ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಮಕ್ಕಳಿಗೆ ಬೋಧಿಸುವ ಶಿಕ್ಷಕರು ಬೋಧನೆಯೊಂದಿಗೆ ಅನ್ವಯಿಕ ಕೌಶಲ್ಯಗಳನ್ನು ಹೊಂದಿರುವುದು ಮುಖ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಜಿ. ಚಿನ್ನಪ್ಪ ಅಭಿಪ್ರಾಯಪಟ್ಟರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಡೆದ ವಿದ್ಯಾರ್ಥಿ ಸಂಘ ಮತ್ತು ಸುಗಂಧ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read: ಹಾವೇರಿ | ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆರಗಿದ ಬಸ್ | ಮಗು ಸಾವು, ಮೂವರಿಗೆ ಗಂಭೀರ ಗಾಯ
ಶಿಕ್ಷಕರಾಗುವವರಿಗೆ ಪರಂಪರೆಯ ಅರಿವು, ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಜ್ಞಾನ ಅತ್ಯವಶ್ಯಕ ಎಂದರು.
ಶಿಕಾರಿಪುರ #Shikaripura ಭವ್ಯ ಇತಿಹಾಸವನ್ನು ಹೊಂದಿದ ಸಂಗತಿಗಳನ್ನು ವಿಶ್ಷೇಷಿಸಿದರು. ಕನ್ನಡದ ಮೊದಲ ಶಾಸನ, ಕನ್ನಡದ ಮೊದಲ ವಚನಕಾರ್ತಿ, ಕನ್ನಡದ ಮೊದಲ ವಿದ್ಯಾಕೇಂದ್ರ, ಕನ್ನಡದ ಮೊದಲ ಸ್ತ್ರೀವಾದ ಚಿಂತನೆಗಳು, ಈಸೂರು, ತಾಳಗುಂದ ಸತ್ಯಕ್ಕ, ಮುಕ್ತಾಯಕ್ಕ, ಅಕ್ಕಮಹಾದೇವಿ, ಜಿ.ಎಸ್. ಶಿವರುದ್ರಪ್ಪರಂತಹ ಚಿಂತಕರನ್ನು ನಾಡಿಗೆ ಪರಿಚಯಿಸಿದ್ದು ಇದೇ ಕ್ಷೇತ್ರದಲ್ಲಿಯೇ. ಇಲ್ಲಿ ಸಾಹಿತ್ಯ, ಕಲೆ, ವೈಚಾರಿಕತೆ, ರಾಜಕೀಯ ಹೀಗೆ ಹಲವು ಮೊದಲುಗಳಿಗೆ ಸಾಕ್ಷಿಯಾಗಿ ಸಾಂಸ್ಕೃತಿಕ ಚಿಂತೆಗಳು ಇಂದಿಗೂ ಗರಿಗದರಿದ ಕ್ಷಣಗಳನ್ನು ಮೆಲುಕು ಹಾಕಿದರು.
ಗಾಂಧೀಜಿಯವರು ಹೇಳಿದಂತೆ ಕೃಷಿಕ, ಸೈನಿಕ, ಶಿಕ್ಷಕ ಮೂರು ವ್ಯಕ್ತಿಗಳು ಸಮಾಜದ ಓರೆಕೋರೆಗಳನ್ನು ತಿದ್ದುವ ಗುರುತರ ಜವಾಬ್ದಾರಿ ಹಾಗೂ ಹಕ್ಕುಗಳು ಇವರಿಗಿದೆ. ಮನೆಯಲ್ಲಿ ಮಗು ಪೋಷಕರ ಮಾತುಗಳನ್ನು ಕೇಳದೇ ಇರಬಹುದು. ಆದರೆ, ಶಾಲೆಯಲ್ಲಿ ಗುರುಗಳ ಮಾತು ವೇದವಾಕ್ಯ, ಮಗುವಿಗೆ ಸಂಸ್ಕಾರ ಎಂಬ ಗುಣಗಳಿಂದ ಉತ್ತಮ ಮೂರ್ತಿಯನ್ನಾಗಿ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ ಎಂದರು.
ಶಿಕ್ಷಕ ಬೋಧಿಸಿದರೆ ಸಾಲದು, ಬದಲಾಗುತ್ತಿರುವ ವಿದ್ಯಮಾನಗಳ ಚಿಂತನೆಗಳು, ಜ್ಞಾನ, ಅನ್ವಯಿಸುವ ಕೌಶಲಗಳನ್ನು ತಿಳಿದುಕೊಂಡಿರಬೇಕಾಗುತ್ತದೆ. ಶಿಕ್ಷಕರಾದವರಿಗೆ ರಾಜಕೀಯ, ನಾಗರೀಕ ಪ್ರಜ್ಞೆಗಳೂ ಮುಖ್ಯ ಆದರೆ ಇಲ್ಲಿ ಶಕ್ತಿ ಮತ್ತು ನಂಬಿಕೆಯ ಮೂಲಕ ಗುರಿ ಮುಟ್ಟುವ, ಸಾಧಿಸುವ ಛಲವನ್ನೂ ಹೊಂದಿ, ಸಹಿಷ್ಣುತೆಯ ಮೂಲ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವವಾದ ಪಾತ್ರವನ್ನು ವಹಿಸಿಕೊಳ್ಳುವವರಾಗಬೇಕು ಎಂದರು.
ಸಂಘಗಳ ಸ್ಥಾಪನೆ ಆಂತರಿಕ ಗುಣಮಟ್ಟವನ್ನು ಹೆಚ್ಚಿಸುವುದಾಗಿರಬೇಕೆ ಹೊರತು ಹಣವನ್ನು ಸಂಗ್ರಹವಾಗಬಾರದು ಹಣದ ಸಂಗ್ರಹ ಹೆಚ್ಚಾಗುತ್ತಾ ಭ್ರಷ್ಟಾಚಾರಕ್ಕೆ ನಾಂದಿ ಹಾಡಿದಂತಾಗುತ್ತದೆ. ಆದ್ದರಿಂದ ಸಂಘಗಳು ಹಾಗೂ ಶಿಕ್ಷಕರು ಇಂತಹ ಸಮಾಜದ ಕೆಟ್ಟ ವಿಚಾರಗಳಿಗೆ ಒಳಗಾಗದೇ ಪಾರದರ್ಶಕ ಮತ್ತು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣಗಳನ್ನು ಬೆಳೆಸಿಕೊಳ್ಳಿ ಎಂದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ.ಜಿ.ಎಸ್. ಶಿವಕುಮಾರ್ ಮಾತನಾಡಿ, ಪದವಿ ಕೇವಲ ವಿದ್ಯಾರ್ಹತೆ ಮಾತ್ರ ಆದರೆ ಶಿಕ್ಷಕ ಪರಿಣಾಮಕಾರಿಯಾದ ಪಾತ್ರ ನಿರ್ವಹಿಸಬೇಕಾದರೆ ಪ್ರಚಲಿತ ಬದಲಾಗುತ್ತಿರುವ ತಂತ್ರಜ್ಞನಾದ ಅರಿವು, ಉತ್ತಮ ಯೋಜನೆ, ಧನಾತ್ಮಕ ಆಲೋಚನೆ, ಮೌಲ್ಯಗಳನ್ನು ಅಳವಡಿಸಿಕೊಳ್ಳುವಿಕೆ, ಸಹಿಷ್ಣುತಾ ಮನೋಭಾವ, ಇನ್ನೊಬ್ಬರನ್ನು ಹೋಲಿಸಿಕೊಂಡು ಕರ್ತವ್ಯ ಮಾಡುವುದು ಬೇಡ ಎಂದರು.
ನಮ್ಮ ಕೆಲಸವನ್ನು ನಮ್ಮಿಚ್ಛೆಯಂತೆ ಮಾಡುತ್ತಾ ಸಾಗಿದರೆ ಸಹಜವಾಗಿಯೇ ವ್ಯವಸ್ಥೆ, ಸಮಾಜ ನಮ್ಮನ್ನು ಗುರುತಿಸುತ್ತದೆ. ಈ ಗುಣಗಳನ್ನು ಬೆಳೆಸಿಕೊಳ್ಳಬೇಕಾದರೆ ಇನ್ನೊಬ್ಬರಿಂದ ನಿರೀಕ್ಷೆ ಬಿಡೋಣ, ಓದುವ ಹವ್ಯಾಸ, ಸೃಜನಾತ್ಮಕತೆ, ನಾಯಕತ್ವಗುಣ, ಸಹಾನುಭೂತಿಯಂತಹ ಗುಣಗಳನ್ನು ಅಳವಡಿಸಿಕೊಂಡು ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಮತ್ತು ಶಾಲೆಗಳಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಳ್ಳೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನು ಡಾ. ಎಸ್. ನಾಗೇಂದ್ರಪ್ಪ, ಮುಖ್ಯ ಅತಿಥಿಗಳ ಪರಿಚಯವನ್ನು ಡಾ.ಎಚ್, ರವಿ, ಸಹಾಯಕ ಪ್ರಾಧ್ಯಾಪಕರುಗಳು ನೆರವೇರಿಸಿದರು.
ಆಡಳಿತ ಸಮನ್ವಯಾಧಿಕಾರಿಗಳಾದ ಕೆ. ಕುಬೇರಪ್ಪ, ಶಿಕ್ಷಣ ಮಹಾವಿದ್ಯಾಲಯದ ಬೋಧಕ ಬೋಧಕೇತರ ವರ್ಗದವರು, ಪ್ರಥಮ ಮತ್ತು ತೃತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ತೃತೀಯ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು 2025-2026ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳನ್ನು ವಿವಿಧ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜಿಸಿ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಿದರು.
ಪ್ರಶಿಕ್ಷಣಾರ್ಥಿಗಳಾದ ಸೌಂದರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿ, ಶ್ರೀಶೈಲ ಸಿದ್ದಪ್ಪ ಇಂಚಲ್ ಸ್ವಾಗತಿಸಿದರು. ಪ್ರೇಮಾ ಚಮನಗೌಡ ಪಾಟೀಲ್ ವಂದನಾರ್ಪಣೆ ಮಾಡಿ, ಮಣಿಕಂಠ ಗನವರಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















