ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಳ್ಳಿ ಜನರಿಗೆ ನಿಮ್ಮ city ಜನರ ಇಂಟರ್ನೆಟ್ ಎಂಬ ಪದ ಹೊಸ ಲೋಕ ವನ್ನು ಸೃಷ್ಟಿಸುವ ಜಗತ್ತು ಎಂಬುದು ಗೊತ್ತಿಲ್ಲ. ಯಾಕೆ ಹೇಳಿ ಹಳ್ಳಿಜನರು ಹೆಬ್ಬೆಟ್ಟು ಕಣ್ರೀ.. ಯಾವುದೇ ಸರ್ಕಾರಿ ಕಚೇರಿಗೋ ಅಥವಾ ಬ್ಯಾಂಕ್ ಗೋ ಹೋದರೆ Signature ಹಾಕಲು ಬರೋದಿಲ್ಲ, ಅವರ Signature ಹೆಬ್ಬೆಟ್ಟೆ ಹೊರತು ಅವರ ಹೆಸರು ಬರೆಯಲು ಬರಲ್ಲ. ಯಾಕೆ ಗೊತ್ತಾ ಅವರು ಯಾವುದೇ ಉನ್ನತ ಶಿಕ್ಷಣ ಪಡೆದೆ ಇಲ್ಲ.
ಆದರೆ ಇಂದು ಹೊಟ್ಟೆಗೆ ಅನ್ನ ತಿನ್ನಲು ಆಕ್ಕಿ ತರಲು ನ್ಯಾಯಬೆಲೆ ಅಂಗಡಿಗೆ ಹೋದರೆ ಅಲ್ಲಿ ನಿಮಗೆ ಕೇಳೋದು ಹೆಬ್ಬೆಟ್ಟೆ ಹೊರತು ನಿಮ್ಮ ಉನ್ನತ ಶಿಕ್ಷಣ ಅಲ್ಲ.
ಧನ್ಯವಾದಗಳು ಮೋದಿ ಜಿ… ಯಾರು educated ಅಂತ ಬೋರ್ಡ್ ಹಾಕೊಂಡ್ ಓಡಾಡಿದ್ರಲ ಅವರನ್ನುಜ ಹೆಬ್ಬೆಟ್ಟಾಗಿ ಬದಲಾಯಿಸಿದ್ರಲ್ಲಾ great ಬಿಡಿ ನೀವು…
ನೀವು ಉಪಯೋಗಿಸುವ ಎಲೆಕ್ಟ್ರಾನಿಕ್ ಮಾಧ್ಯಮ ನಮಗೆ ಗೊತ್ತಿಲ್ಲ ಹಿಂದಿನ ಕಾಲದ ರೇಡಿಯೋ, ಹೆಚ್ಚೆಂದರೆ TV ಅಷ್ಟೇ ಯಾಕೆ ಹೇಳಿ ನಾವು ಹೆಬ್ಬೆಟ್ಟು.
ನೀವು city ಜೀವನ ನಡೆಸಲು ಕಾರಣ ನಿಮ್ಮ ಅಪ್ಪನೋ ಅಜ್ಜನೋ ಅವರೆಲ್ಲ ಹೆಬ್ಬೆಟ್ಟುಗಳೇ ಆದರೂ ನಿಮ್ಮನ್ನು cityಗೆ ಕಳುಹಿಸಿ ತಾವು ಮನೆಯಲ್ಲೊ ವೃದ್ದಾಶ್ರಮದಲ್ಲೋ ಕೂತು ನಿಮ್ಮ ಬರುವಿಕೆಗಾಗಿ ಕಾಯುತ್ತಿದ್ದಾರೆ.
ನಿಮ್ಮಷ್ಟು ನಾವು ಬುದ್ದಿ ಕಲಿತಿಲ್ಲ, ಕಾಡನ್ನು ನಾಶಮಾಡಿ ಅಥವಾ ಕೆರೆ ಒತ್ತುವರಿ ಮಾಡಿ building ಕಟ್ಟಿ ದುಡ್ಡು ಮಾಡುವ ವಿಕೃತಿಗೆ ನಾವಿನ್ನೂ ಇಳಿದಿಲ್ಲ. ಯಾಕೆ ಗೊತ್ತಾ ನಾವು uneducated ಹೆಬ್ಬೆಟ್ಟು ಕಣ್ರೀ.
ಊರಲ್ಲಿ ಇದ್ರೆ ಹೆಣ್ಣು ಕೊಡಲ್ಲ, city ಅಲ್ಲೇ ಇದ್ದೋರನ್ನ ಕೇಳ್ತಾರೆ. ಹೇಳಿ city ಸೇರಿದ್ರಲ್ಲ ಕುಡಿಯೋಕೆ, ತೋಳಕೊಳ್ಳೋ ನೀರ್ ಗೂ ದುಡ್ಡ್ ಕೋಟ್ ತಗಳ್ಳೋ ಪರಿಸ್ಥಿತಿ ಬಂತಲ್ಲ ಆಗ ನೆನಪ್ ಆಯ್ತಲ್ಲ ಹೆಬ್ಬೆಟ್ಟಿನ ತಾಕತ್ತು.
ಹೆಣ್ಣು ಕೊಡೋವಾಗ ಮಗಳು ಮನೆಕೆಲಸಾನೋ ತೋಟ, ಗದ್ದೆ ಕೆಲಸಾನೋ ಮಾಡ್ಬೇಕಲ್ಲ ಅಂತ city ಹುಡುಗನ್ನ ನೋಡಿ ಮದ್ವೆ ಮಾಡಿ ಕೊಟ್ರಲ್ಲ ಮೊಮ್ಮಗನಿಗೆ ಅಜ್ಜ ಅಜ್ಜಿ ಯಾರು ಸಂಬಂಧದ ಮಹತ್ವವೇನು ಅಂತ ಗೊತ್ತಿಲ್ಲದೆ ಆಧುನಿಕ ಮಾಧ್ಯಮಕ್ಕೆ ಹೊಂದಿಕೊಂಡು ಪ್ರಪಂಚದ ಜ್ಞಾನ ಗೊತ್ತಿಲ್ಲದೆ ಕಳೆದು ಹೋದನಲ್ಲ.
ನಮಗೇನು ಗೊತ್ತು ಆಧುನಿಕ ಯುಗದ ಪ್ರಪಂಚ ಜ್ಞಾನ ನಾವು ಹೆಬ್ಬೆಟ್ಟು ಗಳಲ್ಲವೇ…
ದುಡ್ಡು ಮಾಡ್ತೀವಿ ಅಂತ city ಸೇರಿ ಹಳ್ಳಿಗಳ ಹೆಬ್ಬೆಟ್ಟುಗಳನ್ನು ವೃದ್ಧಾಶ್ರಮಕ್ಕೊ ಅಥವಾ ಹಳ್ಳಿಗಳನ್ನೇ ವೃದ್ದಾಶ್ರಮವಾಗಿ ಪರಿವರ್ತಿಸಿ ಬಿಟ್ಟಿರಲ್ಲ ರೋಗಬಂದಾಗ ಮಾತ್ರ ಈ ವೃದ್ದಾಶ್ರಮ ನೆನಪಿಗೆ ಬಂತೆ?
city ಅಲ್ಲಿ ನೀವೆಸ್ಟ್ ದುಡ್ಡು ಮಾಡಿಕೊಂಡಿರಬಹುದು, ಇಲ್ಲಿ ಹೆಬ್ಬೆಟ್ಟುಗಳೇ ಬೆಳೆದ ಆಹಾರ ಪದಾರ್ಥಗಳನ್ನೇ ತಿನ್ನಬೇಕು. ನಿಮ್ಮ ಚಿನ್ನ, ದುಡ್ಡು , ಒಡವೆಗಳನ್ನು ತಿನ್ನಲು ಬರುವುದಿಲ್ಲ.
ಈಗಲಾದರೂ ಬದಲಾಗಿ ಹಳ್ಳಿಗಳ ಜನರನ್ನು ಕಡೆಗಣಿಸುವ ಮನಃಸ್ಥಿತಿ ಬಿಟ್ಟು, cityಗಳಿಗೆ ಗುಳೆ ಹೋಗುವ ಮುನ್ನ ಹಳ್ಳಿಗಳ ಹೆಬ್ಬೆಟ್ಟುಗಳನ್ನು ನೆನಪಿಸಿಕೊಳ್ಳಿ.
ಹೀಗೆ ಗುಳೆ ಹೋದರೆ ಮುಂದೊಂದು ದಿನ ಹೊಟ್ಟೆಗೆ ಚಿನ್ನ, ದುಡ್ಡು, ಒಡವೆಗಳನ್ನು ತಿನ್ನುವ ಪರಿಸ್ಥಿತಿ ಎದುರಾದರು ಆಶ್ಚರ್ಯವಿಲ್ಲ…
Get in Touch With Us info@kalpa.news Whatsapp: 9481252093
Discussion about this post