No Result
View All Result
Surprise Inspection for Enhanced Passenger Safety
English Articles

Surprise Inspection for Enhanced Passenger Safety

by ಕಲ್ಪ ನ್ಯೂಸ್
June 27, 2026
0

Kalpa Media House  |  Mysuru | As per the instructions of the Railway Board, the Divisional Railway Manager (DRM), Mysuru...

Read moreDetails
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
  • Advertise With Us
  • Grievances
  • About Us
  • Contact Us
Saturday, June 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಪುನೀತ್ ಜಿ. ಕೂಡ್ಲೂರು

ರಾಜಕಾರಣಕ್ಕೆ ಅವಶ್ಯ ಬೇಕಿದೆ ಈ ನಿಯಮ ಹಾಗೂ ವ್ಯಾಲಿಡಿಟಿ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 8, 2018
in ಪುನೀತ್ ಜಿ. ಕೂಡ್ಲೂರು
0
Share on FacebookShare on TwitterShare on WhatsApp

ಕರ್ನಾಟಕದ ರಾಜಕಾರಣದ ನಾಟಕಗಳನ್ನು ನೋಡಿದರೆ ರಾಜಕೀಯದ ಲಾಭಿ, ದೊಂಬರಾಟ, ಅಧಿಕಾರದ ದಾಹ ಇದೆಲ್ಲವೂ ಎದ್ದು ಕಾಣುತ್ತಿದ್ದು ಜನರಿಗೆ ರಾಜಕಾರಣಿಗಳು ಮತ್ತು ರಾಜಕೀಯವೇ ಅಸಹ್ಯ ಮೂಡಿಸುವಷ್ಟು ಗಬ್ಬೆದ್ದಿದೆ ರಾಜಕಾರಣ.

ಗೆದ್ದು ಬೀಗಲಾಗದ ಭಾರತೀಯ ಜನತಾ ಪಕ್ಷ ಪ್ರತಿಪಕ್ಷದಲ್ಲಿ ಕೂತರೆ ಸೋತು ಸುಣ್ಣವಾಗದ ಜನತಾದಳ ಕೈ ಹಿಡಿದು ಅಧಿಕಾರ ಅನುಭವಿಸುತ್ತಿದೆ. ಕುದುರೆ ವ್ಯಾಪಾರಕ್ಕೆ ಹೆದರಿ ರೆಸಾರ್ಟ್‌ಗಳತ್ತ ಮುಖಮಾಡಿ ನಿಂತವರು ಇಂದು ಮಂತ್ರಿ ಪದವಿಗಾಗಿ ಮತ್ತೊಂದು ರೆಸಾರ್ಟ್ ಹತ್ತಿದರೆ ಅನುಮಾನವಿಲ್ಲ!

ಪ್ರತಿಭಾರಿ ರಾಜಕೀಯದ ದೊಂಬರಾಟ ನಡೆದಾಗಲು ಸಾಮಾನ್ಯ ಜನರಾದ ನಾವು ಇದಕ್ಕೆಲ್ಲ ಒಂದು ಅಂತ್ಯ ಬೇಕು ನಮಗೆ ಉತ್ತಮ ಆಡಳಿತ ಬೇಕು ಅಷ್ಟೇ. ಇವರೆಲ್ಲ ಯಾಕೆ ಹೀಗೆ ಬೀದಿ ನಾಟಕವಾಡುತ್ತಾರೋ ಗೊತ್ತಿಲ್ಲ ಅನ್ನುವುದು ಸಹಜ. ಆದರೆ ಅದು ನಡೆಯುವುದಿಲ್ಲ ಎಂದು ತಿಳಿದು ಸುಮ್ಮನಾಗುತ್ತೇವೆ, ಮುಂದೆಯೂ ಸುಮ್ಮನಾಗುತ್ತೇವೆ. ಆದರೆ ಈ ವ್ಯವಸ್ಥೆ ಬದಲಾಗುವುದಿಲ್ಲ. ರಾಜತ್ವದಿಂದ ಪ್ರಜಾಪ್ರಭುತ್ವಕ್ಕೆ ಹೊರಳಿದ ನಾವು ದೇಶದಲ್ಲಿ ಮತ್ತು ರಾಜ್ಯದಲ್ಲಿ ಅದೇ ವಂಶವಾಹಿನಿಯ ಅಧಿಕಾರಕ್ಕೆ ಜೋತು ಬಿದ್ದಿದ್ದೀವಿ.

ಕುಟುಂಬ ರಾಜಕಾರಣ ಮೂರು ಪ್ರಮುಖ ಪಕ್ಷಗಳಲ್ಲಿಯೂ ಇದೆ. ಜಾತ್ಯತೀತ ಜನತಾದಳದಲ್ಲಂತೂ ಇಡೀ ಕುಟುಂಬವೇ ಪಕ್ಷ, ಪಕ್ಷವೇ ಕುಟುಂಬ! ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಾಗಲಿ, ರಾಜ್ಯ ಮಟ್ಟದಲ್ಲಾಗಲಿ ವ್ಯತ್ಯಾಸವೇ ಇಲ್ಲ. ಒಂದು ಕುಟುಂಬಕ್ಕೆ ಅಧಿಕಾರ, ಮಕ್ಕಳಿಗೆ ಚುನಾವಣಾ ಅಭ್ಯರ್ಥಿ ಟಿಕೇಟ್, ಭಾರತೀಯ ಜನತಾ ಪಕ್ಷವೂ ಇದಕ್ಕೆ ಹೊರತಾಗಿಲ್ಲ ರಾಜ್ಯಾಧ್ಯಕ್ಷರು ಸಾಂಸದರಾದರೆ ಮಗ ಶಾಸಕ, ಮಗ ಸಾಂಸದರಾದರೆ ಅಪ್ಪ ಶಾಸಕ. ಇದು ಕುಟುಂಬ ರಾಜಕಾರಣವಾದರೆ ಮತ್ತೊಂದು ಅದೆಷ್ಟೆ ವರ್ಷವಾದರು ಆಯಾಯ ಕ್ಷೇತ್ರಗಳಲ್ಲಿ ಅವರೇ ಶಾಸಕರು ಅವರೇ ಮಂತ್ರಿಗಳು ಅವರದೇ ಪಾರುಪತ್ಯ.
ಇದಕ್ಕೆಲ್ಲ ಒಂದು ಕಡಿವಾಣ ಹಾಕಬೇಕಾದರೆ ಚುನಾವಣಾ ರಾಜಕಾರಣ ಮತ್ತು ಸರ್ಕಾರದ ರಚನೆಯಲ್ಲಿ ಕೆಲವೊಂದು ನಿಯಮ ಜಾರಿಗೆ ಬರಬೇಕು. ಈ ಕೆಳಗಿನ ನಿಯಮಗಳನ್ನು ಜಾರಿಗೆ ತಂದಲ್ಲಿ ರಾಜಕಾರಣದಲ್ಲಿ ಒಂದಷ್ಟು ಬದಲಾವಣೆ ತರಬಹುದು.

ಈ ಕೆಳಗಿನ ನಿಯಮಗಳನ್ನು ಜಾರಿಗೆ ತರಬಹುದು:

  • ಶಾಸಕ ಅಥವಾ ಸಾಂಸದನಾಗಲು ಕನಿಷ್ಠ ಒಂದು ಪದವಿಯ ವಿದ್ಯಾರ್ಹತೆ
  • ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಕೇವಲ ಮೂರು ಬಾರಿ ಮಾತ್ರ ಚುನಾವಣಾ ರಾಜಕಾರಣದಲ್ಲಿ ಸಕ್ರಿಯವಾಗಿರಬಹುದು, ಗರಿಷ್ಠ 3 ಬಾರಿ ಮಾತ್ರ ಚುನಾವಣೆಗಳಲ್ಲಿ ಸ್ಪರ್ಧಿಸಬಹುದು
  • ಯಾವುದೇ ಚುನಾವಣೆಯಾಗಿರಲಿ ಗ್ರಾಮಪಂಚಾಯ್ತಿಯಿಂದ ಹಿಡಿದು ಲೋಕಸಭೆಯ ತನಕ ಕೇವಲ 3 ಬಾರಿ ಮಾತ್ರ ಅವರಿಗೆ ಅವಕಾಶ
  • ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಮಂತ್ರಿಯಾಗಬಹುದು
  • ಮುಖ್ಯಮಂತ್ರಿ, ಪ್ರಧಾನಮಂತ್ರಿ ಹೀಗೆ ಒಬ್ಬ ವ್ಯಕ್ತಿ ಗರಿಷ್ಠ ಎರಡು ಬಾರಿ ಮಾತ್ರ ಅಧಿಕಾರ ಹೊಂದಬಹುದು
  • ಕುಟುಂಬದಿಂದ ಗರಿಷ್ಠ ಒಬ್ಬರು ಮಾತ್ರ ಚುನಾವಣಾ ರಾಜಕಾರಣದಲ್ಲಿರಬೇಕು
  • ಸದನಗಳಿಗೆ ಶೇ.50ರಷ್ಟು ಹಾಜರಾಗದ ಶಾಸಕರ ಶಾಸಕತ್ವ ಆ ಕ್ಷಣದಲ್ಲೇ ಅನುರ್ಜಿತಗೊಳ್ಳಬೇಕು
  • ಚುನಾವಣಾ ರಾಜಕಾರಣ ಅಥವಾ ಶಾಸಕ ಮಂತ್ರಿಗಳಾದವರ ಕುಟುಂಬದ ವರ್ಗದವರಿಗೆ ಹತ್ತು ವರ್ಷಗಳ ತನಕ ಯಾವುದೇ ಚುನಾವಣೆಗಳಲ್ಲಿ ನಿಲ್ಲುವ ಹಾಗಿಲ್ಲ
  • ಚುನಾವಣಾ ರಾಜಕಾರಣದ ಗರಿಷ್ಠ ವಯೋಮಿತಿ 70 ವರ್ಷವಾಗಬೇಕು
  • ಎರಡು ಬಾರಿ ಶಾಸಕರಾದವರು ಮೂರನೆಯ ಬಾರಿ ಶಾಸಕರಾದರೆ ಅಥವಾ ಸಾಂಸದರಾದವರಿಗೆ ಮಂತ್ರಿಸ್ಥಾನಕ್ಕೆ ಮೊದಲ ಆದ್ಯತೆ ನೀಡಬೇಕು
  • ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಮಂತ್ರಿಸ್ಥಾನ ಮತ್ತು ಕೇಂದ್ರದಲ್ಲಿ ರಾಜ್ಯಕ್ಕೊಂದು ಮಂತ್ರಿಸ್ಥಾನ ಖಡ್ಡಾಯ ಮಾಡಬೇಕು

 

ಕನಿಷ್ಠ ಮಟ್ಟದಲ್ಲಿ ಈ ಮೇಲಿನ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ಚರ್ಚಿಸಿದರೆ ರಾಜಕೀಯದಲ್ಲಿ ನಿಜವಾಗಲು ಬದಲಾವಣೆ ತರಬಹುದು. ಆದರೆ ಈ ಬದಲಾವಣೆಗಳನ್ನು ತರಲು ಯಾವ ಸರ್ಕಾರಗಳು ಮುಂದೆ ಬರುವುದಿಲ್ಲ. ಈ ತರಹದ ಕಠಿಣ ನಿಯಮಗಳು ಜಾರಿಯಾಗುವ ತನಕಲೂ ರಾಜಕೀಯದಲ್ಲಿ ಈ ರೆಸಾರ್ಟ್ ರಾಜಕಾರಣ, ಗುಂಪುಗಾರಿಕೆ, ಪಕ್ಷಾಂತರ ಇದೆಲ್ಲವೂ ಸಹಜ.

ಇದಕ್ಕೆ ಸಂಬಂಧಿಸಿದಂತೆ ಸರ್ಕಾರವೋ ಅಥವಾ ಸರ್ವೋಚ್ಛ ನ್ಯಾಯಲಯವೋ ತೀರ್ಮಾನ ಮಾಡಿದರೆ ಒಳಿತು ಇಲ್ಲದಿದ್ದರೆ ರಾಜಕಾರಣದಲ್ಲಿ ಯುವಕರಿಗೆ, ಉತ್ಸಾಹಿಗಳಿಗೆ, ಹೊಸಬರಿಗೆ ಅವಕಾಶವೇ ಇರದೆ ಬರೀ ಅವರವರೆ ದೇಶ/ರಾಜ್ಯ ಆಳುತ್ತಿರುತ್ತಾರೆ ಅನ್ನುವುದು ಒಂದಾದರೆ ಮತ್ತೊಂದು ಗುಜರಾತ್ ಮತ್ತು ತಮಿಳುನಾಡಿನಲ್ಲಿ ಏಕವ್ಯಕ್ತಿಗಳ ಆಡಳಿತ ಇದ್ದು, ಅವರ ನಿರ್ಗಮನದ ನಂತರ ಅಲ್ಲಿ ಕ್ರಿಯೇಟ್ ಆದ ಪೊಲಿಟಿಕಲ್ ವ್ಯಾಕ್ಯುಮ್ ಅನ್ನು ತುಂಬಲು ಈಗಲು ಆ ರಾಜ್ಯಗಳು ಹೆಣಗಾಡುತ್ತಿವೆ. ಇಂತಹದೇ ಪರಿಸ್ಥಿತಿ ಇತರ ರಾಜ್ಯಗಳಿಗೂ, ಜಿಲ್ಲೆಗಳಿಗೂ, ಕ್ಷೇತ್ರಕ್ಕೂ ಬರಬಾರದು ಎಂದಾದರೆ ಈ ಮೇಲಿನ ನಿಯಮಗಳು ಜಾರಿಯಾದರೆ ಒಳ್ಳೆಯದು.

Tags: Indian PoliticsKalpa NewsKarnataka politicsMember of ParliamentMLApolitics
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಾನ್ಪುರ ಆಸ್ಪತ್ರೆ ಐಸಿಯುನಲ್ಲಿ ಐವರ ಮರಣ

Next Post

ತಮಿಳುನಾಡಿನಲ್ಲಿ ನಟ ದುನಿಯಾ ವಿಜಿ ಬಂಧನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ತಮಿಳುನಾಡಿನಲ್ಲಿ ನಟ ದುನಿಯಾ ವಿಜಿ ಬಂಧನ

Leave a Reply Cancel reply

Your email address will not be published. Required fields are marked *

No Result
View All Result
Surprise Inspection for Enhanced Passenger Safety
English Articles

Surprise Inspection for Enhanced Passenger Safety

by ಕಲ್ಪ ನ್ಯೂಸ್
June 27, 2026
0

Kalpa Media House  |  Mysuru | As per the instructions of the Railway Board, the Divisional Railway Manager (DRM), Mysuru...

Read moreDetails
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL