ಶಿವಮೊಗ್ಗ: ದಸರಾ ಅಂಗವಾಗಿ ನಗರದ ಪ್ರಮುಖ ದೇವಾಲಯಗಳಲ್ಲಿ ಶರನ್ನವರಾತ್ರಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಈ ಬಾರಿಯ ದಸರಾಗೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಪ್ರಸನ್ನ ಗಣಪತಿ ದೇವಾಲಯ, ರವೀಂದ್ರ ನಗರ
ಅಕ್ಟೋಬರ್ 10ರಿಂದ ಅ.25ರವರೆಗೂ ಶರನ್ನವರಾತ್ರಿ ವಿಶೇಷ ಕಾರ್ಯಕ್ರಮ
ಅ.10, ಬೆಳಿಗ್ಗೆ 6:30ಕ್ಕೆ ಮಂಟಪದಲ್ಲಿ ಪ್ರತಿಷ್ಠಾಪನೆ, ಪ್ರತಿನಿತ್ಯ, ಚಂಡಿಕಾಯಾಗ, ಚಂಡಿಕಾಪಾರಾಯಣ, ಸಹಸ್ರನಾಮಾರ್ಚನೆ, ಪೂಜೆ ಮತ್ತು ಪೂರ್ಣಾಹುತಿ
ಪ್ರತಿದಿನ ಸಂಜೆ 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ
ಅ.10: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದ ಸುಪ್ರಸಿದ್ದ ಗಾಯಕ ಸುದರ್ಶನ್ ಜೀ ಅವರಿಂದ ಉದ್ಘಾಟನೆ, ಸುದರ್ಶನ್ ಮತ್ತು ತಂಡದವರಿಂದ ದಿವ್ಯಸತ್ಸಂಗ
ಅ.11: ಗರ್ತಿಕೆರೆ ರಾಘಣ್ಣ ಮತ್ತು ತಂಡದಿಂದ ಸುಗಮ ಸಂಗೀತ, ಭಕ್ತಿಗೀತೆ ಅ.12: ಕೆ.ಎಸ್. ಶ್ರೀವತ್ಸ ತಂಡದಿಂದ ಕೊಳಲುವಾದನ
ಅ.13: ಎಚ್.ಎಸ್. ನಾಗರಾಜ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀ ಯ ಸಂಗೀತ
ಅ.14: ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಕುಮಾರಸ್ವಾಮಿ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ
ಅ.15: ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಾದಕುಸುಮಾಂಜಲಿ
ಅ.16: ಐನಬೈಲ್ ಪರಮೇಶ್ವರ ಹೆಗಡೆ ನೇತೃತ್ವದ ತಂಡದಿಂದ ಯಕ್ಷಗಾನ-ತಾಳಮದ್ದಳೆ
ಅ.17: ನಗರದ ಬಿ.ಕೆ. ಜಯಲಕ್ಷ್ಮೀ ಮತ್ತು ವೃಂದದವರಿಂದ ವೀಣಾ ವೈಭವ
ಅ.18: ಡಾ. ಕೆ.ಎಸ್. ಪವಿತ್ರಾ ಮತ್ತು ತಂಡದವರಿಂದ ಕವಿ ಕಂಡ ದೇವಿ ನೃತ್ಯ ಕಾರ್ಯಕ್ರಮ
ಅ.19: ರಾಮನ್ ಸಹೋದರಿಯರಿಂದ ವೀಣಾ ಮತ್ತು ಗಿಟಾರ್ ವಾದನ ಅ.20: ಯಕ್ಷಾನುಗ್ರಹ ಸಂವರ್ಧನಾ ಸಭಾದವರಿಂದ ಯಕ್ಷಗಾನ
ಅ.21: ಹೊಸಳ್ಳಿ ವೆಂಕಟ್ರಾಮ್ ತಂಡದವರಿಂದ ವಯೋಲಿನ್ ವಾದನ ಅ.22: ಕೋಣಂದೂರಿನ ಕೆ.ಜಿ. ಶಶಿಕುಮಾರ್ ತಂಡದವರಿಂದ ಭಕ್ತಭಾವಾಂಜಲಿ
ಅ.23: ಸಹಚೇತನಾ ನಾಟ್ಯಾಲಯದವರಿಂದ ಭರತನಾಟ್ಯ
ಅ.24: ಮಧ್ಯಾಹ್ನ ಶತಚಂಡಿಕಾಯಾಗ,ಸಂಜೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು 6:30ಕ್ಕೆ ಹರಿದಾಸ ಗಣಪತಿ ಹೆಗಡೆ ಇವರಿಂದ ಹರಿಕೀರ್ತನೆ
ಅ.25: ಸಂಜೆ 4:30ಕ್ಕೆ ವಿವಿಧ ಜಾನಪದ ಕುಣಿತಗಳೊಂದಿಗೆ, ಕೇರಳದ ಪಂಚವಾದ್ಯ ದೊಂದಿಗೆ ಮೂಕಾಂಬಿಕಾ ದೇವಿಯ ಮೆರವಣಿಗೆ ಮತ್ತು ರಾಜಬೀದಿ ಉತ್ಸವ(ರವೀಂದ್ರನಗರ ದೇವಸ್ಥಾನದಿಂದ ಹೊರಡುವ ಮೆರವಣಿಗೆಯು ಸವಳಂಗ ರಸ್ತೆ, ಕುವೆಂಪು ರಸ್ತೆ, ದುರ್ಗಿಗುಡಿ, ನೆಹರೂ ರಸ್ತೆ, ಗಾಂಧೀಬಜಾರ್ ಮೂಲಕ ಭೀಮೇಶ್ವರ ದೇವಸ್ಥಾನ ತಲುಪಿ ತುಂಗಾನದಿಯಲ್ಲಿ ವಿಸರ್ಜನೆಗೊಳ್ಳಲಿದೆ)
ಎಲ್ಲ ಕಾರ್ಯಕ್ರಮಗಳಿಗೆ ಅ.ಪಾ. ರಾಮಭಟ್ ಅವರ ನೇತೃತ್ವ
ನಾಗಸುಬ್ರಹ್ಮಣ್ಯ ದೇವಾಲಯ, ಸ್ವಾಮಿ ವಿವೇಕಾನಂದ ಬಡಾವಣೆ
ಅ.10ರಿಂದ 18ರವರೆಗೂ ಪ್ರತಿದಿನ ಸಂಜೆ 6:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅಂದು ಸಂಜೆ 5:30ಕ್ಕೆ ಮಾಜಿ ಎಂಎಲ್ಸಿ ಎಂ.ಬಿ. ಭಾನುಪ್ರಕಾಶ್ ಅವರಿಂದ ಕಾರ್ಯಕ್ರಮ ಉದ್ಘಾಟನೆ
ಅ.10: ಅಗಜೆ ಸಂಗೀತ ವಿದ್ಯಾಲಯದ ಅನುಶ್ರೀ ಅರ್ಪಿತ್ ತಂಡದವರಿಂದ ಗಾನಸುಧೆ
ಅ.11: ಅಭಿರಾಮ್ ಭಾಗವತ್ ಅವರಿಂದ ಕೊಳಲುವಾದನ
ಅ.12: ಮಯೂರಿ ನೃತ್ಯಕಲಾಕೇಂದ್ರದ ಶ್ವೇತಾಪ್ರಕಾಶ್ ತಂಡದಿಂದ ಭರತನಾಟ್ಯ
ಅ.13: ಗಾಯಕ ಚಂದ್ರಶೇಖರ್ ಅವರಿಂದ ಭಕ್ತಿ-ಭಾವ-ಸಂಗೀತ
ಅ.14: ರೇಣುಕಪ್ಪ ನಿರ್ದೇಶನ ಹಾಸ್ಯನಾಟಕ ಸೀ-ಕಿಸ್ನಾ-ಶಂಧಾನ
ಅ.15: ಸಹಚೇತನ ತಂಡದವರಿಂದ ಭರತನಾಟ್ಯ
ಅ.16 ಹಾಗೂ 17ರಂದು ಸಂಸ್ಕೃತಿ ಮಹಿಳಾ ವೇದಿಕೆಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಅ.18: ಕೋಣಂದೂರಿನ ಶಶಿಕುಮಾರ್ ಕಾರಂತ್ ತಂಡದವರಿಂದ ಸುಗಮ ಸಂಗೀತ
ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಖ್ಯ ಅರ್ಚಕ ಸಂದೇಶ್ ಉಪಾಧ್ಯಾಯ ಅವರ ನೇತೃತ್ವ
ಶನೈಶ್ಚರ ಮತ್ತು ವರಸಿದ್ದಿ ವಿನಾಯಕ ದೇವಸ್ಥಾನ, 60 ಅಡಿ ರಸ್ತೆ, ವಿನೋಬನಗರ
ಅ.10 ರಿಂದ 25ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
ಈ ಬಾರಿ ವಿಶೇಷವಾಗಿ ಕೂಷ್ಮಾಂಡ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ
ಅ.10, ಬೆಳಿಗ್ಗೆ 7 ಗಂಟೆಗೆ ಪ್ರಾರ್ಥನಾ ಪೂಜೆಯೊಂದಿಗೆ ಉತ್ಸವ ಆರಂಭ, ದೇವಿಯ ಪ್ರತಿಷ್ಠಾಪನೆ, ಚಂಡಿಕಾಯಾಗ, ಪೂರ್ಣಾಹುತಿ, ಪ್ರಸಾದ ವಿನಿಯೋಗ.
ಪ್ರತಿದಿನ ಸಂಜೆ 6ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ಅ.10:ಗೋ-ಗ್ರೀನ್ ಸಂಸ್ಥೆಯ ಕಾರ್ಯದರ್ಶಿ ನಿರಂಜನಿ ರವೀಂದ್ರ ಅವರಿಂದ ಕಾರ್ಯಕ್ರಮ ಉದ್ಘಾಟನೆ, ಭಾರತಿ ಕಲಾ ಪ್ರತಿಷ್ಠಾನದವರಿಂದ ಯಕ್ಷಗಾನ
ಅ.11: ಮತ್ತೂರಿನ ಅಚ್ಚುತ ಅವಧಾನಿ ಅವರಿಂದ ಗಮಕ ವಾಚನ
ಅ.12: ಕಲಬುರ್ಗಿಯ ಮಣಿಕಂಠ ಕುಲಕರ್ಣಿ ಅವರಿಂದ ಕೊಳಲುವಾದನ
ಅ.13: ಗಾಯಕ ಮಹೇಂದ್ರ ಗೋರೆ ಮತ್ತು ತಂಡದಿಂದ ಸುಗಮ ಸಂಗೀತ
ಅ.14: ದಾವಣಗೆರೆಯ ಶಶಿಧರ್ ಅವರಿಂದ ಜಾನಪದ ಭಜನೆ
ಅ.15: ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಶಾಖೆಯ ಶಿಷ್ಯರಿಂದ ಸತ್ಸಂಗ
ಅ.16: ಡಾ.ಕೆ.ಎಸ್. ಪವಿತ್ರಾ ತಂಡದವರಿಂದ ಹೇ ಜಗನ್ಮಾತೃಕೇ ಭರತನಾಟ್ಯ
ಅ.15: ಶಬರಿ ಮತ್ತು ತಂಡದವರಿಂದ ಸ್ಯಾಕ್ಸೋಫೋನ್ ವಾದನ
ಅ.18: ತುಮಕೂರಿನ ಮೋಹನ್ ಕುಮಾರ್ ಅವರಿಂದ ಹರಿಕಥೆ
ಅ.19: ರೇವತಿ ರಾಜಕುಮಾರ್ ತಂಡದವರಿಂದ ಸುಗಮ ಸಂಗೀತ
ಅ.20: ವಿಜಯಲಕ್ಷ್ಮೀ ತಂಡದವರಿಂದ ವೀಣಾವಾದನ
ಅ.21: ಯಕ್ಷಗಾನ
ಅ.22: ಮಕ್ಕಳ ತಂಡದಿಂದ ಯಕ್ಷಗಾನ
ಅ.23: ವಿಶೇಷ ಯಕ್ಷಗಾನ
ಅ.24: ಕಥಾಶ್ರವಣ
ಅ.24: ಸಾಮೂಹಿಕ ಸತ್ಯನಾರಾಯಣ ಪೂಜೆ (ಸಂಜೆ 6ಗಂಟೆಗೆ)
ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ದೇವಾಲಯದ ಮುಖ್ಯ ಅರ್ಚಕ ವಿನಾಯಕ ಬಾಯರಿ ಅವರ ನೇತೃತ್ವ
ಕಾಳಿಕಾಪರಮೇಶ್ವರಿ ದೇವಸ್ಥಾನ, ಗಾಂಧಿ ಬಜಾರ್
ಅ.10ರಿಂದ ಅ.19ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಪ್ರತಿ ದಿನ ಸಂಜೆ 7ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ
ಅ.10: ವಿಶೇಷ ಪೂಜೆ ಹಾಗೂ ರಾಜರಾಜೇಶ್ವರಿ ಅಲಂಕಾರ
ಅ.11: ಬೆಳ್ಳಿ ಅಲಂಕಾರ
ಅ.12: ಹಂಸವಾಹಿನಿ ಅಲಂಕಾರ
ಅ.13: ಗಜಲಕ್ಷ್ಮೀ ಅಲಂಕಾರ
ಅ.14: ವೀಳ್ಯದೆಲೆ ಅಲಂಕಾರ
ಅ.15: ಸರಸ್ವತಿ ಅಲಂಕಾರ
ಅ.16: ಅಶ್ವವಾಹಿನಿ ಅಲಂಕಾರ
ಅ.17: ದುರ್ಗಾದೇವಿ ಅಲಂಕಾರ
ಅ.18: ಚಾಮುಂಡೇಶ್ವರಿ ಅಲಂಕಾರ
ಅ.19: ಬನ್ನಿಮುಡಿಯುವ ಕಾರ್ಯಕ್ರಮ
ಅ.19:ರಾಜಬೀದಿ ಉತ್ಸವ
Discussion about this post