ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಗಂಗಾರತಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶಿಷ್ಟಾಚಾರ ಬದಿಗೊತ್ತಿ ಸಾರ್ವಜನಿಕರಿಂದ ಪ್ರೀತಿಯ ಉಡುಗೊರೆ ಸ್ವೀಕರಿಸಿದರು.
ಕಾಶಿ ವಿಶ್ವನಾಥ ಧಾಮ್ ಕಾರಿಡಾರನ್ನು ಉದ್ಘಾಟಿಸುವ ಮುನ್ನ ಪ್ರಧಾನಿಯವರಿಗೆ ಸ್ಥಳೀಯರು ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯರು ಪ್ರಧಾನಿಯವರನ್ನು ಆತ್ಮೀಯವಾಗಿ ಮಾತನಾಡಿಸಲು ಮುಂದಾದರು. ಆದರೆ, ಭದ್ರತಾ ಪಡೆಗಳ ಯೋಧರು ಶಿಷ್ಟಾಚಾರದ ಅನ್ವಯ ಇದನ್ನು ಅವಕಾಶ ನೀಡಲಿಲ್ಲ. ಆದರೆ, ಪ್ರಧಾನಿಯವರು ಸ್ವತಃ ತಮ್ಮ ಭದ್ರತಾ ಸಿಬ್ಬಂದಿಗಳಿಗೆ ಪಕ್ಕಕ್ಕೆ ತೆರಳುವಂತೆ ಸೂಚಿಸಿದರು.
#WATCH | Locals gave a rousing welcome to PM Narendra Modi, showering flower petals and raising slogans of ‘Modi, Modi’ & ‘Har Har Mahadev’ in his parliamentary constituency Varanasi
The PM is on a two-day visit to the city to inaugurate Kashi Vishwanath Corridor project pic.twitter.com/155VrYjEpT
— ANI UP (@ANINewsUP) December 13, 2021
ಸ್ಥಳೀಯರನ್ನು ಆತ್ಮೀಯತೆಯಿಂದ ಹತ್ತಿರಕ್ಕೆ ಕರೆದು ಕಾರಿನ ಬಾಗಿಲು ತೆರೆದ ಪ್ರಧಾನಿಯವರು, ಅವರುಗಳು ನೀಡಿದ ಉಡುಗೊರೆಯನ್ನು ಸ್ವೀಕರಿಸಿ, ಹಸ್ತಲಾಘವ ನೀಡಿದರು. ಅಲ್ಲದೇ, ವ್ಯಕ್ತಿಯೊಬ್ಬರು ನೀಡಿದ ಟರ್ಬನ್ ಹಾಗೂ ಸ್ಕಾರ್ಫ್ ಅನ್ನು ಸಹ ಸ್ವೀಕರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post