ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ವಿಶ್ವ ವಿಖ್ಯಾತ ಸಂಗೀತ ನಿರ್ದೇಶಕ #MusicDirector ಇಳಯರಾಜ ಅವರಿಗೆ ತಮಿಳುನಾಡಿನ ದೇವಾಲಯವೊಂದರ ಗರ್ಭಗುಡಿ ಪ್ರವೇಶಕ್ಕೆ ತಡೆಯೊಡ್ಡುವ ಮೂಲಕ ಅವಮಾನ ಮಾಡಲಾಗಿದೆ ಎಂಬ ಆರೋಪವೊಂದು ಕೇಳಿಬಂದಿದೆ.
ತಮಿಳುನಾಡಿನ #TamilNadu ಶ್ರೀವಲ್ಲಿಪುತೂರಿನ ಆಂಡಾಳ್ ದೇವಾಲಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಳಯರಾಜ ಆಗಮಿಸಿದ್ದರು.
ಈ ವೇಳೆ ದೇವಾಲಯದ ಗರ್ಭಗುಡಿ ಒಳಗೆ ಹೋದ ಇಳಯರಾಜ ಅವರನ್ನು ಅರ್ಚಕರು ತಡೆದಿದ್ದಾರೆ ಎಂದು ಹೇಳಲಾಗಿದೆ.ಇಳಯರಾಜ #Ilayaraja ಸಂಯೋಜಿಸಿದ ದಿವ್ಯ ಪಾಶುರಾಮ್ ನಾಟ್ಯಾಂಜಲಿ ಪ್ರದರ್ಶನವನ್ನು ಈ ದೇವಾಲಯದ ಆದಿ ಪುರ ಶೆಡ್’ನಲ್ಲಿ ಖಾಸಗಿ ಕಂಪನಿಯೊAದು ನಡೆಸುತ್ತಿತ್ತು. ಹೀಗಾಗಿ ಇಳಯರಾಜ ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನಕ್ಕೆ ತೆರಳಿದ್ದರು.
Also read: ವಕ್ಫ್ ಮಂಡಳಿ ಕುರಿತು ಉತ್ತರ ನೀಡಲು ಸರ್ಕಾರ ಸಿದ್ಧವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಇಳಯರಾಜಾ ಅವರಿಗೆ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಆತ್ಮೀಯ ಸ್ವಾಗತ ಕೋರಿದ್ದರು.
ಬಳಿಕ ಆದಿ ತಿರುಪುರ್ ಪಂಥಲ್’ನಲ್ಲಿ #AdiTirupurPanthal ನಡೆದ ಈ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ಕಾರ್ಯಕ್ರಮ ಮತ್ತು ಇಳಯರಾಜಾ ಸಂಯೋಜಿಸಿದ ದಿವ್ಯ ಪಾಶುರಂ ಹಾಡು ಬಿಡುಗಡೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಅವರು ದೇಗುಲದ ಒಳಗೆ ಹೋದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post