No Result
View All Result
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು
English Articles

Young Woman Dies of Cardiac Arrest; Parents Give New Life Through Organ Donation

by ಕಲ್ಪ ನ್ಯೂಸ್
June 3, 2026
0

Kalpa Media House  |  Bhadravathi | In a remarkable act of humanity amid grief, the parents of a young woman...

Read moreDetails
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
ಸಿಂಗಾಪುರ ವಿರುದ್ಧ 25-0 ಅಂತರದ ಜಯದೊಂದಿಗೆ ಭಾರತದ U18 ಮಹಿಳಾ ತಂಡ ಸೆಮಿಫೈನಲ್‌ಗೆ ಲಗ್ಗೆ

India U18 Women Storm into Semifinals with 25–0 Win Over Singapore

June 3, 2026
SWR to run special trains for Good Friday, Easter rush

Regulation, Diversion and Rescheduling of Trains in the Solapur–Wadi Section

June 1, 2026
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ

Hennur Sparsh Hospital Completes One Year | A Reflection of Multispecialty Care

May 25, 2026
  • Advertise With Us
  • Grievances
  • About Us
  • Contact Us
Wednesday, June 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ದೇವ ಕಾರ್ಯ ಫಲಪ್ರದವಾಗಲು ಪಿತೃ ಕಾರ್ಯ ಮಾಡಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 23, 2018
in Army
0
Share on FacebookShare on TwitterShare on WhatsApp

ಮಹಾಲಯ ಎಂದರೇನು?

ಮಹಾ ಆಲಯ. ದೊಡ್ಡ ಮನೆ ಎಂದಾಗುತ್ತದೆ. ಆದರೆ ಇದರ ಅರ್ಥ ದೊಡ್ಡ ಕೂಡು ಕುಟುಂಬ ಎಂದು ಸೂಚಿಸುತ್ತದೆ.

ಇದನ್ನು ಸಕೃನ್ ಮಹಾಲಯ ಶ್ರಾದ್ಧ ಎಂದೂ ಕರೆದಿದ್ದಾರೆ. ರವಿಯ ಕನ್ಯಾರಾಶಿ ಸಂಚಾರ ಕಾಲದ ಕೃಷ್ಣ ಪಕ್ಷವು ಪಿತೃಗಳಿಗೆ ಸ್ವರ್ಗ ಲೋಕದಲ್ಲಿ ಸಿಗುವ ಆನಂದ ಕಾಲ. ಈ ಸಮಯದಲ್ಲಿ ಆಯಾಯ ಪಿತೃ ವಂಶಸ್ತರು ಇಡುವ ಪಿಂಡ, ತಿಲೋದಕಾದಿಗಳು ಪಿತೃಗಳಿಗೆ ಚೈತನ್ಯ ನೀಡುತ್ತದೆ. ಆಗ ಆ ಪಿತೃಗಳು ಸಾಕಷ್ಟು ಸ್ವರ್ಗ ಸುಖ ಅನುಭವಿಸಿ ಮತ್ತೆ ಇಳೆಗಿಳಿದು ಅದೇ ಕುಟುಂಬದಲ್ಲಿ ತಾನು ಪೂರ್ವ ಜನ್ಮದಲ್ಲಿ ಮಾಡಿದ ಪರಿಪೂರ್ಣವಾಗದ ಕೆಲಸಗಳನ್ನು ಪೂರ್ಣಗೊಳಿಸಿ ತೃಪ್ತರಾಗಿ ಮತ್ತೆಂದೂ ಬಾರದಂತಹ ಪುನರ್ಜನ್ಮದ ಸಂಕೋಲೆಯಿಂದ ಮುಕ್ತರಾಗಿ ವಿಷ್ಣುಪದವನ್ನು ಸೇರುತ್ತಾರೆ.

ಇನ್ನೊಂದೆಡೆ ಪಿತೃಗಳಿಗೆ ದೇವತೆಗಳಿಂದಲೂ ಬಲ ಜಾಸ್ತಿ. ಅವರು ತೃಪ್ತರಾದರೆ ನಮ್ಮ ಜೀವನದ ತೃಪ್ತಿಗೂ ಕಾರಣವಾಗುತ್ತಾರೆ. ತೃಪ್ತ ಜೀವನದಲ್ಲಿ ಮತ್ತೆ ಅದೇ ಸ್ವರ್ಗಸ್ಥ ಪಿತೃಗಳು ಜನಿಸಿ ಮೋಕ್ಷ ಹೊಂದಬಹುದು. ನೀವು ಯಾವುದೇ ಪಿತೃ ಕಾರ್ಯದಲ್ಲಿ ಕೊನೆಗೆ
॥ಸ್ವರ್ಗಂ ಗಚ್ಛತು ಪಿತರಃ ॥ ಎಂದೇ ಎಳ್ಳನ್ನು ಹೆಬ್ಬೆರಳಿನಿಂದ ಹಾರಿಸುತ್ತಾರೆ.
॥ಮೋಕ್ಷಂ ಗಚ್ಛತು ಪಿತರಃ ॥ ಎಂದು ಹೇಳುವುದಿಲ್ಲ. ಮತ್ತೆ ನಮ್ಮ ಹಿರಿಯರು ನಮ್ಮ ವಂಶದಲ್ಲಿ ಹುಟ್ಟಿಬರಲಿ ಎಂದರ್ಥ.

ಮಹಾಲಯದ ಒಂದು ಚಿಂತನೆಯಲ್ಲಿ:

ನಮ್ಮ ಋಷಿಮುನಿಗಳು ದಿವ್ಯದೃಷ್ಟಿಯಲ್ಲಿ ಇಡೀ ಬ್ರಹ್ಮಾಂಡವನ್ನೇ ತಿಳಿದವರು. ಹಾಗಾಗಿ ಶ್ರಾದ್ಧ ಕ್ರಿಯೆಗೆ ಬಹಳಷ್ಟು ಮಹತ್ವ ನೀಡಿದ್ದಾರೆ. ಮನುಷ್ಯನು ಪರಾವಲಂಬಿ. ತನ್ನ ಜೀವನಕ್ಕೆ ಅನೇಕ ಮನುಷ್ಯರ ಸಹಾಯ, ಪ್ರಾಣಿ ಪಕ್ಷಿಗಳ ಸಹಾಯ, ಇಡೀ ಪೃಥ್ವಿಯ ಚರಾಚರಗಳ ಸಹಾಯ ಪಡೆದು ಋಣಿಯಾಗಿರುತ್ತಾನೆ.

ಒಬ್ಬ ರೈತನು ಅವನ ಜೀವನೋಪಾಯಕ್ಕಾಗಿ ಬೆಳೆ ಬೆಳೆಸಿದರೂ ಅದರಿಂದ ನಮ್ಮ ಹೊಟ್ಟೆ ತುಂಬುತ್ತೋ ಇಲ್ಲವೋ? ಈಗಿನ advanced ಯುಗದಲ್ಲಿ ಉದಾಃ ಮನೆಗೆ ವಿದ್ಯುತ್ ಬೇಕು. ಅದರ maintenance ಕೆಲಸ line manಗಳು ಮಾಡುತ್ತಾರೆ. ಅವರ ಜೀವನೋಪಾಯ, ಲಾಭ ಆದರೂ ಅದು ನಮಗೆ ಪ್ರಯೋಜನ ಇದೆಯೋ ಇಲ್ಲವೋ? ಇಂತಹ ಕರ್ಮಚಾರಿಗಳು ಅಕಾಲ ಮೃತ್ಯುವಿಗೆ ಈಡಾದಾಗ ಅದು ನಮಗೂ ದೋಷ ಪ್ರದವೇ ಆಗುತ್ತದೆ. ಗಡಿ ರಕ್ಷಣಾ ಪಡೆಗಳು ಮಡಿದರೂ ಅದು ಕೂಡಾ ನಮಗೆ ದೋಷಪ್ರದವೇ ಆಗುತ್ತದೆ. ಯಾರೋ ಮಾಂಸಾಹಾರಿಗಳು ಪ್ರಾಣಿಗಳನ್ನು ಹತ್ಯೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಆ ಪ್ರಾಣಿಗೆ ದುರಂತ ಮರಣವಾಗುತ್ತದೆ. ಅದು ಕೂಡಾ ಮಾನವರಿಗೆ ದೋಷವೇ ಆಗುತ್ತದೆ. ಆದರೆ ಪರಾವಲಂಬಿ ಮನುಷ್ಯ ಬದುಕಿ ಕರ್ಮ ಮಾಡಬೇಕಾದರೆ ಇಂತಹ ದೋಷಗಳನ್ನು ಮಾಡುವುದು ಅನಿವಾರ್ಯ. ಹಾಗಾಗಿ ಇಡೀ ಜಗತ್ತಿನ ಸಂಕೋಲೆಯೊಳಗೆ ನಾವು ಪರಸ್ಪರ ಬಂಧಿತರಾಗಿದ್ದೇವೆ. ಇದರ ಪ್ರಾಯಶ್ಚಿತ್ತ ಹೇಗೆ ಎಂದು ಋಷಿಗಳು ನಮಗೆ ಮಾರ್ಗದರ್ಶನ ಮಾಡಿದ್ದಾರೆ. ಇಂತಹದ್ದರಲ್ಲಿ ಸರ್ವ ಪಿತೃ ಮಹಾಲಯವೂ ಪ್ರಧಾನ ಪ್ರಾಯಶ್ಚಿತ್ತ.

ಇದರಲ್ಲಿ ಅನೇಕ ಪಿಂಡಗಳು, ಬಲಿಹರಣಾದಿಗಳನ್ನು ಹಾಕುವಾಗ ಈ ಋಣದ ಉಚ್ಛಾರ ಬರುತ್ತದೆ. ಶಸ್ತ್ರಹತೇ, ಕ್ರೂರ ಮೃಗ ಹತೇ, ವಿದ್ಯುದ್ದಾಘಾತೇ ಮೃತಃ(ಹಿಂದಿನ ಕಾಲದಲ್ಲಿ ಇದು ಸಿಡಿಲು ಬಡಿದು. ಈಗ ವಿದ್ಯುತ್ ಶಾಕ್ ನಿಂದ ಮೃತ) ಇತ್ಯಾದಿ ಗತಿಸಿದವರಿಗೂ ಪಿಂಡ ಹಾಕಲಾಗುತ್ತದೆ. ಗತಿಸಿದ ದೂರದ ಬಂಧುಬಾಂಧವರಿಗೆ, ಹತ್ತಿರ ಸಂಬಂಧಿಗಳಿಗೆಲ್ಲ ಪಿಂಡ ತಿಲೋದಕಗಳಿವೆ.

ಪ್ರಧಾನವಾಗಿ ಪಿತುಃ ಪಿತಾಮಃ ಪ್ರಪಿತಾಮಃ; ಮಾತು ಮಾತಾಮಹಿ, ಪ್ರಪಿತಾಮಹಿ ಎಂದು ಆರು ಪಿಂಡಗಳು. ಇನ್ನೊಂದು ಭಾಗದಲ್ಲಿ ಉಭಯ ಕುಲ ಪಿತೃ ಅಂದರೆ ಮಾತೃಭಾಗ. ಮಾತಸ್ಯ ಪಿತುಪಿತಾಮಹಪ್ರಪಿತಾಮಹ, ಮಾತಸ್ಯ ಮಾತುಮಾತಾಮಹಿಪ್ರಪಿತಾಮಹಿ ಎಂದು ಆರು ಪಿಂಡ. ಇವೆಲ್ಲ ಪ್ರಧಾನ ಪಿಂಡಗಳು. ಅಂದರೆ ಇವರೆಲ್ಲ ನಮ್ಮ ಶರೀರಕ್ಕೆ ಕಾರಕರು DNA. ನಂತರ ಜೇಷ್ಠಾದಿ ಕನಿಷ್ಠ ಒಂದು ಪಿಂಡ. ಇದು ಈ ಪಿತೃವರ್ಗದಲ್ಲಿ ಎಲ್ಲೋ ಬಿಟ್ಟು ಹೋದಂತಹ ಹಿರಿಯ ಕಿರಿಯರಿಗೆ. ಇನ್ನು ಇದರ ಸುತ್ತ ತಂದೆಯ ಸಪತ್ನೀಕ ಸಹೋದರ ಸಹೋದರಿಯರು; ತಾಯಿಯ ಸಪತ್ನೀಕ ಸಹೋದರ ಸಹೋದರಿಯರು, ಹೆಣ್ಣು ಕೊಟ್ಟ ಅತ್ತೆ ಮಾವನವರ ಪರಿವಾರ. ಇದೆಲ್ಲ ಅಲ್ಲದೆ ಮೇಲೆ ಹೇಳಿದ ನಾವು ಯಾರಿಗೆಲ್ಲ ಋಣಿಗಳಾಗಿದ್ದೇವೋ ಅವರೆಲ್ಲರಿಗೆ ಬಲಿಹರಣದ ಮೂಲಕ ತಿಲತರ್ಪಣಾದಿಗಳನ್ನು ನೀಡಬೇಕು.(ಗತಿಸಿದವರಿಗೆ ಮಾತ್ರ ಪಿಂಡ ತಿಲೋದಕ) ಎಲ್ಲ ಬಿಟ್ಟರೆ ನಮ್ಮ ಮನೆಯ ನಾಯಿಯ ಉದ್ದಿಶ್ಯವಾಗಿ ಶಾನಕ್ಕೂ (ಹೊರಗಡೆ ಅಂದರೆ ಈ ಶ್ರಾದ್ಧ ಮಂಡಲದಿಂದ ಹೊರ ಆವರಣ) ಒಂದು ತುತ್ತು ಅನ್ನ ಇಡಬೇಕು.

ನಂತರ ಇವರೆಲ್ಲರಿಗೂ ಶೋಡಶೋಪಚಾರ ಪೂಜೆ ನೆರವೇರಿಸಿ, ಉಳಿದ ಪಿತೃ ಶೇಷವನ್ನು ಪಿತೃಗಣಗಳಿಗೆ ಇಡಬೇಕು. ಇದನ್ನು ವಾಯಸ ಬಲಿ ಎಂದರು. ಮನೆಯ ದಕ್ಷಿಣ ಭಾಗದಲ್ಲಿ ಇದನ್ನು ಇಡುತ್ತಾರೆ. ಇಲ್ಲಿಗೆ ಗತಿಸಿದ ಎಲ್ಲರಿಗೂ ನಾವು ಶ್ರದ್ಧಾಂಜಲಿ ಪೂರ್ವಕ ಸೇವೆ ಮಾಡಿದಂತಾಗುತ್ತದೆ.

ಯಾರು ಈ ಕಾರ್ಯ ಮಾಡಬೇಕು?

ತಂದೆತಾಯಿ ಇದ್ದವರಿಗೆ ಅರ್ಹತೆ ಇಲ್ಲ. ಪಿಂಡ ತಿಲತರ್ಪಣ ಅರ್ಹತೆ ಇರುವವರೆಲ್ಲರೂ ಮಾಡಬೇಕು. ಈಗ ಒಂದು ಮಾತಿದೆ. ನಿಮ್ಮಲ್ಲಿ ಮಹಾಲಯ ಇಲ್ವೋ? ಅಂತ ಕೇಳಿದರೆ ಇದೆ. ಆದರೆ ನಾವು ಮಾಡುವುದಿಲ್ಲ. ನಮ್ಮ ಮೂಲ ಮನೆಯಲ್ಲಿ ಮಾತ್ರ ಮಾಡ್ತಾರೆ. ಹಾಗಾಗಿ ಎಲ್ಲಾದರೂ ಕುಟುಂಬದಲ್ಲಿ ಒಬ್ಬರು ಮಾಡಿದರೆ ಸಾಕಲ್ವೇ? ಎನ್ನುತ್ತಾರೆ. ಮಾಡುವ ಮನಸ್ಸಿದ್ದರೆ, ಮಾಡುವ ಅರ್ಹತೆ ಇದ್ದರೆ ಪ್ರತಿಯೊಬ್ಬರೂ ಮಾಡಲೇ ಬೇಕಾದ ಕ್ರಿಯೆ ಇದು.

ಒಂದು ಮನೆಯಲ್ಲಿ ನಾಲ್ಕು ಜನ ಸಹೋದರರಿದ್ದರೆ ಅರ್ಹತೆ ಇರುವ ಎಲ್ಲರೂ ಮಾಡಿದರೆ ಎಲ್ಲರಿಗೂ ಪುಣ್ಯ ಫಲವಿದೆ. ಒಬ್ಬ ಮಾತ್ರ ಉಂಡರೆ ಹೊಟ್ಟೆ ತುಂಬುತ್ತದೆಯೇ? ಹಾಗೆಯೇ ಅರ್ಹರೆಲ್ಲರೂ ಮಾಡಿದರೆ ಉತ್ತಮ. ಭಾರತ ದೇಶದ ಧರ್ಮವು ಅತ್ಯಂತ ಶ್ರೇಷ್ಠ. ಇಡೀ ಜಗತ್ತಿನಲ್ಲಿ ಕೃತಜ್ಞರಾಗುವ ದೇಶವೆಂದರೆ ಭಾರತ. ಹಾಗಾಗಿ ಲಕ್ಷಾಂತರ ವರ್ಷದಿಂದ ಇರುವ ಈ ವೇದೋಕ್ತ ಧರ್ಮವು ಅಳಿವಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಾರಣವೇ ಈ ಪಿತೃ ಭಕ್ತಿ. ಚರಿತ್ರೆಯು ಎಲ್ಲಿಯವರೆಗೆ ನಮ್ಮಲ್ಲಿ ನೆನಪುಳಿಯುತ್ತೋ ಅಲ್ಲಿಯವರೆಗೆ ಈ ಧರ್ಮಕ್ಕೆ ಅಳಿವಿಲ್ಲ. ಅಂತಹ ಚರಿತ್ರೆಯನ್ನು ನೆನಪಿಸುವಂತಹ ಶ್ರದ್ಧಾ ಕಾರ್ಯವೇ ಮಹಾಲಯ ಶ್ರಾದ್ಧ.

ಲೇಖನ: ಪ್ರಕಾಶ್ ಅಮ್ಮಣ್ಣಾಯ
ಜ್ಯೋರ್ತಿವಿಜ್ಞಾನಂ

Tags: Mahalaya AmavasyaPitru PakshaPrakash Ammannayaಪಿಂಡ ತಿಲೋದಕಪಿತೃ ಕಾರ್ಯಮಹಾಲಯ
Share196Tweet123Send
Previous Post

ಇಂದು ಅನಂತ ಚತುರ್ದಶಿ: ವ್ರತ ಮಹತ್ವ ಹೀಗಿದೆ ನೋಡಿ

Next Post

ನಟ ದೇವರಾಜ್, ದರ್ಶನ್‌ಗೆ ಕಾರು ಅಪಘಾತ: ಅಪಾಯದಿಂದ ಪಾರು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನಟ ದೇವರಾಜ್, ದರ್ಶನ್‌ಗೆ ಕಾರು ಅಪಘಾತ: ಅಪಾಯದಿಂದ ಪಾರು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ | ಜಾರಕಿಹೊಳಿಗೆ ನಿರಾಸೆ

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ | ಜಾರಕಿಹೊಳಿಗೆ ನಿರಾಸೆ

June 3, 2026
ಶಿವಮೊಗ್ಗ | ರೈಲು ಹತ್ತುವಾಗ ಜಾರಿ ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆ | ಆರ್‌ಪಿಎಫ್ ಪೋಸ್ಟ್ ಕಮಾಂಡರ್ ಸಾಹಸ

ಶಿವಮೊಗ್ಗ | ರೈಲು ಹತ್ತುವಾಗ ಜಾರಿ ಬೀಳುತ್ತಿದ್ದ ವ್ಯಕ್ತಿಯ ರಕ್ಷಣೆ | ಆರ್‌ಪಿಎಫ್ ಪೋಸ್ಟ್ ಕಮಾಂಡರ್ ಸಾಹಸ

June 3, 2026
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 10 ಸಾವಿರ ಭಾರತ್ ಜೋಡೋ ಯೂಥ್ ಕ್ಲಬ್ | ಸಿಎಂ ಶಿವಕುಮಾರ್ ಘೋಷಣೆ

ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 10 ಸಾವಿರ ಭಾರತ್ ಜೋಡೋ ಯೂಥ್ ಕ್ಲಬ್ | ಸಿಎಂ ಶಿವಕುಮಾರ್ ಘೋಷಣೆ

June 3, 2026
ರಾಜ್ಯದ ಹೆಣ್ಮಕ್ಕಳಿಗೆ ಬಿಗ್ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ | ಏನದು?

ರಾಜ್ಯ ವಿಧಾನ ಪರಿಷತ್ ಚುನಾವಣೆ | 4 ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

June 3, 2026
ಮೈಸೂರು | ವೆಂಕಟಾಚಲಧಾಮದ 15ನೇ ಸಂವತ್ಸರೋತ್ಸವ | ಜೂನ್ 5 ರಂದು ವಿಶೇಷ ಕಾರ್ಯಕ್ರಮ

ಮೈಸೂರು | ವೆಂಕಟಾಚಲಧಾಮದ 15ನೇ ಸಂವತ್ಸರೋತ್ಸವ | ಜೂನ್ 5 ರಂದು ವಿಶೇಷ ಕಾರ್ಯಕ್ರಮ

June 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL