No Result
View All Result
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು
English Articles

A Second Chance at Life Through Deceased Organ Donation

by ಕಲ್ಪ ನ್ಯೂಸ್
February 3, 2026
0

Kalpa Media House  |  Bengaluru, Whitefield  | For 48-year-old Unnikrishnan, life for several years revolved around dialysis sessions, medications, and...

Read moreDetails
Bhaskara Parva: Generations of Journalism Students Reunite to Honour a Teacher Who Shaped Their Lives

Bhaskara Parva: Generations of Journalism Students Reunite to Honour a Teacher Who Shaped Their Lives

February 2, 2026
NITK Surathkal Inaugurates First Annual Sports Festival- ‘Endeavor 2026’

NITK Surathkal Inaugurates First Annual Sports Festival- ‘Endeavor 2026’

February 1, 2026
Samsung Sets Two Guinness World Records with its India

Samsung Sets Two Guinness World Records with its India

January 31, 2026
ಮೈಸೂರು | ಮಹಾರಾಣಿ ಮಹಿಳಾ ವಿದ್ಯಾರ್ಥಿನಿಯರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕೌಶಲ್ಯ ತರಬೇತಿ

Maharani’s Science College Collaboration Empowers Students with Industry-Ready Skills

January 31, 2026
  • Advertise With Us
  • Grievances
  • About Us
  • Contact Us
Friday, February 6, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 29, 2019
in Special Articles
0
ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ

Image Credit: Internet

Share on FacebookShare on TwitterShare on WhatsApp

ನಮಸ್ಕಾರ ಸ್ನೇಹಿತರೆ ಇವತ್ತು ನಾನು ಬರಿತಾ ಇರೋದು ನಾನು ಅಪಾರ ಗೌರವ ನೀಡುವ ನರ್ಸಿಂಗ್ ವೃತ್ತಿಯಲ್ಲಿ ನಮ್ಮ ಸೇವೆ ಮಾಡುತ್ತಿರುವವರ ಬಗ್ಗೆ.
ಹೌದು ನಾವೆಲ್ಲಾದ್ರೂ ಅರೋಗ್ಯ ಕೈ ಕೊಟ್ಟೋ… ಇಲ್ಲ ಏನಾದರು ಕಾಯಿಲೆಯಿಂದ ಬಳಲುತ್ತ ಆಸ್ಪತ್ರೆ ಸೇರಿದಾಗ ನಮ್ಮ ಮನೆಯವರೋ, ರಕ್ತ ಸಂಬಂಧಿಗಳೋ, ಅಥವಾ ಸ್ನೇಹಿತರಂತೆ ನಮ್ಮ ಸೇವೆಯನ್ನು ಮಾಡುವ ಅದೆಷ್ಟೋ ನರ್ಸ್, ದಾದಿ ಅಥವಾ ಶುಶ್ರುಕಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ.

ಯಾರೋ ಒಬ್ಬರು, ಇಬ್ಬರು ಮಾಡಿದ ತಪ್ಪಿಗೋ ಇಲ್ಲ ನಮ್ಮ ಬೇಜವಾಬ್ದಾರಿಯಿಂದಲೋ ನಮ್ಮವರನ್ನು ಕಳೆದುಕೊಂಡ್ರೆ ಅಥವಾ ಒಂದು ಇಂಜೆಕ್ಷನ್ ಸೂಜಿ ಚುಚ್ಚೋವಾಗ ಸ್ವಲ್ಲ ನೋವಾದ್ರೆ, ಇಲ್ಲಾ ಇನ್ನೇನಾದ್ರು ಸಣ್ಣ ತಪ್ಪು ಅವರಿಂದ ಆದ್ರೂ ಇಡೀ ಆ ವೃತ್ತಿಯಲ್ಲಿರುವ ಎಲ್ಲರಿಗೂ ಬಾಯಿಗೆ ಬಂದಂತೆ ಬೈಯುವುದುಂಟು, ಇನ್ನೂ ಕೆಲವರು ಹಿಡಿ ಶಾಪ ಹಾಕುವುದೂ ಉಂಟು.

ನಮ್ಮಂತೆ ಅವರಿಗೂ ಒಂದು ಜೀವನ ಇದೆ, ಅವರಿಗೂ ಸಂಬಂಧಿಕರು, ಸ್ನೇಹಿತರು ಎನ್ನುವ ಸಂಬಂಧಗಳಿವೆ, ಹೆಚ್ಚಾಗಿ ಅವರಿಗೂ ಒಂದು ಮನಸ್ಸು ಎನ್ನುವುದಿದೆ.

ಸ್ನೇಹಿತರೆ ಅದೆಷ್ಟೋ ಬಾರಿ ನರ್ಸ್‌ಗಳನ್ನು ನಮ್ಮ ಮನೆಯ ಕೆಲಸದವರ ರೀತಿ ನಡೆಸಿಕೊಳ್ಳುವುದು ಇದೆ.

ಒಮ್ಮೆ ಯೋಚಿಸೋಣ, ನಮ್ಮ ಸಂಬಂಧಿಕರೆ ಯಾರಾದರೂ ಹಾಸಿಗೆ ಹಿಡಿದರೆ, ಅಥವಾ ಅವರಿಗೆ ಎನಾದರು ಮಾರಕವಾದ ರೋಗವಿದ್ದರೆ ಅವರು ಮಾಡಿಕೊಂಡ ಹೇಸಿಗೆಯನ್ನು ತೆಗೆಯಲು ಹೇಸುವ ನಾವು, ಅವರನ್ನು ಮುಟ್ಟಲು ಅಸಹ್ಯ ಪಡುವ ನಾವುಗಳು, ಅದೆಲ್ಲವನ್ನು ಮರೆತು ವೃತ್ತಿಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು, ಮಾನವೀಯತೆಯಿಂದ ಅಂತಹ ರೋಗಿಗಳನ್ನು ಆರೈಕೆ ಮಾಡುವ ನರ್ಸ್‌ಗಳಿಗೆ ಬೈಯಲು ನಾವೆಷ್ಟು ಅರ್ಹರು?

ಎಲ್ಲಾದರು ಅವರು ಇಂತಹ ಮಾರಕ ಕಾಯಿಲೆ ಇರುವವರನ್ನು, ಸುಟ್ಟು ಕರಕಲಾದ ದೇಹವನ್ನು, ಯಾವುದೋ ವಾಹನದಡಿ ಸಿಕ್ಕಿ ಭೀಕರವಾಗಿ ಕಾಣಿಸುವ ದೇವವನ್ನು, ಕಜ್ಜಿ ಹಿಡಿದು ಹೇಸಿ ಹೋಗಿರುವ ದೇಹವನ್ನು ಮುಟ್ಟಲು ಅಸಹ್ಯಪಟ್ಟು ನಾವು ಮುಟ್ಟುವುದಿಲ್ಲ, ಆರೈಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರೆ ಇಂತಹ ಪರಿಸ್ಥಿತಿಯಲ್ಲಿರುವವರೆಲ್ಲ ನೇರವಾಗಿ ಸೇರಬೇಕಾಗಿರುವುದು ಯಮ ಲೋಕವನ್ನು.

ಇಷ್ಟೆಲ್ಲಾ ಓದಿದವರು ಈಗ ಯೋಚಿಸಬಹುದು ಅವರೇನು ಸುಮ್ಮನೆ ನೋಡಿಕೊಳ್ತಾರಾ? ಅವರು ತಿಂಗಳಿಗೆ ಸರಿಯಾಗಿ ಸಂಬಳ ಎಣಿಸುವುದಿಲ್ವ? ಅವರು ಮಾಡಿದ ಆರೈಕೆಗೆ ಲಕ್ಷಾಂತರ ಹಣ ಕೊಡುವುದಿಲ್ವ ಅಂತ…..ನಿಮಗೆ ಹಾಗೆ ಅನ್ನಿಸುವುದು ಸಹಜ ಆದರೆ ಒಮ್ಮೆ ಯೋಚಿಸಿ ಹಣಕೊಟ್ಟರೆ ನೋಡಿಕೊಳ್ತಾರೆ ಅನ್ನೋ ಯೋಚನೆ ಇರುವ ನಾವು ಯಾಕೆ ನಮಗೆ ಜನ್ಮವನ್ನೇ ಕೊಟ್ಟ ನಮ್ಮ ಹೆತ್ತವರು ಹಾಸಿಗೆ ಹಿಡಿದಾಗ ಅವರ ಹೇಸಿಗೆ ನೋಡಿ ಯಾಕೆ ಅಸಹ್ಯ ಪಡುತ್ತೇವೆ…? ನಮಗೆ ನಮ್ಮ ಹೆತ್ತವರು ಕೊಟ್ಟ ಜನ್ಮ ನಾವು ನರ್ಸ್‌ಗಳಿಗೆ ಕೊಡುವ ಲಕ್ಷಾಂತರ ರೂಗಳಿಗೂ ಮಿಗಿಲಾಗಿದ್ದು ಅಲ್ವಾ?

ಹಾಗೆ ಈ ಕೆಳಗಿನ ವೀಡಿಯೋ ಒಮ್ಮೆ ಪೂರ್ತಿಯಾಗಿ ನೋಡಿ, (ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬಾತನಿಂದ ಕೃತ್ಯ, ಬಗಂಬಿಲ ನಿವಾಸಿ ದೀಕ್ಷಾ ಇರಿತಕ್ಕೊಳಗಾದ ವಿದ್ಯಾರ್ಥಿನಿ ವಿದ್ಯಾರ್ಥಿನಿಗೆ ಯುವಕನೋರ್ವನಿಂದ ಚೂರಿ ಇರಿತ ದೇರಳಕಟ್ಟೆ ಬಗಂಬಿಲ ಸಮೀಪ ನಡೆದ ಘಟನೆ).
ಯಾವುದೋ ತಂದೆ ತಾಯಿ ಹೆತ್ತ ಮಗಳನ್ನು ಹಾಡಹಗಲೇ ಒಬ್ಬ ಕಿರಾತಕ ಚೂರಿಯಿಂದ ಇರಿಯುತ್ತಾನೆ, ಆಕೆಯನ್ನು ಇರಿದು ತಾನೂ ಹುಚ್ಚನಂತೆ ಕತ್ತನ್ನು ಇರಿದುಕೊಳ್ಳುತ್ತಾನೆ. ಸುತ್ತಮುತ್ತ ಬೇಕಾದಷ್ಟು ಜನ ಮೂಖವಿಸ್ಮಿತರಂತೆ ನಿಂತು ನೋಡುತ್ತಾ, ಭಯದಿಂದ ಕಿರುಚುತ್ತಾ, ಇನ್ನೂ ಕೆಲವರು ತಮಗೆ ಸಾಧ್ಯವಾದ ರೀತಿಯಲ್ಲೆಲ್ಲ ಆ ಭಯಾನಕ ದೃಶ್ಯವನ್ನು ತಮ್ಮ ಪೋನ್’ನಲ್ಲಿ ಸೆರೆ ಹಿಡಿಯುತ್ತಿದ್ದಾರೆಯೇ ಹೊರತು ಯಾರೊಬ್ಬರು ಆ ಹೆಣ್ಣು ಮಗುವನ್ನು ಕಾಪಾಡಲು ಮುಂದಾಗಲಿಲ್ಲ. ಕಾರಣ ಇಷ್ಟೆ, ಜೀವದ ಭಯ. ಎಲ್ಲಿ ಆ ಯುವಕ ಕೈಯಲ್ಲಿರುವ ಚಾಕುವಿನಿಂದ ನಮಗೆ ಇರಿಯುತ್ತಾನೋ ಎನ್ನೋ ಭಯ.

ಆದರೆ ಅಲ್ಲಿ ಕೊನೆಯಲ್ಲಿ ಆಂಬ್ಯುಲೆನ್ಸ್‌ ಬಂದ ನಂತರದ ದೃಶ್ಯವನ್ನು ಸರಿಯಾಗಿ ಗಮನಿಸಿ. ಅದರಿಂದ ಇಳಿದು ಬಂದ ನರ್ಸ್ ಒಬ್ಬರು (ಅದು ಕೂಡ ಹುಡುಗಿ) ಆ ಹುಡುಗನ ಕೈಯಲ್ಲಿರುವ ಚಾಕುವನ್ನು ಲೆಕ್ಕಿಸದೆ, ಜೀವದ ಹಂಗನ್ನು ತೊರೆದು ಆ ಇಬ್ಬರ ಪ್ರಾಣ ರಕ್ಷಣೆಯಲ್ಲಿ ತೊಡಗುತ್ತಾರೆ. ಅವರು ಯಾರೋ ಗೊತ್ತಿಲ್ಲ, ಆದರೆ ಅವರ ಆ ಧೈರ್ಯಕ್ಕೆ, ಮಾನವೀಯತೆಗೆ, ಅವರ ಸೇವೆಗೆ ಇಲ್ಲಿಂದಲೆ ಒಂದು ಸೆಲ್ಯೂಟ್. ಇದೊಂದು ಸಣ್ಣ ಉದಾಹರಣೆ ಅಷ್ಟೆ. ಇಂತಹ ಸಾವಿರಾರು ಘಟನೆಗಳು ದೈನಂದಿನ ಜೀವನದಲ್ಲಿ ನಡೆಯುತ್ತಾ ಇರುತ್ತದೆ.

ಪ್ರತಿಯೊಬ್ಬರ ವೃತ್ತಿಯು ಗೌರವಯುತವಾದದ್ದು. ಅದರಲ್ಲೂ ಈ ಪರರ ಸೇವೆ ಮಾಡುವ ಈ ನರ್ಸಿಂಗ್ ವೃತ್ತಿಯನ್ನು ನಾನು ಯಾವಾಗಲೂ ಗೌರವದಿಂದ ನೋಡುತ್ತೇನೆ.

ಖಂಡಿತವಾಗಿ ಎಲ್ಲೋ ಒಂದೆರಡು ಆಸ್ಪತ್ರೆಗಳಲ್ಲಿ ಯಾರೋ ಒಂದಿಬ್ಬರು ತಪ್ಪನ್ನು ಮಾಡಿರಬಹುದು, ಮುಂದೆ ಮಾಡಲೂಬಹುದು. ಆ ಕಾರಣಕ್ಕೆ ಆ ವೃತ್ತಿಯಲ್ಲಿರುವ ಎಲ್ಲರನ್ನೂ ಕೆಟ್ಟದ್ದಾಗಿ ಕಾಣದೆ, ಕೀಳಾಗಿ ಕಾಣದೆ ಗೌರವಿಸೋಣ. ಅದೆಷ್ಟೋ ಜೀವಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ ನರ್ಸಿಂಗ್ ವೃತ್ತಿಯಲ್ಲಿರುವ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು.

ಇಂತಿ ನಿಮ್ಮವ
ಪ್ರದೀಪ್ ಪುತ್ರನ್ ಕೋಟ

Tags: AmbulanceKannada ArticleMangaloreMangalore Student MurderMurderNurseNursingಆಂಬ್ಯುಲೆನ್ಸ್‌ನರ್ಸಿಂಗ್ನರ್ಸ್‌ಭಯಾನಕ ದೃಶ್ಯಮಂಗಳೂರು
Share1117Tweet124Send
Previous Post

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

Next Post

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಸಾಗರ ಮಾರಿಕಾಂಬಾ ಜಾತ್ರೆಗೆ ಯಶವಂತಪುರ-ತಾಳಗುಪ್ಪ 2 ಸ್ಪೆಷಲ್ ರೈಲುಗಳು | ಹೀಗಿದೆ ಡೀಟೇಲ್ಸ್

January 31, 2026
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ಈ ದಿನಗಳಂದು ಬೆಂಗಳೂರು-ಹೊಸಪೇಟೆ, ಧಾರವಾಡ ಸೇರಿ ಹಲವು ರೈಲು ಸಂಚಾರದಲ್ಲಿ ಬದಲಾವಣೆ

February 6, 2026
ಶಿವಮೊಗ್ಗ | ಫೆ.7, 8 ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಶಿವಮೊಗ್ಗ | ಫೆ.7, 8 ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

February 6, 2026
ಭದ್ರಾವತಿ | ಜನವಸತಿ ಪ್ರದೇಶದಲ್ಲಿ ಕುರಿ ಹೊತ್ತೊಯ್ದ ಚಿರತೆ | ಸ್ಥಳೀಯರಲ್ಲಿ ಆತಂಕ

ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ | ಸ್ಥಳೀಯರಲ್ಲಿ ಆತಂಕ

February 6, 2026
JCI ಚಿರಂತನ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್, ಕಾರ್ಯದರ್ಶಿಯಾಗಿ ಮಮತಾ ಆಯ್ಕೆ

JCI ಚಿರಂತನ ಅಧ್ಯಕ್ಷರಾಗಿ ಪೃಥ್ವಿ ನಾಗರಾಜ್, ಕಾರ್ಯದರ್ಶಿಯಾಗಿ ಮಮತಾ ಆಯ್ಕೆ

February 6, 2026
ಗಮನಿಸಿ! ಜ.21-22ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

ಗಮನಿಸಿ! ಫೆ.7ರಂದು ಶಿವಮೊಗ್ಗ ನಗರದ ಹಲವು ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

February 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL