Wednesday, June 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಓಂಕಾರ ಆಶ್ರಮ: ಈ ವಿಶಿಷ್ಟ ದ್ವಾದಶ ಜ್ಯೋರ್ತಿಲಿಂಗ ದೇವಾಲಯಕ್ಕೊಮ್ಮೆ ತಪ್ಪದೇ ಭೇಟಿ ನೀಡಿ

July 22, 2019
in Special Articles
0 0
0
Share on facebookShare on TwitterWhatsapp
Read - 2 minutes

ಬೆಂಗಳೂರಿನ ಓಂಕಾರ ಆಶ್ರಮ ಪ್ರೇಕ್ಷಣೀಯ ಸ್ಥಳವೂ ಹೌದು, ಧಾರ್ಮಿಕ ಕ್ಷೇತ್ರವೂ ಹೌದು. ಸುತ್ತಣದ ಹಚ್ಚ ಹಸಿರ ರಮಣೀಯ ದೃಶ್ಯದ ಝೇಂಕಾರ ಈ ಪುಣ್ಯ ಕ್ಷೇತ್ರ ಹಲವು ವಿಶಿಷ್ಟತೆಗಳಿಂದ ಕೂಡಿದೆ. ರಾಜ್ಯದ ಏಕೈಕ ಮತ್ಸ್ಯ ನಾರಾಯಣ ದೇವಸ್ಥಾನ ಇರುವುದು ಇದೇ ಕ್ಷೇತ್ರದಲ್ಲಿ. ಮಹಾಶಿವರಾತ್ರಿಯನ್ನು ಇಲ್ಲಿ ಅತ್ಯಂತ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಆಶ್ರಮದ ಕಿರು ಪರಿಚಯ ಇಲ್ಲಿದೆ.

ಬೆಂಗಳೂರಿನ ಶ್ರೀನಿವಾಸಪುರದ ಕೆಂಗೇರಿ – ಉತ್ತರಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಶ್ರಮ ಮತ್ತು ಎಲ್ಲಕ್ಕೂ ಕಲಸವಿಟ್ಟಂತೆ ಶ್ವೇತವರ್ಣದ ವೈಭವದಲ್ಲಿ ನಿರ್ಮಾಣಗೊಂಡಿರುವ ಶ್ರೀದ್ವಾದಶ ಜ್ಯೋತಿರ್ಲಿಂಗ ಭವ್ಯದೇವಸ್ಥಾನವಿದೆ. ಒಟ್ಟು 16 ಎಕರೆ ಜಾಗದಲ್ಲಿ ಈ ಆಶ್ರಮವನ್ನು ನಿರ್ಮಿಸಲಾಗಿದೆ. ವೇದಪಾಠ ಶಾಲೆ, ಯಾಗ ಶಾಲೆ ಮತ್ತು ಗೋ ಶಾಲೆಗಳು ಆಶ್ರಮದಲ್ಲಿವೆ.

ಆಶ್ರಮದ ಇತಿಹಾಸ:
1994ರಲ್ಲಿ ಸದ್ಗುರು ಶ್ರೀ ಶಿವಪುರಿ ಮಹಾಸ್ವಾಮಿಗಳು ಭಕ್ತಾಧಿಗಳ ಅನುಕೂಲಕ್ಕೆ ಒಂದೇ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ವ್ಯವಸ್ಥೆ ಮಾಡುವ ಉದ್ದೇಶದಿಂದ ಒಂದೊಂದು ಲಿಂಗಕ್ಕೂ ಪ್ರತ್ಯೇಕ ದೇವಸ್ಥಾನ ನಿರ್ಮಿಸುವ ಯೋಜನೆ ಹಮ್ಮಿಕೊಂಡರು. ಅವರ ಆಣತಿಯಂತೆ 2000ರಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು. 2007ರಲ್ಲಿ ಶಿವಪುರಿಶ್ರೀಗಳು ಬ್ರಹ್ಮಲೀನರಾದನಂತರ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಮಧುಸೂದನಾನಂದಪುರಿ ಸ್ವಾಮಿಜಿ ಪೀಠವನ್ನು ಆಲಂಕರಿಸಿ ಗುರುಗಳ ಅಣತಿಯಂತೆ 2011 ಫೆ.16ರಂದು ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.

ದ್ವಾದಶ ಜ್ಯೋತಿರ್ಲಿಂಗ ದರ್ಶನ:
ರಾಮೇಶ್ವರದಿಂದ ಕೇದಾರದವರೆಗೂ 12 ಜ್ಯೋತಿರ್ಲಿಂಗಗಳು ನೆಲೆಯಾಗಿವೆ. ಭಕ್ತಾಧಿಗಳ ಕೆಲವು ಅನನುಕೂಲಗಳಿಂದಾಗಿ ಎಲ್ಲ ಜ್ಯೋತಿರ್ಲಿಂಗ ದೇವಸ್ಥಾನಗಳನ್ನು ಒಟ್ಟಿಗೆ ದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಓಂಕಾರ ಆಶ್ರಮದ ಆವರಣದಲ್ಲಿ 12 ಜ್ಯೋತಿರ್ಲಿಂಗಗಳನ್ನು ಒಟ್ಟಿಗೆ ಪ್ರತಿಷ್ಠಾಪಿಸಿದ್ದರಿಂದ ಒಂದೇ ಸ್ಥಳದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಭಕ್ತರಿಗೆ ಸಾಧ್ಯವಾಗಲಿದೆ.

ಪ್ರಧಾನ ದೇವರಾಗಿ 108 ಅಡಿ ಗೋಪುರದ ಗರ್ಭಗುಡಿಯಲ್ಲಿ ಓಂಕಾರೇಶ್ವರ ಲಿಂಗದ ಜೊತೆ ಸ್ಪತಿಕದ ಶ್ರೀಚಕ್ರವಿದ್ದು ದೇವಾಲಯವಿದ್ದು ಓಂಕಾರ ಆಶ್ರಮದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರೆ 13 ಸಾವಿರ ಬಾಣಲಿಂಗ ದರ್ಶನದ ಫಲ ಪ್ರಾಪ್ರಿಯಾಗುತ್ತದೆ. (ಶಿವಲಿಂಗ ರಹಸ್ಯದ ಕುರಿತು ಪ್ರತ್ಯೇಕ ಲೇಖನವಿದೆ ಗಮನಿಸಿ)

ಹೊರನೋಟದಲ್ಲೇ ಸೊಗಸಾದ ಶ್ವೇತವರ್ಣದ ಗೋಪುರಗಳಿಂದ ಕಂಗೋಳಿಸುವ ದೇಗುಲದಲ್ಲಿ ಮಾಂಧಾತ್ಯ ಪರ್ವತದ ಓಂಕಾರೇಶ್ವರ, ರಾಮೇಶ್ವರದ ರಾಮೇಶ್ವರ, ನಾಸಿಕ್‍ನ ತ್ರೈಯಂಬಕೇಶ್ವರ, ವಾರಣಾಸಿಯ ವಿಶ್ವೇಶ್ವರ, ಕೇದಾರದ ಕೇದಾರನಾಥೇಶ್ವರ, ಉಜ್ಜಯಿನಿಯ ಮಹಾಕಾಳೇಶ್ವರ, ಸೌರಾಷ್ಟ್ರದ ಸೋಮನಾಥೇಶ್ವರ, ಸಹ್ಯಾದ್ರಿಯ ಭೀಮಾಶಂಕರ, ದಾರುಕಾವನದ ನಾಗೇಶ್ವರ, ದೇವಗಿರಿಯ ಘತ್ಮೇಶ್ವರ, ದೇವಘರದ ವೈದ್ಯನಾಥೇಶ್ವರ ಹಾಗೂ ಶ್ರೀಶೈಲದ ಮಲ್ಲಿಕಾರ್ಜುನರನ್ನೊಳಗೊಂಡಂತೆ ಭರತಖಂಡದ ದ್ವಾದಶ ಲಿಂಗಗಳನ್ನು ಪ್ರತ್ಯೇಕವಾದ ಗರ್ಭಗುಡಿಗಳಲ್ಲಿ ಪ್ರತಿಷ್ಠಾಪಿಸಲಾಗಿದೆ.

ಮತ್ಸ್ಯನಾರಾಯಣ ದೇವಸ್ಥಾನ:
ಭಗವಾನ್ ಮಹಾವಿಷ್ಣುವಿನ ಮೊದಲ ಅವತಾರವಾದ ಮತ್ಸ್ಯನಾರಾಯಣ ಸ್ವಾಮಿ ಆರಾಧನೆಗೆ ಓಂಕಾರ ಆಶ್ರಮದಲ್ಲಿ ಮತ್ಸ್ಯನಾರಾಯಣಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಭಾರತದ ಎರಡನೇ ಹಾಗೂ ರಾಜ್ಯದ ಮೊಟ್ಟಮೊದಲ ಬಹು ಸುಂದರವಾದ ಮತ್ಸ್ಯನಾರಾಯಣ ಸ್ವಾಮಿ ದೇಗುಲವು ಭಕ್ತಿ ಸುಧೆಯನ್ನೇ ಹರಿಸುತ್ತದೆ. ಬಹು ಆಕರ್ಷಣೀಯವಾಗಿರುವ ಆಳೆತ್ತರದ ಮತ್ಸ್ಯನಾರಾಯಣ ಮೂರ್ತಿಯ ಚೆಲುವನ್ನು ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಸಾಲದು. ರಾಜ್ಯದಲ್ಲಿನ ಏಕೈಕ ಮತ್ಸ್ಯನಾರಾಯಣ ದೇವಸ್ಥಾನ ಆರಾಧನೆಯಿಂದಾಗಿ ಸರ್ವದೋಷಗಳು ನಿವಾರಣೆಯಾಗುತ್ತವೆ. ನಿವಾಸ, ವ್ಯಾಪಾರ ಕ್ಷೇತ್ರಳಲ್ಲಿನ ವಾಸ್ತು ದೋಷ ನಿವಾರಣೆ ಮಾಡಲು ಸರ್ವದೋಷ ನಿವಾರಕ ಮತ್ಸ್ಯಯಂತ್ರವನ್ನು ನೀಡಲಾಗುತ್ತದೆ.

‘ಮಹಾ’ ಶಿವರಾತ್ರಿ
ಓಂಕಾರ ಆಶ್ರಮದಲ್ಲಿ ಶಿವರಾತ್ರಿಯನ್ನು ವಿಶೇಷವಾಗಿ ಮತ್ತು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಅಂದು ಮುಂಜಾನೆ 6ರಿಂದ 24 ಗಂಟೆಗಳ ಕಾಲ ನಿರಂತರ ಧಾರ್ಮಿಕ ಕಾರ್ಯಗಳು ನೆರವೇರುತ್ತವೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ನಾಲ್ಕು ಯಾಮ ಪೂಜೆ. ಗಂಗಾಜಲ ಅಭಿಷೇಕ ,ಭಜನೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇನ್ನೊಂದು ವಿಶೇಷ ಎಂದರೆ, ಶಿವರಾತ್ರಿಯಂದು ಭಕ್ತಾದಿಗಳಿಗೆ ಓಂಕಾರೇಶ್ವರ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ದೇವಪ್ರಯಾಗದಿಂದ ಗಂಗಾಜಲವನ್ನು ತರಿಸಲಾಗುತ್ತದೆ. ಆ ಜಲದಿಂದ ಶಿವನಿಗೆ ಅಭಿಷೇಕ ಮಾಡುವ ಸೌಭಾಗ್ಯವನ್ನು ಭಕ್ತರಿಗೆ ನೀಡಲಾಗುತ್ತದೆ. ಶಿವನಿಗೆ ಗಂಗಾಜಲ ಅಭಿಷೇಕ ಮಾಡುವುದರಿಂದ ಸರ್ವ ಪಾಪಗಳು ನಿವಾರಣೆಯಾಗುತ್ತವೆ.

ಸರ್ವಧರ್ಮಗಳ ಸಮನ್ವಯ ಕೇಂದ್ರ – ಈ ಓಂಕಾರ ಪರಿಸರ
ನಿಜಕ್ಕೂ ಇದು ಸರ್ವಧರ್ಮಗಳ ಸಮನ್ವಯ ಕೇಂದ್ರವೇ ಹೌದು. ಜಗತ್ತಿನ ದೊಡ್ಡ ಗಡಿಯಾರವನ್ನು ಹೊಂದಿರುವ ಗುಡ್ಡದ ಪರಿಸರದಲ್ಲಿ ಓಂಕಾರೇಶ್ವರ, ವನದುರ್ಗೆಯ ಮಡಿಲನ್ನು ಆವರಿಸಿಕೊಂಡಿರುವ ಹಿಂದು, ಕ್ರೈಸ್ತ, ಮುಸಲ್ಮಾನ, ಬೌದ್ಧ, ಜೈನ ಹೀಗೆ ಎಲ್ಲಾ ಧರ್ಮಗಳು ಇಲ್ಲಿ ಪ್ರತಿಷ್ಠಾಪಿತಗೊಂಡಿದೆ.

ಮೊದಲ ನೋಟದಲ್ಲೇ ಮನಸೂರೆಗೊಳ್ಳುವಂತಹ ಲಂಡನ್ನಿನ ಬಿಗ್‍ಬೆನ್ ಗೋಪುರ ಗಡಿಯಾರಕ್ಕಿಂತಲೂ ದೊಡ್ಡದಾದ ಬೆಂಗಳೂರಿನ ಅತಿ ದೊಡ್ಡದಾದ 40 ಅಡಿ ಎತ್ತರದ ವಿಶ್ವದ ಬೃಹತ್ ಗಡಿಯಾರವು ತನ್ನ ಭವ್ಯತೆಯಿಂದ, ಭಿನ್ನತೆಯಿಂದ ಇಡೀ ದೈವಿಕ ಪರಿಸರಕ್ಕೆ ತನ್ನದೇ ಆದ ಶೋಭೆ ತಂದಿದೆ.

ಹೆಚ್.ಎಮ್.ಟಿ.ಯವರ ಬೃಹತ್ ಗಡಿಯಾರವನ್ನು ಕಣ್ತುಂಬಿಕೊಂಡು ಸುಮಾರು 50 ಮೆಟ್ಟಿಲುಗಳನ್ನೇರಿ ನಿಂತಲ್ಲಿ ಎದುರಾಗುತ್ತದೆ ಸರ್ವಧರ್ಮಗಳ ಬೀಡು. ಬೃಹತ್ ಆಲದ ಮರದ ಸಮುಚ್ಚಯದಲ್ಲಿನ ಆವರಣದಲ್ಲಿ ಓಂಕಾರೇಶ್ವರ ಹಾಗೂ ವನದುರ್ಗೆಯರನ್ನು ಸುತ್ತುವರೆದಿರುವ ಬುದ್ಧರ ಗೌತಮಬುದ್ಧ, ಜೈನರ ಮಹಾವೀರ, ಕ್ರಿಸ್ತರ ಯೇಸು, ಮುಸಲ್ಮಾನರ ಮೊಹಮದ್ ಪೈಗಂಬರ್, ಹಿಂದೂ ಧರ್ಮದ ಪ್ರತಿಪಾದಕರಾದ ಜಗದ್ಗುರುಗಳಾದ ಶಂಕರಾಚಾರ್ಯ, ಮಧ್ವಾಚಾರ್ಯ ಹಾಗೂ ರಾಮಾನುಜಾಚಾರ್ಯರ, ಸಿಖ್ಖರ ಗುರುಗ್ರಂಥ ಹೀಗೆ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕವೆಂಬಂತೆ ಈ ಎಲ್ಲಾ ಪುಣ್ಯ ಪುರುಷರ ಸುಂದರ ಮೂರ್ತಿಗಳು ಆಸ್ತಿಕರನ್ನಲ್ಲದೆ ಅರಸಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ. ಪ್ರತಿಯೊಂದು ಮೂರ್ತಿಗಳನ್ನೂ ಒಂದೊಂದು ಪ್ರತ್ಯೇಕ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಗಿದೆ. ಏಕಕಾಲದಲ್ಲಿ ಜಗತ್ತಿನ ಎಲ್ಲಾ ಧರ್ಮಗಳ ಪ್ರತೀಕದಂತಿರುವ ಈ ಮಹನೀಯರನ್ನು ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಇನ್ನೂ ಇಲ್ಲಿಂದ ಕಾಣುವ ಪರಿಸರದ ರಮಣೀಯತೆ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ದ್ವಾದಶಲಿಂಗ ದೇಗುಲದ ದರ್ಶನ ಮಾಡಿಕೊಂಡು ಕೆಳಗೆ ಬಂದಲ್ಲಿ ಶ್ರೀ ಶಿವಪುರ ಸ್ವಾಮಿಗಳು ಸಮಾಧಿ ಸ್ಥಳದ ಎದುರಿಗೆ 1200 ಕೆ.ಜಿ. ಭಾರವಿರುವ ಪಂಚಲೋಹದ ಅತಿದೊಡ್ಡ ಗಂಟೆ ಗಮನ ಸೆಳೆಯುತ್ತದೆ. ಮುಂದೆ ಕಲ್ಲಿನಲ್ಲಿ ಕಡೆದ ಕೇವಲ ತನ್ನ ಕೊಕ್ಕಿನ ಬ್ಯಾಲೆನ್ಸ್‍ನಿಂದ ಹಾರುವ ರೀತಿಯಲ್ಲಿ ಕೆತ್ತಲ್ಪಟ್ಟಿರುವ ಗರುಡ, ಗರುಡನ ಎದುರಿನ ಶಿಲ್ಪಕಲಾಕೃತಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ.

 ಮೆಜೆಸ್ಟಿಕ್‍ನಿಂದ ಪದ್ಮನಾಭನಗರ, ಉತ್ತರಹಳ್ಳಿ, ಚನ್ನಸಂದ್ರ ಮಾರ್ಗದಲ್ಲಿ ಕೇಂಗೇರಿಗೆ ಹೋಗುವ ಮಾರ್ಗದಲ್ಲಿ ಕೇವಲ 20ಕಿ.ಮೀ. ದೂರದಲ್ಲಿದೆ ಈ ರಮಣೀಯ ಪರಿಸರ.

ವಿವರಗಳಿಗೆ: 8880296663, 9141920920, 9141930930

ಲೇಖನ: ಡಾ.ಗುರುರಾಜ ಪೋಶೆಟ್ಟಿಹಳ್ಳಿ

Tags: Dr. Gururaja PoshettihalliHindu TempleOmkara AshramaRameshwaraSpecial Articleಓಂಕಾರ ಆಶ್ರಮಡಾ.ಗುರುರಾಜ ಪೋಶೆಟ್ಟಿಹಳ್ಳಿದ್ವಾದಶ ಜ್ಯೋರ್ತಿಲಿಂಗ ದೇವಾಲಯಮತ್ಸ್ಯನಾರಾಯಣ ದೇವಸ್ಥಾನಮಹಾ ಶಿವರಾತ್ರಿರಾಮೇಶ್ವರ
Previous Post

ಪುಟ್ಟ ಮಕ್ಕಳು ನಕ್ಕರೂ ಚೆನ್ನ ಅತ್ತರೂ ಚೆನ್ನ ಎಂಬುದಕ್ಕೆ ಸಾಕ್ಷಿಯಾದ ವೇದಿಕೆ

Next Post

ಎಲ್ಲಿ ಹೋಯಿತು ಮಳೆ? ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಎಲ್ಲಿ ಹೋಯಿತು ಮಳೆ? ತಾಯಿಯ ಕತ್ತು ಕೊಯ್ದು ಮೊಲೆ ಚೀಪಿದರೆ ಹಾಲಾದರೂ ಹೇಗೆ ಬಂದೀತು?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025

“ಎಡಗೈಯೇ ಅಪಘಾತಕ್ಕೆ ಕಾರಣ” ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ: ನಿರ್ಮಾಪಕ ರಾಜೇಶ್ ಕೀಳಂಬಿ ಸಂತಸ

June 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!