ಕಲ್ಪ ಮೀಡಿಯಾ ಹೌಸ್ | ಸಾಗರ |
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕೋಟ್ಯಂತರ ರೂ. ವೆಚ್ಚದ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ಹರತಾಳು ಹಾಲಪ್ಪ MLA Harathalu Halappa ಅವರು ಚಾಲನೆ ನೀಡಿದರು.
ಯಾವೆಲ್ಲಾ ಕಾಮಗಾರಿಗಳಿಗೆ ಚಾಲನೆ?
ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯ ಅಡಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕಾರ್ಗಲ್ ಪ.ಪಂ, 05 ನೆಯ ವಾರ್ಡ್ ಮುಖ್ಯ ರಸ್ತೆಯಿಂದ ಮೀನು ಮಾಂಸ ಮಾರುಕಟ್ಟೆ ಹಿಂಬಾಗದಲ್ಲಿ ಹಾದು ಹೋಗುವ ಚರಂಡಿಗೆ ಕಾಂಕ್ರೀಟ್ ರಾಜಕಾಲುವೆ ನಿರ್ಮಾಣ ಕಾಮಗಾರಿ.
- 06 ನೆಯ ವಾರ್ಡ್ ಮುಖ್ಯ ರಸ್ತೆಯಿಂದ ಶ್ರೀಪುರ ಲಕ್ಷ್ಮೀ ನಾರಾಯಣ ಭಟ್ಟರ ಮನೆಯವರೆಗಿನ 18.49 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
- ಕಾರ್ಗಲ್ ಪಪಂ, 07 ನೆಯ ವಾರ್ಡ್ ಜೋಗ ಮುಖ್ಯ ರಸ್ತೆಯಿಂದ ವರ್ಕ್ ಮನ್ ಬ್ಲಾಕ್ ನಿಂದ ಬಜಾರ್ ಲೈನ್ 29 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
- ಕಾರ್ಗಲ್ ಪಪಂ, 10 ನೆಯ ವಾರ್ಡ್ ಬಿಳಿಗಲ್ಲೂರು ಈಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಹಳ್ಳಕ್ಕೆ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಿರು ಸೇತುವೆ ಉದ್ಘಾಟನೆ
- ರಿಪ್ಪನಪೇಟೆ ಜನತೆಯ ಬಹು ನಿರೀಕ್ಷೆಯ ರಿಪ್ಪನಪೇಟೆ ವಿನಾಯಕ ವೃತ್ತದಿಂದ ಕೃಷಿ ಮಾರುಕಟ್ಟೆ ವರೆಗಿನ ರಸ್ತೆಯನ್ನು 550 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮತ್ತು ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
Also read: H3N2 ವೈರಸ್ ಸೋಂಕು; ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ: ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ
- ದಶಕಗಳ ಬೇಡಿಕೆಯಾದ ರಿಪ್ಪನಪೇಟೆ ಗ್ರಾಪಂ, ಗವಟೂರು-ಸಂಪಳ್ಳಿ-ಕೋಟೆತಾರಿಗೆ ಸಂಪರ್ಕಿಸುವ ಅರಮನೆ ಹಳ್ಳಕ್ಕೆ (ಗವಟೂರು ಹೊಳೆ) 63 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಿರು ಸೇತುವೆ ಕಾಮಗಾರಿಗೆ ಭೂಮಿ ಪೂಜೆ
- ಕೆಂಚನಾಳ ಗ್ರಾಪಂ, ಮಸರೂರು 60 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
- ಹೊಸನಗರ ತಾಲೂಕು ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಹೆಬ್ಬಿಗೆಯಿಂದ ತೂಗು ಸೇತುವೆವರೆಗೆ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
- ಜಾಲ ಬೈದೂರು ಗ್ರಾಮದ ರಸ್ತೆಯ ಮುಂದುವರೆದ ಕಾಮಗಾರಿ 20 ಲಕ್ಷ ಹಾಗೂ 40.33 ಲಕ್ಷ ರೂ. ವೆಚ್ಚದಲ್ಲಿ ಜಾಲ ಗ್ರಾಮದಲ್ಲಿ ಕುಡಿಯುವ ನೀರಿನ ಜಲ್ ಜೀವನ್ ಮಿಷನ್ ಕಾಮಗಾರಿಗೆ ಭೂಮಿ ಪೂಜೆ
- ನಿಟ್ಟೂರು ಗ್ರಾಪಂ, ಹಸಿರುಮಕ್ಕಿಯಿಂದ ಕೆಬಿ ಸರ್ಕಲ್ ವರೆಗಿನ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ 100 ಲಕ್ಷ ರೂ. ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ
- 40.33 ಲಕ್ಷ ರೂ. ವೆಚ್ಚದಲ್ಲಿ ಬೆಂಕಿತಲೆ ಗ್ರಾಮದಲ್ಲಿ ಕುಡಿಯುವ ನೀರಿನ ಜಲ್ ಜೀವನ್ ಮಿಷನ್ ಕಾಮಗಾರಿಗೆ ಭೂಮಿ ಪೂಜೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post