ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿರುವ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಕಾಂಗ್ರೆಸ್ನಿಂದ ಸಾಕಷ್ಟು ಆಂತರಿಕ ಒತ್ತಡಗಳು ಬರುತ್ತಿದ್ದರೂ, ಅವರು ತಮ್ಮ ನಿರ್ಧಾರ ಮಾತ್ರ ಬದಲಿಸಿಲ್ಲ.
ಈ ಕುರಿತಂತೆ ಮಾತನಾಡಿರುವ ಅವರು, ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಡಿ ಎಂದು ಒತ್ತಡ ಹೇರುವ ಹಾಗೂ ಮನವಿ ಮಾಡುವ ಎಲ್ಲರಿಗೂ ಸಹ ನಾನು ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಲ್ಲಿಯೇ ಉತ್ತರ ನೀಡುತ್ತೇನೆ. ಈಗ ಏನೂ ಹೇಳುವುದಿಲ್ಲ. ಯಾವುದೇ ಪತ್ರಗಳಿಗೆ ಹಾಗೂ ದೂರವಾಣಿ ಕರೆಗಳಿಗೆ ನಾನು ಉತ್ತರ ನೀಡಿಲ್ಲ ಎಂದು ತಿಳಿಸಿದ್ದಾರೆ.
82 ವರ್ಷದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನಿಶ್ಚಯವಾದಾಕ್ಷಣದಿಂದ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೆ ತೀವ್ರ ಒತ್ತಡ ಬರುತ್ತಿದೆ ಎನ್ನಲಾಗಿದೆ. ಪಕ್ಷ ಅವರನ್ನು ಐದು ದಶಕಗಳ ಕಾಲ ಬೆಳೆಸಿ, ರಾಷ್ಟ್ರಪತಿ ಆಗುವರೆಗೂ ಅವರನ್ನು ನೋಡಿಕೊಂಡಿದೆ. ಹೀಗಾಗಿ, ಸೈದ್ದಾಂತಿಕವಾಗಿ ವ್ಯತ್ಯಾಸವನ್ನು ಹೊಂದಿರುವ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಹೇಳಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರನೆಯ ಸಂಘ ಶಿಕ್ಷಾ ವರ್ಗ ವಿದಾಯದ ಮುಖ್ಯ ಅತಿಥಿಯಾಗಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆಹ್ವಾನಿತರಾಗಿದ್ದು, ಜೂನ್ 7ರಂದು ವರ್ಗವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಬೇಸಿಗೆ ರಜೆಯ ವೇಳೆ ಕಳೆದ ಮೂರು ವರ್ಷದಿಂದ ಪ್ರತಿವರ್ಷವೂ ರ್ಆಎಸ್ಎಸ್ ತರಬೇತಿ ಶಿಬಿರವನ್ನು ಏರ್ಪಡಿಸುತ್ತದೆ. ಮೇ 13ರಂದು ಶಿಬಿರ ಆರಂಭವಾಗಿದ್ದು, ದೇಶದಾದ್ಯಂತ ಈ ಬಾರಿ ಒಟ್ಟು 607 ಮಂದಿ ಪಾಲ್ಗೊಂಡಿದ್ದಾರೆ. ಇವರೆಲ್ಲಾ 45 ವರ್ಷದ ಒಳಗಿನವರಾಗಿದ್ದು, ಎರಡು ಹಂತದ ಎಸ್ಎಸ್ವಿ ಮುಕ್ತಾಯಗೊಳಿಸಿದ್ದಾರೆ.
Discussion about this post