ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರನ್ನಾಗಿ ಪ್ರೊ.ಸಿ. ಗೀತಾ ಅವರನ್ನು ಹಾಗೂ ಪ್ರಭಾರ ಹಣಕಾಸು ಅಧಿಕಾರಿಯನ್ನಾಗಿ ಪ್ರೊ. ರಾಮಚಂದ್ರ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ಜಿ. ಅನುರಾಧ ಅವರ ವರ್ಗಾವಣೆಯಿಂದ ತೆರವಾದ ಕುಲಸಚಿವೆ ಸ್ಥಾನಕ್ಕೆ, ಕುವೆಂಪು ವಿವಿಯ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ಶಿಕ್ಷಣ ನಿಕಾಯ ಡೀನ್ ಆಗಿರುವ ಪ್ರೊ. ಸಿ. ಗೀತಾ ಅವರನ್ನು ನೇಮಿಸಲಾಗಿದೆ.
ಇನ್ನು, ವಿವಿಯ ಹಣಕಾಸು ಪ್ರಭಾರ ಅಧಿಕಾರಿಯನ್ನಾಗಿ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಯೋಜನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಾದ ಪ್ರೊ. ವೈ.ಎಲ್. ರಾಮಚಂದ್ರ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post