Monday, July 28, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಅವಕಾಶಕ್ಕಾಗಿ ಕಾದಿರುವ ಭಾವಚಿತ್ರ ಕಲಾವಿದೆ ಪಾವನ ಬೈಲೂರು

ಯುಟ್ಯೂಬನ್ನೇ ತನ್ನ ಗುರುವೆಂದು ಪರಿಭಾವಿಸಿ ಕಲಾಸೇವೆ ಮಾಡುತ್ತಿರುವ ಯುವತಿ

June 4, 2020
in Special Articles
0 0
0
Share on facebookShare on TwitterWhatsapp
Read - 2 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಲ್ಲ ಒಂದು ಅಂತರ್ಗತವಾದ ವೈಶಿಷ್ಟ್ಯತೆ ಇದ್ದೇ ಇರುತ್ತದೆ. ಆ ವಿಶಿಷ್ಟತೆಯನ್ನು ಹಲವರು ಬಾಹ್ಯ ಜಗತ್ತಿಗೆ ತೋರ್ಪಡಿಸುವುದಿಲ್ಲ. ಸ್ವತಃ ಅವರುಗಳೇ ಅದರಲ್ಲಿ ವಿಶೇಷವನ್ನು ಕಂಡುಕೊಂಡಿರುವುದಿಲ್ಲ. ಮತ್ತೆ ಕೆಲವರು ಹೇಗಾದರೂ ಮಾಡಿ ಹೊರ ಜಗತ್ತಿಗೆ ತೆರೆದುಕೊಂಡರೂ ಸುಂಕದವನ ಮುಂದೆ ಸುಖ ದುಃಖ ಹೇಳಿಕೊಂಡ ಪರಿಸ್ಥಿತಿ.

ಅಜ್ಞರು ಮತ್ತು ಅನಾಸಕ್ತ ಜನರಿಂದ ಪ್ರಚೋದನೆ ಮತ್ತು ಪ್ರಚಾರ ಎರಡೂ ದೊರೆಯುವುದಿಲ್ಲ. ಕಲೆಯ ಬೆಲೆಯನ್ನು ಅರಿಯದವರಿಂದಾಗಿ ಕಲೆಯ ಕೊಲೆಯಾಗುವುದನ್ನು ನಾವು ಸಮಾಜದಲ್ಲಿ ಕಾಣುತ್ತಿರುತ್ತವೆ. ಎಂದಾದರೊಂದು ದಿನ ಕಲೆಯ ನಿಜ ಬೆಲೆ ಬಲ್ಲ ತಜ್ಞರಿಂದಲೋ, ಕಲಾಪೋಷಕರಿಂದಲೋ ಪ್ರೋತ್ಸಾಹ, ಪ್ರಚೋದನೆ, ಪ್ರಚಾರ ದೊರೆತು ಮರೆಯಾಗಿರುವ ಕಲಾವಿದರು ಬೆಳಕಿಗೆ ಬರುವುದುಂಟು. ಈ ರೀತಿ ಬೆಳಕಿಗೆ ಬರಲು ಹಾತೊರೆಯುತ್ತಿರುವವರು ಭಾವಚಿತ್ರ ಕಲಾವಿದೆ ಪಾವನ ಬೈಲೂರು ಅವರು. ಕಲಿಯುವ ಕಿಂಚಿತ್ ಸೌಲಭ್ಯ ಪ್ರಾಪ್ತವಾದರೂ ಹುಡುಗರಿಗಿಂತ ಯಾವಾಗಲೂ ಹೆಣ್ಮಕ್ಕಳು ಎರಡೇ ಹೆಜ್ಜೆ ಮುಂದಿರುತ್ತಾರೆ.

ಪ್ರತಿಭೆ ಇದ್ದರೂ ಪ್ರಕಾಶಕ್ಕೆ ಬರಲಾಗದ ಪಾವನ ಉತ್ತಮ ಭಾವಚಿತ್ರ ಕಲಾವಿದೆ. ನೃತ್ಯದಲ್ಲೂ ಉತ್ತಮ ಅಭಿರುಚಿನ್ನು ಹೊಂದಿದ್ದಾರೆ. ಇವರ ಹುಟ್ಟೂರು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಬೈಲೂರು ಗ್ರಾಮ. ಬೈಲೂರು ಆಧುನಿಕ ಮೂಲ ಸೌಕರ್ಯಗಳಿಂದ ವಂಚಿತವಾದ ಒಂದು ಕುಗ್ರಾಮ. ಪಾವನ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ ಬೈಲೂರಲ್ಲೇ ಮುಗಿಸಿ, ಪ್ರೌಢ ಶಿಕ್ಷಣವನ್ನು ಅಂಪಾರು ಹೈಸ್ಕೂಲಿನಿಂದ ಮುಗಿಸಿದ್ದಾರೆ. ಕುಂದಾಪುರದ ಪ್ರತಿಷ್ಠಿತ ಭಂಡಾರಕರ್ಸ್ ಕಾಲೇಜಿನಿಂದ ಸ್ನಾತಕ ಪದವಿಯನ್ನು ಪಡೆದು, ತೆಂಕನಿಡಿಯೂರು ಕಾಲೇಜಿನಿಂದ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲೆಯಿಂದ ಆಕರ್ಷಿತರಾದ ಪಾವನ ಅವರಿಗೆ ಜನನಿ ತಾನೇ ಮೊದಲ ಗುರುವಾದವರು. ಚಿತ್ರಕಲೆಯ ’ಅ, ಆ, ಇ, ಈ’ ಯನ್ನು ತಾಯಿಯಿಂದ ಬರೆಯಿಸಿ, ತಿದ್ದಿಸಿಕೊಂಡ ಪಾವನ ನಂತರ ತಮ್ಮ ಆಸಕ್ತಿಯಿಂದ ಚಿತ್ರಕಲೆಯನ್ನು ವೃದ್ಧಿಸಿಕೊಂಡರು.

ಅನಂತರ ಪಾವನ ಒಂದು ವರ್ಷ ಉಡುಪಿಯ ಚಿತ್ರಕಲಾ ಸಂಸ್ಥೆಯಿಂದ ತರಬೇತಿ ಪಡೆದುಕೊಂಡರು. ಕಲಾ ಕಾಲೇಜಿನ ಹಿರಿಯ ವಿದ್ಯಾರ್ಥಿಯೊರ್ವರ ’ವ್ಯಕ್ತಿಚಿತ್ರ’ ರಚನಾ ಕೌಶಲ್ಯದಿಂದ ಪ್ರಭಾವಿತರಾದ ಪಾವನ ನಿಧಾನವಾಗಿ ವ್ಯಕ್ತಿಚಿತ್ರ ರಚನೆಯಲ್ಲಿ ತಮ್ಮ ರುಚಿಯನ್ನು ಕಂಡುಕೊಳ್ಳುವುದರೊಂದಿಗೆ ಪರಿಣತಿಯನ್ನು ಪಡೆದರು. ಸ್ತಿಮಿತ ಅವಧಿಯ ತರಬೇತಿಗಳಿಂದ ಹೆಚ್ಚಿದನ್ನು ಅಭ್ಯಾಸಿಸುವುದು ಕಷ್ಟ ಎಂದರಿತ ಇವರು ಏಕಲವ್ಯನಂತೆ ’ಯುಟ್ಯೂಬ್’ ನ್ನು ತನ್ನ ಗುರುವೆಂದು ಪರಿಭಾವಿಸಿ ಮುಂದಿನ ಹಂತದ ಕಲಿಕೆಯನ್ನು ಕಲಿತರು. ತಮ್ಮ ಊರು ಬೈಲೂರಿನಲ್ಲಿ ’ವಾಲ್ ಪೈಂಟ್’ ಬಿಡಿಸಿದ್ದಾರೆ. ಮದರ್ ತೆರೆಸಾ ಶಾಲೆ, ಶಂಕರನಾರಾಯಣ, ಟಿ.ಟಿ. ರೋಡ್ ಮುಂತಾದ ಕಡೆ ವಾಲ್ ಪೈಂಟಿನಲ್ಲಿ ಕೈ ಚಳಕ ತೋರಿಸಿದ್ದಾರೆ. ಬಂದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಇವರು ಸದವಕಾಶಗಳ ಬರವನ್ನು ಎದುರಿಸುತ್ತಿದ್ದಾರೆ. ಅವಕಾಶ ದೊರೆತರೆ ಲೈವ್ ಪೈಂಟಿಂಗ್ ಪ್ರದರ್ಶನ ನೀಡಬೇಕೆಂಬ ಮಹದಾಸೆ ಪಾವನ ಅವರದು. 75ಕ್ಕೂ ಹೆಚ್ಚು ವ್ಯಕ್ತಿ ಚಿತ್ರಗಳನ್ನು ಅವರು ಈಗಾಗಲೇ ರಚಿಸಿದ್ದಾರೆ. ಕಲಾ ಪೋಷಕರು, ಕಲಾಭಿಮಾನಿಗಳು ಪಾವನರಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.

ಪಾವನ ಅವರ ಮೊದಲ ವ್ಯಕ್ತಿಚಿತ್ರ ಮದರ್ ತೆರೇಸಾ ನಂತರ ದೇಶದ ಪ್ರಧಾನಿ ಶ್ರೀಯುತ ನರೇಂದ್ರ ಮೋದಿಯವರದ್ದು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಓಡುವ ಯಂತ್ರವೆಂದೇ ಖ್ಯಾತಿ ಪಡೆದಿರುವ ಹುಸೇನ್ ಬೋಲ್ಟ್‌, ಮೋಹಕ ಚೆಲುವೆ ದೀಪಿಕಾ ಪಡುಕೋಣೆ, ರಚಿತಾ ರಾಮ್, ಐಂದ್ರಿತಾ ರಾಯ್, ರಾಧಿಕಾ ಪಂಡಿತ್, ದಿವಂಗತ ಇಂದಿರಾ ಗಾಂಧಿ, ಅಲ್ಲು ಅರ್ಜುನ್ ಮುಂತಾದ ಖ್ಯಾತನಾಮರ ಭಾವಚಿತ್ರಗಳನ್ನು ರಚಿಸಿದ್ದಾರೆ. ಸದ್ಯದಲ್ಲೇ ನೂರು ಭಾವಚಿತ್ರಗಳನ್ನು ಪೂರೈಸುವ ಇಚ್ಚೆ ಹೊಂದಿದ್ದಾರೆ.

ಎಂಎ ಮುಗಿಸಿರುವ ಪಾವನ ಅವರು ಸೂಕ್ತ ಉದ್ಯೋಗವನ್ನು ಅರಸುತ್ತಿದ್ದಾರೆ. ಬೈಲೂರು ಗ್ರಾಮ ನಿವಾಸಿ ಶ್ರೀಮತಿ ಗೀತಾ ಹಾಗೂ ಶ್ರೀ ಮಂಜಪ್ಪ ದಂಪತಿಗಳ ಮುದ್ದಿನ ತನುಜೆ ಪಾವನ ಅವರಿಗೆ ಆಸಕ್ತಿ ಇರುವ ಚಿತ್ರಕಲೆಯಲ್ಲಿ ವಿಪುಲವಾದ ಅವಕಾಶಗಳು ಪ್ರಾಪ್ತವಾಗಲಿ. ಅವರು ನೆಚ್ಚಿ ನಂಬಿ, ಪರಿಶ್ರಮದಿಂದ ಕಲಿತ ವ್ಯಕ್ತಿಚಿತ್ರ ಕಲೆಯಿಂದ ಅವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ.


Get In Touch With Us info@kalpa.news Whatsapp: 9481252093

Tags: Artist_Pavana_BailurKannadaNewsWebsiteKundapuraLatestNewsKannadaPortrait ArtistUdupiಉಡುಪಿಕಲಾವಿದೆ ಪಾವನ ಬೈಲೂರುಕುಂದಾಪುರಭಾವಚಿತ್ರ ಕಲಾವಿದೆ
Previous Post

ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ನಡೆ ಪ್ರಶ್ನಾರ್ಹ: ಡಾ. ನಾಗೇಂದ್ರ ಎಫ್. ಹೊನ್ನಳ್ಳಿ

Next Post

ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗುರುದತ್ತ ಬಡಾವಣೆಯಲ್ಲಿ ಸ್ವಯಂ ಘೋಷಿತ ಸೀಲ್ ಡೌನ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025

ಹೊಳಲೂರು | ಅರಣ್ಯ ಇಲಾಖೆ ಬೋನಿಗೆ ಬಿದ್ದ ಕರಡಿ

July 28, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸ್ವಾತಂತ್ರ್ಯ ದಿನಾಚರಣೆಗೆ ಯಶವಂತಪುರ-ತಾಳಗುಪ್ಪ ನಡುವೆ ವಿಶೇಷ ರೈಲು | ಇಲ್ಲಿದೆ ವೇಳಾಪಟ್ಟಿ

July 28, 2025

ಹಿಂದುಳಿದ ವರ್ಗಗಳ ಹಿತ ಮರೆತ ಸಿದ್ಧರಾಮಯ್ಯ: ಈಶ್ವರಪ್ಪ ಟೀಕೆ

July 28, 2025

ರೈತರಿಗೆ ಗೊಬ್ಬರ ಪೂರೈಸಲು ಸರ್ಕಾರ ವಿಫಲ: ಡಿ.ಎಸ್. ಅರುಣ್ ಆಕ್ರೋಶ

July 28, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!