ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಲವಾರು ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿರುವ ಆಯುರ್ವೇದಲ್ಲಿ ಮಾರಕ ಕೊರೋನಾ ವೈರಸ್ ಲಕ್ಷಣಗಳಿಗೂ ಚಿಕಿತ್ಸೆ ಲಭ್ಯವಿದ್ದು, ಇದರ ಫಾರ್ಮುಲಾ ನಮ್ಮಲ್ಲಿದೆ. ಇದರ ಪ್ರಯೋಗಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಭದ್ರಾವತಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಡಾ.ಸುದರ್ಶನ್ ಕೆ. ಆಚಾರ್ ಹೇಳಿದರು.
ಉದ್ಗೀಥ ಆಯುರ್ವೇದ ಚಿಕಿತ್ಸಾಲಯ ಹಾಗೂ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಹಕಾರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುಮಾರು ಹತ್ತು ವರುಷಗಳ ವೃತ್ತಿ ಜೀವನದಲ್ಲಿ ಸಾವಿರಾರು ರೋಗಿಗಳನ್ನು ಆಯುರ್ವೇದ ಪದ್ದತಿಯಲ್ಲಿ ಗುಣಪಡಿಸಿದ್ದು, ಸಾವಿರಾರು ಮಕ್ಕಳಲ್ಲಿ ಆಯುರ್ವೇದ ರೋಗ ನಿರೋಧಕ ಔಷಧಿಗಳನ್ನು ಸಂಶೋಧನೆ ಹಾಗೂ ರೋಗಿಗಳ ತೃಪ್ತಿಯ ಆಧಾರದ ಮೇಲೆ ಸಾಧಿಸಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ ಎಂದರು.
ಆಯುರ್ವೇದ ಶಾಸ್ತ್ರವು ರೋಗವನ್ನು ಡಯಾಗ್ನೋಸ್ ಅಥವಾ ನಿಶ್ಚಯಿಸಲು ನಿಧಾನ ಪಂಚಕದವನ್ನು ಅವಲಂಭಿಸಿದ್ದು ಸಾಂಕ್ರಾಮಿಕ ರೋಗಗಳ ವೈರಾಣು ರೋಗದ ಗುಣಲಕ್ಷಣದ ಆಧಾರದ ಮೇಲೆ ಪರಿಪೂರ್ಣ ಡಯಗ್ನೋಸಿಸ್ ಹಾಗೂ ಚಿಕಿತ್ಸಾ ವಿಧಾನವನ್ನು ಹೊಂದಿರುತ್ತದೆ. ಆಯುರ್ವೇದ ಶಾಸ್ತ್ರದ ಆಧಾರದ ಮೇಲೆ ಈ ಸಾಂಕ್ರಾಮಿಕ ವ್ಯಾಧಿಯು ಜನಪಧೋದ್ವಂಸ ಅಂದರೆ ಮಾನವ ಜನಾಂಗದ ನಾಶ ಮಾಡುವ ವ್ಯಾಧಿಯಾಗಿದೆ ಎಂದು ತಿಳಿಯಬಹುದು ಎಂದರು.
ಹಿಂದೆ ಗಿಡಮೂಲಿಕೆಗಳನ್ನು ಬಳಸಿ, ಸಾರ್ಸ್, ಕೊರೋನಾ ಹಾಗೂ ಇತರ ವೈರಾಣುಗಳ ಮೇಲೆ ನಡೆದ ಹಲವಾರು ಸಂಶೋಧನೆಗಳ ಆಧಾರದ ಮೇಲೆ, ಆಯುರ್ವೇದ ಗ್ರಂಥಗಳ ಆಧಾರದ ಮೇಲೆ, ಹಾಗು ನಮ್ಮ ಸ್ವಾನುಭವದ ಮೇಲೆ, ನಾವು ಈ ವೈರಾಣು ನಾಶಪಡಿಸಲು ಬಳಸಬಹುದಾದ ಗಿಡಮೂಲಿಕೆಗಳ ಮಿಶ್ರಣವನ್ನು ತಯಾರಿಸಿದ್ದೇವೆ.
ಇವು ವೈರಾಣುವಿನ
*ಹೊರಪದರಗಳಾದ ಫ್ಯಾಟ್ ಹಾಗೂ ಪ್ರೊಟೀನ್ ಲೇಯರ್ಗಳನ್ನು ನಾಶಮಾಡಬಲ್ಲವು
* ಸೈಟೋಪ್ಲಾಸ್ಮಾಗಳ ಕುಗ್ಗುವಿಕೆ ಶ್ರಿಂಕೇಜ್ ಮಾಡಬಲ್ಲವು
*ಅರ್.ಎನ್.ಎ, ಡಿ.ಎನ್.ಎ.ಗಳನ್ನು ನಾಶಪಡಿಸಬಲ್ಲವು
ಇದಕ್ಕೆ ಆಧಾರವಾಗಿ ಚೈನಾ ಹಾಗೂ ಇಂಟರ್ ನ್ಯಾಷನಲ್ ಪತ್ರಿಕೆಗಳು ಚೈನಾ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಹಲವಾರು ಪ್ರಾಚೀನ ಗಿಡಮೂಲಿಕಾ ವೈದ್ಯಪದ್ದತಿ ಸಂಶೋಧನೆಗಳನ್ನು ಹೊರಹಾಕಿವೆ ಎಂದರು.
ಸೌತ್ ಚೈನಾ ಮಾರ್ನಿಂಗ್ ಪೋಸ್ಟ್, ಫೆಬ್ರವರಿ 18, ಸಿ.ಎನ್.ಎನ್ ನ್ಯೂಸ್ ಮಾರ್ಚ್ 16, 2020 ವರದಿಯ ಪ್ರಕಾರ ಚೈನಾ ನ್ಯಾಷನಲ್ ಹೆಲ್ತ್ ಕಮಿಶನ್ ಅಡಿಯಲ್ಲಿ, ಟ್ರಡಿಷನಲ್ ಸಿಸ್ಟಂ ಆಫ್ ಮೆಡಿಸಿನ್ನ 210ಕ್ಕೂ ಹೆಚ್ಚು ವೈದ್ಯರ ತಂಡ, ರೋಗದ ಸಿಂಟಮ್ಸ್ಗಳ ಆಧಾರದ ಮೇಲೆ ಗಿಡ ಮೂಲಿಕೆ ಮಿಶ್ರಿತ ಔಷಧಗಳನ್ನು ಮಹಾಮಾರಿ ರೋಗಿಗಳಿಗೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಹುಬೈ ಪ್ರದೇಶದ 75% ಕೋವಿಡ್19 ಸೋಂಕಿತರು ಹಾಗೂ 90% ಚೈನಾದ ಇತರ ಪ್ರದೇಶದವರು ಈ ಟಿ.ಸಿ.ಎಂ ಔಷಧಗಳನ್ನು ಪಡೆಯುತ್ತಾರೆ. ಔಷಧ ಪಡೆದ ಮೊದಲನೆಯ ದಿನವೇ ಹುಬೈ ಪ್ರದೇಶದ 23 ಸೋಂಕಿತರು ಗುಣಮುಖರಾಗುತ್ತಾರೆ. ಸಣ್ಣ ಸಿಂಟಮ್ಸ್’ಗಳಿರುವ ರೋಗಿಗಳು ಪೂರ್ಣಗುಣಮುಖರಾದರೆ, ಕ್ರಿಟಿಕಲ್ ಕೇರ್ನಲ್ಲಿ ಇದ್ದ ರೋಗಿಗಳ ಶ್ವಾಸಕೋಶದ ನ್ಯುಮೋನಿಯಾ ತೊಂದರೆ ಕಡಿಮೆಯಾಗಿದ್ದು, ರಕ್ತದ ಆಕ್ಸಿಸನ್ ಲೆವೆಲ್’ನಲ್ಲಿ ಚೇತರಿಕೆ, ರಕ್ತದ ಲಿಂಪೋಸೈಟ್ಸ್’ಗಳ ಚೇತರಿಕೆ ಕಂಡು ಬಂದಿದೆ ಎಂದು ಆಧುನಿಕ ವೈದ್ಯ ಔಷಧದೊಂದಿಗೆ ನೀಡಿದ ಡಬಲ್ ಬ್ಲೈಂಡ್ ಸಂಶೋಧನೆ ತಿಳಿಸಿದೆ ಎಂದರು.
ಬೀಜಿಂಗ್ನ ಕೋವಿಡ್ 19 ಸಂಕ್ರಾಮಿಕ 87% ರೋಗಿಗಳು ಟ್ರಡಿಷನಲ್ ಸಿಸ್ಟಂ ಆಫ್ ಮೆಡಿಸಿನ್ನ ಪಡೆಯುತ್ತಾರೆ ಹಾಗೂ ಅವರಲ್ಲಿ 92% ರೋಗಿಗಳು ಗುಣ ಮುಖರಾಗಿದ್ದಾರೆಂದು ಬೀಜಿಂಗ್ ಹೆಸ್ತ್ ಕಮಿಷನ್ ಪ್ರಕಟಪಡಿಸುತ್ತದೆ. ಈ ಔಷಧಿಗೆ ಅವರು ಇತ್ತ ಸುಂದರ ನಾಮ ಲಂಗ್ ಕ್ಲಿನ್ಸಿಂಗ್ ಅಂಡ್ ಡಿಟಾಕ್ಸಿಫ್ಯಯಿಂಗ್ ಸೂಪ್ ಎಂದಾಗಿದೆ. ಮಾರ್ಚ್ನವರೆಗೆ 60 ಸಾವಿರ ಕೋವಿಡ್ 19 ಸಂಕ್ರಾಮಿತ ಜನರಲ್ಲಿ (85%) 50 ಸಾವಿರ ಜನ ಗುಣಮುಖರಾಗುವಲ್ಲಿ ಪ್ರಾಚೀನ ವೈದ್ಯಪದ್ದತಿಯ ಸಹಾಯ ಅವಿಸ್ಮರಣೀಯ. ಇದು 33% ಪ್ರತಿಶತ ರಿಕವರಿ ರೇಟ್ನ್ನು ಸೂಚಿಸಿದೆ ಎಂದರು.
ಟಿ.ಸಿ.ಎಂ ಔಧವನ್ನು ಪ್ರಪಂಚಕ್ಕೆ ರಫ್ತು ಮಾಡಿ 2020ರ ಕೊನೆಯ ತನಕ 71% ಲಾಭವನ್ನು (403 ಬಿಲಿಯನ್ ಡಾಲರ್) ಪಡೆಯಲು ಚೀನಾ ನಿರ್ಧರಿಸಿದೆ ಎಂದು ವರದಿಯಾಗಿದೆ ಎಂದರು.
ಯೋಗ ಶಾಸ್ತ್ರವನ್ನು ಪ್ರಂಪಚಕ್ಕೆ ಪರಿಚಯಿಸಿದ ಭಾರತ, ಇಂತಹ ಸಂದರ್ಭದಲ್ಲಿ ಅದಕ್ಕೆ ಸಕಾಲೀನವಾದ ಆಯುರ್ವೇದ ವೈದ್ಯ ಪದ್ದತಿಯ ಸಂಶೋಧನಾಧಾರಿತ ಔಷಧವನ್ನು ನೀಡಲು ಸಶಕ್ತವಾಗಿದೆ. ನಾವು ನಮ್ಮ ಸಂಶೋಧನೆಗಳನ್ನು ಒರೆಹಚ್ಚುವ ಮೂಲಕ ದೇಶ ಸೇವೆಗೆ, ಈ ವೈರಾಣುಗಳ ವಿರುದ್ಧ ರೋಗಿಗಳು ಶೀಘ್ರ ಗುಣಮುಖರಾಗುವಂತೆ ಮಾಡಲು ನಾವು ಸಂಯೋಜಿಸಿರುವ ಔಷಧ ಸೂತ್ರಗಳಾದ ಉದ್ಗೀಥ ಸಿವಿ ಕಶಾಯ, ಉದ್ಗೀಥ ಸಿವಿ ವಟಿ, ಉದ್ಗೀಥ ಸಿವಿ ಚೂರ್ಣ ನೀಡಲು ಉತ್ಸುಕರಾಗಿರುತ್ತೇವೆ ಎಂದರು.
ನಮ್ಮ ಈ ಸಂಶೋಧನೆಯ ವಿವರ ಹಾಗೂ ಮನವಿಯನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಶ್ರೀ ಕೆ.ಎಸ್. ಈಶ್ವರಪ್ಪ, ಸಂಸದ ಶ್ರೀ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ನೀಡಿದ್ದೇವೆ. ಅಲ್ಲದೇ, ಇಮೇಲ್ ಮೂಲಕ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಆಯುಷ್ ಇಲಾಖೆ, ಆರೋಗ್ಯ ಇಲಾಖೆಗಳಿಗೂ ಸಹ ಕಳುಹಿಸಲಾಗಿದೆ ಎಂದರು.
ನಮ್ಮ ಈ ಮನವಿಯನ್ನು ಜಿಲ್ಲಾಡಳಿತ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಪರಿಗಣಿಸಿ ಒಂದು ಅವಕಾಶ ನೀಡಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇವೆ ಎಂದರು.
ಆಯುರ್ವೇದ ವೈದ್ಯೆ ಡಾ.ಕಾಂಚನಾ ಎ. ಕಂಕನ್ವಾಡಿ, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಂಪಾದಕ ಎಸ್.ಆರ್. ಅನಿರುದ್ಧ ವಸಿಷ್ಠ ಇದ್ದರು.
Get in Touch With Us info@kalpa.news Whatsapp: 9481252093
Discussion about this post