ಭದ್ರಾವತಿ: ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಇಂದು ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಭದ್ರಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದ ವೈಭವವನ್ನು ಚಿತ್ರಗಳಲ್ಲಿ ನೋಡಿ:
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ಭಾರಿ ಮೆರವಣಿಗೆಯಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದ ಯುವಕರಲ್ಲಿ ಓರ್ವ ಯುವಕ ತೆಲೆಯ ಕೇಶ ಮುಂಡನದಲ್ಲಿ ಕರ್ನಾಟಕ ಚಿತ್ರ ಕಾಣುವಂತೆ ಕೂದಲು ಕತ್ತರಿಸಿಕೊಂಡಿದ್ದರೆ, ಮತ್ತೋರ್ವ ಯುವಕ ಓಂ ಚಿತ್ರ ಮುಂಡನ ಮಾಡಿಕೊಂಡಿದ್ದು ಕಂಡು ಬಂತು.
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಯ ಸಂದಭದಲ್ಲಿ ರಂಗಪ್ಪವೃತ್ತದ ಬಳಿ ಮುಸ್ಲಿಂ ಬಾಂಧವ ಬಾಬು ಎಂಬುವವರು ಭಕ್ತರಿಗೆ ಕುಡಿಯಲು ನೀರು ವಿತರಿಸುತ್ತಿರುವ ದೃಶ್ಯ.
ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯ ಬಂದೋಬಸ್ತ್ ನಲ್ಲಿ ಭಾಗವಹಿಸಿದ್ದ ಸುಮಾರು 2 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿಗೆ ತಾಲೂಕು ರೈಫಲ್ ತರಬೇತಿ ಅಸೋಸಿಯೇಷನ್ನಿನ ಸುಮಾರು 50 ಕ್ಕೂ ಹೆಚ್ಚು ಕಾರ್ಯಕರ್ತರು ವೀರಶೈವ ಕಲ್ಯಾಣ ಮಂಟಪದಲ್ಲಿ ಪೊಲೀಸ್ ಇಲಾಖೆಯು ಏರ್ಪಡಿಸಿದ್ದ ಊಟದ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಕೈಚೀಲದಲ್ಲಿ ಸಂಗ್ರಹಿಸಿ ಕೊಟ್ಟ ಕಾರ್ಯಕರ್ತರ ಚಿತ್ರ.
Discussion about this post