ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ರಾಷ್ಟ್ರೀಯ ಭಾವೈಕ್ಯತೆಯ ಹಿನ್ನೆಲೆಯಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಪರಶುರಾಂಪುರದ ಪಿಎಸ್ಐ ಮಹೇಶ್ ಹೊಸಪೇಟ ತಿಳಿಸಿದರು.
ಗ್ರಾಮದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಘಟಕಗಳ ವತಿಯಿಂದ ಗುರುವಾರ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಗಿಲ್ ವಿಜಯೋತ್ಸವದ, ನಮ್ಮ ವೀರ ಯೋಧರ ಸವಿ ನೆನಪಿಗಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘಟನೆಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯ ಗುರಿ ಸಮಾಜದ ಒಳಿತಿಗಾಗಿ ಸಮಾಜೋಪಯೋಗಿ ಕಾರ್ಯಗಳನ್ನು ಕೈಗೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದಾಗಿದೆ ಎಂದರು.
ಗ್ರಾಮದ ಕೆಲ ಸಂಘಟನೆಗಳ ಪದಾಧಿಕಾರಿಗಳು ನಮ್ಮ ದೇಶದ ಯೋಧರ ಸವಿನೆನಪಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯವನ್ನು ಮಾಡುತ್ತಿರುವುದು ಉತ್ತಮವಾದ ಕಾರ್ಯ ಎಂದು ಶ್ಲಾಘಿಸಿದರು.
ತಾಲೂಕು ಭಜರಂಗದಳದ ಸಹ ಸಂಚಾಲಕ ಮರಿಸ್ವಾಮಿ ಮಾತನಾಡಿ, ನಮ್ಮ ಸಂಘಟನೆಯ ಪದಾಧಿಕಾರಿಗಳು ಸಮಾನ ಮನಸ್ಕರು ಒಕ್ಕೊರಲಿನಿಂದ ಗುರುವಾರ ಕಾರ್ಗಿಲ್ ವಿಜಯೋತ್ಸವದ, ನಮ್ಮ ವೀರ ಯೋಧರ ಸವಿ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿ ನಮ್ಮ ದೇಶದ ಪರಂಪರೆಯಲ್ಲಿ ಗಿಡ-ಮರಗಳ ಮಹತ್ವವನ್ನು ಜನರಿಗೆ ತಿಳಿಸಿ ದೇಶದ ಯೋಧರಿಗಾಗಿ ನಾವು ಇಂತಹ ಸಮಾಜೋಪಯೋಗಿ ಕಾರ್ಯಗಳನ್ನು ಗ್ರಾಮದಲ್ಲಿ ಕೈಗೊಳ್ಳಬೇಕು ಎಂದರು.
ಇದೇ ವೇಳೆ ಗ್ರಾಮದ ಲಕ್ಷ್ಮೀ ಚನ್ನಕೇಶವ ಸ್ವಾಮಿ, ಚೌಡೇಶ್ವರಿ ದೇವಿ, ಯರಗುಂಟೇಶ್ವರ ಸ್ವಾಮಿ ದೇವಸ್ಥಾನಗಳು, ಸರ್ಕಾರಿ ಶಾಲಾ ಆವರಣ, ಬಸ್ ನಿಲ್ದಾಣ ಮತ್ತಿತರೆ ಸಾರ್ವಜನಿಕ ಸ್ಥಳಗಳಲ್ಲಿ ನೆರಳು, ಹಣ್ಣನ್ನು ನೀಡುವ 101 ಸಸಿಗಳನ್ನು ನೆಡಲಾಯಿತು.
ಸಂದರ್ಭದಲ್ಲಿ ಗ್ರಾಮ ಘಟಕದ ಅಧ್ಯಕ್ಷ ನವೀನ್, ಕಾರ್ಯದರ್ಶಿ ಆದರ್ಶ, ಕಾರ್ಯಕರ್ತರಾದ ಮಂಜುನಾಥ, ಮನೋಜ್, ಪುರುಷೋತ್ತಮ, ಚನ್ನಕೇಶವ, ರಾಕೇಶ್, ಮಧು, ಸುರೇಶ, ಅಭಿ, ಚಂದ್ರು, ಗ್ರಾಮ ಘಟಕಗಳ ಪದಾಧಿಕಾರಿಗಳು ಗ್ರಾಮಸ್ಥರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post