ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಖ್ಯಾತ ಮನೋವೈದ್ಯೆ, ಭರತನಾಟ್ಯ ಕಲಾವಿದೆ ಡಾ.ಕೆ.ಎಸ್. ಪವಿತ್ರಾ ಅವರಿಗೆ 2020ನೆಯ ಸಾಲಿನ ಪ್ರತಿಷ್ಠಿತ ಸಂದೇಶ ಕಲಾಪ್ರಶಸ್ತಿ ಸಂದಿದೆ.
ಡಾ.ಪವಿತ್ರಾ ಭರತನಾಟ್ಯ ಕ್ಷೇತ್ರದಲ್ಲಿ ಸಾಹಿತ್ಯಿಕವಾಗಿ, ಕನ್ನಡ ಸಾಹಿತ್ಯವನ್ನು ಸಂಶೋಧನಾತ್ಮಕವಾಗಿ ನೃತ್ಯಕ್ಕೆ ಅಳವಡಿಸುವ ಮಾಡಿರುವ ಕಾರ್ಯಕ್ಕೆ ಸಂದಿರುವ ಮನ್ನಣೆ ಇದಾಗಿದೆ. ಫೆ.9 ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ 25,000 ರೂ.ಗಳ ಗೌರವಧನ, ಪಾರಿತೋಷಕ ಮತ್ತು ಪ್ರಶಸ್ತಿ ಫಲಕ ನೀಡಿ ಡಾ.ಪವಿತ್ರಾರನ್ನು ಪುರಸ್ಕರಿಸಲಾಗುತ್ತದೆ.
ಶ್ರೀ ಬೊಳುವಾರು ಮಹಮ್ಮದ್ ಕುಂಞ ಅವರನ್ನೂ ಒಳಗೊಂಡಂತೆ ಒಟ್ಟು 7 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಲಾಗಿದೆ.
ರಾಷ್ಟ್ರೀಯ ಮನೋವೈದ್ಯರ ಸಮ್ಮೇಳನದಲ್ಲಿ ಡಾ.ಪವಿತ್ರಾ
ಕೋಲ್ಕತ್ತಾದಲ್ಲಿ ಜ.22 ರಿಂದ 25ರ ವರೆಗೆ ನಡೆಯಲಿರುವ ರಾಷ್ಟ್ರೀಯ ಭಾರತೀಯ ಮನೋವೈದ್ಯರ ಸಮ್ಮೇಳನದಲ್ಲಿ ಡಾ.ಪವಿತ್ರಾ ಅವರು ಸಿನಿಮಾ ಮತ್ತು ಮಾನಸಿಕ ಆರೋಗ್ಯ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಲಿದೆ.
Get in Touch With Us info@kalpa.news Whatsapp: 9481252093
Discussion about this post