ಕಲ್ಪ ಮೀಡಿಯಾ ಹೌಸ್ | ಸಾಗರ |
ಮನುಷ್ಯ ಇಲ್ಲದೆ ಪ್ರಕೃತಿಯ ಎಲ್ಲ ಜೀವಿಗಳೂ ಬದುಕಬಲ್ಲವು. ಆದರೆ, ಪ್ರಕೃತಿಯಲ್ಲಿನ ಜೀವಿಗಳನ್ನು ಕಳೆದುಕೊಂಡರೆ ನಾವು ಬದುಕಲಾರೆವು. ಜೀವವೈವಿಧ್ಯತೆಯ ಕೊಂಡಿ ಕಳಚಿದಂತೆ ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ನಾಟಿವೈದ್ಯರೂ ಪರಿಸರ ಸಕ್ರಿಯ ಕಾರ್ಯಕರ್ತರೂ ಆದ ಆನೆಗುಳಿ ಸುಬ್ರಾವ್ ಎಚ್ಚರಿಸಿದರು.
ತಾಲ್ಲೂಕು ಎಡಜಿಗಳೆಮನೆ ಗುಬ್ಬಗೋಡಿನಲ್ಲಿ ಡಾ.ಜಿ.ಎ.ನಾರಿಬೋಲಿ ಎಂ.ಡಿ.ಎಪ್ ಶಿಕ್ಷಣ ಮಹಾವಿದ್ಯಾಲಯ ಇವರು ಆಯೋಜಿಸಿದ ಪೌರತ್ವ ತರಬೇತಿ ಶಿಬಿರದಲ್ಲಿ ಪಶ್ಚಿಮಘಟ್ಟದ ಜೀವವೈವಿಧ್ಯದ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Also read: ದೇವಾಲಯದ ರಥದ ಅಡಿಗೆ ಸಿಲುಕಿ ಐದು ವರ್ಷದ ಕಂದಮ್ಮ ದಾರುಣ ಸಾವು
ಜೀವವೈವಿಧ್ಯತೆಯ ಅವಶ್ಯಕತೆ, ಪರಿಸರ ನಾಶಕ್ಕೆ ಕಾರಣಗಳು, ಅಳಿವಿನ ಅಂಚಿನಲ್ಲಿರುವ ಔಷಧೀಯ ಸಸ್ಯಗಳು, ಪರಿಸರ ರಕ್ಷಣೆಯ ಸರಳೋಪಾಯಗಳ ಬಗ್ಗೆ ವಿವರಿಸಿದರು.

ಶ್ರೀ ಸ್ವಾಮಿದತ್ತ ಹೆಚ್.ಎಸ್. ಅಧ್ಯಕ್ಷತೆ ವಹಿಸಿದ್ದರು, ರಘುವೀರ್ ಸೌಮ್ಯ, ಅನುಷ ಕಾರ್ಯಕ್ರಮ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post