No Result
View All Result
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!
English Articles

India Dominates World Yogasana Championship 2026, Wins 5 Golds on Opening Day

by ಕಲ್ಪ ನ್ಯೂಸ್
June 6, 2026
0

Kalpa Media House  |  Ahmedabad  | Host nation India made a dominant start at the inaugural World Yogasana Championship 2026,...

Read moreDetails
INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

INDIA OPENS IMAX ADVANCE BOOKINGS FOR CHRISTOPHER NOLAN’S NEW MYTHIC ACTION EPIC, The Odyssey FROM JUNE 8

June 5, 2026
From the Village Tracks to International Triumphs: The Inspiring Saga of Geetha A. Shetty

From the Village Tracks to International Triumphs: The Inspiring Saga of Geetha A. Shetty

June 5, 2026
ಭದ್ರಾವತಿ | ಹೃದಯಾಘಾತದಿಂದ 23 ವರ್ಷದ ಯುವತಿ ಸಾವು! ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Young Woman Dies of Cardiac Arrest; Parents Give New Life Through Organ Donation

June 3, 2026
ಗುಜರಾತ್’ನಲ್ಲಿ ಭೀಕರ ದುರಂತ | ಮಹಾರಾಷ್ಟ್ರ ಸಾರಿಗೆಯ 2 ಬಸ್’ಗಳ ಮುಖಾಮುಖಿ ಡಿಕ್ಕಿ | 7 ಮಂದಿ ಸಜೀವ ದಹನ

Tragic Accident in Gujarat | Head-on Collision Between Two MSRTC Buses | 7 Burnt Alive

June 3, 2026
  • Advertise With Us
  • Grievances
  • About Us
  • Contact Us
Saturday, June 6, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲಾವಣೆಗೆ ಆಗ್ರಹ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 30, 2019
in ಶಿವಮೊಗ್ಗ
0
ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲು ಸಮಯ ಬದಲಾವಣೆಗೆ ಆಗ್ರಹ
Share on FacebookShare on TwitterShare on WhatsApp

ಶಿವಮೊಗ್ಗ: ಫೆ.3ರಿಂದ ಆರಂಭವಾಗಲಿರುವ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ರೈಲಿನ ಬದಲಾವಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಗ್ರಹ ಕೇಳಿಬಂದಿದೆ.

ಸಂಸದ ಬಿ.ವೈ. ರಾಘವೇಂದ್ರ ಈಗಾಗಲೇ ಘೋಷಿಸಿರುವಂತೆ, ಫೆ.3ರಿಂದ ನೂತನ ರೈಲು ಸಂಚಾರ ಆರಂಭವಾಗಲಿದೆ. ನಿಗದಿಯಂತೆ, ಶಿವಮೊಗ್ಗದಿಂದ ಬೆಳಗ್ಗೆ 5.30ಕ್ಕೆ ಹೊರಡುವ ರೈಲು 10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 10 ಗಂಟೆಗೆ ಶಿವಮೊಗ್ಗಕ್ಕೆ ತಲುಪಲಿದೆ.

ಆದರೆ, ಈಗ ನಿಗದಿಯಾಗಿರುವ ಸಂಚಾರ ಸಮಯ ಬದಲಾವಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಗ್ರಹ ಕೇಳಿಬಂದಿದೆ.

ಬೆಳಗ್ಗೆ ಶಿವಮೊಗ್ಗದಿಂದ ಬೆಂಗಳೂರು ತಲುಪಲು 4 ಗಂಟೆಗೆ ಪ್ಯಾಸೆಂಜರ್ ರೈಲು, 6.40ಕ್ಕೆ ಇಂಟರ್ ಸಿಟಿ ನೇರ ರೈಲುಗಳಿವೆ. ಹಾಗೆಯೇ, 7.50ಕ್ಕೆ ಹೊರಟು ಮೈಸೂರು ಪ್ಯಾಸೆಂಜರ್ ಮೂಲಕ ಬೀರೂರು ತಲುಪಿದರೆ, 10.50ಕ್ಕೆ ಹುಬ್ಬಳ್ಳಿಯಿಂದ ಬೆಂಗಳೂರು ತಲುಪುವ ಇಂಟರ್ ಸಿಟಿ ಎಕ್ಸ್’ಪ್ರೆಸ್ ರೈಲು ಸಂಪರ್ಕ ದೊರೆಯುತ್ತದೆ. ಅದಲ್ಲದೆ, ವಾರಕ್ಕೆ ಒಮ್ಮೆ, ಎರಡು ಬಾರಿ, ಮೂರು ಬಾರಿ ಸಂಚರಿಸುವ ವಿಶೇಷ ರೈಲುಗಳ ಸಂಪರ್ಕವೂ ಸಹ ದೊರೆಯುತ್ತದೆ.

ಆದರೆ, ಬೆಂಗಳೂರಿನಿಂದ ಶಿವಮೊಗ್ಗ ನೇರವಾಗಿ ತಲುಪಲು, ಬೆಳಗ್ಗೆ 6.30ಕ್ಕೆ ಬೆಂಗಳೂರು ಬಿಡುವ ಪ್ಯಾಸೆಂಜರ್ ರೈಲು ಮಾತ್ರ ಇದೆ. ಇದರ ಹೊರತಾಗಿ ವಾರದಲ್ಲಿ ಮೂರು ದಿನ ಯಶವಂತಪುರದಿಂದ ಶಿವಮೊಗ್ಗಕ್ಕೆ ಬೆಳಗ್ಗೆ 9 ಗಂಟೆಗೆ ವಿಶೇಷ ರೈಲು ಸಂಚಾರ ಮಾಡುತ್ತದೆ. ಇದರ ಹೊರತಾಗಿ ಮುಂಜಾನೆಯೆ ಬೆಂಗಳೂರಿನಿಂದ ಹೊರಟು 10.30ರ ಒಳಗೆ ಶಿವಮೊಗ್ಗ ತಲುಪುವ ಯಾವುದೇ ಎಕ್ಸ್’ಪ್ರೆಸ್ ರೈಲುಗಳಿಲ್ಲ. ಹೀಗಾಗಿ, ನೂತನ ಜನಶತಾಬ್ದಿ ರೈಲಿನ ಸಂಚಾರವನ್ನು ಬದಲಾವನೆ ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿಬಂದಿದೆ.

ಅದೇ ರೀತಿ, ಈಗ ನಿಗದಿಯಾಗಿರುವ ಸಮಯವೇ ಉತ್ತಮವಾಗಿದ್ದು, ಇದು ಬೆಂಗಳೂರಿಗೆ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ಸಹಕಾರಿಯಾಗಿದೆ ಎಂಬ ಅಭಿಪ್ರಾಯವೂ ಸಹ ಕೇಳಿಬಂದಿದೆ.

ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿರುವ ಸಾರ್ವಜನಿಕರ ಪರ-ವಿರೋಧ ಅಭಿಪ್ರಾಯಗಳು ಹೀಗಿವೆ:

ಸದ್ಯ ಈ ರೈಲು ಸೌಲಭ್ಯ ಬಂದಿರುವುದು ಅದೃಷ್ಟವೇ ಸರಿ. ಸಮಯ ಈಗ ಸರಿಯಾಗೇ ಇದೆ. ಚತುಷ್ಪಥ ಹಳಿ ವ್ಯವಸ್ಥೆ ಆದನಂತರ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆ ಅವಧಿಯ ಪ್ರಯಾಣ ಸಾಕಾಗುತ್ತದೆ. ಆ ವೇಳೆಯಲ್ಲಿ ಹೊರಡುವ ಸೇರುವ ಸಮಯ ಮಾರ್ಪಾಡು ಮಾಡಬಹುದಾಗಿದೆ. ತಮಗಿರುವ ಅಲ್ಪ ಅವಧಿಯಲ್ಲೇ ಸಂಸದರು ಸಾರ್ವಜನಿಕ ಉಪಯೋಗಿ ಕೆಲಸ ಮಾಡಿದ್ದಾರೆ. ಉದ್ಯಮಿಗಳಿಗೆ ತುಂಬ ನೆರವಾಗಿದೆ.
– ಕೆ.ಎನ್. ಗೋಪಿನಾಥ್, ಹೋಟೆಲ್ ಉದ್ಯಮಿ, ಶಿವಮೊಗ್ಗ

ಈಗಿರುವ ವೇಳೆ ಸರಿ. ಆದರೆ ನಿತ್ಯವೂ ನಮಗೆ ಈ ರೈಲು ಓಡಬೇಕು. ಬಹಳಷ್ಟು ಮಂದಿಗೆ ಬೆಂಗಳೂರಿನಲ್ಲಿ ಕೆಲಸವಿರುತ್ತದೆ. ನೂತನ ರೈಲಿಗೆ ವ್ಯವಸ್ಥೆಗೊಳಿಸಿದ ಸಂಸದರಿಗೆ ಅಭಿನಂದನೆಗಳು.
-ಕೆ.ಜಿ. ಮಂಜುನಾಥ ಶರ್ಮ,
ನಿವೃತ್ತ ತಹಶಿಲ್ದಾರ್, ಶಿವಮೊಗ್ಗ

ಶಿವಮೊಗ್ಗದಿಂದ ಬೆಂಗಳೂರು ತಲುಪಲು ಬೆಳಗಿನ ಸಮಯದಲ್ಲಿ ಎಕ್ಸ್’ಪ್ರೆಸ್ ರೈಲು ಹಾಗೂ ಪ್ಯಾಸೆಂಜರ್ ರೈಲುಗಳಿವೆ. ಆದರೆ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬೆಳಗ್ಗೆ ಒಂದು ನೇರ ಪ್ಯಾಸೆಂಜರ್ ರೈಲು ಬಿಟ್ಟರೆ ಇನ್ನಾವುದೇ ಎಕ್ಸ್’ಪ್ರೆಸ್ ರೈಲುಗಳಿಲ್ಲ. ಹೀಗಾಗಿ, ಈಗ ಆರಂಭಿಸುವ ಜನಶತಾಬ್ದಿ ರೈಲಿನ ಸಮಯವನ್ನು ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಹೊರಟು 10 ಗಂಟೆಗೆ ಶಿವಮೊಗ್ಗ ತಲುಪುವಂತೆ ಬದಲಾವಣೆ ಮಾಡಿದರೆ ಸಾರ್ವಜನಿಕರಿಗೆ ಉಪಕಾರಿಯಾಗುತ್ತದೆ.
-ಎಚ್.ಎಸ್. ಮನೋರಮಾ, ಶಿಕ್ಷಕಿ, ಭದ್ರಾವತಿ

ಶಿವಮೊಗ್ಗದಿಂದ ಬೆಂಗಳೂರಿಗೆ ಜನಶತಾಬ್ದಿ ರೈಲು ಸಂಚಾರ ಆರಂಭಿಸಿರುವುದು ಟ್ರಾವೆಲ್ಸ್’ಗಳಿಗೆ ಹೊಡೆತ ಬಿದ್ದತಾಂಗುತ್ತದೆ. ಆದರೂ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ನಮ್ಮ ಜಿಲ್ಲೆಗೆ ಜನಶತಾಬ್ದಿ ರೈಲು ನೀಡಿರುವುದು ಸಂತಸದ ವಿಚಾರ. ಆದರೆ, ರೈಲು ಸಂಚಾರ ಸಮಯ ಮಲೆನಾಡಿಗರಿಗೆ ಅಷ್ಟು ಪ್ರಯೋಜನಕಾರಿಯಲ್ಲ. ಇದರ ಬದಲಾವಣೆಗೆ ಅಗತ್ಯ.
-ಎಚ್.ವಿ. ಗೋವಿಂದರಾಜು,
ಬಾಲಾಜಿ ಟ್ರಾವೆಲ್ಸ್, ಭದ್ರಾವತಿ

ರೈಲು ವ್ಯವಸ್ಥೆ ಸ್ವಾಗತಾರ್ಹ. ಆದರೆ ನಮ್ಮ ಬೇಡಿಕೆ ನಿತ್ಯವೂ ಇರಲಿ. ದಿನ ಬಿಟ್ಟು ದಿನ ಬೇಡ. ನಿತ್ಯವೂ ರೈಲು ಓಡಿಸಬೇಕು. ಉದ್ಯಮಿಗಳಿಗೆ ತುಂಬ ಸಹಕಾರಿಯಾಗಲು ದಿನವೂ ಈ ರೈಲು ಬೇಕು ಎಂದು ಒತ್ತಾಯ ಮಾಡುತ್ತೇವೆ.
-ಡಿ.ಎಂ. ಶಂಕರಪ್ಪ
  ಮಾಜಿ ಅಧ್ಯಕ್ಷರು, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘ

ಬೆಂಗಳೂರು-ಶಿವಮೊಗ್ಗ ನಡುವೆ ಜನಶತಾಬ್ದಿ ರೈಲು ಸಂಚಾರ ಆರಂಭಿಸುತ್ತಿರುವುದು ಸಂತಸದ ವಿಚಾರ. ಆದರೆ, ಪ್ರಯಾಣ ದರವನ್ನು ಕೊಂಚ ಕಡಿಮೆ ಮಾಡುವ ಜೊತೆಯಲ್ಲಿ, ಬೆಳಗಿನ ವೇಳೆ ಬೆಂಗಳೂರಿನಿಂದ ಹೊರಟು ಶಿವಮೊಗ್ಗ ತಲುಪುವಂತೆ ಸಮಯ ನಿಗದಿ ಮಾಡಿದರೆ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ.
-ಡಾ. ಸುದರ್ಶನ್ ಕೆ. ಆಚಾರ್,
ಆರ್ಯುವೇದ ತಜ್ಞ, ಭದ್ರಾವತಿ

ಪ್ರಸ್ತುತ ಬೆಳಗ್ಗೆ ಬೆಂಗಳೂರಿನಿಂದ ಹೊರಟು ಹುಬ್ಬಳ್ಳಿ ತಲುಪುವ ಜನಶತಾಬ್ದಿ ರೈಲಿಗೆ ಶಿವಮೊಗ್ಗದ 10 ಬೋಗಿಗಳನ್ನು ಜೋಡಿಸಿ, ಬೀರೂರಿನಿಂದ ಅದನ್ನು ಪ್ರತ್ಯೇಕಿಸಿ, ಪ್ರತ್ಯೇಕ ಎಂಜಿನ್ ಮೂಲಕ ಶಿವಮೊಗಕ್ಕೆ ಜನಶತಾಬ್ದಿ ರೈಲನ್ನು ಓಡಿಸಬಹುದು. ಆಗ, ಮುಂಜಾನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಆದಂತಾಗುತ್ತದೆ ಅಲ್ಲದೇ, ಸಮಯದ ಹೊಂದಾಣಿಕೆಯೂ ಸಹ ಇಲಾಖೆಗೆ ಸಮಸ್ಯೆಯಾಗುವುದಿಲ್ಲ. ನಂತರ ಜನದಟ್ಟಣೆ ಹಾಗೂ ಸಮಯ ಹೊಂದಾಣಿಕೆ ನೋಡಿಕೊಂಡು ಪ್ರತ್ಯೇಕವಾಗಿ ಓಡಿಸುವ ವಿಚಾರ ಮಾಡಬಹುದು.
-ಎಸ್.ಎನ್. ರಂಗನಾಥ್,
ಭದ್ರಾವತಿ

ವಿಶೇಷ ವರದಿ: ಡಾ. ಸುಧೀಂದ್ರ, ಕಾರ್ಯನಿರ್ವಾಹಕ ಸಂಪಾದಕರು, ಕಲ್ಪ ನ್ಯೂಸ್

Tags: BENGALURUBhadravathiIndian Railwayjan shatabdi trainPublic OpinionShivamoggaಜನಶತಾಬ್ದಿ ರೈಲುಶಿವಮೊಗ್ಗ
Share197Tweet123Send
Previous Post

ಶಾಕಿಂಗ್! ಪಾಕ್ ಉಗ್ರರಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಅಮೆರಿಕಾ ಮಾಹಿತಿ

Next Post

ಶಿವಮೊಗ್ಗ: ಕುಂಸಿ ರೈಲು ನಿಲ್ದಾಣನಲ್ಲಿ ವಿವಿಧ ಕಾಮಗಾರಿಗೆ ಅಡಿಗಲ್ಲು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶಿವಮೊಗ್ಗ: ಕುಂಸಿ ರೈಲು ನಿಲ್ದಾಣನಲ್ಲಿ ವಿವಿಧ ಕಾಮಗಾರಿಗೆ ಅಡಿಗಲ್ಲು

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ | ಕಾರಣವೇನು?

ಬಂಗಾರದ ನಾಣ್ಯ ಮೋಸ: ಅರ್ಧ ಕೆಜಿ ಬಂಗಾರ ಹೆಸರಿನಲ್ಲಿ ₹10 ಲಕ್ಷ ದೋಚಿದ ಗ್ಯಾಂಗ್!

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

India Dominates World Yogasana Championship 2026, Wins 5 Golds on Opening Day

June 6, 2026
ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ 2026 | ಮೊದಲ ದಿನವೇ ಐದು ಚಿನ್ನದ ಪದಕ ಗೆದ್ದ ಭಾರತ!

June 6, 2026
ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?

June 6, 2026
ವೈಮಾನಿಕ ದಾಳಿಯಾದರೆ ತುರ್ತು ಸೇವೆ, ರಕ್ಷಣೆ ಹೇಗಿರುತ್ತೆ? ಶಿವಮೊಗ್ಗದಲ್ಲಿ ನಡೆದ ಅಣುಕು ಪ್ರದರ್ಶನ ಹೇಗಿತ್ತು?

ವೈಮಾನಿಕ ದಾಳಿಯಾದರೆ ತುರ್ತು ಸೇವೆ, ರಕ್ಷಣೆ ಹೇಗಿರುತ್ತೆ? ಶಿವಮೊಗ್ಗದಲ್ಲಿ ನಡೆದ ಅಣುಕು ಪ್ರದರ್ಶನ ಹೇಗಿತ್ತು?

June 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL