No Result
View All Result
ಒಂದು ವರ್ಷ ಪೂರ್ಣಗೊಳಿಸಿದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆ | ಮಲ್ಟಿಸ್ಪೆಷಾಲಿಟಿ ಆರೈಕೆಯ ಪ್ರತಿಬಿಂಬ
English Articles

Hennur Sparsh Hospital Completes One Year | A Reflection of Multispecialty Care

by ಕಲ್ಪ ನ್ಯೂಸ್
May 25, 2026
0

Kalpa Media House  |  Bengaluru  | SPARSH Hospital, Hennur Road has completed one year of operations, with its first-year clinical...

Read moreDetails
ಸ್ಯಾಂಡಲ್ವುಡ್ ಸಲಗ-ರಚಿತಾ ರಾಮ್ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಇದೇ ಶನಿವಾರ ಜೀ ಕನ್ನಡದಲ್ಲಿ

Duniya Vijay, Rachita Ram & Raj B. Shetty’s Landlord Premieres This Saturday on Zee Kannada

May 22, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
  • Advertise With Us
  • Grievances
  • About Us
  • Contact Us
Thursday, May 28, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 29, 2019
in Special Articles
0
ನರ್ಸ್‌ಗಳ ಬಗ್ಗೆ ತಾತ್ಸಾರ ಮಾಡುವ ಮುನ್ನ ಈ ಲೇಖನ ಓದಿ, ಅವರ ತ್ಯಾಗ ತಿಳಿಯಿರಿ

Image Credit: Internet

Share on FacebookShare on TwitterShare on WhatsApp

ನಮಸ್ಕಾರ ಸ್ನೇಹಿತರೆ ಇವತ್ತು ನಾನು ಬರಿತಾ ಇರೋದು ನಾನು ಅಪಾರ ಗೌರವ ನೀಡುವ ನರ್ಸಿಂಗ್ ವೃತ್ತಿಯಲ್ಲಿ ನಮ್ಮ ಸೇವೆ ಮಾಡುತ್ತಿರುವವರ ಬಗ್ಗೆ.
ಹೌದು ನಾವೆಲ್ಲಾದ್ರೂ ಅರೋಗ್ಯ ಕೈ ಕೊಟ್ಟೋ… ಇಲ್ಲ ಏನಾದರು ಕಾಯಿಲೆಯಿಂದ ಬಳಲುತ್ತ ಆಸ್ಪತ್ರೆ ಸೇರಿದಾಗ ನಮ್ಮ ಮನೆಯವರೋ, ರಕ್ತ ಸಂಬಂಧಿಗಳೋ, ಅಥವಾ ಸ್ನೇಹಿತರಂತೆ ನಮ್ಮ ಸೇವೆಯನ್ನು ಮಾಡುವ ಅದೆಷ್ಟೋ ನರ್ಸ್, ದಾದಿ ಅಥವಾ ಶುಶ್ರುಕಿ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ.

ಯಾರೋ ಒಬ್ಬರು, ಇಬ್ಬರು ಮಾಡಿದ ತಪ್ಪಿಗೋ ಇಲ್ಲ ನಮ್ಮ ಬೇಜವಾಬ್ದಾರಿಯಿಂದಲೋ ನಮ್ಮವರನ್ನು ಕಳೆದುಕೊಂಡ್ರೆ ಅಥವಾ ಒಂದು ಇಂಜೆಕ್ಷನ್ ಸೂಜಿ ಚುಚ್ಚೋವಾಗ ಸ್ವಲ್ಲ ನೋವಾದ್ರೆ, ಇಲ್ಲಾ ಇನ್ನೇನಾದ್ರು ಸಣ್ಣ ತಪ್ಪು ಅವರಿಂದ ಆದ್ರೂ ಇಡೀ ಆ ವೃತ್ತಿಯಲ್ಲಿರುವ ಎಲ್ಲರಿಗೂ ಬಾಯಿಗೆ ಬಂದಂತೆ ಬೈಯುವುದುಂಟು, ಇನ್ನೂ ಕೆಲವರು ಹಿಡಿ ಶಾಪ ಹಾಕುವುದೂ ಉಂಟು.

ನಮ್ಮಂತೆ ಅವರಿಗೂ ಒಂದು ಜೀವನ ಇದೆ, ಅವರಿಗೂ ಸಂಬಂಧಿಕರು, ಸ್ನೇಹಿತರು ಎನ್ನುವ ಸಂಬಂಧಗಳಿವೆ, ಹೆಚ್ಚಾಗಿ ಅವರಿಗೂ ಒಂದು ಮನಸ್ಸು ಎನ್ನುವುದಿದೆ.

ಸ್ನೇಹಿತರೆ ಅದೆಷ್ಟೋ ಬಾರಿ ನರ್ಸ್‌ಗಳನ್ನು ನಮ್ಮ ಮನೆಯ ಕೆಲಸದವರ ರೀತಿ ನಡೆಸಿಕೊಳ್ಳುವುದು ಇದೆ.

ಒಮ್ಮೆ ಯೋಚಿಸೋಣ, ನಮ್ಮ ಸಂಬಂಧಿಕರೆ ಯಾರಾದರೂ ಹಾಸಿಗೆ ಹಿಡಿದರೆ, ಅಥವಾ ಅವರಿಗೆ ಎನಾದರು ಮಾರಕವಾದ ರೋಗವಿದ್ದರೆ ಅವರು ಮಾಡಿಕೊಂಡ ಹೇಸಿಗೆಯನ್ನು ತೆಗೆಯಲು ಹೇಸುವ ನಾವು, ಅವರನ್ನು ಮುಟ್ಟಲು ಅಸಹ್ಯ ಪಡುವ ನಾವುಗಳು, ಅದೆಲ್ಲವನ್ನು ಮರೆತು ವೃತ್ತಿಧರ್ಮವನ್ನು ಮನಸ್ಸಿನಲ್ಲಿಟ್ಟುಕೊಂಡು, ಮಾನವೀಯತೆಯಿಂದ ಅಂತಹ ರೋಗಿಗಳನ್ನು ಆರೈಕೆ ಮಾಡುವ ನರ್ಸ್‌ಗಳಿಗೆ ಬೈಯಲು ನಾವೆಷ್ಟು ಅರ್ಹರು?

ಎಲ್ಲಾದರು ಅವರು ಇಂತಹ ಮಾರಕ ಕಾಯಿಲೆ ಇರುವವರನ್ನು, ಸುಟ್ಟು ಕರಕಲಾದ ದೇಹವನ್ನು, ಯಾವುದೋ ವಾಹನದಡಿ ಸಿಕ್ಕಿ ಭೀಕರವಾಗಿ ಕಾಣಿಸುವ ದೇವವನ್ನು, ಕಜ್ಜಿ ಹಿಡಿದು ಹೇಸಿ ಹೋಗಿರುವ ದೇಹವನ್ನು ಮುಟ್ಟಲು ಅಸಹ್ಯಪಟ್ಟು ನಾವು ಮುಟ್ಟುವುದಿಲ್ಲ, ಆರೈಕೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರೆ ಇಂತಹ ಪರಿಸ್ಥಿತಿಯಲ್ಲಿರುವವರೆಲ್ಲ ನೇರವಾಗಿ ಸೇರಬೇಕಾಗಿರುವುದು ಯಮ ಲೋಕವನ್ನು.

ಇಷ್ಟೆಲ್ಲಾ ಓದಿದವರು ಈಗ ಯೋಚಿಸಬಹುದು ಅವರೇನು ಸುಮ್ಮನೆ ನೋಡಿಕೊಳ್ತಾರಾ? ಅವರು ತಿಂಗಳಿಗೆ ಸರಿಯಾಗಿ ಸಂಬಳ ಎಣಿಸುವುದಿಲ್ವ? ಅವರು ಮಾಡಿದ ಆರೈಕೆಗೆ ಲಕ್ಷಾಂತರ ಹಣ ಕೊಡುವುದಿಲ್ವ ಅಂತ…..ನಿಮಗೆ ಹಾಗೆ ಅನ್ನಿಸುವುದು ಸಹಜ ಆದರೆ ಒಮ್ಮೆ ಯೋಚಿಸಿ ಹಣಕೊಟ್ಟರೆ ನೋಡಿಕೊಳ್ತಾರೆ ಅನ್ನೋ ಯೋಚನೆ ಇರುವ ನಾವು ಯಾಕೆ ನಮಗೆ ಜನ್ಮವನ್ನೇ ಕೊಟ್ಟ ನಮ್ಮ ಹೆತ್ತವರು ಹಾಸಿಗೆ ಹಿಡಿದಾಗ ಅವರ ಹೇಸಿಗೆ ನೋಡಿ ಯಾಕೆ ಅಸಹ್ಯ ಪಡುತ್ತೇವೆ…? ನಮಗೆ ನಮ್ಮ ಹೆತ್ತವರು ಕೊಟ್ಟ ಜನ್ಮ ನಾವು ನರ್ಸ್‌ಗಳಿಗೆ ಕೊಡುವ ಲಕ್ಷಾಂತರ ರೂಗಳಿಗೂ ಮಿಗಿಲಾಗಿದ್ದು ಅಲ್ವಾ?

ಹಾಗೆ ಈ ಕೆಳಗಿನ ವೀಡಿಯೋ ಒಮ್ಮೆ ಪೂರ್ತಿಯಾಗಿ ನೋಡಿ, (ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬಾತನಿಂದ ಕೃತ್ಯ, ಬಗಂಬಿಲ ನಿವಾಸಿ ದೀಕ್ಷಾ ಇರಿತಕ್ಕೊಳಗಾದ ವಿದ್ಯಾರ್ಥಿನಿ ವಿದ್ಯಾರ್ಥಿನಿಗೆ ಯುವಕನೋರ್ವನಿಂದ ಚೂರಿ ಇರಿತ ದೇರಳಕಟ್ಟೆ ಬಗಂಬಿಲ ಸಮೀಪ ನಡೆದ ಘಟನೆ).
ಯಾವುದೋ ತಂದೆ ತಾಯಿ ಹೆತ್ತ ಮಗಳನ್ನು ಹಾಡಹಗಲೇ ಒಬ್ಬ ಕಿರಾತಕ ಚೂರಿಯಿಂದ ಇರಿಯುತ್ತಾನೆ, ಆಕೆಯನ್ನು ಇರಿದು ತಾನೂ ಹುಚ್ಚನಂತೆ ಕತ್ತನ್ನು ಇರಿದುಕೊಳ್ಳುತ್ತಾನೆ. ಸುತ್ತಮುತ್ತ ಬೇಕಾದಷ್ಟು ಜನ ಮೂಖವಿಸ್ಮಿತರಂತೆ ನಿಂತು ನೋಡುತ್ತಾ, ಭಯದಿಂದ ಕಿರುಚುತ್ತಾ, ಇನ್ನೂ ಕೆಲವರು ತಮಗೆ ಸಾಧ್ಯವಾದ ರೀತಿಯಲ್ಲೆಲ್ಲ ಆ ಭಯಾನಕ ದೃಶ್ಯವನ್ನು ತಮ್ಮ ಪೋನ್’ನಲ್ಲಿ ಸೆರೆ ಹಿಡಿಯುತ್ತಿದ್ದಾರೆಯೇ ಹೊರತು ಯಾರೊಬ್ಬರು ಆ ಹೆಣ್ಣು ಮಗುವನ್ನು ಕಾಪಾಡಲು ಮುಂದಾಗಲಿಲ್ಲ. ಕಾರಣ ಇಷ್ಟೆ, ಜೀವದ ಭಯ. ಎಲ್ಲಿ ಆ ಯುವಕ ಕೈಯಲ್ಲಿರುವ ಚಾಕುವಿನಿಂದ ನಮಗೆ ಇರಿಯುತ್ತಾನೋ ಎನ್ನೋ ಭಯ.

ಆದರೆ ಅಲ್ಲಿ ಕೊನೆಯಲ್ಲಿ ಆಂಬ್ಯುಲೆನ್ಸ್‌ ಬಂದ ನಂತರದ ದೃಶ್ಯವನ್ನು ಸರಿಯಾಗಿ ಗಮನಿಸಿ. ಅದರಿಂದ ಇಳಿದು ಬಂದ ನರ್ಸ್ ಒಬ್ಬರು (ಅದು ಕೂಡ ಹುಡುಗಿ) ಆ ಹುಡುಗನ ಕೈಯಲ್ಲಿರುವ ಚಾಕುವನ್ನು ಲೆಕ್ಕಿಸದೆ, ಜೀವದ ಹಂಗನ್ನು ತೊರೆದು ಆ ಇಬ್ಬರ ಪ್ರಾಣ ರಕ್ಷಣೆಯಲ್ಲಿ ತೊಡಗುತ್ತಾರೆ. ಅವರು ಯಾರೋ ಗೊತ್ತಿಲ್ಲ, ಆದರೆ ಅವರ ಆ ಧೈರ್ಯಕ್ಕೆ, ಮಾನವೀಯತೆಗೆ, ಅವರ ಸೇವೆಗೆ ಇಲ್ಲಿಂದಲೆ ಒಂದು ಸೆಲ್ಯೂಟ್. ಇದೊಂದು ಸಣ್ಣ ಉದಾಹರಣೆ ಅಷ್ಟೆ. ಇಂತಹ ಸಾವಿರಾರು ಘಟನೆಗಳು ದೈನಂದಿನ ಜೀವನದಲ್ಲಿ ನಡೆಯುತ್ತಾ ಇರುತ್ತದೆ.

ಪ್ರತಿಯೊಬ್ಬರ ವೃತ್ತಿಯು ಗೌರವಯುತವಾದದ್ದು. ಅದರಲ್ಲೂ ಈ ಪರರ ಸೇವೆ ಮಾಡುವ ಈ ನರ್ಸಿಂಗ್ ವೃತ್ತಿಯನ್ನು ನಾನು ಯಾವಾಗಲೂ ಗೌರವದಿಂದ ನೋಡುತ್ತೇನೆ.

ಖಂಡಿತವಾಗಿ ಎಲ್ಲೋ ಒಂದೆರಡು ಆಸ್ಪತ್ರೆಗಳಲ್ಲಿ ಯಾರೋ ಒಂದಿಬ್ಬರು ತಪ್ಪನ್ನು ಮಾಡಿರಬಹುದು, ಮುಂದೆ ಮಾಡಲೂಬಹುದು. ಆ ಕಾರಣಕ್ಕೆ ಆ ವೃತ್ತಿಯಲ್ಲಿರುವ ಎಲ್ಲರನ್ನೂ ಕೆಟ್ಟದ್ದಾಗಿ ಕಾಣದೆ, ಕೀಳಾಗಿ ಕಾಣದೆ ಗೌರವಿಸೋಣ. ಅದೆಷ್ಟೋ ಜೀವಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ ನರ್ಸಿಂಗ್ ವೃತ್ತಿಯಲ್ಲಿರುವ ಸ್ನೇಹಿತರಿಗೆ ಹೃತ್ಪೂರ್ವಕ ವಂದನೆಗಳು.

ಇಂತಿ ನಿಮ್ಮವ
ಪ್ರದೀಪ್ ಪುತ್ರನ್ ಕೋಟ

Tags: AmbulanceKannada ArticleMangaloreMangalore Student MurderMurderNurseNursingಆಂಬ್ಯುಲೆನ್ಸ್‌ನರ್ಸಿಂಗ್ನರ್ಸ್‌ಭಯಾನಕ ದೃಶ್ಯಮಂಗಳೂರು
Share1121Tweet126Send
Previous Post

ಕರಾವಳಿ ಸುಂದರಿಗೆ ಮಿಸ್ ಯುನಿವರ್ಸ್ ಆಸ್ಟ್ರೇಲಿಯಾ ಕಿರೀಟ

Next Post

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

ವಿಶ್ವಮಟ್ಟದಲ್ಲಿ ಹರಿದಾಸ ಸಂಸ್ಕೃತಿ ಪ್ರಚಾರವನ್ನೇ ತಪಸ್ಸಾಗಿಸಿಕೊಂಡ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
“ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ | ವಿದ್ಯಾರ್ಥಿ ಸ್ನೇಹಿ ಗಣಿತ ಕಲಿಕೆಗೆ ನೂತನ ಪ್ರಯತ್ನ

“ನೂತನ ಗಣಿತದ ಸಂಪನ್ಮೂಲ ಪುಸ್ತಕ” ಲೋಕಾರ್ಪಣೆ | ವಿದ್ಯಾರ್ಥಿ ಸ್ನೇಹಿ ಗಣಿತ ಕಲಿಕೆಗೆ ನೂತನ ಪ್ರಯತ್ನ

May 27, 2026
ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭವಿಷ್ಯ

May 27, 2026
ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಅವರಿಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪ್ರದಾನ

May 27, 2026
ಹಿಂದೂ ವಿವಾಹ ಪದ್ಧತಿ ಪಾಲಿಸದ ಮದುವೆಯು ಅಮಾನ್ಯ: ಸುಪ್ರೀಂ ಕೋರ್ಟ್

SIR ಪ್ರಕ್ರಿಯೆ ವಿರುದ್ಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ನ್ಯಾಯಪೀಠದ ಸ್ಪಷ್ಟನೆಯೇನು?

May 27, 2026
ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

ಯಶಸ್ಸಿನ ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ: ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರೀ

May 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL