾ ಸಂದರ್ಭದಲ್ಲಿ ಭಾಗವತ ನಮ್ಮ ಬದುಕನ್ನು ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಮಹದುಪಕಾರ ಮಾಡುವ ಮಹೋನ್ನತ ಗ್ರಂಥವಾಗಿದೆ ಎಂದರು.

ಹಿರಿಯರ ತಪ್ಪುಗಳನ್ನೂ ತಿದ್ದಿ
ದಕ್ಷ ಪ್ರಜಾಪತಿ, ಉಮಾದೇವಿ ಮತ್ತು ರುದ್ರದೇವರ ಕಥಾ ಪ್ರಸಂಗ ವಿವರಿಸಿದ ಆಚಾರ್ಯರು (ದಕ್ಷಯಜ್ಞದ ಸಂದರ್ಭ) ಹಿರಿಯರು ತಪ್ಪು ಮಾಡಿದರೂ ಅದನ್ನು ಸಹನೆ ಮಾಡುವ ಗುಣ ರೂಢಿಸಿಕೊಳ್ಳಬೇಕು. ತಿತಿಕ್ಷಾ ಗುಣ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಒಂದು ಪಕ್ಷ ಹಿರಿಯರು ತಪ್ಪು ಮಾಡಿದರೂ ಅದನ್ನು ಸೂಕ್ತವಾಗಿ ತಿದ್ದಿ ಹೇಳಬೇಕು ಎಂದು ಭಾಗವತ ಸಂದೇಶ ನೀಡಿದೆ ಎಂದರು.
ಧ್ರುವನಂತಹ ಮಕ್ಕಳು ಜನಿಸಲಿ
ಉತ್ಥಾನಪಾದ ರಾಜ, ಆತನ ಪತ್ನಿಯರಾದ ಸುರುಚಿ ಮತ್ತು ಸುನೀತಿಯರ ಕಥಾನಕವನ್ನು ಸೋದಾಹರಣವಾಗಿ ವಿವರಿಸಿದ ಬಾದರಾಯಣಾಚಾರ್ಯರು, ನಾವು ಬದುಕಿನಲ್ಲಿ ನೀತಿ (ಸುನೀತಿ)ಗೆ ಬೆಲೆ ಕೊಟ್ಟರೆ `ಧ್ರುವ’ ನಂತಹಾ ಸಾಧಕ ಮಕ್ಕಳನ್ನು ಪಡೆಯಬಹುದು ಎಂದರು. ಅವರು ದೇವರನ್ನು ಕಂಡು, ದೇಶವನ್ನು ಆಳಿ, ವಿಶ್ವಖ್ಯಾತರಾಗಿ ಮುಂದೆ ಮೋಕ್ಷಕ್ಕೂ ಅರ್ಹರಾಗುತ್ತಾರೆ. ನಾವು ರುಚಿ (ಸುರುಚಿ)ಗೆ ಮಾರುಹೋದರೆ ಕೇವಲ `ಉತ್ತಮ’ ಮಕ್ಕಳು ಜನಿಸುತ್ತಾರೆ. ಆಯ್ಕೆಯನ್ನು ಭಾಗವತ ನಮಗೆ ಬಿಟ್ಟಿದೆ ಎಂದರು.

ನಂತರ ಪೃಥು ಮಹಾರಾಜನ ಕಥೆಯನ್ನು ಸೋದಾಹರಣವಾಗಿ ವಿವರಿಸಿದರು. ಕುಟುಂಬದ ಪ್ರತಿಯೊಬ್ಬ ಹಿರಿಯರು, ಯಜಮಾನರು ಪೃಥುವಿನಂತೆ ಇರಬೇಕು. ಪ್ರತಿ ಗೃಹವೂ ಧರ್ಮಾಚರಣೆಗಳ ಆಲಯವಾಗಬೇಕು. ಆಗ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಭಾಗವತ ಹೇಳಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bhagavata PravachanaBhagavata PuranaDhyanaKannada News WebsiteLatest News KannadameditationmysorePandit BadarayanacharyaYogaಧ್ಯಾನಪಂಡಿತ ಬಾದರಾಯಣಾಚಾರ್ಯಪೂರ್ಣಪ್ರಜ್ಞ'ಭಾಗವತ ಪ್ರವಚನಮೈಸೂರುಯೋಗಶ್ರೀಮದ್ ಭಾಗವತ
Share203Tweet123Send
Previous Post

ಸಾರಿಗೆ ಬಸ್-ಕಾರು ಮುಖಾಮುಖಿ ಢಿಕ್ಕಿ: ಇಬ್ಬರು ಸಾವು, ನಾಲ್ವರಿಗೆ ಗಾಯ

Next Post

ಸದೃಢ ಆರೋಗ್ಯವಂತ ಯುವ ಸಮುದಾಯ ನಿರ್ಮಾಣ ನಮ್ಮೆಲ್ಲರ ಗುರಿ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ಏನೆಲ್ಲಾ ವಿಶೇಷ ಕಾರ್ಯಕ್ರಮ ನಡೆಯಲಿದೆ ಗೊತ್ತಾ?

ಸದೃಢ ಆರೋಗ್ಯವಂತ ಯುವ ಸಮುದಾಯ ನಿರ್ಮಾಣ ನಮ್ಮೆಲ್ಲರ ಗುರಿ: ಸಂಸದ ರಾಘವೇಂದ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

ಬಾಯಿ ತೆರೆಯಲಾಗದೆ 14 ತಿಂಗಳು ಹೋರಾಟ | ಶಸ್ತ್ರಚಿಕಿತ್ಸೆಯಿಂದ ಶಿವಮೊಗ್ಗ ಮಹಿಳೆಗೆ ಹೊಸ ಜೀವನ

June 10, 2026
ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

ಶಿಕ್ಷಣದಿಂದ ಸಮಾಜ ನಿರ್ಮಾಣ ಸಾಧ್ಯ: ಡಾ. ವಾಸುದೇವ ಕೆ. ಆತ್ರೆ

June 10, 2026
ಶಿವಮೊಗ್ಗ: ಟಿಪ್ಪುನಗರದಲ್ಲಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆ – ಇಬ್ಬರು ಗಾಯ

Shivamogga Knife Attack: Two Brothers Injured in Tippu Nagar Assault

June 10, 2026
ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ | ಜೂ.12 ರಂದು ಬೆಂಗಳೂರಿನ ಖಿಂಚಾ ಸಭಾಂಗಣದಲ್ಲಿ ರಂಗಪ್ರವೇಶ

ಉದಯೋನ್ಮುಖ ಪ್ರತಿಭೆ ರಜಿತಾ ದಿನೇಶ್ | ಜೂ.12 ರಂದು ಬೆಂಗಳೂರಿನ ಖಿಂಚಾ ಸಭಾಂಗಣದಲ್ಲಿ ರಂಗಪ್ರವೇಶ

June 10, 2026
ಭಾರತವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದ ಹೆಮ್ಮೆಯ ನಾಯಕ ಪ್ರಧಾನಿ ಮೋದಿ: ಸಂಸದ ರಾಘವೇಂದ್ರ

ಭಾರತವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದ ಹೆಮ್ಮೆಯ ನಾಯಕ ಪ್ರಧಾನಿ ಮೋದಿ: ಸಂಸದ ರಾಘವೇಂದ್ರ

June 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL