Sunday, June 22, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಜನಪ್ರತಿನಿಧಿಗಳ ಅಧಿಕ ಪ್ರಸಂಗದ ಮಾತು ಅಭಿವೃದ್ಧಿಗೆ ಮಾರಕ: ಹೇಗೆ ಗೊತ್ತಾ?

ಯಾರು ಯಾರ ಬಗ್ಗೆ ವಾಗ್ಯುದ್ಧ ಮಾಡಬೇಕು ಎಂಬ ಪ್ರಜ್ಞೆ ಅಗತ್ಯ

August 26, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ದಿನ ನಿತ್ಯ ನೋಡುತ್ತೇವೆ. ಒಂದು ಪಕ್ಷವು ಇನ್ನೊಂದು ಪಕ್ಷವನ್ನು ಬೈಯುವುದು, ನಿಂದಿಸುವುದನ್ನು. ಮಾಡ್ಕೊಳ್ಳಿ ಬಿಡಿ. ಆದರೆ ಯಾರು ಮಾಡಬೇಕಾದದ್ದು ಎಂದು ಯೋಚಿಸಬೇಕು. ನಿನ್ನ ನಾಲಿಗೆ ಸೀಳ್ತೇನೆ, ಕೈ ಕಡ್ದಾಕಿ ಬಿಡ್ತೇನೆ ಎಂಬ ಡೈಲಾಗಿಗೆ ದರಿದ್ರ ಇಲ್ಲ. ಯಾರು ಇದನ್ನು ಹೇಳಬೇಕಾದವರು?

ಒಂದು ಕ್ಷೇತ್ರಕ್ಕೆ ಒಬ್ಬ ಜನಪ್ರತಿನಿಧಿ ಬೇಕೇಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಇದು ಯಾವ ಪಕ್ಷದಿಂದಲೂ ಪ್ರತಿನಿಧಿಸುವ ಹಕ್ಕು ಇದೆ. ಅಂತಹ ಪ್ರತಿನಿಧಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರವು ಕೇವಲ ಪ್ರಜೆಗಳಿಗೆ ಇರುತ್ತದೆ. ಆ ಆಯ್ಕೆಯಾದ ಪ್ರತಿನಿಧಿಯು ದೇಶಕ್ಕೆ ಒಂದು ನಿಗದಿತ(ಈಗ ಐದು ವರ್ಷ) ಅವಧಿಯವರೆಗೆ ಆ ಕ್ಷೇತ್ರಕ್ಕೆ ಅರ್ಪಣೆಯಾಗುತ್ತಾನೆ. ಯಾವಾಗ ಅರ್ಪಣೆ ಆಗುತ್ತಾನೋ ಅಂದಿನಿಂದ ಆ ಅವಧಿ ಪೂರ್ಣವಾಗುವವರೆಗೆ ಆ ಪ್ರತಿನಿಧಿಯು ಕೇವಲ ದೇಶದ, ಕ್ಷೇತ್ರದ ಅಭಿವೃದ್ಧಿಗೆ, ರಕ್ಷಣೆಗೆ ಮಾತ್ರ ಸೀಮಿತ ಆಗಿರುತ್ತಾನೆ.

ಪ್ರಮುಖವಾಗಿ ಈಗ ಆ ಪ್ರತಿನಿಧಿಯು ಪಕ್ಷಾತೀತವಾಗಿರಬೇಕು. ಅವರು ನನಗೆ ವಿರುದ್ದವಾಗಿದ್ದರು, ನನ್ನನ್ನು ಸೋಲಿಸಲು ಬಯಸಿದರು ಎಂಬ ಚಿಂತನೆ ಇರಬಾರದು. ನನ್ನ ಕೆಲಸ ಏನಿದೆಯೋ ಅದನ್ನು ಪಕ್ಷಾತೀತವಾಗಿ ಮಾಡಲೇಬೇಕು. ಇಲ್ಲಿ ಅವನ ಮನೆಯ ಸಂಸಾರವೂ ಕೂಡಾ ಸಮಾನವೇ ಆಗುತ್ತದೆಯೇ ಹೊರತು, ಮನೆಯ, ಸಂಸಾರದ ಪರವಾಗಿ ಕೆಲಸ ಮಾಡಬಾರದು. ಇದು ಪ್ರತಿನಿಧಿಗೆ ವಿಧಿಸಲ್ಪಟ್ಟ ಪ್ರಜಾತಾಂತ್ರಿಕ ನಿಯಮ. ಇದರ ಉಲ್ಲಂಘನೆ ಮಾಡಿದರೆ ಇದರಷ್ಟು ದೊಡ್ಡ ದ್ರೋಹ ಇನ್ನೊಂದಿಲ್ಲ. ಆದರೆ ಈಗ ಅನೇಕಾನೇಕ ಪ್ರತಿನಿಧಿಗಳು ಈ ನಿಯಮಕ್ಕೆ ಬದ್ಧವಾಗಿಲ್ಲ. ಹಳೆಯ ವೈಯಕ್ತಿಕ, ಪಕ್ಷದೊಳಗಿನ ದ್ವೇಷವನ್ನೇ ಪ್ರತಿನಿಧಿಯಾದ ಮೇಲೆ ಮುಂದುರೆಸುತ್ತಾರೆ. ಇಷ್ಟಕ್ಕೇ ಮುಗಿಯುವುದಿಲ್ಲ. ಬಾಯಿಗೆ ಬಂದಂತೆ ಬೈಯುತ್ತಾ, ತನ್ನ ಕರ್ತವ್ಯವನ್ನೇ ಮರೆತು, ಪ್ರಜೆಗಳಿಗೆ ಹಿಂಸೆಯಾಗುವ ತರಹ ನಡೆದುಕೊಳ್ಳುತ್ತಾರೆ.

ಪ್ರತೀ ಪಕ್ಷದಲ್ಲಿ ಕ್ಷೇತ್ರ ಕ್ಷೇತ್ರಕ್ಕೊಬ್ಬ ವಕ್ತಾರನನ್ನು ಇಟ್ಟಿರುತ್ತಾರೆ. ಆದರೆ ಅವನು ಮಾಡುವ ಕೆಲಸವನ್ನು ಪ್ರತಿನಿಧಿಗಳೇ ಮಾಡಲು ಹೋಗಿ, ತಾನು ಮಾಡುವ ಕೆಲಸವನ್ನು, ಮಾಡಬೇಕಾದ ಕೆಲಸವನ್ನು ಬಿಟ್ಟು ಬಿಡುತ್ತಾರೆ. ಪಕ್ಷ ಇರುವುದು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕಾಗಿ. ತಾನು ಕಳುಹಿಸಿದ ಅಭ್ಯರ್ಥಿಯು ಚುನಾಯಿತ ಪ್ರತಿನಿಧಿ ಆದಮೇಲೆ, ಅವನಿಗೇನಾದರೂ ಇನ್ನೊಂದು ಪಕ್ಷವು ಅವಹೇಳನವೋ, ಹಿಂಸೆಯೋ ಮಾಡಿದಾಗ ಅವನ ಪಕ್ಷದ ಪದಾಧಿಕಾರಿಗಳು ಉತ್ತರಿಸಬೇಕೇ ಹೊರತು ಆ ಪ್ರತಿನಿಧಿಯು, ತನ್ನನ್ನು ಆರಿಸಿದ ಉದ್ದೇಶವನ್ನು ಮರೆತು ಅವನೇ ಕಾಳಗಕ್ಕಿಳಿದಾಗಲೇ ಅಭಿವೃದ್ಧಿ ಕುಂಠಿತವಾಗುವುದು. ಆತನಿಗೆ ಹಿಂಸೆಯಾದಾಗ, ಅವನು ಅವನ ಪಕ್ಷದ ಅಧ್ಯಕ್ಷರಿಗೆ, ’ಹೀಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಬೇಕು. ಆಗ ಪಕ್ಷವು ಯಾವುದಾದರೊಂದು ತೀರ್ಮಾನಕ್ಕೆ ಬರಲಿ. ಆದರೆ ಆ ಚುನಾಯಿತ ಪ್ರತಿನಿಧಿ ಕಾಳಗಕ್ಕಿಳಿದರೆ ಆ ಪ್ರತಿನಿಧಿತ್ವದ ಉದ್ದೇಶ ಹಾಳಾಗುತ್ತದೆ. ಯಾವ ಕಾಲು ಜಾರಿದರೂ ಸೊಂಟಕ್ಕೇ ಪೆಟ್ಟು ಎಂಬಂತೆ, ಈ ಸ್ಥಿತಿಯೂ ಪ್ರಜೆಗಳಿಗೇ ಮಾರಕ.

ಹಾಗಾಗಿ, ಯಾವುದೇ ಪಕ್ಷವಿರಲಿ ಆ ಪಕ್ಷವು ಕಳುಹಿಸುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕ ಪ್ರಸಂಗ ಮಾತನಾಡಲು ಬಿಡಬಾರದು. ಆ ಪ್ರತಿನಿಧಿಯು ಆಡಳಿತಾತ್ಮಕ ವಿಚಾರಗಳನ್ನು ಮಾತನಾಡುವಲ್ಲಿಗೇ ಸೀಮಿತವಾಗಿರಬೇಕು. ಪಕ್ಷವು ತನ್ನ ಪ್ರತಿನಿಧಿಗೆ ತೊಂದರೆಯಾದಾಗ ಅಧಿಕೃತವಾಗಿ ಕ್ರಮ ತೆಗೆದುಕೊಳ್ಳುವಂತಾಗಬೇಕು. ಉದಾ: ಒಬ್ಬ ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಗೋ ಆಡಳಿತಾತ್ಮಕವಾಗಿ ನಿಂದನೆಗಳು ಬಂದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಬೇಕಾದದ್ದು ಆ ಪಕ್ಷದ ಒಳಗಿರುವ ಜವಾಬ್ದಾರಿಯುತ ನಾಯಕರದ್ದು. ಪ್ರತಿನಿಧಿಗಳು ಕಲಹಕ್ಕಿಳಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ.

ಈ ರೀತಿಯ ನಿಯಮ ಪಾಲನೆ ಮಾಡಿದರೆ ಪಕ್ಷಗಳ ವರ್ಚಸ್ಸು ಉತ್ತಮವಾಗುತ್ತದೆ, ಪ್ರತಿನಿಧಿಗಳ ಮೇಲೆ ಪ್ರಜೆಗಳ ಪ್ರೀತಿಯೂ ಹೆಚ್ಚಾಗುತ್ತದೆ. ‘ನೀವು ಏನು ನಿರ್ಧಾರ ತೆಗೆದುಕೊಳ್ಳುವಿರಿ’ ಎಂದು ಮಾಧ್ಯಮಗಳು ಪ್ರಶ್ನಿಸಿದರೆ, ನಮ್ಮ ಪಕ್ಷದ ವಕ್ತಾರರು ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರೆ ಸಮಸ್ಯೆ ಅಲ್ಲಿಗೇ ನಿಲ್ಲುತ್ತದೆ.

ಇದನ್ನು ಎಲ್ಲ ರಾಜಕೀಯ ಪಕ್ಷಗಳು ಎಂದಿಗೆ ಅರ್ಥ ಮಾಡಿಕೊಂಡು, ಕಾರ್ಯಗತ ಮಾಡುತ್ತವೆಯೋ?

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: Developmental WorkHate SpeechJyotirvigyanamPeople RepresentativesPolitical PartyPrakash AmmannayaSpecial ArticleSpokespersonಅಭಿವೃದ್ಧಿಪ್ರಕಾಶ್ ಅಮ್ಮಣ್ಣಾಯಪ್ರತಿನಿಧಿರಾಜಕೀಯ ಪಕ್ಷವಕ್ತಾರ
Previous Post

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

Next Post

ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೋದಿ ಹಳಿಯಲು ಚೀಪ್ ಟ್ರಿಕ್ಸ್‌ ಬಳಸಿ ತಾವೇ ಮರ್ಯಾದೆ ಹರಾಜು ಹಾಕಿಕೊಂಡ ರಾಹುಲ್?

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025

ಶಿವಮೊಗ್ಗ | ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸಾ ಶಿಬಿರ

June 21, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರತಿಭೆ ಅಂದರೆ Exam result ಅಲ್ಲ: ಶ್ರಮ, ಸಾಧನೆಯ ಮಿಶ್ರಣ: ಕೆ.ವಿ. ಪ್ರಭಾಕರ್

June 21, 2025

ಮತಬ್ಯಾಂಕ್ ಗಟ್ಟಿಗೊಳಿಸಲು ವಸತಿ ಜಿಹಾದ್ | ರಾಜ್ಯಸರ್ಕಾರದ ವಿರುದ್ಧ ಕಾಂತೇಶ್ ಆಕ್ರೋಶ

June 21, 2025

ಮನಸ್ಸು- ದೇಹವನ್ನು ಸಮನ್ವಯವಾಗಿಡುವ ದಾರಿ ಯೋಗ: ಕೃಷ್ಣಮೂರ್ತಿ

June 21, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!