Saturday, June 21, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

October 24, 2019
in Special Articles
0 0
0
Share on facebookShare on TwitterWhatsapp
Read - 4 minutes

ದೊಡ್ಡ ದೊಡ್ಡ ಆಲದ ಮರಗಳ (ಅನುಭವಿ ಕಲಾವಿದರ) ನಡುವೆ ತನ್ನ ಪಾಡಿಗೆ ಸುಂದರವಾಗಿ ನಸುನಗುವ, ತನ್ನ ವಿನಯ, ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಎಳೆಚಿಗುರು ರಕ್ಷಿತ್.

ಹೌದು.. ನಾನ್ಮಾತಾಡ್ತಿರೋದು ಹನುಮಗಿರಿ ಎಂಬ ಮಹಾಮೇಳದ ಯುವ ಕಲಾವಿದ ರಕ್ಷಿತ್ ಶೆಟ್ಟಿ ಫಡ್ರೆಯ ಕುರಿತು. ವಯಸು ಚಿಕ್ಕದಾದ್ರೂ ಅಪ್ಪಟ ಪ್ರತಿಭಾವಂತ. ನಟನೆಯಲ್ಲಿ ಶ್ರದ್ಧೆ, ರಂಗಸ್ಥಳದಲ್ಲಿ ಪಾತ್ರದೊಳಗೆ ತಾದ್ಯಾತ್ಮತೆ.. ಕೃಷ್ಣ, ಸುಧನ್ವ, ಚಂದ್ರದೇವ, ಅಗ್ನಿ, ವರುಣ, ಮೊದಲಾದ ಪುಂಡು ವೇಷಗಳಿರಲಿ, ರಂಭೆ, ಆಸ್ತಿ, ಪ್ರಮೀಳೆ, ರಾಧಾ, ಮೇನಕೆ, ಸುಷಮೆ ಮೊದಲಾದ ಸ್ತ್ರೀ ಪಾತ್ರಗಳಿರಲಿ, ತನಗೆ ತಿಳಿದುದನ್ನು ಯಕ್ಷಗಾನೀಯ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ಪ್ರದರ್ಶಿಸಬಲ್ಲ ರಕ್ಷಿತ್’ನ ನಾಟ್ಯದಲ್ಲಾಗಲೀ, ವೇಷದಲ್ಲಾಗಲೀ, ಮಾತುಗಾರಿಕೆಯಲ್ಲಾಗಲೀ ಗುಲಗಂಜಿ ದೋಷವಿಲ್ಲ. ಮೇಳದಲ್ಲಿ ಮೂರನೇ ಸ್ತ್ರೀ ವೇಷಧಾರಿಯಾದರೂ ಯಾವುದೇ ಬೇಸರವಿಲ್ಲ. ಸಿಕ್ಕ ಅವಕಾಶಗಳನ್ನೇ ಅದ್ಭುತವಾಗಿ ಬಳಸಿಕೊಳ್ಳುವ ರಕ್ಷಿತ್’ಗೆ ಬೆಳೆಯುವ ಹಸಿವಿದೆ.

ಕಳೆದ ಬಾರಿಯ ತಿರುಗಾಟದಲ್ಲಿ ಹನುಮಗಿರಿ ಮೇಳದಿಂದ ಭರ್ಜರಿ ಪ್ರದರ್ಶನ ಕಂಡ ಮಾಯಾ ವಿಹಾರಿ ಪ್ರಸಂಗದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ತಟ್ಟೆಯ ದೀಪನೃತ್ಯ, ಯಕ್ಷಗಾನದಲ್ಲಿ ಭರತನಾಟ್ಯವೂ(ಕೂಚುಪುಡಿ) ಎನಿಸಿಕೊಳ್ಳಬಹುದಾದ ವಿನೂತನ ಶೈಲಿಯ ನಾಟ್ಯ ನೋಡಿದವರು ‘‘ಇದ್ಯಾರಪ್ಪಾ ಹುಡುಗ.. ಇಷ್ಟೊಳ್ಳೆ ಕುಣಿತ..’’ಎಂದು ಹುಬ್ಬೇರಿಸಿದ್ದಂತೂ ಸುಳ್ಳಲ್ಲ. ಯಕ್ಷಗಾನದಲ್ಲಿ ಭರತನಾಟ್ಯ ಬೇಕೋ ಬೇಡವೋ ಈ ವಿವಾದಗಳನ್ನು ಹೊರತುಪಡಿಸಿ ರಂಜನೆಗೋಸ್ಕರ ನೋಡುವವರು ಇದನ್ನ ಬಲುವಾಗಿ ಮೆಚ್ಚಿಕೊಂಡಿದ್ದಾರೆ.

 

ಮತ್ತೊಂದು ವಿಶೇಷ ಅಂದ್ರೆ ಈ ಯಕ್ಷಗಾನದಲ್ಲಿ ಈ ನಾಟ್ಯಶೈಲಿಯನ್ನು ಕ್ಲಾಸ್ ಪ್ರೇಕ್ಷಕರೂ ಒಪ್ಪಿಕೊಂಡಿದ್ದು. ಹನುಮಗಿರಿ ಮೇಳ ಅಂದ್ರೆ ಅಲ್ಲಿರೋದು ಘಟಾನುಘಟಿ ಕಲಾವಿದರೇ. ಹಾಗಾಗಿಯೇ. ಹನುಮಗಿರಿ ಮೇಳಕ್ಕೆ ಇಂಥದ್ದೇ ಒಂದು ಪ್ರೇಕ್ಷಕ ವರ್ಗವಿದೆ. ಅದು ಅಪ್ಪಟ ಯಕ್ಷಗಾನೀಯ ಶೈಲಿಯನ್ನು ನಿರೀಕ್ಷೆ ಮಾಡುವ ಕ್ಲಾಸ್ ಪ್ರೇಕ್ಷಕ ವರ್ಗ, ಪ್ರಸಂಗವನ್ನು ವಿಮರ್ಶೆ ಮಾಡಬಲ್ಲ ವಿದ್ಯಾವಂತ ಪ್ರೇಕ್ಷಕ ವರ್ಗ. ಹಾಗಾಗಿ ಯಕ್ಷಗಾನದಲ್ಲಿ ಹೊಸತು ಪ್ರಯೋಗ ಮಾಡಬೇಕಾದ್ರೆ ಇಂತಹಾ ಪ್ರೇಕ್ಷಕ ವರ್ಗವನ್ನು ಒಪ್ಪಿಸುವುದು ಸುಲಭದ ಮಾತಲ್ಲ. ಇವರು ಲೋಪದೋಷಗಳನ್ನು ಬಲುಬೇಗ ನೋಟಿಫೈ ಮಾಡ್ತಾರೆ. ಉತ್ತಮ ಅಂಶಗಳನ್ನು ಪ್ರಾಮಾಣಿಕವಾಗಿ ಮೆಚ್ಚಿಕೊಳ್ತಾರೆ.

25 ನಿಮಿಷ ಅನಾಯಾಸವಾಗಿ ಹೆಜ್ಜೆ ಹಾಕುವ ಕಲಾವಿದ
ಒಬ್ಬ ಕಲಾವಿದ ಬೆಳೆಯಬೇಕಾದರೆ ಮೊದಲಾಗಿ ಪ್ರಯೋಗದ ಪ್ರಯತ್ನಶೀಲತೆ ನಂತರ ಅದಕ್ಕೆ ಎದುರಾಗುವ ಇಂತಹಾ ವಿಮರ್ಶೆಗಳು ತೀರಾ ಅತ್ಯಗತ್ಯ. ಇಂತಹಾ ಒಂದು ಪ್ರೇಕ್ಷಕ ವರ್ಗವನ್ನು ಹೊಂದಿರುವ ಮೇಳ ಅದು ಹನುಮಗಿರಿ ಮೇಳ. ಮಾಯಾ ವಿಹಾರಿ ಪೌರಾಣಿಕ ಪ್ರಸಂಗದ ಮೊದಲಲ್ಲೆ ಬರುವ ಈ ದೀಪ ನರ್ತನವನ್ನು ಯಕ್ಷಗಾನಕ್ಕೆ ಲೋಪವಾಗದಂತೆ ಜಾಣ್ಮೆಯಿಂದ ಸೇರಿಸಿಕೊಂಡಿರುವ ರೀತಿ ಮೆಚ್ಚತಕ್ಕಂತದ್ದು. ಇದೇ ಕಾರಣಕ್ಕೆ ಸಾಂಪ್ರದಾಯಿಕತೆಯನ್ನು ಬಯಸುವ ವರ್ಗವೂ ತುಟಿ ಪಿಟಿಕ್ ಎಂದಿಲ್ಲ. ಸತತ 25 ನಿಮಿಷಗಳ ಕಾಲ ಅನಾಯಾಸವಾಗಿ ಹೆಜ್ಜೆ ತಪ್ಪದಂತೆ ಆಕರ್ಷಕವಾಗಿ ನರ್ತಿಸುವ ಮೂಲಕ ರಕ್ಷಿತ್ ಪ್ರೇಕ್ಷಕರ ಮನಸೂರೆಗೊಳ್ಳುತ್ತಾರೆ. ಸತತ ಅಭ್ಯಾಸ, ಹೊಸ ಪ್ರಯೋಗದ ಉತ್ಸಾಹ, ಹಿರಿಯ ಕಲಾವಿದರ ಪ್ರೋತ್ಸಾಹ, , ನಾಟ್ಯದೊಳಗೆ ಪೂರ್ತಿ ತನ್ಮಯತೆ ಇವೆಲ್ಲವೂ ಇಪ್ಪತ್ತೈದು ನಿಮಿಷಗಳ ನಾಟ್ಯ ಪ್ರಸ್ತುತಿಯಲ್ಲಿ ಎರಕವಾಗಿದೆ.

ಮಯಾವಿಹಾರಿ ಪ್ರಸಂಗದಲ್ಲಿ ಕೂಚುಪುಡಿ ಶೈಲಿಯನ್ನು ಹೋಲುವ ಈ ನೃತ್ಯ ಪ್ರದರ್ಶನಕ್ಕೂ ಮುಂಚೆ ಮೇಳದ ಯಜಮಾನರಾದ ಶ್ಯಾಂ ಭಟ್, ಮೇಳದ ಇತರ ಕಲಾವಿದರು, ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಚೈತನ್ಯ ಪದ್ಯಾಣ ಮೊದಲಾದವರು ಕೂತು ಸಮಾಲೋಚನೆ ಮಾಡಿದ ನಂತರವೇ ಇದು ರಂಗಪ್ರಯೋಗವಾಗಿದ್ದು. ಅದೂ ಮೊದಲ ಬಾರಿಗೆ ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಸಂಪಾಜೆ ಯಕ್ಷೋತ್ಸವದಲ್ಲಿ ಎಂದು ನೆನಪಿಸಿಕೊಳ್ಳುತ್ತಾರೆ ರಕ್ಷಿತ್.

ನಾಟ್ಯವೇ ಇವರ ಸ್ಟ್ರೆಂಥ್
ನಾಟ್ಯವೇ ನನ್ನ ಸ್ಟ್ರೆಂಥ್ ಎಂದು ಹೇಳಿಕೊಳ್ಳುವ ರಕ್ಷಿತ್, ನಾಟ್ಯವೈಭವದ ಬೇಡಿಕೆಯ ಕಲಾವಿದನಾಗಿ ಫಡ್ರೆ ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನಲೆಯಲ್ಲಿ ಭರತನಾಟ್ಯವನ್ನು ಕಲಿತವರಾಗಿ ತಮ್ಮ ಒಲವು ಭರತನಾಟ್ಯದ ಕಡೆಗೋ ಅಥವಾ ಯಕ್ಷಗಾನವೋ ಎಂಬರ್ಥದಲ್ಲಿ ರಕ್ಷಿತ್’ಗೆ ಪ್ರಶ್ನೆಗಳನ್ನೆಸೆದರೆ ಕೊನೆಗೆ ಬಂದು ನಿಲ್ಲುವ ಪ್ರೀತಿ, ಮಾತು ಅದು ಯಕ್ಷಗಾನ. ತೆಂಕು ಬಡಗು ಎರಡು ತಿಟ್ಟುಗಳಲ್ಲೂ ಬೇಡಿಕೆ ಗಳಿಸಿಕೊಂಡಿರುವ ಪ್ರತಿಭಾವಂತ ಕಲಾವಿದ ರಕ್ಷಿತ್ ಫಡ್ರೆ.

ಬಾಲ್ಯದಲ್ಲಿ ಹೆತ್ತವರ ಪ್ರೋತ್ಸಾಹದಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತವರು ರಕ್ಷಿತ್. ಇವರ ಯಕ್ಷಗಾನದ ಗುರುಗಳು ಗಿರೀಶ್ ನಾವುಡರು. ಏಳನೆಯ ತರಗತಿಯಲ್ಲಿ ಮೊದಲ ಬಾರಿಗೆ ಯಕ್ಷಗಾನದ ಕಂಸನ ಪಾತ್ರಕ್ಕಾಗಿ ಬಣ್ಣ ಹಚ್ಚುತ್ತಾರೆ. ಮುಂದೆ ಸತತ ಅಭ್ಯಾಸ ನಡೆಸಿ ವೃತ್ತಿಪರ ಮೇಳವಾದ ಬಪ್ಪನಾಡು ಮೇಳದಲ್ಲಿ ಅವಕಾಶ ಪಡೆದುಕೊಳ್ಳುತ್ತಾರೆ.

ಮೇಳದಲ್ಲಿ ಮೊದಲ ಬಾರಿಗೆ ಗುರುತಿಸಿಕೊಂಡದ್ದು ಪುಂಡು ವೇಷಗಳಲ್ಲಾದರೂ ಮುಂದೆ ಸ್ತ್ರೀ ಪಾತ್ರಕ್ಕೂ ಒಗ್ಗಿಕೊಳ್ಳುವಷ್ಟು ನೈಪುಣ್ಯತೆ ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸ್ತ್ರೀವೇಷದಲ್ಲಿ ಅಪಾರ ಜನಮನ್ನಣೆ ಗಳಿಸಿರುವ ರಕ್ಷಿತ್ ಮೊದಲ ಬಾರಿಗೆ ಸ್ತ್ರೀ ವೇಷ ಮಾಡಿದ್ದು ಬಪ್ಪನಾಡು ಮೇಳದಲ್ಲಿ ಸಪ್ತ ಮಾತೃಕೆಯರಲ್ಲೊಬ್ಬರಾಗಿ.


ಅದಾದ ಬಳಿಕ ಸಸಿಹಿತ್ಲು ಮೇಳದಲ್ಲಿ ಪಾಪಣ್ಣ ವಿಜಯ ಪ್ರಸಂಗದಲ್ಲಿ ಅನಿವಾರ್ಯವಾಗಿ ರೂಪಸುಂದರಿ ಪಾತ್ರ ಮಾಡುವ ಕಲಾವಿದ ಗೈರಾಗಿದ್ದ ಕಾರಣ ಆ ಪಾತ್ರವನ್ನು ರಕ್ಷಿತ್ ನಿಭಾಯಿಸಬೇಕಾಗಿ ಬಂತು. ಆ ಸಂದರ್ಭ ಹಿರಿಯ ಕಲಾವಿದರಾದ ರಮೇಶ್ ಕುಲಶೇಖರ್, ಸಂಜಯ್ ಕುಮಾರ್ ಗೋಣಿ ಬೀಡು ಮೊದಲಾದವರು ಸ್ತ್ರೀ ಪಾತ್ರ ಮಾಡುವಂತೆ ಬಹಳಷ್ಟು ಪ್ರೋತ್ಸಾಹ ನೀಡಿದ್ದಾರೆ.

ಯಕ್ಷಗಾನದ ನಿಪುಣ ಕಲಾವಿದನಾಗಿ ತಾನು ಬೆಳೆಯುವುದರ ಜೊತೆಗೆ ಯಕ್ಷಗುರುವಾಗಿ ಕೂಡಾ ಡಿಮಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ‘‘ನಮ್ಮಲ್ಲೊಂದು ಕ್ಲಾಸ್ ಮಾಡಿ, ನಮ್ಮಲ್ಲೊಂದು ಮಾಡಿ’’ ಎಂದು ಇವರಲ್ಲಿ ಯಕ್ಷಗಾನದ ತರಬೇತಿ ಪಡೆದುಕೊಳ್ಳಲು ಕ್ಯೂ ನಿಲ್ಲುವವರಿದ್ದಾರೆ. ಸದ್ಯ 600 ಕ್ಕೂ ಅಧಿಕ ಶಿಷ್ಯಂದಿರನ್ನು ಹೊಂದಿರುವ ರಕ್ಷಿತ್ ನಾಟ್ಯ ಶೈಲಿ ಮುಂದಿನ ತಲೆಮಾರಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳಷ್ಟಿದೆ. ಅಂದ ಹಾಗೆ ಪಟ್ಲ ಸತೀಶ್ ಶೆಟ್ಟಿಯವರ ಪುತ್ರ ಹೃದಾನ್ ಪಟ್ಲ ಕೂಡಾ ರಕ್ಷಿತ್ ಶೆಟ್ಟಿ ಪಡ್ರೆಯ ಶಿಷ್ಯ.


Sharing of best practices-
ಹೌದು… ಇಂತಹ ಒಂದು ದೊಡ್ಡ ಮಟ್ಟದ ಸಂಭ್ರಮ ರಕ್ಷಿತ್ ಶೆಟ್ಟಿ ಫಡ್ರೆ ಸಾರಥ್ಯದಲ್ಲಿ ಕಳೆದ ಆರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ರಕ್ಷಿತ್ ಶೆಟ್ಟಿ ವಿವಿಧ ಕಡೆಗಳಲ್ಲಿ ನಡೆಸಿಕೊಡುವ ಯಕ್ಷಗಾನ ತರಗತಿಗಳ ಆಯ್ದ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.. ರಕ್ಷಿತ್ ಮಾರ್ಗದರ್ಶನದಲ್ಲಿ ತಾವು ಕಲಿತ ಉತ್ತಮ ವಿಚಾರಗಳ ವಿನಿಮಯ ಆ ವಿದ್ಯಾರ್ಥಿಗಳ ನಡುವೆ ನಡೆಯೋದಕ್ಕೆ ಈ ಕಾರ್ಯಕ್ರಮ ಪ್ರೇರಣೆಯಾಗಿದೆ.

ಈ ಯಕ್ಷಗಾನ ಗಾನ ನಾಟ್ಯ ವೈಭವದ ರಸದೌತಣ ಸವಿಯುವ ಅವಕಾಶವನ್ನು ಮಕ್ಕಳ ಪೋಷಕರಿಗೂ, ಸಾರ್ವಜನಿಕರಿಗೂ ಒದಗಿಸಲಾಗಿದೆ.
ಈ ಬಾರಿಯ ಈ ವಾರ್ಷಿಕ ಕೂಟ ಯಕ್ಷ ಸಿದ್ದಿ ಸಂಭ್ರಮ-2019 ಎಂಬ ಶಿರೋನಾಮೆ ಯಡಿಯಲ್ಲಿ ನವಂಬರ್ ಅದ್ದೂರಿಯಾಗಿ ಮೂಡಿಬರಲಿದೆ. ಬಡಗು ತಿಟ್ಟಿನ ಭಾಗವತರಾದ ಪ್ರಸಾದ್ ಮೊಗೆಬೆಟ್ಟು ವಿರಚಿತ, ಯೋಧ ಧರ್ಮ, ವರಂ ಕರ್ಮ.. ಬಂದೂಕು ಮತ್ತು ಬದುಕು ಎಂಬ ವಿನೂತನ ಪರಿಕಲ್ಪನೆ ಯಕ್ಷಗಾನದಲ್ಲಿ ಜೀವ ಪಡೆದುಕೊಳ್ಳಲಿದೆ. ಪ್ರಮುಖವಾಗಿ ಯೋಧರಿಗಾಗಿಯೇ ಸಮರ್ಪಣೆಯಾಗುತ್ತಿರುವ ಈ ಕಾರ್ಯಕ್ರಮ ಅನೇಕ ಕುತೂಹಲಗಳಿಗೆ ಕಾರಣವಾಗಿದೆ.

ಯಾವುದೇ ಪಾತ್ರಕ್ಕೂ ಸೈ ಎಂಬ ಕಲಾವಿದ
ಶೃಂಗಾರ ಪಾತ್ರಗಳಿಗೆ ಬ್ರಾಂಡ್ ಆಗಿರುವ ರಕ್ಷಿತ್ ಗೂ ಸವಾಲಿನ ಪಾತ್ರಗಳನ್ನು ಮಾಡುವ ಮಹದಾಸೆಯಿದೆ. ಒಂದೇ ರೀತಿಯ ಪಾತ್ರಗಳಿಗೆ ಸೀಮಿತವಾಗಬಾರದೆನ್ನುವ ಪ್ರಜ್ಞೆಯಿದೆ. ಹಾಗಾಗಿ ಮುಂದೊಮ್ಮೆ ಅವರ ಪ್ರತಿಭೆ ಸ್ಪೋಟಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಮಹತ್ವಾಕಾಂಕ್ಷಿ ಈ ಯಕ್ಷ ಚೈತನ್ಯ
ಯಕ್ಷ ಚೈತನ್ಯ ಎಂಬ ಬಿರುದು ರಕ್ಷಿತ್ ಮುಕುಟಕ್ಕೆ ಮತ್ತೊಂದು ಗರಿ. ಎಷ್ಟೇ ಪ್ರಸಿದ್ಧಿ ಗಳಿಸಿಕೊಂಡರೂ ಕಲಿಕೆಗೆ ಕೊನೆಯೇ ಇಲ್ಲ ಅನ್ನೋ ಹಾಗೆ ರಕ್ಷಿತ್ ಕಲೆಯೆಂಬ ಸಾಗರದಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿ. ಯಾಕಂದ್ರೆ ಬಡಗು ತಿಟ್ಟಿನ ನಾಟ್ಯ ಪ್ರಕಾರವನ್ನು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾದ ಪ್ರತೀಶ್ ಅವರಿಂದ ಸಿದ್ಧಿಸಿಕೊಳ್ಳುತ್ತಿದ್ದಾರೆ.. ಮುಂದೆ ಬಡಗು ತಿಟ್ಟಿನ ತರಗತಿಯನ್ನು ನಡೆಸುವ ಇರಾದೆಯನ್ನು ಹೊಂದಿದ್ದಾರೆ.

ಇಂತಿಪ್ಪ ರಕ್ಷಿತ್ ಎಂಎಸ್ಸಿ ಕಂಪ್ಯೂಟರ್ ಸ್ನಾತಕ ಪದವೀಧರ. ಲಿಯಾ ಇನ್’ಫೋಟೆಕ್ ಕಂಪನಿಯಲ್ಲಿ ಉದ್ಯೋಗಿಯೂ ಹೌದು. ಫಡ್ರೆಯ ರತ್ನಾಕರ ಶೆಟ್ಟಿ ಮತ್ತು ಗೀತಾ ದಂಪತಿಗಳ 5 ಜನ ಮಕ್ಕಳಲ್ಲೊಬ್ಬರಾದ ರಕ್ಷಿತ್ ಇದೀಗ ಖಾಸಗಿ ಬದುಕಿನ ಪ್ರಮುಖ ಮಜಲನ್ನೇರಿದ್ದಾರೆ. ಇದೀಗ ತಾನೇ ನಿಶ್ಚಿತಾರ್ಥ ಮುಗಿಸಿಕೊಂಡು ಹೊಸ ಬಾಳಿನ ಹೊಸಿಲಲಿ ನಿಂತಿರುವ ಛಲಗಾರನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸೋಣ.

ಚಿತ್ರಕೃಪೆ ಮಂದಾರ ಮೂಡುಬಿದಿರೆ

 

Tags: ArtistBappanadu MelaCoastal ArticleDanceRakshit PadreSouth KendraSpecial ArticleTalentYakshaganaಕಲಾವಿದಕೂಚುಪುಡಿನೃತ್ಯಪ್ರತಿಭೆಬಪ್ಪನಾಡು ಮೇಳಯಕ್ಷ ಚೈತನ್ಯಯಕ್ಷಗಾನರಕ್ಷಿತ್ ಪಡ್ರೆ
Previous Post

ನೆರೆಯವನನ್ನು ನೂಕದೇ ಎಲ್ಲರನ್ನೂ ಒಗ್ಗೂಡಿಸಿ ಸಾಗಿದ ನಿಜ ನಾಯಕ ಡಿ.ಎಸ್. ಅರುಣ್

Next Post

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!