ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಭಯ ಮತ್ತು ಕೀಳರಿಮೆ ಆತ್ಮವಿಶ್ವಾಸದ ಶತ್ರುಗಳು. ಅವುಗಳನ್ನು ನಿವಾರಿಸಿಕೊಂಡರೆ ಆತ್ಮವಿಶ್ವಾಸ ತಾನಾಗೇ ಮೂಡುತ್ತದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸದಾ ಪರಿಶುದ್ಧ ಆಲೋಚನೆ ಮತ್ತು ಪರಿಶುದ್ಧ ಕಾರ್ಯಗಳನ್ನು ಮಾಡುತ್ತಾ ಮನಸನ್ನು ನಿರ್ಮಲಗೊಳಿಸಿಕೊಳ್ಳುತ್ತಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆರ ವ್ಯವಸ್ಥಾಪಕ ನಿರ್ದೇಶಕ ವಿವೇಕ ಆಳ್ವ #Vivek Alva ತಿಳಿಸಿದರು.
ನಗರದ ಮಂಗಳ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕಾರಿಪುರ ಉದ್ಯೋಗ ಮೇಳದ ಪೂರ್ವ ಭಾವಿ ಉದ್ಯೋಗ ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದರೂ ಅವುಗಳ ಕೈಹಿಡಿದು ನಂಬಿಕೆಯಿಂದ ಮುನ್ನಡೆಯುವ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ. ಅದಕ್ಕಾಗಿ ಪೂರ್ವ ಸಿದ್ಧತಾ ವ್ಯವಸ್ಥೆ ಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಇಂದಿನ ವ್ಯವಸ್ಥೆಯಲ್ಲಿ ನಿರುದ್ಯೋಗ ಇದೆ ಎನ್ನುವುದು ತಪ್ಪು. ನಮ್ಮಲ್ಲಿರುವ ಕೌಶಲ್ಯಗಳ ಕೊರತೆಯಿಂದ ನಾವು ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಿದ್ದೇವೆ. ಉದ್ಯೋಗ ಆಕಾಂಕ್ಷಿಗಳು ಉತ್ತಮ ಸಿದ್ಧತೆ ತಯಾರಿ ಇಲ್ಲದೆ ಉದ್ಯೋಗ ಪಡೆಯಲು ಪ್ರಯತ್ನ ಪಟ್ಟರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದರು.
ನಮಗೆ ದೊಡ್ಡ ಹುದ್ದೆ ಬೇಕು ಉತ್ತಮ ವೇತನ ಎಂದು ಸುಮ್ಮನೆ ಕುಳಿತರೆ ಆಗದು ಸಿಕ್ಕಂತಹ ಅವಕಾಶಗಳನ್ನು ಬಳಸಿಕೊಂಡು ದೊಡ್ಡದಾದ ಸಾಧನೆಯನ್ನು ಮಾಡಬಹುದು. ದೊಡ್ಡ ಸಾಧನೆ ಮಾಡಿರುವ ಹಿರಿಯರೆಲ್ಲರೂ ಅವರಿಗೆ ಸಿಕ್ಕ ಸಣ್ಣ ಅವಕಾಶಗಳನ್ನು ಬಳಸಿಕೊಂಡು ದೊಡ್ಡ ಸಾಧನೆಯನ್ನು ಮಾಡಿರುವರು. ಸಣ್ಣ ಉದ್ಯೋಗದಿಂದ ಮುಂದುವರೆದರೆ ಮುಂದೆ ದೊಡ್ಡ ಸಾಧನೆ ಮಾಡುತ್ತೇವೆ. ಉತ್ತಮ ತರಬೇತಿ ಉತ್ತಮ ತಯಾರಿ ನಿಮಗೆ ದಾರಿದೀಪ ಉದ್ಯೋಗಗಳು ಸಿಗಬೇಕಾದರೆ ಮಾಹಿತಿ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಯಾವಾಗಲೂ ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಬೇರೂರ ಮೇಲೆ ಅದನ್ನು ಹಾಕುತ್ತೇವೆ. ಹೀಗೆ ಮಾಡಿದಾಗ ನಾವು ಮುಂದು ಬರಲು ಸಾಧ್ಯವಿಲ್ಲ. ಈ ಊರಿಗೆ ಒಂದು ಶಕ್ತಿ ಇದೆ, ಈ ಉದ್ಯೋಗ ಮೇಳವನ್ನು ನಾವು ನಮ್ಮ ಉದ್ಯೋಗ ಮೇಳವೆಂದು ತಿಳಿದು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಈ ಉದ್ಯೋಗ ಮೇಳದ ಸಂಘಟಕರಾದ ಸಂಸದರು, ಶಾಸಕರ ಸಂಕಲ್ಪವನ್ನು ಈಡೇರಿಸಿಕೊಳ್ಳಲು ನಮ್ಮ ಸಾಮರ್ಥ್ಯತವಾದ ಶಕ್ತಿಯನ್ನು ಬಳಸಿಕೊಂಡು ಉದ್ಯೋಗ ಮೇಳವನ್ನು ಯಶಸ್ವಿ ಮಾಡಿಕೊಡಬೇಕು. ಭಾಗವಹಿಸುವ ಕಂಪನಿಗಳಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾದ ಎಲ್ಲಾ ಕಂಪನಿಗಳಲ್ಲೂ ಸಂದರ್ಶನವನ್ನು ಕೊಟ್ಟು ನಂತರ ತಮಗೆ ಅನುಕೂಲವಾದ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಿ. ಮಾರಾಟ ವಿಭಾಗ ಎಂದು ಸುಮ್ಮನಿರಬೇಡಿ ಮುಂದೆ ಅದರಲ್ಲೇ ದೊಡ್ಡ ಮಟ್ಟದ ಸಾಧನೆಯನ್ನು ಮಾಡುವರ ಮೂಲಕ ಮುಂದುವರಿಯಬಹುದು. ತಮ್ಮ ಆತ್ಮವಿಶ್ವಾಸವಾದ ದೃಢ ಸಂಕಲ್ಪದಿಂದ ಸಿದ್ಧತೆಯೊಂದಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಎಂದು ಉದ್ಯೋಗ ಆಕಾಂಕ್ಷಿಗಳಿಗೆ ಸ್ಪೂರ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಶಿಕಾರಿಪುರ ತಾಲೂಕಿನ ಪ್ರತಿಭಾವಂತ ಯುವ ಪ್ರತಿಭೆಗಳಿಗೆ ಉದ್ಯೋಗ ಕೊಡಿಸುವ ಉದ್ದೇಶದಿಂದ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಒಂದು ತಿಂಗಳಿನಿಂದ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಸ್ವಾಮಿ ವಿವೇಕಾನಂದ ಸಂಸ್ಥೆ ಮತ್ತು ಆಳ್ವಾಸ್ ಎಜುಕೇಶನಲ್ ಫೌಂಡೇಶನ್ ಮೂಡಬಿದರೆ ಇವರ ನೇತೃತ್ವದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ. ಭಾರತದ ಪ್ರಧಾನ ಮಂತ್ರಿಗಳು 2047ಕ್ಕೆ ಭಾರತವು ವಿಕಚಿತ ಭಾರತವಾಗಬೇಕು ಅಂದರೆ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಶಕ್ತಿಯನ್ನು ಹೊಂದಿ ವಿಶ್ವದ ಅಭಿವೃದ್ದಿ ಹೊಂದಿದ ಪ್ರಥಮ ರಾಷ್ಟ್ರವಾಗಬೇಕು ಎಂಬುವುದು. ಈ ಆಶಯವು ಈಡೇರಬೇಕಾದರೆ ಭಾರತದ ಯುವ ಪ್ರತಿಭೆಗಳು ಮುಂದೆ ಮುಂದೆ ಬರಬೇಕು. ಇಂದಿನ ಯುವಕರು ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಮುಂದುವರೆದರೆ ಪ್ರಧಾನ ಮಂತ್ರಿಗಳ ಕನಸನ್ನು ನನಸು ಮಾಡಬಹುದು ಎಂದು ತಿಳಿಸಿದರು.
ಒಂದು ದೇಶದ ನಿಜವಾದ ಆಸ್ತಿ ಎಂದರೆ ಆದೇಶದ ಭೌತಿಕವಾದ ಸಂಪತ್ತು ಅಲ್ಲ ಯುವ ಶಕ್ತಿಯೇ ಆದೇಶದ ನಿಜವಾದ ಸಂಪತ್ತು ಎಂದು ಹಲವಾರು ದಾಸನೀಕರು ತಿಳಿಸಿದ್ದಾರೆ. ಈ ನಾಡಿನ ಹಿರಿಯರ ಆಶೀರ್ವಾದದಿಂದ ಒಬ್ಬ ಸಾಮಾನ್ಯ ರೈತನ ಮಗನಾಗಿ, ಶಾಸಕರಾಗಿ ಈ ನಾಡಿನ ಮುಖ್ಯಮಂತ್ರಿಗಳಾಗಿ ಈ ಕ್ಷೇತ್ರಕ್ಕೆ ಶಿಕ್ಷಣ, ಕುಡಿಯುವ ನೀರು, ನೀರಾವರಿ ವಿದ್ಯುತ್ ಮುಂತಾದ ಎಲ್ಲಾ ಸೌಕರ್ಯಗಳನ್ನು ಓದಗಿಸಿಕೊಟ್ಟು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿರುವವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು. ಅಲ್ಲದೆ ಈ ನಾಡಿನ ಮಕ್ಕಳಿಗೆ ಸಂಸ್ಕಾರವಿತ ಶಿಕ್ಷಣ ಕೊಡಲು ದೊಡ್ಡ ಪ್ರಮಾಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ತಾಲೂಕಿನ ಯುವ ಪ್ರತಿಭೆಗಳಿಗೆ ಉದ್ಯೋಗ ವಹಿಸಿಕೊಡಬೇಕು ಎಂಬ ಇಚ್ಛೆಯಂತೆ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳವು ಪ್ರಾಮಾಣಿಕವಾಗಿ ಪ್ರಯತ್ನದೊಂದಿಗೆ ತಮ್ಮ ಪರಿಶ್ರಮದಿಂದ ಉದ್ಯೋಗವನ್ನು ಪಡೆದುಕೊಳ್ಳಬೇಕು. ತಮ್ಮಲ್ಲಿರುವ ಒಪೆಬೆಲೆಯನ್ನು ಹೊರ ತರಬೇಕು ಗಟ್ಟಿತನದಿಂದ ಆತ್ಮವಿಶ್ವಾಸದಿಂದ ಹೆಜ್ಜೆ ಇಡಬೇಕು. ಉದ್ಯೋಗ ದೊಡ್ಡದು ಸಣ್ಣದು ಎಂಬ ಕೇಳಿರಬೇಡ ಜವಾಬ್ದಾರಿಯಿಂದ ಮುಂದುವರೆದರೆ ಎಂತಹ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಂಬಿಕೆಯಿಂದ ಮುಂದೆ ಬರಬೇಕು ಯಶಸ್ಸು ಯಾವಾಗಲೂ ಸದಾಕಾಲ ನಿಮ್ಮ ಜೊತೆ ಇರುತ್ತದೆ. ನಿರಂತರ ಪರಿಶ್ರಮದಿಂದ ಫಲ ಸಿಗಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಎಸಿ ಚನ್ನವೀರಪ್ಪ, ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಾಮ ನಾಯ್ಕ್ , ಪುರಸಭೆ ಮಾಜಿ ಅಧ್ಯಕ್ಷ ವಸಂತ ಗೌಡ್ರು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ್ ಜಿಎಸ್, ಆಡಳಿತ ಸಮನ್ವಯಾಧಿಕಾರಿ ಕುಬೇರಪ್ಪ.ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಮುಖ್ಯಸ್ಥರು ಸಿಬ್ಬಂದಿ ವರ್ಗದವರು ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಎಲ್ಲ ತಂಡದವರು, ಕಸಬಾ ಹೋಬಳಿ ಹಾಗೂ ಶಿಕಾರಿಪುರ ನಗರದ ಎಲ್ಲಾ ಉದ್ಯೋಗ ಮೇಳದ ನೋಂದಾಯಿತ ಉದ್ಯೋಗ ಆಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕು.ಸ್ಪೂರ್ತಿ ಪ್ರಾರ್ಥಿಸಿ, ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿರೇಂದ್ರ ಸ್ವಾಗತಿಸಿ, ಉಪನ್ಯಾಸಕ ಕೋಟೋಜಿರಾವ್ ನಿರೂಪಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















