ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಈಗಾಗಲೇ ಕೊರೆಸಿರುವ ಬೋರ್’ವೆಲ್’ಗಳಿಗೆ ತತಕ್ಷಣವೇ ಮೋಟಾರ್ ಅಳವಡಿಸಿ ಎಂದು ಶಾಸಕ ಎಚ್. ಹಾಲಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಟಾಸ್ಕ್ ಫೋರ್ಸ್ ಹಾಗೂ ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಅನೇಕ ಕಡೆ ಬೋರ್’ವೆಲ್ ಕೊರೆಸಲಾಗಿದೆ. ಆದರೆ, ಮೋಟಾರ್ ಅಳವಡಿಸದೇ ಖಾಲಿ ಬಿಡಲಾಗಿದೆ. ಶೀಘ್ರದಲ್ಲೇ ಮೋಟರ್ ಅಳವಡಿಸಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಾಗರದ ಎಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಉಪವಿಭಾಗೀಯ ಆಸ್ಪತ್ರೆ ಹಾಗೂ ತಾಯಿ ಮಗು ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಸಮಸ್ಯೆ ಬಗ್ಗೆ ಚರ್ಚಿಸಿದರು.
ಶಾಸಕರ ಪ್ರಯತ್ನದಿಂದ ಕಾನಗೋಡು ರಸ್ತೆ ಅಭಿವೃದ್ಧಿ ಪೂರ್ಣ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post