No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸಹನಾ ಚೇತನ್ ಬರೆಯುತ್ತಾರೆ: ಮಾಲ್‌ಗೆ ಹೋಗಿ ಸಿನೆಮಾ ನೋಡುವ ಬದಲು ನೃತ್ಯ ವೀಕ್ಷಣೆಯ ಪಣ ತೊಡಿ

ಒಳಗೊಳಗೇ ಸುಪ್ತವಾಗಿ ಅಡಗಿರುವ ನೃತ್ಯ ಕಲಾವಿದನನ್ನು ಜಾಗೃತಗೊಳಿಸುವ ದಿನ: ವಿಶ್ವ ನೃತ್ಯ ದಿನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 29, 2019
in Special Articles
0
ಸಹನಾ ಚೇತನ್ ಬರೆಯುತ್ತಾರೆ: ಮಾಲ್‌ಗೆ ಹೋಗಿ ಸಿನೆಮಾ ನೋಡುವ ಬದಲು ನೃತ್ಯ ವೀಕ್ಷಣೆಯ ಪಣ ತೊಡಿ
Share on FacebookShare on TwitterShare on WhatsApp

ನೃತ್ಯ ಭಾವನೆಗಳ ಮಿಳಿತ; ಕ್ರಿಯಾತ್ಮಕತೆಯ ಪ್ರತಿಬಿಂಬ; ಸಂತಸದ ಛಾಪು; ದೈಹಿಕ ಸ್ಥಿರತೆಯ ರೂಪ; ಮಾನಸಿಕ ದೃಢತೆಯ ಸಂಕಲ್ಪ. ಒಟ್ಟಾಗಿ ಮಾನವ ಸಹಜ ಭಾವನೆಗಳ ಅಭಿವ್ಯಕ್ತಿಯ ಸ್ವರೂಪ. ಆಧುನಿಕ ಪ್ರಪಂಚದಲ್ಲಿ ಕಲೆಯ ಶಿಕ್ಷಣವಾಗಲಿ ಪ್ರತಿಪಾದನೆಯಾಗಲಿ ಮಾಡದವರೇ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಮಕ್ಕಳು ಕಲೆಯ ಆವರಣದಲ್ಲಿ ಬೆಳೆಯಲಿ ಅನ್ನುವ ಪೋಷಕರೇ ಹೆಚ್ಚು.

ಸಾಂಸ್ಕೃತಿಕತೆಯ ಜೀವಂತ ಪ್ರತಿರೂಪವೆನಿಸಿರುವ ಭಾರತದಂತಹ ರಾಷ್ಟ್ರಗಳಲ್ಲಿ ಕಲೆಗಾಗಲೀ ಕಲಾವಿದನಿಗಾಗಲೀ ದೇವತಾ ಸ್ವರೂಪರು ಎನ್ನುವಷ್ಟು ಗೌರವ ದೊರೆಯುತ್ತಿರುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ನಾಟ್ಯ ಶಾಸ್ತ್ರದ ಪ್ರಕಾರ ಭಾರತದ ನೃತ್ಯಕಲೆಗಳು ಜೀವ ತಳೆದು ಸುಮಾರು 2000 ವರ್ಷಗಳೇ ಸಂದಿದ್ದು ಇಂದಿಗೆ ಅದು ಉಚ್ಛ್ರಾಯ ಸ್ಥಿತಿಯಲ್ಲಿದೆ ಎಂಬುದನ್ನು ತಿಳಿಸಲು ಹೆಮ್ಮೆಯೆನಿಸುತ್ತಿದೆ.
ಭಾರತದ ನೃತ್ಯಗಳಲ್ಲಿ ಶಾಸ್ತ್ರೀಯ ನೃತ್ಯಗಳು ಹಾಗೂ ಜಾನಪದ ನೃತ್ಯಗಳು ಎಂದು 2 ವಿಭಾಗಗಳಾಗಿ ವಿಂಗಡಿಸಲಾಗಿದೆಯಾದರೂ ಜಾಗತಿಕ ಮಟ್ಟದಲ್ಲಿ ಎಲ್ಲಾ ನೃತ್ಯವೂ ಒಂದೇ ಎನ್ನುವ ಭಾವನೆ ವಿಶ್ವ ಸಂಸ್ಥೆಯದ್ದಾಗಿದೆ. ನೀವು ಯಾವುದೇ ರೀತಿಯ ನೃತ್ಯವನ್ನು ಅಭ್ಯಸಿಸುತ್ತಿರಬಹುದು ಅಥವಾ ಶಿಕ್ಷಕರಾಗಿರಬಹುದು – ನೀವು ನೃತ್ಯಗಾರರೇ ಎನ್ನುವ ಧೋರಣೆಯೂ ಕೂಡ ವಿಶ್ವ ಸಂಸ್ಥೆಯದ್ದು. ಈಗಲೂ ನೀವು ನೃತ್ಯ ಕಲಾವಿದರಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಿರಬಹುದು; ಹಿಂದೆ ನೀಡಿದ್ದಿರಬಹುದು; ಒಮ್ಮೆ ಕಲಾವಿದನಾದವನು ಶಾಶ್ವತವಾಗಿ ಕಲಾವಿದನೇ. ಇಂತಹ ಸರ್ವೋಚ್ಚ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವದಾದ್ಯಂತ ಇರುವ ನರ್ತಕರನ್ನು ಒಂದು ಗೂಡಿಸುವ ಪ್ರಯತ್ನ ನಡೆಸುತ್ತಿರುವ ವಿಶ್ವಸಂಸ್ಥೆ, ಪ್ರತೀ ವರ್ಷ ಏಪ್ರಿಲ್ 29ರಂದು ವಿಶ್ವ ನೃತ್ಯ ದಿನ ಎಂದು ಘೋಷಿಸಿದೆ. ಇದನ್ನು ಮುನ್ನಡೆಸುತ್ತಾ ಈಗಾಗಲೇ 3 ದಶಕಗಳೇ ಸಂದಿವೆ.


ಪ್ರಪಂಚದಾದ್ಯಂತ ಇರುವ ನೃತ್ಯಗಾರರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸುಮಾರು 3 ತಿಂಗಳಿನಿಂದ ನಡೆಸುವ ತಯಾರಿ ತಾಲೀಮು, ಕಾರ್ಯಾಗಾರ, ಪ್ರಬಂಧ ಮಂಡನೆ, ನೃತ್ಯ ಸ್ಪರ್ಧೆಗಳು, ಏಕವ್ಯಕ್ತಿ ಹಾಗೂ ಗುಂಪು ಪ್ರದರ್ಶನಗಳಿಂದ ಕೂಡಿರುತ್ತದೆ. ಪ್ರತಿಯೊಬ್ಬನಲ್ಲಿ ಅಡಗಿರುವ ನೃತ್ಯ ಕಲಾವಿದನನ್ನು ಜಾಗೃತಗೊಳಿಸಿ ಆತನೂ ಸುತ್ತಲಿನ ಸೌಂದರ್ಯವನ್ನು, ತನ್ನೊಳಗಿನ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿ ಒಬ್ಬ ನೈಜ ಮಾನವನನ್ನಾಗಿಸುವ ಹೆಬ್ಬಯಕೆ ಈ ವಿಶ್ವ ಸಂಸ್ಥೆಯದ್ದು. ಭಯೋತ್ಪಾದನೆಯಂತಹ ತೀವ್ರ ಖಂಡನೀಯ ಅವಸ್ಥೆಗಳು ಸುತ್ತಲೂ ಜರುತ್ತಿರುವ ಈ ಸಂದರ್ಭದಲ್ಲಿ ಮನುಷ್ಯನಲ್ಲಿನ ಪಶುತ್ವ ನಾಶವಾಗಿ, ಮನಸಿನ ಮೃದುತ್ವ ಅರಳಲಿ ಎಂಬುದೇ ಈ ವಿಶ್ವ ನೃತ್ಯ ದಿನದ ಸದುದ್ದೇಶ.


ಕೇವಲ ವಿಶ್ವಸಂಸ್ಥೆ ನಡೆಸುತ್ತಿರುವ ನೃತ್ಯ ದಿನ ಇದಾಗದೆ, ನಮ್ಮಲ್ಲಿನ ಪ್ರತಿಯೊಬ್ಬನ ನೃತ್ಯ ಪ್ರತಿಭೆ ಹೊರಹೊಮ್ಮಿ ನಮ್ಮ ಭಾರತೀಯರಿಗೆ ವರದಾನವೆನಿಸಿರುವ ನೃತ್ಯ ಶಿಕ್ಷಣ ಹಾಗೂ ಸಾಂಪ್ರದಾಯಿಕ ಪದ್ಧತಿಗಳು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ನಾವು ಟೊಂಕಕಟ್ಟಿ ನಿಲ್ಲಬೇಕು. ಸರ್ವರೂ ವೇದಿಕೆಯ ಮೇಲುಳಿದರೆ ಚಪ್ಪಾಳೆಗೆ ಜನರಿನ್ನೆಲ್ಲಿ ಎನ್ನುವಂತೆ ಎಲ್ಲರೂ ನೃತ್ಯಗಾರರಾಗಲು ಸಾಧ್ಯವಿಲ್ಲದಿದ್ದರೂ. ಅದನ್ನು ಆಸ್ವಾದಿಸುವ ಮನಃಸ್ಥಿತಿಯನ್ನು ಬೆಳೆಸುವ ನಿಟ್ಟಿನಲ್ಲಿಯೂ ನಾವು ನಮ್ಮ ಮಕ್ಕಳಿಗೆ ಹಿತವಚನ ನೀಡಬೇಕು. ಮಾಲ್’ಗಳಿಗೆ ಹೋಗಿ ಸಿನೆಮಾ ವೀಕ್ಷಿಸುವ ಬದಲು ಇಂದಿನಿಂದ ವರ್ಷದಲ್ಲಿ ಕನಿಷ್ಠ 2 ನೃತ್ಯ ಕಾರ್ಯಕ್ರಮಗಳನ್ನಾದರೂ ರಂಗಮಂದಿರಗಳಿಗೆ ಕುಟುಂಬ ಸಮೇತ ತೆರಳಿ ವೀಕ್ಷಿಸುತ್ತೇವೆಂಬ ಪಣ ತೊಡಬೇಕು. ಕೇವಲ ಪಠ್ಯಾಧಾರಿತ ಶಿಕ್ಷಣಕ್ಕೆ ಒತ್ತುಕೊಡುವ ಬದಲು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಕ್ಷಣದಿಂದಲೇ ಶ್ರಮಿಸಿದಲ್ಲಿ ವಿಶ್ವ ನೃತ್ಯ ದಿನದ ಶ್ರಮ ಸಾರ್ಥಕವಾಗುತ್ತದೆ. ಎಲ್ಲರಿಗೂ ವಿಶ್ವ ನೃತ್ಯ ದಿನದ ಶುಭಾಶಯಗಳು.

ಲೇಖನ: ನೃತ್ಯಗುರು ಸಹನಾ ಚೇತನ್
ಸಹಚೇತನ ನಾಟ್ಯಾಲಯ(ರಿ)
ಶಿವಮೊಗ್ಗ

Tags: DanceSahachetana NatyalayaShivamoggaUnited NationsWorld Dance dayನಾಟ್ಯಶಾಸ್ತ್ರವಿಶ್ವ ನೃತ್ಯ ದಿನವಿಶ್ವಸಂಸ್ಥೆಶಿವಮೊಗ್ಗಸಹಚೇತನ ನಾಟ್ಯಾಲಯಸಹನಾ ಚೇತನ್
Share197Tweet123Send
Previous Post

ಎಂಪಿಎಂ ಸ್ಥಿತಿ ಹೀಗೇ ಮುಂದುವರೆದರೆ ಉಳಿದ ಕಾರ್ಮಿಕರೂ ಬೀದಿಪಾಲಾಗಲಿದ್ದಾರೆ

Next Post

ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

ಮೈಸೂರು ಸಾಂಪ್ರದಾಯಿಕ ಚಿತ್ರಕಲೆಯ ಅನನ್ಯ ಸಾಧಕಿ ಕಲಾಕಸ್ತೂರಿ ಮೀರಾಕುಮಾರ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL