ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಯೋಗ ಒಕ್ಕೂಟ, ವತಿಯಿಂದ ನಗರದ ಮೈಸೂರು ವಿಶ್ವ ವಿದ್ಯಾಲಯದ ಯೋಗ ಭವನದಲ್ಲಿ ಭಾನುವಾರ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಹಮ್ಮಿಕೊಂಡಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಭಾವನಾತ್ಮಕ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ
ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.

ಯೋಗಗುರು ಡಾ.ಗಣೇಶ್ ಕುಮಾರ್ ಮಾತನಾಡಿ, ಮೈಸೂರು ಅರಸರು ಯೋಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆ ಪರಂಪರೆಯನ್ನು ನಾವು ಮತ್ತಷ್ಟು ಹೆಚ್ಚಿಸಬೇಕಿದೆ. ಒಲಿಂಪಿಕ್ಸ್ನಲ್ಲಿ ಯೋಗವನ್ನು ಒಂದು ಕ್ರೀಡೆಯಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಶ್ರೀಹರಿ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.

ಗಣೇಶ್ ಕುಮಾರ್, ಶಶಿರೇಖಾಗೆ ಗುರುವಂದನೆ
ಯೋಗಗುರು ಡಾ.ಗಣೇಶ್ ಕುಮಾರ್ ಹಾಗೂ ಡಾ.ಎಚ್.ಎ.ಶಶಿರೇಖಾ ಅವರಿಗೆ ಶಿಷ್ಯರಿಂದ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರ ಕುಮಾರ್, ಯೋಗ ಫೆಡರೇಷನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಷನ್ ಖಜಾಂಚಿ ಎಂ.ಎನ್.ಮೋಹನ್, ರಾಜ್ಯ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರುಗಳಾದ ಗೀತಾ ಕುಮಾರ್, ಪ್ರೇಮ್ ಕುಮಾರ್ ಇತರರು ಇದ್ದರು.

8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ನಗರದ ಎಸ್ಜಿಎಸ್ ಯೋಗ ಕೇಂದ್ರದ ರುಚಿತ್ (ಪ್ರಥಮ), ಅದೇ ಕೇಂದ್ರದ ನಿತಿನ್ (ದ್ವಿತೀಯ), ನಗರದ ಚಿರಂತ್ (ತೃತೀಯ), ನಗರದ ಸಹನಾಯೋಗ ಕೇಂದ್ರದ ಪುಣ್ಯವರ್ಧನ್ ಎಸ್. ರಾಜ್, ನಗರದ ಶ್ರೀಕಾರ್ ಬಿ.ದೀಪಕ್, ರಾಘವ್ ಸಮಾಧಾನಕರ ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಶಿವಮೊಗ್ಗದ ಶ್ರೀ ಗುರುಕುಲ ಯೋಗ ಕೇಂದ್ರದ ಹರ್ಷಾ (ಪ್ರ), ಅದೇ ಕೇಂದ್ರದ ಸನ್ನಿಧಿ (ದ್ವಿ), ಸಮೃದ್ಧಿ (ತೃ), ಮಾರುತಿ ಯೋಗ ಸಾಧನ ಕೇಂದ್ರ ಶರದಿ ಎಸ್.ರಾವ್, ಗಾನವಿ, ಶಿವಯೋಗ ತಂಡದ ಅರುಷಿ ಸಮಾಧಾನಕರ ಬಹುಮಾನ ತಮ್ಮದಾಗಿಸಿಕೊಂಡರು.
15 ವರ್ಷ 20 ವರ್ಷ ಯುವಕರ ವಿಭಾಗದಲ್ಲಿ ನಗರದ ಎಂ.ವಿ.ಯೋಗದ ಕವೀಶ್ (ಪ್ರ), ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿನಯ್ ಕುಮಾರ್ (ದ್ವಿ), ಬೆಂಗಳೂರಿನ ಕೆಎಂವೈ ಕೇಂದ್ರದ ಅಭಿಷೇಕ್ ಹೆಗ್ಗಡೆ (ತೃ), ಚಿಕ್ಕಬಳ್ಳಾಪುರದ ನಾಗಶ್ರೀ ಶೈಲ್, ಧಾರವಾಡದ ಶಿವಾನಂದ್, ನಗರದ ದುರ್ಗಾಲಯದ ನಂದೀಶ್ ಸಮಾಧಾನಕರ ಬಹುಮಾನ, ಯುವತಿಯರ ವಿಭಾಗದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ (ಪ್ರ), ಯೋಗಾ ಕೇಂದ್ರದ ಮಧುಶಾಲಿನಿ (ದ್ವಿ), ಶಿವಮೊಗ್ಗದ ಶ್ರೀ ಗುರುಕುಲದ ಕಾವ್ಯಾ (ತೃ),ನಗರದ ಎಂ.ವಿ.ಯೋಗಾ ಶಾಲೆಯ ಅಂಕಿತಾ, ದೊಡ್ಡಬಳ್ಳಾಪುರದ ನಿಸರ್ಗಾ ಯೋಗಾ ಕೇಂದ್ರದ ಜಾಹ್ನವಿ, ಬೆಂಗಳೂರಿನ ಸೌಂದರ್ಯ ಯೋಗಾ ಕೇಂದ್ರದ ಮೋನಿಷಾ, ನಂಜನಗೂಡಿನ ದೀಕ್ಷಾ ಸಮಾಧಾನಕರ ಬಹುಮಾನ ಪಡೆದರು.

31 ರಿಂದ 40 ಪುರುಷರ ವಿಭಾಗದಲ್ಲಿ ನಗರದ ವಿನೋದ್ರಾಜ್ (ಪ್ರ), ಸನೀಶ್ (ದ್ವಿ), ಫರಾನ್ (ತೃ), ಶಿವಮೊಗ್ಗದ ಆದಶ್ ಸಮಾಧಾನಕರ ಬಹುಮಾನ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ವೀಣಾ (ಪ್ರ), ನಗರದ ಸ್ಮಿತಾ (ದ್ವಿ), ಸ್ಪಂದನಾ (ತೃ), ಚೈತ್ರಾ, ರಶ್ಮಿ, ಪ್ರಿಯಾ ಸಮಾಧಾನಕರ ಬಹುಮಾನ ಗಳಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	


 Loading ...
 Loading ... 
							



 
                
Discussion about this post