Friday, June 20, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಸಹನಾ ಚೇತನ್ ಬರೆಯುತ್ತಾರೆ: ಮಾಲ್‌ಗೆ ಹೋಗಿ ಸಿನೆಮಾ ನೋಡುವ ಬದಲು ನೃತ್ಯ ವೀಕ್ಷಣೆಯ ಪಣ ತೊಡಿ

ಒಳಗೊಳಗೇ ಸುಪ್ತವಾಗಿ ಅಡಗಿರುವ ನೃತ್ಯ ಕಲಾವಿದನನ್ನು ಜಾಗೃತಗೊಳಿಸುವ ದಿನ: ವಿಶ್ವ ನೃತ್ಯ ದಿನ

April 29, 2019
in Special Articles
0 0
0
Share on facebookShare on TwitterWhatsapp
Read - 2 minutes

ನೃತ್ಯ ಭಾವನೆಗಳ ಮಿಳಿತ; ಕ್ರಿಯಾತ್ಮಕತೆಯ ಪ್ರತಿಬಿಂಬ; ಸಂತಸದ ಛಾಪು; ದೈಹಿಕ ಸ್ಥಿರತೆಯ ರೂಪ; ಮಾನಸಿಕ ದೃಢತೆಯ ಸಂಕಲ್ಪ. ಒಟ್ಟಾಗಿ ಮಾನವ ಸಹಜ ಭಾವನೆಗಳ ಅಭಿವ್ಯಕ್ತಿಯ ಸ್ವರೂಪ. ಆಧುನಿಕ ಪ್ರಪಂಚದಲ್ಲಿ ಕಲೆಯ ಶಿಕ್ಷಣವಾಗಲಿ ಪ್ರತಿಪಾದನೆಯಾಗಲಿ ಮಾಡದವರೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಮಕ್ಕಳು ಕಲೆಯ ಆವರಣದಲ್ಲಿ ಬೆಳೆಯಲಿ ಅನ್ನುವ ಪೋಷಕರೇ ಹೆಚ್ಚು.

ಸಾಂಸ್ಕೃತಿಕತೆಯ ಜೀವಂತ ಪ್ರತಿರೂಪವೆನಿಸಿರುವ ಭಾರತದಂತಹ ರಾಷ್ಟ್ರಗಳಲ್ಲಿ ಕಲೆಗಾಗಲೀ ಕಲಾವಿದನಿಗಾಗಲೀ ದೇವತಾ ಸ್ವರೂಪರು ಎನ್ನುವಷ್ಟು ಗೌರವ ದೊರೆಯುತ್ತಿರುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ನಾಟ್ಯ ಶಾಸ್ತ್ರದ ಪ್ರಕಾರ ಭಾರತದ ನೃತ್ಯಕಲೆಗಳು ಜೀವ ತಳೆದು ಸುಮಾರು 2000 ವರ್ಷಗಳೇ ಸಂದಿದ್ದು ಇಂದಿಗೆ ಅದು ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಸಲು ಹೆಮ್ಮೆಯೆನಿಸುತ್ತಿದೆ.
ಭಾರತದ ನೃತ್ಯಗಳಲ್ಲಿ ಶಾಸ್ತ್ರೀಯ ನೃತ್ಯಗಳು ಹಾಗೂ ಜಾನಪದ ನೃತ್ಯಗಳು ಎಂದು 2 ವಿಭಾಗಗಳಾಗಿ ವಿಂಗಡಿಸಲಾಗಿದೆಯಾದರೂ ಜಾಗತಿಕ ಮಟ್ಟದಲ್ಲಿ ಎಲ್ಲಾ ನೃತ್ಯವೂ ಒಂದೇ ಎನ್ನುವ ಭಾವನೆ ವಿಶ್ವ ಸಂಸ್ಥೆಯದ್ದಾಗಿದೆ. ನೀವು ಯಾವುದೇ ರೀತಿಯ ನೃತ್ಯವನ್ನು ಅಭ್ಯಸಿಸುತ್ತಿರಬಹುದು ಅಥವಾ ಶಿಕ್ಷಕರಾಗಿರಬಹುದು – ನೀವು ನೃತ್ಯಗಾರರೇ ಎನ್ನುವ ಧೋರಣೆಯೂ ಕೂಡ ವಿಶ್ವ ಸಂಸ್ಥೆಯದ್ದು. ಈಗಲೂ ನೀವು ನೃತ್ಯ ಕಲಾವಿದರಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿರಬಹುದು; ಹಿಂದೆ ನೀಡಿದ್ದಿರಬಹುದು; ಒಮ್ಮೆ ಕಲಾವಿದನಾದವನು ಶಾಶ್ವತವಾಗಿ ಕಲಾವಿದನೇ. ಇಂತಹ ಸರ್ವೋಚ್ಚ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವದಾದ್ಯಂತ ಇರುವ ನರ್ತಕರನ್ನು ಒಂದು ಗೂಡಿಸುವ ಪ್ರಯತ್ನ ನಡೆಸುತ್ತಿರುವ ವಿಶ್ವಸಂಸ್ಥೆ, ಪ್ರತೀ ವರ್ಷ ಏಪ್ರಿಲ್ 29ರಂದು ವಿಶ್ವ ನೃತ್ಯ ದಿನ ಎಂದು ಘೋಷಿಸಿದೆ. ಇದನ್ನು ಮುನ್ನಡೆಸುತ್ತಾ ಈಗಾಗಲೇ 3 ದಶಕಗಳೇ ಸಂದಿವೆ.


ಪ್ರಪಂಚದಾದ್ಯಂತ ಇರುವ ನೃತ್ಯಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸುಮಾರು 3 ತಿಂಗಳಿನಿಂದ ನಡೆಸುವ ತಯಾರಿ ತಾಲೀಮು, ಕಾರ್ಯಾಗಾರ, ಪ್ರಬಂಧ ಮಂಡನೆ, ನೃತ್ಯ ಸ್ಪರ್ಧೆಗಳು, ಏಕವ್ಯಕ್ತಿ ಹಾಗೂ ಗುಂಪು ಪ್ರದರ್ಶನಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬನಲ್ಲಿ ಅಡಗಿರುವ ನೃತ್ಯ ಕಲಾವಿದನನ್ನು ಜಾಗೃತಗೊಳಿಸಿ ಆತನೂ ಸುತ್ತಲಿನ ಸೌಂದರ್ಯವನ್ನು, ತನ್ನೊಳಗಿನ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ ಒಬ್ಬ ನೈಜ ಮಾನವನನ್ನಾಗಿಸುವ ಹೆಬ್ಬಯಕೆ ಈ ವಿಶ್ವ ಸಂಸ್ಥೆಯದ್ದು. ಭಯೋತ್ಪಾದನೆಯಂತಹ ತೀವ್ರ ಖಂಡನೀಯ ಅವಸ್ಥೆಗಳು ಸುತ್ತಲೂ ಜರುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನಲ್ಲಿನ ಪಶುತ್ವ ನಾಶವಾಗಿ, ಮನಸಿನ ಮೃದುತ್ವ ಅರಳಲಿ ಎಂಬುದೇ ಈ ವಿಶ್ವ ನೃತ್ಯ ದಿನದ ಸದುದ್ದೇಶ.


ಕೇವಲ ವಿಶ್ವಸಂಸ್ಥೆ ನಡೆಸುತ್ತಿರುವ ನೃತ್ಯ ದಿನ ಇದಾಗದೆ, ನಮ್ಮಲ್ಲಿನ ಪ್ರತಿಯೊಬ್ಬನ ನೃತ್ಯ ಪ್ರತಿಭೆ ಹೊರಹೊಮ್ಮಿ ನಮ್ಮ ಭಾರತೀಯರಿಗೆ ವರದಾನವೆನಿಸಿರುವ ನೃತ್ಯ ಶಿಕ್ಷಣ ಹಾಗೂ ಸಾಂಪ್ರದಾಯಿಕ ಪದ್ಧತಿಗಳು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ನಾವು ಟೊಂಕಕಟ್ಟಿ ನಿಲ್ಲಬೇಕು. ಸರ್ವರೂ ವೇದಿಕೆಯ ಮೇಲುಳಿದರೆ ಚಪ್ಪಾಳೆಗೆ ಜನರಿನ್ನೆಲ್ಲಿ ಎನ್ನುವಂತೆ ಎಲ್ಲರೂ ನೃತ್ಯಗಾರರಾಗಲು ಸಾಧ್ಯವಿಲ್ಲದಿದ್ದರೂ. ಅದನ್ನು ಆಸ್ವಾದಿಸುವ ಮನಃಸ್ಥಿತಿಯನ್ನು ಬೆಳೆಸುವ ನಿಟ್ಟಿನಲ್ಲಿಯೂ ನಾವು ನಮ್ಮ ಮಕ್ಕಳಿಗೆ ಹಿತವಚನ ನೀಡಬೇಕು. ಮಾಲ್’ಗಳಿಗೆ ಹೋಗಿ ಸಿನೆಮಾ ವೀಕ್ಷಿಸುವ ಬದಲು ಇಂದಿನಿಂದ ವರ್ಷದಲ್ಲಿ ಕನಿಷ್ಠ 2 ನೃತ್ಯ ಕಾರ್ಯಕ್ರಮಗಳನ್ನಾದರೂ ರಂಗಮಂದಿರಗಳಿಗೆ ಕುಟುಂಬ ಸಮೇತ ತೆರಳಿ ವೀಕ್ಷಿಸುತ್ತೇವೆಂಬ ಪಣ ತೊಡಬೇಕು. ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಒತ್ತುಕೊಡುವ ಬದಲು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಕ್ಷಣದಿಂದಲೇ ಶ್ರಮಿಸಿದಲ್ಲಿ ವಿಶ್ವ ನೃತ್ಯ ದಿನದ ಶ್ರಮ ಸಾರ್ಥಕವಾಗುತ್ತದೆ. ಎಲ್ಲರಿಗೂ ವಿಶ್ವ ನೃತ್ಯ ದಿನದ ಶುಭಾಶಯಗಳು.

ಲೇಖನ: ನೃತ್ಯಗುರು ಸಹನಾ ಚೇತನ್
ಸಹಚೇತನ ನಾಟ್ಯಾಲಯ(ರಿ)
ಶಿವಮೊಗ್ಗ

Tags: DanceSahachetana NatyalayaShivamoggaUnited NationsWorld Dance dayನಾಟ್ಯಶಾಸ್ತ್ರವಿಶ್ವ ನೃತ್ಯ ದಿನವಿಶ್ವಸಂಸ್ಥೆಶಿವಮೊಗ್ಗಸಹಚೇತನ ನಾಟ್ಯಾಲಯಸಹನಾ ಚೇತನ್
Previous Post

ಎಂಪಿಎಂ ಸ್ಥಿತಿ ಹೀಗೇ ಮುಂದುವರೆದರೆ ಉಳಿದ ಕಾರ್ಮಿಕರೂ ಬೀದಿಪಾಲಾಗಲಿದ್ದಾರೆ

Next Post

ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
File Image

ಅಧಿಕಾರಿಗಳ ವರ್ಗಾವಣೆ | ರಾಜ್ಯ ಸರ್ಕಾರದ ವಿರುದ್ಧ ಸಂಸದ ರಾಘವೇಂದ್ರ ಕಿಡಿ

June 20, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೂ.22ರಂದು ರುದ್ರಾರಾಧ್ಯರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ: ವಿಜಯ್ ಕುಮಾರ್ ಹರ್ಷ

June 20, 2025
File Image

ಅಪ್ಸರಕೊಂಡ – ಮುಗಲಿ ಕಡಲ ವನ್ಯ ಜೀವಿಧಾಮ ಘೋಷಣೆ | ಸಚಿವ ಸಂಪುಟ ಸಭೆ ಅನುಮೋದನೆ

June 20, 2025

ವಿಕಸಿತ ಭಾರತದ ದಾರಿಯಲ್ಲಿ ಪ್ರಧಾನಿ ಮೋದಿ ಸರ್ಕಾರ: ಸಂಸದ ರಾಘವೇಂದ್ರ

June 20, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!