ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ನಾಯಕ ನಟ ದಿ.ಡಾ.ವಿಷ್ಣುವರ್ಧನ್ ಅವರ ಪತ್ನಿ ಹಿರಿಯ ನಟಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್ #BharatiVishnuvardhan ಅವರ ಕುರಿತಾಗಿನ `ಬಾಳೆ ಬಂಗಾರ` #BaleBangara ಸಾಕ್ಷ್ಯ ಚಿತ್ರಕ್ಕಾಗಿ ನಟ ಅನಿರುದ್ ಜತ್ಕರ್ #AnirudhJatkar ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.
ಈ ಕುರಿತಂತೆ ಸ್ವತಃ ಮಾತನಾಡಿರುವ ನಟ ಅನಿರುದ್, ಇದೊಂದು ಅತೀವ ಸಂತೋಷದ ಕ್ಷಣಗಳಾಗಿದ್ದು, ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪದ್ಮಶ್ರೀ #Padmasri ಪ್ರಶಸ್ತಿ ವಿಜೇತ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಕುರಿತ ಬಾಳೆ ಬಂಗಾರ ನನ್ನ ಕನಸಿನ ಸಾಕ್ಷ್ಯಚಿತ್ರವಾಗಿದೆ. ನಮ್ಮ ಹಿರಿಯರ ಸಾಧನೆಯ ಕುರಿತಾಗಿ ತಿಳಿಸುವ ಪ್ರಯತ್ನಗಳಿಗೆ ಇದು ನಾಂದಿಯಾಗಬೇಕು ಎಂಬುದು ನನ್ನ ಆಸೆ ಎಂದರು.

ಇಂತಹ ಪ್ರಯತ್ನಗಳು ನಿರಂತರವಾಗಿ ಆಗಬೇಕು. ಹಿರಿಯರ ಜೀವನ ಹಾಗೂ ಸಾಧನೆಯ ಪ್ರಯಾಣದ ಕುರಿತಾಗಿ ದಾಖಲೆಯ ಸ್ವರೂಪದಲ್ಲಿ ಇರಬೇಕು ಎಂದರು.

ಪ್ರತಿಭಾನ್ವಿತ ನಟ ಅನಿರುದ್ ಜತ್ಕರ್ ಅವರು, ತಮ್ಮ ಅಪರೂಪದ ಪ್ರಯತ್ನಗಳಿಂದಾಗಿ ಈಗಾಗಲೇ ಸಾಲು ಸಾಲು ದಾಖಲೆಗಳನ್ನು #Record ನಿರ್ಮಿಸಿ, ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಉತ್ತಮ ಸಾಕ್ಷ್ಯಚಿತ್ರವೊಂದರ ಮೂಲಕ ಕರ್ನಾಟಕವನ್ನು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿರುವ ನಟ ಅನಿರುದ್ ಜತ್ಕರ್ ಅವರಿಗೆ ಕಲ್ಪ ಮೀಡಿಯಾ ಹೌಸ್(ರಿ.) ಮನದುಂಬಿ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post