ಕಲ್ಪ ಮೀಡಿಯಾ ಹೌಸ್ | ಸಾಗರ |
ಶಾಸಕ ಹಾಲಪ್ಪನವರ MLA Halappa ಕನಸೊಂದು ನನಸಾಗಿದ್ದು, ನಗರದಲ್ಲಿ ಆರ್’ಟಿಪಿಸಿಆರ್ ಲ್ಯಾಬ್ ಲೋಕಾರ್ಪಣೆಗೊಂಡಿದೆ.
ಉಪವಿಭಾಗೀಯ ಆಸ್ಪತ್ರೆಯಲ್ಲಿ ನೂತನ ಆರ್’ಟಿಪಿಸಿಆರ್ ಲ್ಯಾಬ್ ಹಾಗೂ ಐಸಿಯು ಘಟಕವನ್ನು ಸ್ವತಃ ಅವರೇ ಉದ್ಘಾಟನೆ ಮಾಡಿದರು.
ಈ ಹಿಂದೆ ಅರಳಗೋಡು ಮಂಗನ ಖಾಯಿಲೆಯಿಂದ ಅನೇಕ ಜನ ಮೃತಪಟ್ಟು ಜಿ¯್ಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಮಂಗನ ಖಾಯಿಲೆ ಪತ್ತೆ ಹಚ್ಚಲು ರಕ್ತ ಮಾದರಿಯನ್ನು ಮಹಾರಾಷ್ಟçದ ಪೂನಾಕ್ಕೆ ಕಳುಹಿಸಿ, ವರದಿ ಬರಲು ವಾರಗಟ್ಟಲೆ ಕಾಯಬೇಕಿತ್ತು. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು, ಅಧಿವೇಶನದಲ್ಲಿ ಹಾಗೂ ಸರ್ಕಾರದ ಹಂತದಲ್ಲಿ ಸತತ ಪ್ರಯತ್ನ ನಡೆಸಿ, ಲ್ಯಾಬ್ ಮಂಜೂರಾತಿ ಮಾಡಿಸಿದ್ದರು.
ಇಂದು ಲೋಕಾರ್ಪಣೆ ಗೊಂಡಿರುವ ಆರ್’ಟಿಪಿಸಿಆರ್ ಲ್ಯಾಬ್’ನಿಂದ, ಮಂಗನ ಕಾಯಿಲೆ, ಕೋವಿಡ್ ಪರೀಕ್ಷೆ ಸೇರಿದಂತೆ ವಿವಿಧ ರೀತಿ ರಕ್ತ ಮಾದರಿ ಸಂಗ್ರಹಿಸಲು ಉಪಯುಕ್ತವಾಗಿದೆ. ಉಪವಿಭಾಗಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ವೈದ್ಯಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post