No Result
View All Result
Minister Somanna Inspects & Inaugurates Road Under Bridges in Tumkur District eliminating level Crossing gates
English Articles

Minister Somanna Inspects & Inaugurates Road Under Bridges in Tumkur District eliminating level Crossing gates

by ಕಲ್ಪ ನ್ಯೂಸ್
February 26, 2026
0

Kalpa Media House  |  Bengaluru  | Union Minister of State for Railways and Jal Shakti, V. Somanna, today inaugurated three...

Read moreDetails
Le Méridien Dehradun in the Foothills of the Himalayas, Inviting Guests to Slow Down and Savour the Good Life

Le Méridien Dehradun in the Foothills of the Himalayas, Inviting Guests to Slow Down and Savour the Good Life

February 25, 2026
From Complex Revisions to Robotic Spine Care: Narayana Health City Marks 10,000 Surgery Milestone

From Complex Revisions to Robotic Spine Care: Narayana Health City Marks 10,000 Surgery Milestone

February 24, 2026
Amazon Opens Its Second Largest Office in Asia in Bengaluru

Amazon Opens Its Second Largest Office in Asia in Bengaluru

February 24, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

SWR Opens Makajipalli–Dharmavaram Double Line Project

February 23, 2026
  • Advertise With Us
  • Grievances
  • About Us
  • Contact Us
Thursday, February 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 24, 2019
in Special Articles
0
ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’
Share on FacebookShare on TwitterShare on WhatsApp

ದೊಡ್ಡ ದೊಡ್ಡ ಆಲದ ಮರಗಳ (ಅನುಭವಿ ಕಲಾವಿದರ) ನಡುವೆ ತನ್ನ ಪಾಡಿಗೆ ಸುಂದರವಾಗಿ ನಸುನಗುವ, ತನ್ನ ವಿನಯ, ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಎಳೆಚಿಗುರು ರಕ್ಷಿತ್.

ಹೌದು.. ನಾನ್ಮಾತಾಡ್ತಿರೋದು ಹನುಮಗಿರಿ ಎಂಬ ಮಹಾಮೇಳದ ಯುವ ಕಲಾವಿದ ರಕ್ಷಿತ್ ಶೆಟ್ಟಿ ಫಡ್ರೆಯ ಕುರಿತು. ವಯಸು ಚಿಕ್ಕದಾದ್ರೂ ಅಪ್ಪಟ ಪ್ರತಿಭಾವಂತ. ನಟನೆಯಲ್ಲಿ ಶ್ರದ್ಧೆ, ರಂಗಸ್ಥಳದಲ್ಲಿ ಪಾತ್ರದೊಳಗೆ ತಾದ್ಯಾತ್ಮತೆ.. ಕೃಷ್ಣ, ಸುಧನ್ವ, ಚಂದ್ರದೇವ, ಅಗ್ನಿ, ವರುಣ, ಮೊದಲಾದ ಪುಂಡು ವೇಷಗಳಿರಲಿ, ರಂಭೆ, ಆಸ್ತಿ, ಪ್ರಮೀಳೆ, ರಾಧಾ, ಮೇನಕೆ, ಸುಷಮೆ ಮೊದಲಾದ ಸ್ತ್ರೀ ಪಾತ್ರಗಳಿರಲಿ, ತನಗೆ ತಿಳಿದುದನ್ನು ಯಕ್ಷಗಾನೀಯ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ಪ್ರದರ್ಶಿಸಬಲ್ಲ ರಕ್ಷಿತ್’ನ ನಾಟ್ಯದಲ್ಲಾಗಲೀ, ವೇಷದಲ್ಲಾಗಲೀ, ಮಾತುಗಾರಿಕೆಯಲ್ಲಾಗಲೀ ಗುಲಗಂಜಿ ದೋಷವಿಲ್ಲ. ಮೇಳದಲ್ಲಿ ಮೂರನೇ ಸ್ತ್ರೀ ವೇಷಧಾರಿಯಾದರೂ ಯಾವುದೇ ಬೇಸರವಿಲ್ಲ. ಸಿಕ್ಕ ಅವಕಾಶಗಳನ್ನೇ ಅದ್ಭುತವಾಗಿ ಬಳಸಿಕೊಳ್ಳುವ ರಕ್ಷಿತ್’ಗೆ ಬೆಳೆಯುವ ಹಸಿವಿದೆ.

ಕಳೆದ ಬಾರಿಯ ತಿರುಗಾಟದಲ್ಲಿ ಹನುಮಗಿರಿ ಮೇಳದಿಂದ ಭರ್ಜರಿ ಪ್ರದರ್ಶನ ಕಂಡ ಮಾಯಾ ವಿಹಾರಿ ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ತಟ್ಟೆಯ ದೀಪನೃತ್ಯ, ಯಕ್ಷಗಾನದಲ್ಲಿ ಭರತನಾಟ್ಯವೂ(ಕೂಚುಪುಡಿ) ಎನಿಸಿಕೊಳ್ಳಬಹುದಾದ ವಿನೂತನ ಶೈಲಿಯ ನಾಟ್ಯ ನೋಡಿದವರು ‘‘ಇದ್ಯಾರಪ್ಪಾ ಹುಡುಗ.. ಇಷ್ಟೊಳ್ಳೆ ಕುಣಿತ..’’ಎಂದು ಹುಬ್ಬೇರಿಸಿದ್ದಂತೂ ಸುಳ್ಳಲ್ಲ. ಯಕ್ಷಗಾನದಲ್ಲಿ ಭರತನಾಟ್ಯ ಬೇಕೋ ಬೇಡವೋ ಈ ವಿವಾದಗಳನ್ನು ಹೊರತುಪಡಿಸಿ ರಂಜನೆಗೋಸ್ಕರ ನೋಡುವವರು ಇದನ್ನ ಬಲುವಾಗಿ ಮೆಚ್ಚಿಕೊಂಡಿದ್ದಾರೆ.

 

ಮತ್ತೊಂದು ವಿಶೇಷ ಅಂದ್ರೆ ಈ ಯಕ್ಷಗಾನದಲ್ಲಿ ಈ ನಾಟ್ಯಶೈಲಿಯನ್ನು ಕ್ಲಾಸ್ ಪ್ರೇಕ್ಷಕರೂ ಒಪ್ಪಿಕೊಂಡಿದ್ದು. ಹನುಮಗಿರಿ ಮೇಳ ಅಂದ್ರೆ ಅಲ್ಲಿರೋದು ಘಟಾನುಘಟಿ ಕಲಾವಿದರೇ. ಹಾಗಾಗಿಯೇ. ಹನುಮಗಿರಿ ಮೇಳಕ್ಕೆ ಇಂಥದ್ದೇ ಒಂದು ಪ್ರೇಕ್ಷಕ ವರ್ಗವಿದೆ. ಅದು ಅಪ್ಪಟ ಯಕ್ಷಗಾನೀಯ ಶೈಲಿಯನ್ನು ನಿರೀಕ್ಷೆ ಮಾಡುವ ಕ್ಲಾಸ್ ಪ್ರೇಕ್ಷಕ ವರ್ಗ, ಪ್ರಸಂಗವನ್ನು ವಿಮರ್ಶೆ ಮಾಡಬಲ್ಲ ವಿದ್ಯಾವಂತ ಪ್ರೇಕ್ಷಕ ವರ್ಗ. ಹಾಗಾಗಿ ಯಕ್ಷಗಾನದಲ್ಲಿ ಹೊಸತು ಪ್ರಯೋಗ ಮಾಡಬೇಕಾದ್ರೆ ಇಂತಹಾ ಪ್ರೇಕ್ಷಕ ವರ್ಗವನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಇವರು ಲೋಪದೋಷಗಳನ್ನು ಬಲುಬೇಗ ನೋಟಿಫೈ ಮಾಡ್ತಾರೆ. ಉತ್ತಮ ಅಂಶಗಳನ್ನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ತಾರೆ.

25 ನಿಮಿಷ ಅನಾಯಾಸವಾಗಿ ಹೆಜ್ಜೆ ಹಾಕುವ ಕಲಾವಿದ
ಒಬ್ಬ ಕಲಾವಿದ ಬೆಳೆಯಬೇಕಾದರೆ ಮೊದಲಾಗಿ ಪ್ರಯೋಗದ ಪ್ರಯತ್ನಶೀಲತೆ ನಂತರ ಅದಕ್ಕೆ ಎದುರಾಗುವ ಇಂತಹಾ ವಿಮರ್ಶೆಗಳು ತೀರಾ ಅತ್ಯಗತ್ಯ. ಇಂತಹಾ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿರುವ ಮೇಳ ಅದು ಹನುಮಗಿರಿ ಮೇಳ. ಮಾಯಾ ವಿಹಾರಿ ಪೌರಾಣಿಕ ಪ್ರಸಂಗದ ಮೊದಲಲ್ಲೆ ಬರುವ ಈ ದೀಪ ನರ್ತನವನ್ನು ಯಕ್ಷಗಾನಕ್ಕೆ ಲೋಪವಾಗದಂತೆ ಜಾಣ್ಮೆಯಿಂದ ಸೇರಿಸಿಕೊಂಡಿರುವ ರೀತಿ ಮೆಚ್ಚತಕ್ಕಂತದ್ದು. ಇದೇ ಕಾರಣಕ್ಕೆ ಸಾಂಪ್ರದಾಯಿಕತೆಯನ್ನು ಬಯಸುವ ವರ್ಗವೂ ತುಟಿ ಪಿಟಿಕ್ ಎಂದಿಲ್ಲ. ಸತತ 25 ನಿಮಿಷಗಳ ಕಾಲ ಅನಾಯಾಸವಾಗಿ ಹೆಜ್ಜೆ ತಪ್ಪದಂತೆ ಆಕರ್ಷಕವಾಗಿ ನರ್ತಿಸುವ ಮೂಲಕ ರಕ್ಷಿತ್ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಸತತ ಅಭ್ಯಾಸ, ಹೊಸ ಪ್ರಯೋಗದ ಉತ್ಸಾಹ, ಹಿರಿಯ ಕಲಾವಿದರ ಪ್ರೋತ್ಸಾಹ, , ನಾಟ್ಯದೊಳಗೆ ಪೂರ್ತಿ ತನ್ಮಯತೆ ಇವೆಲ್ಲವೂ ಇಪ್ಪತ್ತೈದು ನಿಮಿಷಗಳ ನಾಟ್ಯ ಪ್ರಸ್ತುತಿಯಲ್ಲಿ ಎರಕವಾಗಿದೆ.

ಮಯಾವಿಹಾರಿ ಪ್ರಸಂಗದಲ್ಲಿ ಕೂಚುಪುಡಿ ಶೈಲಿಯನ್ನು ಹೋಲುವ ಈ ನೃತ್ಯ ಪ್ರದರ್ಶನಕ್ಕೂ ಮುಂಚೆ ಮೇಳದ ಯಜಮಾನರಾದ ಶ್ಯಾಂ ಭಟ್, ಮೇಳದ ಇತರ ಕಲಾವಿದರು, ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ ಮೊದಲಾದವರು ಕೂತು ಸಮಾಲೋಚನೆ ಮಾಡಿದ ನಂತರವೇ ಇದು ರಂಗಪ್ರಯೋಗವಾಗಿದ್ದು. ಅದೂ ಮೊದಲ ಬಾರಿಗೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಸಂಪಾಜೆ ಯಕ್ಷೋತ್ಸವದಲ್ಲಿ ಎಂದು ನೆನಪಿಸಿಕೊಳ್ಳುತ್ತಾರೆ ರಕ್ಷಿತ್.

ನಾಟ್ಯವೇ ಇವರ ಸ್ಟ್ರೆಂಥ್
ನಾಟ್ಯವೇ ನನ್ನ ಸ್ಟ್ರೆಂಥ್ ಎಂದು ಹೇಳಿಕೊಳ್ಳುವ ರಕ್ಷಿತ್, ನಾಟ್ಯವೈಭವದ ಬೇಡಿಕೆಯ ಕಲಾವಿದನಾಗಿ ಫಡ್ರೆ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನಲೆಯಲ್ಲಿ ಭರತನಾಟ್ಯವನ್ನು ಕಲಿತವರಾಗಿ ತಮ್ಮ ಒಲವು ಭರತನಾಟ್ಯದ ಕಡೆಗೋ ಅಥವಾ ಯಕ್ಷಗಾನವೋ ಎಂಬರ್ಥದಲ್ಲಿ ರಕ್ಷಿತ್’ಗೆ ಪ್ರಶ್ನೆಗಳನ್ನೆಸೆದರೆ ಕೊನೆಗೆ ಬಂದು ನಿಲ್ಲುವ ಪ್ರೀತಿ, ಮಾತು ಅದು ಯಕ್ಷಗಾನ. ತೆಂಕು ಬಡಗು ಎರಡು ತಿಟ್ಟುಗಳಲ್ಲೂ ಬೇಡಿಕೆ ಗಳಿಸಿಕೊಂಡಿರುವ ಪ್ರತಿಭಾವಂತ ಕಲಾವಿದ ರಕ್ಷಿತ್ ಫಡ್ರೆ.

ಬಾಲ್ಯದಲ್ಲಿ ಹೆತ್ತವರ ಪ್ರೋತ್ಸಾಹದಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತವರು ರಕ್ಷಿತ್. ಇವರ ಯಕ್ಷಗಾನದ ಗುರುಗಳು ಗಿರೀಶ್ ನಾವುಡರು. ಏಳನೆಯ ತರಗತಿಯಲ್ಲಿ ಮೊದಲ ಬಾರಿಗೆ ಯಕ್ಷಗಾನದ ಕಂಸನ ಪಾತ್ರಕ್ಕಾಗಿ ಬಣ್ಣ ಹಚ್ಚುತ್ತಾರೆ. ಮುಂದೆ ಸತತ ಅಭ್ಯಾಸ ನಡೆಸಿ ವೃತ್ತಿಪರ ಮೇಳವಾದ ಬಪ್ಪನಾಡು ಮೇಳದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ.

ಮೇಳದಲ್ಲಿ ಮೊದಲ ಬಾರಿಗೆ ಗುರುತಿಸಿಕೊಂಡದ್ದು ಪುಂಡು ವೇಷಗಳಲ್ಲಾದರೂ ಮುಂದೆ ಸ್ತ್ರೀ ಪಾತ್ರಕ್ಕೂ ಒಗ್ಗಿಕೊಳ್ಳುವಷ್ಟು ನೈಪುಣ್ಯತೆ ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸ್ತ್ರೀವೇಷದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ರಕ್ಷಿತ್ ಮೊದಲ ಬಾರಿಗೆ ಸ್ತ್ರೀ ವೇಷ ಮಾಡಿದ್ದು ಬಪ್ಪನಾಡು ಮೇಳದಲ್ಲಿ ಸಪ್ತ ಮಾತೃಕೆಯರಲ್ಲೊಬ್ಬರಾಗಿ.


ಅದಾದ ಬಳಿಕ ಸಸಿಹಿತ್ಲು ಮೇಳದಲ್ಲಿ ಪಾಪಣ್ಣ ವಿಜಯ ಪ್ರಸಂಗದಲ್ಲಿ ಅನಿವಾರ್ಯವಾಗಿ ರೂಪಸುಂದರಿ ಪಾತ್ರ ಮಾಡುವ ಕಲಾವಿದ ಗೈರಾಗಿದ್ದ ಕಾರಣ ಆ ಪಾತ್ರವನ್ನು ರಕ್ಷಿತ್ ನಿಭಾಯಿಸಬೇಕಾಗಿ ಬಂತು. ಆ ಸಂದರ್ಭ ಹಿರಿಯ ಕಲಾವಿದರಾದ ರಮೇಶ್ ಕುಲಶೇಖರ್, ಸಂಜಯ್ ಕುಮಾರ್ ಗೋಣಿ ಬೀಡು ಮೊದಲಾದವರು ಸ್ತ್ರೀ ಪಾತ್ರ ಮಾಡುವಂತೆ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ.

ಯಕ್ಷಗಾನದ ನಿಪುಣ ಕಲಾವಿದನಾಗಿ ತಾನು ಬೆಳೆಯುವುದರ ಜೊತೆಗೆ ಯಕ್ಷಗುರುವಾಗಿ ಕೂಡಾ ಡಿಮಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ‘‘ನಮ್ಮಲ್ಲೊಂದು ಕ್ಲಾಸ್ ಮಾಡಿ, ನಮ್ಮಲ್ಲೊಂದು ಮಾಡಿ’’ ಎಂದು ಇವರಲ್ಲಿ ಯಕ್ಷಗಾನದ ತರಬೇತಿ ಪಡೆದುಕೊಳ್ಳಲು ಕ್ಯೂ ನಿಲ್ಲುವವರಿದ್ದಾರೆ. ಸದ್ಯ 600 ಕ್ಕೂ ಅಧಿಕ ಶಿಷ್ಯಂದಿರನ್ನು ಹೊಂದಿರುವ ರಕ್ಷಿತ್ ನಾಟ್ಯ ಶೈಲಿ ಮುಂದಿನ ತಲೆಮಾರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳಷ್ಟಿದೆ. ಅಂದ ಹಾಗೆ ಪಟ್ಲ ಸತೀಶ್ ಶೆಟ್ಟಿಯವರ ಪುತ್ರ ಹೃದಾನ್ ಪಟ್ಲ ಕೂಡಾ ರಕ್ಷಿತ್ ಶೆಟ್ಟಿ ಪಡ್ರೆಯ ಶಿಷ್ಯ.


Sharing of best practices-
ಹೌದು… ಇಂತಹ ಒಂದು ದೊಡ್ಡ ಮಟ್ಟದ ಸಂಭ್ರಮ ರಕ್ಷಿತ್ ಶೆಟ್ಟಿ ಫಡ್ರೆ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ರಕ್ಷಿತ್ ಶೆಟ್ಟಿ ವಿವಿಧ ಕಡೆಗಳಲ್ಲಿ ನಡೆಸಿಕೊಡುವ ಯಕ್ಷಗಾನ ತರಗತಿಗಳ ಆಯ್ದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.. ರಕ್ಷಿತ್ ಮಾರ್ಗದರ್ಶನದಲ್ಲಿ ತಾವು ಕಲಿತ ಉತ್ತಮ ವಿಚಾರಗಳ ವಿನಿಮಯ ಆ ವಿದ್ಯಾರ್ಥಿಗಳ ನಡುವೆ ನಡೆಯೋದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಿದೆ.

ಈ ಯಕ್ಷಗಾನ ಗಾನ ನಾಟ್ಯ ವೈಭವದ ರಸದೌತಣ ಸವಿಯುವ ಅವಕಾಶವನ್ನು ಮಕ್ಕಳ ಪೋಷಕರಿಗೂ, ಸಾರ್ವಜನಿಕರಿಗೂ ಒದಗಿಸಲಾಗಿದೆ.
ಈ ಬಾರಿಯ ಈ ವಾರ್ಷಿಕ ಕೂಟ ಯಕ್ಷ ಸಿದ್ದಿ ಸಂಭ್ರಮ-2019 ಎಂಬ ಶಿರೋನಾಮೆ ಯಡಿಯಲ್ಲಿ ನವಂಬರ್ ಅದ್ದೂರಿಯಾಗಿ ಮೂಡಿಬರಲಿದೆ. ಬಡಗು ತಿಟ್ಟಿನ ಭಾಗವತರಾದ ಪ್ರಸಾದ್ ಮೊಗೆಬೆಟ್ಟು ವಿರಚಿತ, ಯೋಧ ಧರ್ಮ, ವರಂ ಕರ್ಮ.. ಬಂದೂಕು ಮತ್ತು ಬದುಕು ಎಂಬ ವಿನೂತನ ಪರಿಕಲ್ಪನೆ ಯಕ್ಷಗಾನದಲ್ಲಿ ಜೀವ ಪಡೆದುಕೊಳ್ಳಲಿದೆ. ಪ್ರಮುಖವಾಗಿ ಯೋಧರಿಗಾಗಿಯೇ ಸಮರ್ಪಣೆಯಾಗುತ್ತಿರುವ ಈ ಕಾರ್ಯಕ್ರಮ ಅನೇಕ ಕುತೂಹಲಗಳಿಗೆ ಕಾರಣವಾಗಿದೆ.

ಯಾವುದೇ ಪಾತ್ರಕ್ಕೂ ಸೈ ಎಂಬ ಕಲಾವಿದ
ಶೃಂಗಾರ ಪಾತ್ರಗಳಿಗೆ ಬ್ರಾಂಡ್ ಆಗಿರುವ ರಕ್ಷಿತ್ ಗೂ ಸವಾಲಿನ ಪಾತ್ರಗಳನ್ನು ಮಾಡುವ ಮಹದಾಸೆಯಿದೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗಬಾರದೆನ್ನುವ ಪ್ರಜ್ಞೆಯಿದೆ. ಹಾಗಾಗಿ ಮುಂದೊಮ್ಮೆ ಅವರ ಪ್ರತಿಭೆ ಸ್ಪೋಟಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಮಹತ್ವಾಕಾಂಕ್ಷಿ ಈ ಯಕ್ಷ ಚೈತನ್ಯ
ಯಕ್ಷ ಚೈತನ್ಯ ಎಂಬ ಬಿರುದು ರಕ್ಷಿತ್ ಮುಕುಟಕ್ಕೆ ಮತ್ತೊಂದು ಗರಿ. ಎಷ್ಟೇ ಪ್ರಸಿದ್ಧಿ ಗಳಿಸಿಕೊಂಡರೂ ಕಲಿಕೆಗೆ ಕೊನೆಯೇ ಇಲ್ಲ ಅನ್ನೋ ಹಾಗೆ ರಕ್ಷಿತ್ ಕಲೆಯೆಂಬ ಸಾಗರದಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ. ಯಾಕಂದ್ರೆ ಬಡಗು ತಿಟ್ಟಿನ ನಾಟ್ಯ ಪ್ರಕಾರವನ್ನು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾದ ಪ್ರತೀಶ್ ಅವರಿಂದ ಸಿದ್ಧಿಸಿಕೊಳ್ಳುತ್ತಿದ್ದಾರೆ.. ಮುಂದೆ ಬಡಗು ತಿಟ್ಟಿನ ತರಗತಿಯನ್ನು ನಡೆಸುವ ಇರಾದೆಯನ್ನು ಹೊಂದಿದ್ದಾರೆ.

ಇಂತಿಪ್ಪ ರಕ್ಷಿತ್ ಎಂಎಸ್ಸಿ ಕಂಪ್ಯೂಟರ್ ಸ್ನಾತಕ ಪದವೀಧರ. ಲಿಯಾ ಇನ್’ಫೋಟೆಕ್ ಕಂಪನಿಯಲ್ಲಿ ಉದ್ಯೋಗಿಯೂ ಹೌದು. ಫಡ್ರೆಯ ರತ್ನಾಕರ ಶೆಟ್ಟಿ ಮತ್ತು ಗೀತಾ ದಂಪತಿಗಳ 5 ಜನ ಮಕ್ಕಳಲ್ಲೊಬ್ಬರಾದ ರಕ್ಷಿತ್ ಇದೀಗ ಖಾಸಗಿ ಬದುಕಿನ ಪ್ರಮುಖ ಮಜಲನ್ನೇರಿದ್ದಾರೆ. ಇದೀಗ ತಾನೇ ನಿಶ್ಚಿತಾರ್ಥ ಮುಗಿಸಿಕೊಂಡು ಹೊಸ ಬಾಳಿನ ಹೊಸಿಲಲಿ ನಿಂತಿರುವ ಛಲಗಾರನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ.

ಚಿತ್ರಕೃಪೆ ಮಂದಾರ ಮೂಡುಬಿದಿರೆ

 

Tags: ArtistBappanadu MelaCoastal ArticleDanceRakshit PadreSouth KendraSpecial ArticleTalentYakshaganaಕಲಾವಿದಕೂಚುಪುಡಿನೃತ್ಯಪ್ರತಿಭೆಬಪ್ಪನಾಡು ಮೇಳಯಕ್ಷ ಚೈತನ್ಯಯಕ್ಷಗಾನರಕ್ಷಿತ್ ಪಡ್ರೆ
Share282Tweet123Send
Previous Post

ನೆರೆಯವನನ್ನು ನೂಕದೇ ಎಲ್ಲರನ್ನೂ ಒಗ್ಗೂಡಿಸಿ ಸಾಗಿದ ನಿಜ ನಾಯಕ ಡಿ.ಎಸ್. ಅರುಣ್

Next Post

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

ಸಂಚಾರ ದಟ್ಟಣೆ ನಿಯಂತ್ರಿಸಲು ರೈಲ್ವೆ ಕೆಳ ಸೇತುವೆಗಳು ಸಹಕಾರಿ: ಸಚಿವ ಸೋಮಣ್ಣ

February 26, 2026
ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

ಪತ್ರಕರ್ತರ ಹಿತ ಕಾಯಲು ಬದ್ಧ: ಕೇಂದ್ರ ಸಚಿವರ ಭರವಸೆ

February 26, 2026
ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

ಮನೆ ನಿರ್ಮಾಣ ಸಾಮಗ್ರಿ ಕಳ್ಳತನ | ಓರ್ವನ ಬಂಧನ

February 26, 2026
Minister Somanna Inspects & Inaugurates Road Under Bridges in Tumkur District eliminating level Crossing gates

Minister Somanna Inspects & Inaugurates Road Under Bridges in Tumkur District eliminating level Crossing gates

February 26, 2026
ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

ಟಿಕೆಟ್ ಟು ಹಾಲಿವುಡ್ | ಬೆಂಗಳೂರಿನ 2026ರ ಅತಿದೊಡ್ಡ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

February 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL