ನವದೆಹಲಿ: ಪುಲ್ವಾಮಾ ದಾಳಿಗೆ ಕಾರಣವಾದ ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್’ನಲ್ಲಿ ಜಾಗತಿಕ ಉಗ್ರ ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಅಡ್ಡಗಾಲು ಹಾಕಿರುವ ಚೀನಾದೊಂದಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ನಿಷೇಧ ಮಾಡಿ ಎಂದು ಆರ್’ಎಸ್’ಎಸ್ ಪ್ರಧಾನಿಗೆ ಪತ್ರ ಬರೆದಿದೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಆರ್’ಎಸ್’ಎಸ್ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ ಸಹಸಂಚಾಲಕ ಅಶ್ಚಿನ್ ಮಹಾಜನ್, ಪುಲ್ವಾಮಾದಲ್ಲಿನ ಭೀಕರವಾದ ಭಯೋತ್ಪಾದಕ ದಾಳಿಯು ರಾಷ್ಟ್ರದ ಆತ್ಮಸಾಕ್ಷಿಯನ್ನೆ ಅಲ್ಲಾಡಿಸಿತು. ಈ ಸಮಯದಲ್ಲಿ ಇಂತಹ ಭಯೋತ್ಪಾದಕರನ್ನು ನೇರವಾಗಿ ಅಥವಾ ಮೌನವಾಗಿ ಬೆಂಬಲಿಸುವ ಯಾವುದೇ ದೇಶದ ಆರ್ಥಿಕ ಲಾಭವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.
ಈ ಭಯೋತ್ಪಾದಕ ದಾಳಿಯ ಮುಖ್ಯಸ್ಥ ಮಸೂದ್ ಅಝರ್ ಅವರನ್ನು ‘ಜಾಗತಿಕ ಭಯೋತ್ಪಾದಕ’ ಎಂದು ನೇಮಿಸಲು ನಮ್ಮ ರಾಷ್ಟ್ರದ ಪ್ರಯತ್ನಗಳನ್ನು ಚೀನಾ ಸರ್ಕಾರವು ನಿರ್ಬಂಧಿಸುವ ಮೂಲಕ ಅಡ್ಡಗಾಲು ಹಾಕುತ್ತಿದೆ. ಇಂತಹ ಸಮಯದಲ್ಲಿ, ತಮ್ಮ ಆರ್ಥಿಕ ಲಾಭಕ್ಕಾಗಿ ಭಾರತವನ್ನು ಬಳಸುತ್ತಿರುವ ಚೀನೀ ಕಂಪೆನಿಗಳನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
Discussion about this post