ಬೆಂಗಳೂರು: ಸ್ಯಾಂಡಲ್’ವುಡ್ನಲ್ಲಿ ಮೊಟ್ಟ ಮೊದಲ ಬಾರಿಗೆ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರು ಉಚಿತವಾಗಿ ಚಿತ್ರವನ್ನು ವೀಕ್ಷಿಸುವ ಅವಕಾಶ ಕಲ್ಪಸಿದೆ ನವರಾತ್ರಿ ಚಿತ್ರತಂಡ. ಅದಕ್ಕಾಗಿಯೇ ಭರದಿಂದ ಸಿದ್ಧತೆ ಮಾಡಿಕೊಂಡಿಕೊಳ್ಳುತ್ತಿದೆ.
ಹೌದು ಲಕ್ಷ್ಮೀಕಾಂತ್ ಚೆನ್ನೈ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವೂ ಇದೆ ದಸರಾ ಸಮಯದಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ. ಕಾಫಿಸ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಸಮನ್ಯ ರೆಡ್ಡಿ ಬಂಡವಾಳ ಹೂಡಿದ್ದಾರೆ.
ಯೂಟ್ಯೂಬ್’ನಲ್ಲಿ ಸಿನಿಮಾವನ್ನು 10 ನಿಮಿಷಗಳ ಸಮಯದಲ್ಲಿಯೇ ಬಿಡುಗಡೆಗೂ ಮುನ್ನವೇ ಬಿಡಲಾಗುತ್ತದೆ. ಇದನ್ನು ಎಲ್ಲರೂ ಉಚಿತವಾಗಿಯೇ ವೀಕ್ಷಿಸಬಹುದು, ಇಷ್ಟವಾದರೆ ಬಿಡುಗಡೆಯಾದ ನಂತರ ಹತ್ತಿರದ ಚಿತ್ರಮಂದಿರಗಳಲ್ಲಿ ನೋಡಿ ವೀಕ್ಷಿಸಲಿ, ಇಲ್ಲವಾದರೆ ಅವರ ಅಭಿಪ್ರಾಯವನ್ನು ತಿಳಿಸಲಿ. ಕನ್ನಡದಲ್ಲಿಯೇ ಮೊದಲನೆಯ ಸಲ ಇಂತಹ ಪ್ರಯೋಗಕ್ಕೆ ನಾವು ಮುಂದಾಗಿದ್ದೇವೆ ಎನ್ನುತ್ತಾರೆ ನಿರ್ಮಾಪಕ ಸಮನ್ಯಾ ರೆಡ್ಡಿ.
ಥ್ರಿಲ್ಲರ್ ಜಾನರ್ ಹೊಂದಿರುವ ಈ ಚಿತ್ರದಲ್ಲಿ ಪ್ರಮುಖ ತಾರಾಬಳಗದಿಂದ ಕೂಡಿದೆ. ಒರಟ ಐ ಲವ್ ಯೂ ಹಾಗೂ ತ್ರಾಟಕ ಚಿತ್ರದ ಖ್ಯಾತಿಯ ಹೃದಯ ಅವಂತಿ ನಾಯಕಿಯಾಗಿದ್ದೂ, ನಾಯಕನಾಗಿ ಪದ್ಮವಾತಿ ಸೀರಿಯಲ್ ಖ್ಯಾತಿಯ ತ್ರಿವಿಕ್ರಮ್ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಶಿವ ಮಂಜು, ಕಾರ್ತಿಕ್, ಪ್ರಣಯ ಮೂರ್ತಿ, ಲೋಕೇಶ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಒಂದು ಫೈಟ್ ಹೊಂದಿದ್ದೂ, ಯಾವುದೇ ರೀತಿಯ ಹಾಡಿಲ್ಲದಿರುವುದೇ ಚಿತ್ರದ ವಿಶೇಷವಾಗಿದೆ. ಸಂಗೀತ ನಿರ್ದೇಶಕರಾಗಿ ತೆಲುಗು ಸಿನಿಮಾ ಛೋಟಾ ಭೀಮ್ ಹಾಗೂ ಮನು ಖ್ಯಾತಿಯ ನರೇಶ್ ಕುಮಾರನ್ ಸಂಯೋಜನೆ ಮಾಡಿದ್ದಾರೆ.
ಚಿತ್ರವೂ 1.55 ನಿಮಿಷಗಳನ್ನು ಒಳಗೊಂಡಿದ್ದೂ, ಸಂಕಲನವು ಲೋಕೇಶ್ ಚೆನ್ನ ಹಾಗೂ ಛಾಯಾಗ್ರಹಣ ಸಂಕಲನವನ್ನು ಅನ್ನಪೂರ್ಣ ಸ್ಟುಡಿಯೋಸ್ ಮಾಡಿದೆ. ಶೀಘ್ರದಲ್ಲಿಯೇ ಈ ಚಿತ್ರವೂ ಪ್ರೇಕ್ಷಕರ ಮುಂದೆ ಬರಲಿದೆ.
Discussion about this post