ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಅದು ಹೆಸರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಏರ್ಪಡಿಸಿದ್ದ ಪ್ರತಿಭಟನೆ. ಆದರೆ, ಅಲ್ಲಿ ನಡೆಸಿದ್ದು ಮಾತ್ರ ದೊಂಬಿ, ದಾಂಧಲೆ, ಹಿಂಸಾಚಾರ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕ್ರೂರ ಸಂಚು…
ಇಂತಹ ಘಟನೆಗೆ ಸಾಕ್ಷಿಯಾಗಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ಹೌದು… ಒಂದೆಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಭಾರತ ಪ್ರವಾಸದ ಹಿನ್ನೆಲೆಯಲ್ಲಿ ಇಂದು ನವದೆಹಲಿಗೆ ಭೇಟಿ ನೀಡಿದ್ದರೆ, ಇನ್ನೊಂದೆಡೆ ಇದೇ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ಸಮಾಜಘಾತುಕ ಶಕ್ತಿಗಳ ಹಿಂಸಾಚಾರ ಸೃಷ್ಠಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆಯಲ್ಲಿ ಓರ್ವ ಮುಖ್ಯ ಪೊಲೀಸ್ ಪೇದೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಕೆಂಪು ಟೀಶರ್ಟ್ ಧರಿಸಿದ್ದ ಶಾರುಖ್ ಎಂಬ ವ್ಯಕ್ತಿಯೊಬ್ಬ ರಿವಾಲ್ವಾರ್ ಹಿಡಿದು, ಗೋಡೆ ಹಿಂದಿನಿಂದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾನೆ.
ಆನಂತರ ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಆದರೆ, ಪೊಲೀಸರಿಗೇ ಆತ ಬೆದರಿಕೆ ಹಾಕಿ, ಹಿಂದೆ ಸರಿಯದಿದ್ದರೆ ಗುಂಡು ಹಾರಿಸುವುದಾಗಿ ಹೆದರಿಸಿದ್ದಾರೆ. ಈ ವೇಳೆ ಓರ್ವ ಕಾನ್ಸಟೇಬಲ್ ಆತನನ್ನು ಮನವೊಲಿಸಲು ಯತ್ನ ಮಾಡುತ್ತಾರೆ. ಆದರೆ, ದುಷ್ಕರ್ಮಿ ಆ ಪೇದೆಗೇ ಪಾಯಿಂಟ್ ಬ್ಲಾಕಲ್ಲಿ ಗನ್ ಇಟ್ಟು, ಹತ್ತಿರ ಬಂದರೆ ಗುಂಡು ಹಾರಿಸುವುದಾಗಿ ಹೆದರಿಸುತ್ತಾರೆ.
ಅಷ್ಟ ಹತ್ತಿರದಿಂದ ಗನ್ ಇಟ್ಟರೂ, ತಮ್ಮ ಮೇಲೆ ಆತ ಗುಂಡು ಹಾರಿಸುವ ಸಾಧ್ಯತೆಯೂ ಸಹ ಇದೆಯೆಂದು ತಿಳಿದಿದ್ದರೂ ಸಹ ಆ ಪೇದೆ ಒಂದು ಇಂಚೂ ಸಹ ನಿಂತ ಜಾಗದಿಂದ ಕದಲಿಲ್ಲ. ಬದಲಾಗಿ, ದುಷ್ಕರ್ಮಿಯ ಮನವೊಲಿಸುವ ನಿರಂತರ ಪ್ರಯತ್ನ ಮಾಡುತ್ತಾರೆ. ಕೊನೆಗೆ ಆತನನ್ನು ತನ್ನತ್ತ ಕರೆಸಿಕೊಳ್ಳುವಲ್ಲಿ ಪೇದ ಯಶಸ್ವಿಯಾಗುತ್ತಾರೆ. ತೀರಾ ಹತ್ತಿರ ಬಂದಾಗಲೂ ಸಹ ಆತ ಪೇದೆಯ ಮೇಲೆ ಗುಂಡು ಹಾರಿಸುತ್ತಾನೆ. ಆದರೆ, ಅದೃಷ್ಟವಷಾತ್ ಬಚಾವಾಗಿದ್ದಾರೆ.
Amidst the blood of today’s terrible clashes in Delhi, a word of praise for this Police constable who stood his ground as the gun-wielder approached him menacingly, pistol pointed. Only retreating when the coward stepped back. Calm nerves amidst the blood & chaos. pic.twitter.com/2z04ePE95P
— Shiv Aroor (@ShivAroor) February 24, 2020
ಈ ವೇಳೆ ತಮ್ಮ ಪ್ರಯತ್ನವನ್ನು ಮುಂದುವರೆಸಿದ ಪೇದೆ ಆತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮ್ಮನೆ ಚಿಂತಿಸಿ… ಸಿಎಎ ವಿರುದ್ಧ ಪ್ರತಿಭಟನೆಗೆ ಒಂದು ವ್ಯವಸ್ಥಿತ ಸಂಚು ನಡೆದು ಅದರ ಭಾಗವಾಗಿ ದೆಹಲಿಯಲ್ಲಿ ಹಿಂಸಾಚಾರ ನಡೆದು ಐದು ಮಂದಿ ಸಾವನ್ನಪ್ಪಿದ್ದಾರೆ. ಎಲ್ಲೆಲ್ಲೂ ಬಸ್, ಅಂಗಡಿ, ಕಾರು, ಬೈಕುಗಳಿಗೆ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ. ಇಂತಹ ಪ್ರಚೋದನಾತ್ಮಕ ತುರ್ತು ಪರಿಸ್ಥಿತಿಯಲ್ಲಿ ಪಿಸ್ತೂಲು ಹಿಡಿದು ಬಂದ ವ್ಯಕ್ತಿಯ ಮನಃಸ್ಥಿತಿ ಕೊಲ್ಲುವುದೇ ಆಗಿರುತ್ತದೆ.
ಆದರೆ, ಇಂತಹ ಕ್ಲಿಷ್ಟ ಸಂದರ್ಭದಲ್ಲಿಯೂ ಸಹ ಕರ್ತವ್ಯದಲ್ಲಿದ್ದ ಪೇದೆ ಈತನ ಮನವೊಲಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಒಂದು ವೇಳೆ ಆತ ಪೇದೆಯ ಮೇಲೆ ಗುಂಡು ಹಾರಿಸಿದ್ದರೆ? ಇಂತಹುದ್ದನ್ನು ಕಂಡಾಗ ಈ ದೇಶದ ಪೊಲೀಸರು ಎಂತಹ ದೈಹಿಕ, ಮಾನಸಿಕ ಸಾಮರ್ಥ್ಯವುಳ್ಳವರು, ದೇಶಕ್ಕಾಗಿ, ಜನರಿಗಾಗಿ ತಮ್ಮ ಪ್ರಾಣ ತ್ಯಾಗಕ್ಕೂ ಸಹ ಸಿದ್ದ ಎಂಬುದು ತಿಳಿಯುತ್ತದೆ.
ಎಲ್ಲೋ ಟ್ರಾಫಿಕ್ ಪೊಲೀಸರು ಲಂಚ ತೆಗೆದುಕೊಂಡರು, ವೆಹಿಕಲ್ ಡಾಕ್ಯುಮೆಂಟ್ ಕೇಳಿದರು ಎಂದು ಇಡಿಯ ಪೊಲೀಸ್ ವ್ಯವಸ್ಥೆಯನ್ನು ಹೀನಾಮಾನವಾಗಿ ಜರಿಯುವುದರಿಂದ ಇಂತಹ ವೀರಾಗ್ರಣಿಗಳಿಗೆ ಅವಮಾನ ಮಾಡಿದಂತಾಗುತ್ತದೆ. ಎಲ್ಲ ಕಡೆಗಳಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಇದ್ದೇ ಇರುತ್ತಾರೆ. ಆದರೆ, ಹಂಸ ಕ್ಷೀರ ನ್ಯಾಯದಂತೆ ನಮಗೆ ಬೇಕಿರುವ ಒಳ್ಳೆಯದನ್ನು ಮಾತ್ರ ತೆಗೆದುಕೊಂಡು ಕೆಟ್ಟದ್ದನ್ನು ತಿರಸ್ಕರಿಸೋಣ…
Get in Touch With Us info@kalpa.news Whatsapp: 9481252093
Discussion about this post