No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಅಣುಬಾಂಬ್ ಹೊತ್ತ ನೌಕೆ ಪಾಕಿಸ್ಥಾನವನ್ನೆ ಚುಂಬಿಸುವ ದಿನ ದೂರವಿಲ್ಲ: ಅಮ್ಮಣ್ಣಾಯ ಭವಿಷ್ಯ

ಇಮ್ರಾನ್ ಖಾನನ ನಡೆ ಮುಂದೇನು?

kalpa News by kalpa News
February 27, 2019
in Army
0
Share on FacebookShare on TwitterShare on WhatsApp

ವಾತಾವರಣಕ್ಕನುಗುಣವಾಗಿ ಅವನ ನಡೆ ಇರಬಹುದಷ್ಟೆ. ನಾಳೆ ಭಯೋತ್ಪಾದಕರು ಸುಮ್ಮನಿದ್ದರೆ ಅದಕ್ಕೋ OK. Pak Army ಮೌನವಾದರೆ ಅದಕ್ಕೂ OK.ಅಂತೂ ಪ್ರಧಾನಿ ಪಟ್ಟ ಉಳಿಸಿಕೊಳ್ಳಬೇಕು. ಇದೇ ಅವನಲ್ಲಿರುವ ದೌರ್ಬಲ್ಯ. ಇದನ್ನೇ Encashment ಮಾಡಿಕೊಂಡರೆ ಏನೂ ಮಾಡಬಹುದಲ್ವ?

ಇಲ್ಲಿ ಎರಡು ವಾತಾವರಣ ಇದೆ. ಒಂದು Encashment ಮಾಡಿಕೊಳ್ಳುವವರದ್ದು. ಅದರ ಅಧಾರದಲ್ಲಿ ಭಾರತ ಮತ್ತು ವಿಶ್ವದ ನಿರ್ಧಾರ ಇರುತ್ತದೆ.
ಎರಡನೆಯದ್ದು ಗ್ರಹ ಗೋಚರ ಸ್ಥಿತಿ ಆಧಾರಿತವಾದದ್ದು(ಇದನ್ನು ಎಷ್ಟು ಜನ ನಂಬುತ್ತಾರೋ ಗೊತ್ತಿಲ್ಲ ಬಿಡಿ)

ಮೊದಲಿಗೆ ಸಂಕ್ಷಿಪ್ತವಾಗಿ ಜ್ಯೋತಿಷ್ಯ ವಿಚಾರ ಹೇಳ್ತೇನೆ. ಇಮ್ರಾನನಿಗೆ ಈಗ ಶುಕ್ರ ದಶೆ. + point. ಗೋಚರದಲ್ಲಿ ಶನಿ ಲಾಭದಲ್ಲಿ ಮತ್ತು ಗುರು ಲಾಭಸ್ಥಾನಕ್ಕೆ ಪ್ರವೇಶ ಕಾಲ( ಕುಂಭ ರಾಶಿ). ಇದೂ + point. ಇಮ್ರಾನನ ಜಾತಕದಲ್ಲಿ ಅತ್ಯಂತ ಬಲಿಷ್ಟ ಶನಿ ಇರುವುದು. ಇದೂ ಮುತ್ಸದಿತನಕ್ಕೆ(ಇವನಿಗಾಗುವಾಗ ಬದುಕುವ ದಾರಿಗೆ. ಮೋದಿಯವರ ಆದರ್ಶವನ್ನು ಎತ್ತಿ ಹಿಡಿದು ಪ್ರಧಾನಿಯೂ ಆದ) ಇದೂ ಇವನಿಗೆ + point.

ಇನ್ನು – pointಗಳೇನು?
ವೃಶ್ಚಿಕ ಲಗ್ನ ಸಂಜಾತನಿವನು. ಲಾಭಸ್ಥಾನದಲ್ಲಿ ಬಲಿಷ್ಟ ಶನಿ. ಲಗ್ನದಲ್ಲೇ ನಿಪುಣ ಯೋಗ. ಹೀಗಿದ್ದರೂ ಶನಿಯ ಮೂರನೆಯ ದೃಷ್ಟಿಯು ಸ್ವಾರ್ಥ ದೃಷ್ಟಿಯಾಗುತ್ತದೆ. ರಾವಣನಿಗೂ ಇದೇ ಸ್ಥಿತಿ ಇತ್ತು.ಕೊನೆಗೆ ಏನಾದ? ಎಂಬುದನ್ನು ತಿಳಿದುಕೊಳ್ಳಿ. ಹಾಗೆಯೇ ಇವನಿಗೂ ದುರಂತವೆ ಕಾದಿದೆ. ರಾವಣ ಇಡೀ ಲಂಕೆಯನ್ನೇ ಬಲಿ ಕೊಟ್ಟಂತೆ, ಈ ಇಮ್ರಾನ ಇಡೀ ಪಾಕಿಸ್ಥಾನವನ್ನೇ ಬಲಿಕೊಡುತ್ತಾನೆ. ಇದಲ್ಲದೆ ಶುಕ್ರದಶೆ ಒಂದೆಡೆ ಅಧಿಕಾರಕ್ಕೆ ಉತ್ತಮವೇ ಆದರೂ,ಇನ್ನೊಂದೆಡೆ ನಾಶಕ್ಕೂ ಅವನೇ ಕಾರಣ.ಶುಕ್ರ ಇವನಿಗೆ ವ್ಯಯಾಧಿಪನೂ, ಮರಣ ದ್ರೇಕ್ಕಾಣಾಧಿಪನೂ ಆದುದರಿಂದ ಇದು ಇವನಿಗೆ big minus Point.

ಎರಡನೆಯದ್ದಾಗಿ ಇವನ ಲಗ್ನಾಧಿಪ ಕುಜನೇ ಶತ್ರು ರಾಶ್ಯಾಧಿಪ. ಅಂದರೆ ಸ್ವಯಂಕೃತ ಅಪರಾದ. ಇದೂ ಒಂದು – Point. ಜ್ಞಾನ,ವಾಕ್ ಸ್ಥಾನಾಧಿಪ ಗುರುವು ಷಷ್ಟದಲ್ಲಿ ಅಜ್ಞಾನ, ಅಸಂಭದ್ಧ ತೀರ್ಮಾನಕ್ಕೆ ಪುಷ್ಟಿ ಕೊಡುತ್ತಾನೆ. ಅಲ್ಲಿಗೆ ಇದು ಕೂಡಾ – Point ಆಗುತ್ತದೆ. ರಾಹು ಕೇತುಗಳು ಸೌಭಾಗ್ಯಗಳನ್ನು ನೀಡಿದರೂ ಇದು ಅವಸರದ ನಿರ್ಧಾರದಲ್ಲಿ ಅಪಾಯ. ಇದೂ – Point. ಲಗ್ನಾಧಿಪ ಕುಜನು ನೀಗಡ(ಬಂಧನ) ದ್ರೇಕ್ಕಾಣದಲ್ಲಿ ಉತ್ಸಾಹದಲ್ಲಿ ಉಚ್ಚನಾಗಿರುತ್ತಾನೆ. ಈ ತೃತೀಯವು ಕುಜನಿಗೆ ಉತ್ಸಾಹ, ಹುಮ್ಮನಸ್ಸು ಉತ್ತಮ ಆದರೂ ಬಂಧನದ ದ್ರೇಕ್ಕಾಣದಲ್ಲಿ ಲಗ್ನಾಧಿಪತಿಯಾಗಿರುವುದು – Point. ಅದು ಹೇಗೆಂದರೆ ಇವನು ಒತ್ತಡಗಳ ಬಂಧನದಲ್ಲಿದ್ದು, ಮುಂದೆ ಸೆರೆಮನೆಯ ಬಂಧನಕ್ಕೆ ಹೋಗುವುದನ್ನು ಸೂಚಿಸುತ್ತದೆ. ಯಾರೋ ಮಾಡಿದ ಸ್ವಾರ್ಥ ಉದ್ದೇಶದ ಕೆಲಸಕ್ಕೆ, ತನ್ನ ಪೀಠದ ಸ್ವಾರ್ಥದಿಂದ ಬೆಂಬಲ ಕೊಟ್ಟು ಬಂಧಿತನಾಗಬಹುದು ಎಂದು ಸೂಚಿಸುತ್ತದೆ. ಇದು ಜ್ಯೋತಿಷ್ಯಾಧರಿತ ಮುಂದಿನ ಫಲ.

ಭಾರತದ ಕಿಚ್ಚಿನಿಂದ ಹತಾಷಗೊಂಡಿರುವ ಪಾಕಿಸ್ಥಾನ ವಾಮ ಮಾರ್ಗವನ್ನು ಅನುಸರಿಸಲು ಮುಂದಾಗುವ ಸಾಧ್ಯತೆಯಿದೆ. ಇದರ ಭಾಗವಾಗಿ ಭಾರತಕ್ಕೆ ಸಂಬಂಧಿಸಿದ ವಿಮಾನಗಳನ್ನು ಹೈಜಾಕ್ ಮಾಡುವುದು, ನಮ್ಮ ಯೋಧರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವುದು ಸೇರಿದಂತೆ ನೀಚ ಕೃತ್ಯಗಳಿಗೆ ಕೈಹಾಕಬಹುದು. ಅಲ್ಲದೇ, ನಾಗರಿಕ ವಿಮಾನಗಳನ್ನು ಹೈಜಾಕ್ ಮಾಡಿ, ನಾಶ ಮಾಡುವುದು, ಆ ಮೂಲಕ ಭಾರತದ ನಾಗರಿಕರ ಪ್ರಾಣಹಾನಿ ಮಾಡುವ ಕೃತ್ಯಕ್ಕೆ ಕೈ ಹಾಕುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಬೇಕು.

ರಾಜಕೀಯ ವಿದ್ಯಾಮಾನ ನೋಡೋಣ:
ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಯೋತ್ಪಾದನೆಯ ವಿಚಾರದಲ್ಲಿ ಮೊದಲಾಗಿ ಪಾಕಿಸ್ಥಾನವನ್ನು ನಿಷೇಧಿಸಿದವ. ಅವನಿಗೆ ಮತಾಂಧರ ನಿರ್ಮೂಲನವೂ,ಪಾಕ್ ಅಣ್ವಸ್ತ್ರ ನಾಶವೂ ಬೇಕು. ಆದರೆ ನೈತಿಕವಾಗಿ ಧಾಳಿ ಮಾಡುವ ಹಾಗಿಲ್ಲ. ಇಡೀ ಜಗತ್ತಿನಲ್ಲಿ ಮತಾಂಧ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಎಂದರೆ ಪಾಕಿನ ಉತ್ತರ ಭಾಗ, ಅಫಘಾನಿಸ್ಥಾನದ ಪಾಕ್ ಸಮೀಪದ ಭಾಗ. ಅಫಘಾನಿಸ್ಥಾನದಲ್ಲಿ ಈಗಾಗಲೇ ಟ್ರಂಪ್ ಸ್ವಲ್ಪ ಮಟ್ಟಿಗೆ ಐಸಿಸ್ ಉಗ್ರರ ಧಮನ ಮಾಡಿಯಾಗಿದೆ.ಆ ದರೂ ಮತ್ತೆ ಬೆಳೆಯುತ್ತಿದೆ. ಮೋದಿಯವರು ನಿರ್ನಾಮ ಮಾಡಿದರೂ ಈ ರಕ್ತಬೀಜರು ಬೆಳೆಯುತ್ತಾ ಹೋದಾರು. ಇರಾನಿಗೆ( ಶಿಯಾ) ಪಾಕಿನ ಸುನ್ನಿಗಳು ಅಪಾಯಕಾರಿ. ಹಾಗಾಗಿ ಇರಾನ್ ಕೂಡಾ ವಿರೋಧವೆ. ರಷ್ಯ ಹೇಗೂ ಈ ಮತಾಂಧರ ವಿರೋಧಿಗಳೆ. ಹಾಗೆ ನೋಡಲು ಹೋದರೆ ಪ್ರಗತಿಪರ ರಾಷ್ಟ್ರಗಳೆಲ್ಲವೂ ಮತಾಂಧರ ಪೋಷಕ, ಸೃಷ್ಟಿಯ ಪಾಕಿಗೆ ವಿರೋಧವೆ. ಚೈನ ಕೂಡಾ ಮೇಲ್ನೋಟಕ್ಕೆ ವಿರೋಧ ಇದ್ದರೂ ಅವರ ಚೈನಾ ಬೆಲೂಚಿಸ್ಥಾನ ಕಾರಿಡಾರ್ ಯೋಜನೆಗೆ ಪಾಕ್ ಒಪ್ಪಿಗೆ ನೀಡಿದುದರಿಂದ ಪ್ರತ್ಯಕ್ಷ ಸಹಾಯ ಮಾಡಲಾಗದಿದ್ದರೂ, ಪರೋಕ್ಷ ಸಹಾಯ (weapons supply ಮಾಡಲು) ಮಾಡಿಯೇ ಮಾಡುತ್ತದೆ. ಯಾಕೆಂದರೆ ಪಾಕ್ ಭಾರತದ ಪರವಾದರೆ ಅವರ ವ್ಯಾಪಾರ ನಿಂತು ಬಿಡಬಹುದು. ಇನ್ನು ಇಸ್ರೇಲ್ ನಿಜವಾದ ಯೋಧರ ದೇಶ.ಅಸತ್ಯಕ್ಕೆ ಮಣೆ ಹಾಕದ ದೇಶ.

ಪಾಕಿಸ್ಥಾನ ವಿರೋಧಿ. ಹಿಂದಿನ UPA ಸರಕಾರ ಇದಕ್ಕಾಗಿಯೇ ಇಸ್ರೇಲಿಗೆ ಹೋಗದೇ ಇದ್ದದ್ದು. ಪಾಕಿನ ಪರ ಎಂದು ಹೇಳಬಹುದು.

ಮಂದೇನು? ಪಾಕಿಸ್ಥಾನವು ಪ್ರತೀಕಾರ ಬಲಿ(Revenge )ತೆಗೆದುಕೊಳ್ಳದೆ ಇರಲಾರದು. ಯಾವ ಸ್ವರೂಪದಲ್ಲಿ?
ಒಂದು ವೇಳೆ ಇಮ್ರಾನ್ ಖಾನ್ ಮನ ನೊಂದು, ಸತ್ಪ್ರಜೆಗಳ ಒತ್ತಡದಿಂದ, ಕುರ್ಚಿಯನ್ನು ಉಳಿಸಿಕೊಳ್ಳಲು ಅಥಾವಾ ಭಯದಿಂದ ಶಾಂತಿ ಮಾತುಕತೆಗೆ ಮುಂದಾದರೆ, ವಿಶ್ವವೂ ಸೇರಿದಂತೆ ಭಾರತವು ಅದಕ್ಕೆ ಒಪ್ಪಬಹುದು. ಆದರೆ ಒಂದು ಶರ್ತದ ಆಧಾರದಲ್ಲಿ ಭಯೋತ್ಪಾದಕರ ಧಮನಕ್ಕೆ ಸಹಕರಿಸಬೇಕು, ಭಯೋತ್ಪಾದಕರ ಬೇಟೆಗೆ ನಮ್ಮೊಂದಿಗೆ ಇದ್ದು ಅವಕಾಶ ಮಾಡಿಕೊಡಬೇಕು. ಇದನ್ನು ಅಮೇರಿಕಾದಿ ಪ್ರಗತಿಪರ ರಾಷ್ಟ್ರಗಳು ಬೆಂಬಲಿಸುತ್ತದೆ. ಹಾಗೇನಾದರೂ ಇಮ್ರಾನ್ ಒಪ್ಪಿದರೆ ಭಯೋತ್ಪಾದಕರು ಸುಮ್ಮನಿರಲಾರರು. ಇಮ್ರಾನನ – point ದೋಷಗಳಿಂದಾಗಿ ಇಮ್ರಾನ್ ಖಾನ್ ಸಾಯಬೇಕಾದೀತು. ಮತಾಂಧರಿಗೆ ಮಣಿದು ಈ ಶರ್ತಕ್ಕೆ ಒಪ್ಪದಿದ್ದಲ್ಲಿ ವಿಶ್ವವೇ ತಿರುಗಿಬಿದ್ದು ಇಮ್ರಾನನ – point ದೋಷಗಳು ವೃದ್ಧಿಯಾದೀತು. ಅಂದರೆ ಇಮ್ರಾನ್ ಖಾನನ ಬಂಧನ ಯೋಗಕ್ಕೆ ಪುಷ್ಟಿ ಸಿಗಬಹುದು.

ಈ ಮಧ್ಯೆ ಪಾಕ್ ಸೈನಿಕರು ಭಯೋತ್ಪಾದಕರ ಜತೆ ಸೇರಿ ಹತಾಶರಾಗಿ ಅಣು ಸಮರಕ್ಕೂ ಮುಂದಾಗಬಹುದು. ಯಾಕೆಂದರೆ ಪಾಕಿಸ್ಥಾನವು ಮಾನವತಾ ವಾದಿಗಳಲ್ಲ, ಸ್ವಾರ್ಥಿಗಳು. ಬೇರೊಂದು ದೇಶದ ಪ್ರಜೆಗಳ ಸುಖದುಃಖಗಳನ್ನು ನೋಡುವವರಲ್ಲ. ಇಂತಹ ಬೇಜವಬ್ದಾರಿಗಳು ಅಣು ಸಮರಕ್ಕಿಳಿಯಬಹುದು. ಎಲ್ಲಾದರೂ ಇಳಿದರೆ ಅಣು ಬಾಂಬ್ ಹೊತ್ತ ನೌಕೆಯು ಗಗನಕ್ಕೇರುವುದಕ್ಕೆ ಮುಂಚೆಯೇ ಪಾಕ್ ನೆಲವನ್ನು ಚುಂಬಿಸಿ ಪಾಕಿಸ್ಥಾನವನ್ನು ಮತ್ತೆಂದಿಗೂ ನೋಡದಂತೆ ಮಾಡಬಹುದು. ಅಲ್ಲಿಗೆ ಇಡೀ ಜಗತ್ತು ಸ್ಥಬ್ಧವಾಗಿ ಯುದ್ಧದ ಮಾತುಗಳು ಸಧ್ಯಕ್ಕೆ ಪೂರ್ಣ ವಿರಾಮ ಹೊಂದಬಹುದು.

Tags: AmericaIndiaKannada ArticleKannada NewsNDA GovernmentPakistanPrakash AmmannayaUPA Govtಅಣುಬಾಂಬ್ಅಫಘಾನಿಸ್ಥಾನಪಾಕಿಸ್ಥಾನಪ್ರಕಾಶ್ ಅಮ್ಮಣ್ಣಾಯ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

Next Post

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

kalpa News

kalpa News

Next Post
ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

ಮೋದಿಗೆ ಭರ್ಜರಿ ರಾಜತಾಂತ್ರಿಕ ಜಯ: ಪಾಕಿಸ್ಥಾನಕ್ಕೆ ಕೈಕೊಟ್ಟು, ಭಾರತಕ್ಕೆ ಜೈ ಎಂದ ಚೀನಾ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL