No Result
View All Result
Hubballi drucc meeting passenger friendly initiatives
English Articles

41st DRUCC Meeting Held at Hubballi; Division Applauded for Passenger-Friendly Initiatives

by kalpa News
August 10, 2026
1

Kalpa Media House  |  Hubballi   | The 41st meeting of the Divisional Railway Users' Consultative Committee (DRUCC) of Hubballi Railway...

Read moreDetails
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
  • Advertise With Us
  • Grievances
  • About Us
  • Contact Us
Tuesday, August 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಆದರ್ಶಗಳನ್ನು ಅನುಸರಿಸದೇ ಪ್ರತಿಪಾದಿಸುವುದು ಕೂಡಾ ಭ್ರಷ್ಟಾಚಾರ: ಹೆಗ್ಗೋಡು ಪ್ರಸನ್ನ

ಕುವೆಂಪು ವಿವಿಯಲ್ಲಿ ಸ್ವಾತಂತ್ರ ಭಾರತದ ಅಮೃತ ಮಹೋತ್ಸವ ಕಾರ್ಯಕ್ರಮ

kalpa News by kalpa News
August 10, 2021
in ಶಿವಮೊಗ್ಗ
0
ಆದರ್ಶಗಳನ್ನು ಅನುಸರಿಸದೇ ಪ್ರತಿಪಾದಿಸುವುದು ಕೂಡಾ ಭ್ರಷ್ಟಾಚಾರ: ಹೆಗ್ಗೋಡು ಪ್ರಸನ್ನ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಶಂಕರಘಟ್ಟ: ಸ್ವಾತಂತ್ರ ಹೋರಾಟದ ಮಹಾನಾಯಕ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಆದರ್ಶಕ್ರಮಗಳನ್ನು ಮೊದಲು ಅನುಸರಿಸಿ ತೋರಿಸಿ ನಂತರ ಜನರಿಗೆ ಮುಂದುವರಿಸಲು ಕರೆನೀಡುತ್ತಿದ್ದರು. ತಾವು ಮೊದಲು ನಡೆದುಕೊಳ್ಳದೇ ಬೇರೆಯವರಿಗೆ ಪ್ರವಚನ ನೀಡುವುದನ್ನು ಭ್ರಷ್ಟಾಚಾರವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಹಿರಿಯ ರಂಗಕರ್ಮಿ, ಹೆಗ್ಗೋಡಿನ ದೇಸಿ ಟ್ರಸ್ಟ್‌ನ ಸಂಸ್ಥಾಪಕರಾದ ಪ್ರಸನ್ನ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯು ಮಂಗಳವಾರ ಅನ್‌ಲೈನ್ ವೇದಿಕೆಯಲ್ಲಿ ಅಯೋಜಿಸಿದ್ದ “ಭಾರತ ಸ್ವಾತಂತ್ರದ ಅಮೃತ ಮಹೋತ್ಸವ” ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಸ್ವಾತಂತ್ರ ಸಮಯದಲ್ಲಿ ನಡೆಸಿದ ಸ್ವದೇಶಿ ಚಳುವಳಿ, ಜಾತಿಪದ್ಧತಿ ನಾಶ, ಮಹಿಳಾ ಶೋಷಣೆ ವಿಮೋಚನೆ, ದೇವಸ್ಥಾನ ಪ್ರವೇಶಗಳಂತಹ ವಿಚಾರಗಳಲ್ಲಿ ಗಾಂಧೀಜಿ ತಮ್ಮ ನಡೆಯನ್ನು ಕೃತಿಗಿಳಿಸಿ ತೋರಿದರು. ಸಾರ್ವಜನಿಕ ಜೀವನದಲ್ಲಿ ನಾಯಕರು, ಗಣ್ಯರು ಪ್ರತಿಪಾದಿಸುವ ಆದರ್ಶಗಳನ್ನು ತಾವು ಮೊದಲು ಕೃತಿಗಿಳಿಸಿ ತೋರಬೇಕು. ರಾಮ ಪ್ರತಿಪಾದಿಸಿ ಸರಳ ಬದುಕು, ಅಶಕ್ತರಿಗೆ ನಿರ್ಮಿಸಿದ ಆಶ್ರಮ ವ್ಯವಸ್ಥೆ, ಸಭ್ಯತೆಯ ವಿಚಾರಗಳು ಇಂದಿನ ಸಮಾಜಕ್ಕೂ ಅನುಕರಣೀಯವಾಗಬೇಕು. ನಡೆದಂತೆ ನುಡಿಯದಿರುವುದು, ನಡೆಯದೇ ನುಡಿಯುವುದು ಎರಡೂ ಭ್ರಷ್ಷಾಚಾರವಾಗುತ್ತವೆ ಎಂದರು.

ಬ್ರಿಟಿಷರನ್ನು ವಾಪಸ್ಸು ಕಳಿಸುವ ಜೊತೆಗೆ ದೇಶದಲ್ಲಿನ ಅಸಮಾನತೆಯಂತಹ ಆಂತರಿಕ ಸಮಸ್ಯೆಗಳ ನಿವಾರಿಸಿ ಸಾಧಿಸಲೊರಟ ಸಮಸಮಾಜದ ಚಳುವಳಿಗಳ ನೈತಿಕ ಬೆಂಬಲವಿಲ್ಲದೇ ಕಾನೂನುಗಳನ್ನು ರೂಪಿಸಲಾಯಿತು. ಅವು ಬದಲಾವಣೆ ತರುವಲ್ಲಿ ಢಾಳಾಗಿ ಸೋತವು. ಸುಭದ್ರ ಸಮಾಜವಾದಿ ಮತ್ತು ಪರಿಪೂರ್ಣ ಸಂವಿಧಾನ ಹೊಂದಿದ ದೇಶ ನಮ್ಮದಾದರೂ, ಸಮಾಜದಲ್ಲಿ ಅನುಸರಣೆಯಿಲ್ಲದೇ ಪ್ರತಿಪಾದನೆಗಳು ನಡೆದದ್ದು ಇಂದು ಎಲ್ಲವನ್ನು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರಗಳು ಚಳುವಳಿ ಮರೆತಿವೆ, ವಿವಿಗಳು ನೈಜ ಕಲಿಕೆಯ ಹೊಲಗದ್ದೆಗಳು, ಮಗ್ಗಗಳನ್ನು ಮರೆತಿವೆ. ದೇಶದ ತುಂಬಾ ವಿಚಾರಗಳಿವೆ ಆದರೆ ಅವುಗಳ ಸತ್ವ, ಅನುಸರಣೆ, ಪ್ರಾಮಾಣಿಕತೆಯ ಕುರಿತು ಅನುಮಾನಗಳಷ್ಟೆ ಮೂಡುತ್ತವೆ. ಪ್ರಜೆಗಳಿಂದ ಆರಂಭಿಸಿ, ನಾಯಕರವರೆಗೂ ಮೊದಲು ನಾವು ಮಾಡಿತೋರಿ ನಂತರ ಹೇಳುವ ಪರಿಪಾಠ ಬೆಳೆಯಬೇಕು. ನಾವು ಹೇಳಿದನ್ನು ಎದುರಿನವರಿಗೆ ಕೇವಲ ಕೇಳಿಸದೇ ಕಾಣಿಸಿ ತೋರಿಸಬೇಕು ಅದುವೇ ದೇಶ ಕಟ್ಟುವ ರೀತಿಯಾಗಬೇಕು ಎಂದು ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾದ ಪ್ರೊ. ಬಿ. ತಿಮ್ಮೇಗೌಡ ಮಾತನಾಡಿ, ಯುವಜನರಲ್ಲಿ ಸ್ವಾತಂತ್ರ ಹೋರಾಟದ ಆದರ್ಶಗಳು, ಗುರಿ, ತ್ಯಾಗಬಲಿದಾನಗಳ ಕುರಿತು ಅರಿವಿನ ಕೊರತೆಯುಂಟಾಗಿದೆ. ಕರ್ನಾಟಕದ ಈಸೂರು ಸ್ವಾತಂತ್ರ ಸಂಗ್ರಾಮದಿಂದಿಡಿದು ದೇಶಾಂದ್ಯಂತ ಗಾಂಧಿ, ಅಂಬೇಡ್ಕರ್, ತಿಲಕ್‌ರು ಕೈಗೊಂಡ ಹೋರಾಟಗಳ ಕುರಿತು ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕಾಲೇಜು, ವಿವಿಗಳಲ್ಲಿ ಒಂದು ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸ್ವಾತಂತ್ರ ಹೋರಾಟದ ಜಾಗೃತಿ ಮೂಡಿಸಲು ಆಜಾದಿ ಕೀ ಅಮೃತ್ ಮಹೋತ್ಸವ್ ಅವಕಾಶ ನೀಡುತ್ತಿದೆ. ಕುವೆಂಪು ವಿವಿಯು ಇದರ ಭಾಗವಾಗಿ ಸ್ವಾತಂತ್ರೋತ್ಸವದ ಕುರಿತು ರಸಪ್ರಶ್ನೆ, ಚರ್ಚಾಸ್ಪರ್ಧೆ, ಪ್ರಬಂಧ ಲೇಖನ ಸೇರಿದಂತೆ ಇತ್ಯಾದಿ ಸರಣಿ ಕಾರ್ಯಕ್ರಮಗಳನ್ನು ಯೋಜಿಸಿದೆ ಎಂದರು.

ಈ ಸಂದರ್ಭದಲ್ಲಿ ಕುವೆಂಪು ವಿವಿಯ ಕುಲಸಚಿವರಾದ ಅನುರಾಧ ಜಿ, ಪರೀಕ್ಷಾಂಗ ಕುಲಸಚಿವ ಡಾ. ಸಿ. ಎಂ. ತ್ಯಾಗರಾಜ, ಅಜಾದಿ ಕಾ ಅಮೃತ ಮಹೋತ್ಸವದ ರಾಜ್ಯ ನೋಡಲ್ ಅಧಿಕಾರಿ ಡಾ. ಕೆ. ಪ್ರಸನ್ನ ಕುಮಾರ್, ವಿವಿಯ ಪ್ರಾಧ್ಯಾಪಕ ಪ್ರೊ. ರಾಮೇಗೌಡ, ಡಾ. ವೀರೂಪಾಕ್ಷಪ್ಪ ಮಾತನಾಡಿದರು. ವಿವಿಯ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ, ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದ ನಡೆಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteKuvempu VVLatest News KannadaLocal NewsMalnad NewsNews in KannadaNews KannadaShankaraghattaShimogaShivamoggaShivamogga Newsಕುವೆಂಪು ವಿವಿಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share200Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪತ್ರಕರ್ತಕರಿಗೆ ನಿವೇಶನ ಕಲ್ಪಿಸಲು ಕ್ರಮ: ಚಳ್ಳಕೆರೆ ಶಾಸಕ ರಘುಮೂರ್ತಿ ಭರವಸೆ

Next Post

ಕರ್ನಾಟಕದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ. ಪಾಟೀಲ್ ಮನವಿ

kalpa News

kalpa News

Next Post
ಕರ್ನಾಟಕದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ. ಪಾಟೀಲ್ ಮನವಿ

ಕರ್ನಾಟಕದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ. ಪಾಟೀಲ್ ಮನವಿ

Leave a Reply Cancel reply

Your email address will not be published. Required fields are marked *

No Result
View All Result
Hubballi drucc meeting passenger friendly initiatives
English Articles

41st DRUCC Meeting Held at Hubballi; Division Applauded for Passenger-Friendly Initiatives

by kalpa News
August 10, 2026
1

Kalpa Media House  |  Hubballi   | The 41st meeting of the Divisional Railway Users' Consultative Committee (DRUCC) of Hubballi Railway...

Read moreDetails
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
Indian Railways Recruits 5.56 Lakh Since 2014

Indian Railways Recruits 5.56 Lakh Since 2014 | 1.61 Lakh More Vacancies Underway

July 30, 2026
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL