ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಮಂಡ್ಲಿ, ಗಾಜನೂರು ಮತ್ತು ರಾಮಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-1, 2,4 ಮತ್ತು 5ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಾಗೂ ಹೊಳಲೂರು ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬ್ರೇಕರ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಗರ ಹಾಗೂ ಗ್ರಾಮಾಂತರದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜ.10 ಮತ್ತು 11 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ಗಂಟೆಯವರೆಗೆ:
ಗಾಜನೂರು, ಹೊಸಳ್ಳಿ, ರಾಮೇನಕೊಪ್ಪ, ಕಲ್ಲೂರು, ಹೊಸ ಹೊನ್ನಾಪುರ, ಅಗಸವಳ್ಳಿ, ಲಕ್ಷ್ಮೀಪುರ, ಹರಕೆರೆ, ಪೇಪರ್ ಪ್ಯಾಕೇಜ್, ಶಂಕರ ಕಣ್ಣಿನ ಆಸ್ಪತ್ರೆ, ಇಲಿಯಾಸ್ ನಗರ, ಹಳೇಮಂಡ್ಲಿ, ಅಮೃತ್ ರೈಸ್ ಮಿಲ್, ಗಂಧರ್ವ ನಗರ, ಶ್ರೀನಿವಾಸ ಲೇಔಟ್, ಮಂಜುನಾಥ ರೈಸ್ಮಿಲ್, ಬೆನಕೇಶ್ವರ ರೈಸ್ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ನಾರಾಯಣ ಹೃದಯಾಲಯ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
ಜ.10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ
ಕುವೆಂಪು ರಸ್ತೆ, ದೈವಜ್ಞ ಕಲ್ಯಾಣ ಮಂಟಪ, ಶರಾವತಿ ನಗರ, ಬೂಸ್ಟರ್ ಪಂಪ್ ಹೌಸ್, ಹೊಸಮನೆ, ಯುನಿಟಿ ಮಕ್ಕಳ ಆಸ್ಪತ್ರೆ, ಕ್ಲಿಫ್ ಎಂಬಸ್ಸಿ ಹೋಟೆಲ್, ನಂದಿ ಪೆಟ್ರೋಲ್ ಬಂಕ್, ಆದಿಚುಂಚನಗಿರಿ ಸಮುದಾಯ ಭವನ, ಅಶೋಕ ಗ್ಯ್ರಾಂಡ್, ಆಯುರ್ವೇದಿಕ್ ಆಸ್ಪತ್ರೆ, ಆಯನೂರು ಗೇಟ್, ಎಸ್ಪಿ ಕಛೇರಿ, ಮೆಗ್ಗಾನ್ ಆಸ್ಪತ್ರೆ, ದೊಡ್ಡಪೇಟೆ ಪೋಲಿಸ್ ಸ್ಟೇಷನ್, ಎ ಆರ್ ಬಿ ಕಾಲೋನಿ, ಅಶೋಕ ನಗರ, ಡಿಎಆರ್ ಕ್ವಾಟ್ರಸ್, ಸರ್ಕ್ಯೂಟ್ ಹೌಸ್, ದುರ್ಗಿಗುಡಿ, ಜ್ಯೂವೆಲ್ ರಾಕ್ ರಸ್ತೆ, ಮಿಷನ್ ಕಾಂಪೌಂಡ್, ಗೋಪಿ ಸರ್ಕಲ್, ಸವಾರ್ ಲೈನ್ ರಸ್ತೆ, ಜೆಪಿಎನ್ ರಸ್ತೆ, ಎಲ್.ಎಲ್.ಆರ್. ರಸ್ತೆ, ಸುತ್ತ ಮುತ್ತಲಿನ ಪ್ರದೇಶಗಳು.
ಹೊಳಲೂರು, ಮಡಿಕೆಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸುಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post