ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಎಪ್ರಿಲ್ 5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ನಿಮ್ಮ ಮನೆಗಳ ವಿದ್ಯುತ್ ದೀಪ ಆರಿಸಿ, ಜ್ಯೋತಿ ಪ್ರಜ್ವಲಿಸಿ ಎಂದು ಪ್ರಧಾನಿಯವರು ಕರೆ ನೀಡಿರುವ ಬೆನ್ನಲ್ಲೇ, ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಅನಪೇಕ್ಷಿತ ಸಂದೇಶಗಳನ್ನು ನಂಬಬೇಡಿ ಎಂದು ಪ್ರೆಸ್ ಇನ್ವರ್ಮೇಷನ್ ಬ್ಯೂರೋ ಹೇಳಿದೆ.
ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿರುವ ಪಿಐಬಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಚಾರದ ಪೋಸ್ಟ್’ಗಳ ನಡೆಸಿದ್ದು, ಇವುಗಳನ್ನು ವದಂತಿ ಅಥವಾ ಅವೈಜ್ಞಾನಿಕ ತಾರ್ಕಿಕತೆ ಎಂದು ಕರೆದಿದ್ದು, ಇವನ್ನು ನಂಬದಂತೆ ಹೇಳಿದೆ.
ಪಿಐಬಿ ಈ ಕುರಿತಂತೆ ಟ್ವೀಟ್ ಮಾಡಿದ್ದು, ವಾಟ್ಸಾಪ್ ಗುಂಪುಗಳು ಮತ್ತು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಪ್ರಸಾರವಾಗುವ ಇಂತಹ ಸಂದೇಶಗಳ ಮೂರು ಸ್ಕ್ರೀನ್ಶಾಟ್ಗಳೊಂದಿಗೆ ಪ್ರಕಟಿಸಿದೆ.
Don’t fall for the rumours/unscientific reasoning on the appeal for lightning Diya/candles/flash/torch on 5th April at 9pm.
This initiative is to show solidarity and confidence in our collective fight against #Covid19
Please maintain #SocialDistancing to keep #Covid19 at bay! pic.twitter.com/ZrR9PdhJjv
— PIB Fact Check (@PIBFactCheck) April 3, 2020
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಿನ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಕ್ಷಿಪ್ತ ವಿಡಿಯೋ ಸಂದೇಶವನ್ನು ನೀಡಿ, ಏಪ್ರಿಲ್ 9 ರಂದು 9 ನಿಮಿಷಗಳ ಕಾಲ ಮೇಣದಬತ್ತಿಗಳು ಮತ್ತು ಮೊಬೈಲ್ ಬ್ಯಾಟರಿ ದೀಪಗಳನ್ನು ಬೆಳಗಿಸುವಂತೆ ದೇಶವಾಸಿಗಳನ್ನು ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ ಪಿಐಬಿಯಿಂದ ಮನವಿ ಬಂದಿದೆ.
ಪ್ರಧಾನಿಯವರು ಸಂದೇಶವನ್ನು ತಿರುಚಿ, ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಈ ಪೋಸ್ಟ್’ಗಳನ್ನು ಅದನ್ನು ಹೇಳುತ್ತಿವೆ. ಇಂತಹವುಗಳನ್ನು ನಂಬಬೇಡಿ ಎಂದಿದೆ.
Get in Touch With Us info@kalpa.news Whatsapp: 9481252093
Discussion about this post